1.30 ಕೋಟಿ ರೂ. ವೆಚ್ಚದ ಉದ್ಯಾನವನಕ್ಕೆ ಗ್ರಹಣ


Team Udayavani, Apr 12, 2019, 2:34 PM IST

7

ಮುಳಬಾಗಿಲು: ದೇವಾಲಯಗಳ ನಾಡೆಂದೇ ಹೆಸರಾದ ಮುಳಬಾಗಿಲು ನಗರದಲ್ಲಿ ಉದ್ಯಾನವನಗಳೇ ಇಲ್ಲದಿರುವುದರಿಂದ ನಗರಸಭೆಯಿಂದ 1.30 ಕೋಟಿ ರೂ.ವೆಚ್ಚದಲ್ಲಿ 13 ವರ್ಷಗಳಿಂದಲೂ ನಿರ್ಮಾಣವಾಗುತ್ತಿರುವ ಉದ್ಯಾನವನ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಮುಳಬಾಗಿಲಿನಲ್ಲಿ ಪುರಾಣ ಪ್ರಸಿದ್ಧ ಶ್ರೀಆಂಜನೇಯಸ್ವಾಮಿ, ಸೋಮೇಶ್ವರ ಸ್ವಾಮಿ, ನರಸಿಂಹತೀರ್ಥದ ಶ್ರೀಪಾದರಾಜಮಠ, ವಿರೂಪಾಕ್ಷಿ ದೇವಾಲಯ, ಕುರುಡುಮಲೆ ವಿನಾಯಕ, ಆವಣಿ ಶ್ರೀರಾಮಲಿಂಗೇಶ್ವರ ದೇವಾಲಯ ಒಳಗೊಂಡಂತೆ ನೂರಾರು ದೇವಾಲಯಗಳ ನಾಡಾಗಿದೆ. ಇಲ್ಲಿರುವ ದೇಗುಲಗಳ ದರ್ಶನಕ್ಕೆ ಪ್ರತಿನಿತ್ಯ ನಗರಕ್ಕೆ ಒಳ ಮತ್ತು ಹೊರ ರಾಜ್ಯಗಳಿಂದ ಸಹಸ್ರಾರು ಭಕ್ತಾದಿಗಳು ಭೇಟಿ ನೀಡುತ್ತಾರೆ. ಈ ಕುರಿತು ಹಲವು ವರ್ಷಗಳ ಹಿಂದೆ ನಗರಸಭೆಯ ಎಸ್‌ಎಫ್ಸಿ ಯೋಜನೆಯಡಿ ನಗರದ ಸೋಮೇಶ್ವರಪಾಳ್ಯ ಕೆರೆ ಅಂಚಿನಲ್ಲಿ ಉದ್ಯಾನವನ ಸ್ಥಾಪಿಸಲು ನಿರ್ಧರಿಸಿದ್ದ ಜಿಲ್ಲಾಧಿಕಾರಿ ಮನೋಜ್‌ ಕುಮಾರ್‌ ಮೀನಾ ಉದ್ಯಾನವನ ಅಭಿವೃದ್ಧಿಗೆ ಮಂಜೂರಾತಿ ನೀಡಿದ್ದರು.

1.30 ಕೋಟಿ ರೂ.ವೆಚ್ಚ: ಅದರಂತೆ 2007-08ನೇ ಸಾಲಿನಲ್ಲಿ ಜಿಲ್ಲಾ ನಿರ್ಮಿತಿ ಕೇಂದ್ರ ಕಾಮಗಾರಿ ಆರಂಭಿಸಲು 134.83 ರೂ.ಗಳ ಆರ್ಥಿಕ ಬೇಡಿಕೆ
ಸಲ್ಲಿಸಿತ್ತು. ಮೊದಲ ಹಂತವಾಗಿ 1 ಕೋಟಿ ರೂ., ಬಿಡುಗಡೆ ನಂತರ ಸೋಮೇಶ್ವರಸ್ವಾಮಿ ಕೆರೆ  ಸುಮಾರು 4 ಎಕರೆ ಪ್ರದೇಶದಲ್ಲಿ ಸುಮಾರು 8-10 ಅಡಿಗಳ ಎತ್ತರದಷ್ಟು ಹೂಳನ್ನು ಸಮತಟ್ಟಾಗಿ ಹಾಕಿ 2 ಆರ್‌ಸಿಸಿ ಚರಂಡಿ, 1 ಆರ್‌ಸಿಸಿ ಮೋರಿ, 2 ಆರ್‌ಸಿಸಿ ಕೊಳವೆ ಮೋರಿ, ರಿವೀಟ್‌ಮೆಂಟ್‌ ಹಾಗೂ ಶೌಚಾಲಯ ಕೊಠಡಿ ಸೇರಿದಂತೆ ಪ್ರಥಮ ಹಂತವಾಗಿ 98.50 ಲಕ್ಷದೊಂದಿಗೆ 2-3ನೇ ಹಂತ ಸೇರಿದಂತೆ ಸುಮಾರು 1.30ಕೋಟಿ ರೂ ಆರ್ಥಿಕ ವೆಚ್ಚದಲ್ಲಿ ನಿರ್ಮಿತಿ ಕೇಂದ್ರ ಉದ್ಯಾನವನದಲ್ಲಿ ಅರ್ಧಂಬರ್ಧ ಕಾಮಗಾರಿ ಮಾಡಿತ್ತು. ಮುಂದುವರೆದ ಕಾಮಗಾರಿಯಾಗಿ ಕಳೆದ ವರ್ಷ ನಿರ್ಮಿತಿ ಕೇಂದ್ರವು ಸದರಿ ಉದ್ಯಾನವನದ ಎರಡೂ ಕಡೆಗಳಲ್ಲಿ ಹಾಕಲಾಗಿದ್ದ ಶಿಥಿಲಗೊಂಡಿದ್ದ ಮುಳ್ಳು
ಕಂಬಿ ಬೇಲಿ ತೆರವುಗೊಳಿಸಿ 2-3 ಅಡಿಗಳ ಗೋಡೆ ನಿರ್ಮಿಸಿ ಅದರ ಮೇಲೆ ಹೊಸ ತಂತಿ ಹಾಕಿ ಅರ್ಧ ಬೇಲಿ ಮಾತ್ರ ನಿರ್ಮಿಸಲಾಗಿದೆ.

ಎರಡೂ ಕಡೆ ವಾಕಿಂಗ್‌ ಪಥವನ್ನು ನಿರ್ಮಿಸಿದೆ. ಉಳಿದಂತೆ ತಾಲೂಕಿನ ವಲಯಾರಣ್ಯ ಇಲಾಖೆಯಿಂದ ಅಧಿಕಾರಿಗಳು ನೂರಾರು ಗಿಡಗಳನ್ನು ಉದ್ಯಾನವನದಲ್ಲಿ ನಾಟಿ ಮಾಡಿ ಪೋಷಣೆ ಮಾಡಿದ್ದರಿಂದ ಸುಮಾರು 50 ಗಿಡಗಳು ಬೆಳೆದು ಮರಗಳಾಗಿವೆ. ಅದನ್ನು ಹೊರತು ಪಡಿಸಿ ಯೋಜನಾ ವರದಿಯಲ್ಲಿರುವಂತೆ ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ. ಕುಳಿತು ಕೊಳ್ಳಲು ಹಾಕಲಾಗಿದ್ದ ಸಿಮೆಂಟ್‌ ಚೇರ್‌ಗಳೇ ಒಂದೆರಡಿವೆ. ಉಳಿದವನ್ನು ಪೋಕರಿಗಳು ಒಡೆದು ಹಾಕಿದ್ದಾರೆ.

ಕಳೆದ ವರ್ಷ ನಗರಸಭೆ ವಿಶ್ವ ಪರಿಸರ ದಿನದಂದು ಕಾಟಾಚಾರಕ್ಕೆ ಮತ್ತಷ್ಟು ಸಸಿಗಳನ್ನು ನಾಟಿ ಮಾಡಿ ಬಿಲ್‌ ಮಾಡಿ ಕೈ ತೊಳೆದುಕೊಂಡಿತ್ತು. ಆದರೆ ನಿರ್ವಹಣೆಯಿಲ್ಲದೆ ಒಂದು ಗಿಡವೂ ಬೆಳೆದಿಲ್ಲ. ಉಳಿದಂತೆ ಕಾಮಗಾರಿ ಪೂರ್ಣಗೊಳಿಸಿ ಉದ್ಯಾನವನವನ್ನು ನಗರಸಭೆಗೆ ಹಸ್ತಾಂತರ  ಮಾಡಬೇಕಾಗಿತ್ತು. ಆದರೆ, ನಿರ್ಮಿತಿ ಕೇಂದ್ರದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ

ಎಂ.ನಾಗರಾಜಯ್ಯ

ಟಾಪ್ ನ್ಯೂಸ್

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮುಲ್ ಸ್ಪಷ್ಟನೆ

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar: ಹಕ್ಕಿಪಿಕ್ಕಿ ಕಾಲೋನಿ ಮಕ್ಕಳಿಗೆ ಅಕ್ಕಿ,ಮೊಟ್ಟೆ ಕೊಟ್ಟಿಲ್ಲ!

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

Kolar ಗುಂಪು ಘರ್ಷಣೆ: ಮಾರಕಾಸ್ತ್ರಗಳಿಂದ ಹಲ್ಲೆ

10

Lok Adalat: ವಿಚ್ಛೇದನಕ್ಕೆ ಬಂದಿದ್ದ ದಂಪತಿ, ಅದಾಲತ್‌ನಲ್ಲಿ ಒಂದಾದರು!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

Kolar: ಜಿಲ್ಲೆಯಲ್ಲಿ ದಿಢೀರ್‌ ಸದ್ದು ಮಾಡಿದ ಡಿಜೆ!

High-Court

Kolar: ಬಾಲಕಿಯರ ಖಾಸಗಿ ಫೋಟೋ ತೆಗೆದ ಶಿಕ್ಷಕ; ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Langoti Man Movie Review

Langoti Man Movie Review: ಸಂಪ್ರದಾಯದ ಕೊಂಡಿಯಲ್ಲಿ ಲಂಗೋಟಿ!

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.