ಮೈಸೂರು ಪೇಟ, ಬಿಳಿ ಅಂಗಿ, ಪಂಚೆ ಶಲ್ಯ ಧರಿಸುವ ಸಿಬ್ಬಂದಿ


Team Udayavani, Apr 18, 2019, 3:00 AM IST

mys-peta

ಹುಣಸೂರು: ಮತದಾರರನ್ನು ಮತಗಟ್ಟೆಗೆ ಸೆಳೆಯಲು ತಾಲೂಕಿನ ಎರಡು ಹಾಡಿಗಳಲ್ಲಿ ಪಾರಂಪರಿಕ ಮತಗಟ್ಟೆ, ಮನುಗನಹಳ್ಳಿ ಹಾಗೂ ನಗರದ ಮಹಿಳಾ ಪದವಿ ಕಾಲೇಜಿನ ಮತಕೇಂದ್ರಗಳನ್ನು ಸಖಿ(ನೀಲಿ) ಮತ್ತು ಬಿಳಿಕೆರೆ ಮತಕೇಂದ್ರವನ್ನು ವಿಕಲಚೇತನರ ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳನ್ನಾಗಿ ಅಲಂಕರಿಸಿದ್ದು, ಕಣ್ಮನ ಸೆಳೆಯುತ್ತಿವೆ. ಈ ವಿಶೇಷ ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿ ಮೈಸೂರು ಪೇಟ ತೊಟ್ಟು, ಬಿಳಿ ಅಂಗಿ, ಪಂಚೆ-ಶಲ್ಯ ತೊಡುವರು.

ಮತದಾರರು ಸಂಭ್ರಮದಿಂದ ಮತ ಚಲಾಯಿಸುವಂತೆ ಪ್ರೇರೇಪಿಸುವಂತೆ ಈ ವಿಶಿಷ್ಟ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಆದಿವಾಸಿಗಳು ಕೊಡಗಿಗೆ ತೆರಳುವುದರಿಂದ ಅವರನ್ನು ಮತಗಟ್ಟೆಗತ್ತ ಆಕರ್ಷಿಸಲು ನಾಗಪುರ ಆಶ್ರಮ ಶಾಲೆ ಹಾಗೂ ಶೆಟ್ಟಹಳ್ಳಿ ಹಾಡಿಯ ಆವರಣದಲ್ಲಿ ಆದಿವಾಸಿಗಳ ಪಾರಂಪಾರಿಕ ಗುಡಿಸಲು ತೆರೆಯಲಾಗಿದ್ದು, ಬಿದಿರಿನಿಂದ ತಯಾರಿಸಿದ ಸ್ವಾಗತ ಕೇಂದ್ರ ನಿರ್ಮಿಸಲಾಗಿದೆ.

ಸ್ಥಳೀಯ ಮಹಿಳಾ ಸಿಬ್ಬಂದಿ ಆದಿವಾಸಿಗಳ ಪೋಷಾಕಿನೊಂದಿಗೆ ಕರ್ತವ್ಯ ನಿರ್ವಹಿಸಲಿದ್ದಾರೆ. ಆದಿವಾಸಿಗಳ ಸಂಸ್ಕೃತಿಯನ್ನು ಅನಾವರಣಗೊಳಿಸುವ ಭಿತ್ತಿಚಿತ್ರಗಳನ್ನು ಅಲ್ಲಲ್ಲಿ ಅಳವಡಿಸಿದ್ದಾರೆ. ಮತದಾರರು ಖಷಿಯಿಂದ ಬಂದು ಮತದಾನ ಮಾಡುವಂತೆ ಆಕರ್ಷಿಸಲು ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ. ಚುನಾವಣಾ ಸಿಬ್ಬಂದಿ ಮೈಸೂರು ಪೇಟ ತೊಟ್ಟು, ಬಿಳಿ ಅಂಗಿ, ಪಂಚೆ-ಶಲ್ಯ ತೊಡುವರು.

ನೀಲಿ-ಸಖಿ ಮತಗಟ್ಟೆ: ನಗರದ ಮಹಿಳಾ ಕಾಲೇಜು ಹಾಗೂ ಬಿಳಿಕೆರೆ ಹೋಬಳಿಯ ಮನುಗನಹಳ್ಳಿ ಮತಕೇಂದ್ರಗಳು ಸಖಿ ಮತಕೇಂದ್ರಗಳಾಗಿದ್ದು, ನೀಲಿ ಬಣ್ಣದಲ್ಲಿ ಮಿಂಚುವಂತೆ ನಿರ್ಮಿಸಲಾಗಿದೆ. ಇಲ್ಲಿ ಸಂಪೂರ್ಣ ಮಹಿಳೆಯರೇ ನೀಲಿ ಸೀರೆ ತೊಟ್ಟು ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದು, ಇಡೀ ಮತ ಕೇಂದ್ರದ ಹೊರ ಮತ್ತು ಒಳ ಆವರಣ ಹಾಗೂ ಮುಖ್ಯದ್ವಾರವನ್ನು ನೀಲಿ ಬಣ್ಣದಿಂದಲೇ ಕಂಗೊಳಿಸುವಂತೆ ಮಾಡಲಾಗಿದೆ.

ವಿಕಲಾಂಗರ ಮತಗಟ್ಟೆ: ಇದೇ ಪ್ರಥಮ ಬಾರಿಗೆ ತಾಲೂಕಿನ ಬಿಳಿಕೆರೆಯ ಮತಗಟ್ಟೆ ವ್ಯಾಪ್ತಿಯಲ್ಲಿ ಹೆಚ್ಚು ಮಂದಿ ವಿಕಲಚೇತನರಿರುವ ಈ ಮತಗಟ್ಟೆಯನ್ನು ವಿಶಿಷ್ಟವಾಗಿ ನಿರ್ಮಿಸಲಾಗಿದ್ದು, ಇಡೀ ಕಟ್ಟಡವನ್ನು ಬಣ್ಣಗಳಿಂದ ಕಂಗೊಳಿಸುವಂತೆ ಮಾಡಲಾಗಿದೆ. ವಿಕಲಚೇತನರು ಸರಾಗವಾಗಿ ಮತಚಲಾಯಿಸಲು ಅಗತ್ಯವಾದ ವೀಲ್‌ಚೇರ್‌ ಸೇರಿದಂತೆ ಉಪಕರಣಗಳನ್ನು ಸಹ ಒದಗಿಸಲಾಗಿದೆ.

ಜಿಲ್ಲಾ ಚುನಾವಣಾಧಿಕಾರಿ, ಜಿಪಂ ಸಿಇಒ ಮಾರ್ಗದರ್ಶನದಲ್ಲಿ ಈ ಮಾದರಿ ಮತಗಟ್ಟೆಗಳನ್ನು ಗ್ರಾಪಂಗಳ ಸ್ವೀಪ್‌ ಸಮಿತಿ ಅಧ್ಯಕ್ಷರಾದ ಪಿಡಿಒ ಹಾಗೂ ಸಿಬ್ಬಂದಿ ನಿರ್ಮಿಸಿದ್ದಾರೆ. ಈ ವಿಶಿಷ್ಟ ಮತಗಟ್ಟೆಗಳಲ್ಲಿ ಮತದಾರರಿಗೆ ತಂಪು ಪಾನೀಯ, ಮಜ್ಜಿಗೆ, ಕಾಳುಮೆಣಸು ಹಾಕಿರುವ ಬೇಲದಹಣ್ಣಿನ, ನಿಂಬೆಹಣ್ಣಿನ ಪಾನಕ ಹಾಗೂ ಸಖಿ ಮತಗಟ್ಟೆಗಳಲ್ಲಿ ಮಹಿಳೆಯರಿಗೆ ಉಗುರು ಬಣ್ಣ ಹಾಗೂ ಟೋಪಿಯನ್ನು ವಿತರಿಸಲಾಗುವುದು. ನಾಗಾಪುರ ಮತಕೇಂದ್ರಕ್ಕೆ ಆದಿವಾಸಿಗಳನ್ನು ಆಕರ್ಷಿಸುವ ಮತದಾನಕ್ಕಾಗಮಿಸುವ ಎಲ್ಲರಿಗೂ ಸಲುವಾಗಿ ವಿವಿಧ ಜಾತಿಯ ಸಸಿ ವಿತರಿಸಲಾಗುವುದು,
-ಮಹೇಶ್‌, ತಾಲೂಕು ಚುನಾವಣಾ ಅಧಿಕಾರಿ

* ಸಂಪತ್‌ ಹುಣಸೂರು

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು

Mys-Udgiri-1

Mob Attack: ಉದಯಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ

24

80 ಸಾವಿರ ಲಂಚ ಸ್ವೀಕರಿಸುವಾಗ ಸಬ್‌ ಇನ್ಸ್‌ಪೆಕ್ಟರ್‌ ಲೋಕ ಬಲೆಗೆ

11

Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್‌’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.