ಕರುನಾಡ ಮಣ್ಣಿನ ಭಾಷೆಯಲ್ಲಿ ಸಂಸ್ಕೃತಿ ಅಡಗಿದೆ
Team Udayavani, Apr 21, 2019, 3:00 AM IST
ಬೆಂಗಳೂರು: ಈ ಕರುನಾಡಿನ ಮಣ್ಣಿನ ಭಾಷೆಯಲ್ಲಿ ಸಂಸ್ಕೃತಿ ಅಡಗಿದ್ದು, ಇದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಕೆಲಸವಾಗಬೇಕಾಗಿದೆ ಎಂದು ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಸ್ಕೃತ ಭಾರತಿ ಸಂಸ್ಥೆ, ಶನಿವಾರ ಗಿರಿನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಚಿಂತಕ ಮತ್ತು ಲೇಖಕ ಶತಾವಧಾನಿ ಆರ್.ಗಣೇಶ್ ಅವರ “ಮಹಾಬ್ರಾಹ್ಮಣ’, ಜನಾರ್ಧನ ಹೆಗಡೆ ಅವರ “ಇಂದ್ರಲೇಖ’ ಹಾಗೂ “ಗ್ರಂಥಿಲಂ’ ಕೃತಿಗಳನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದ ಅವರು, ಸಂಸ್ಕೃತ ಭಾಷೆಯಲ್ಲಿ ಸೌಂದರ್ಯ ಅಡಗಿದೆ ಎಂದು ಹೇಳಿದರು.
ಆಂಗ್ಲ ಭಾಷೆ ಕವಿ ವಿಲಿಯಂ ಷೇಕ್ಸ್ಪಿಯರ್ಗಿಂತಲೂ ಉತ್ತಮ ಕಾವ್ಯಗಳನ್ನು ಕಾಳಿದಾಸ ಸೇರಿದಂತೆ ಹಲವು ಕವಿಗಳು ಸಂಸ್ಕೃತದಲ್ಲಿ ರಚನೆ ಮಾಡಿದ್ದಾರೆ. ಆದರೆ, ಅವುಗಳು ಪಾಠ್ಯರೂಪದಲ್ಲಿ ಅಷ್ಟೊಂದು ಇಲ್ಲ.
ಹೀಗಾಗಿ, ಇಂತಹ ಮಹಾನ್ ವಿದ್ವಾಂಸರ ಸಾಹಿತ್ಯ ಮಕ್ಕಳಿಗೂ ಪರಿಚಯವಾಗಬೇಕಾಗಿದ್ದು, ಪೋಷಕರು ಈ ಕವಿಗಳ ಸಾಹಿತ್ಯವನ್ನು ಅರ್ಥೈಹಿಸಿಕೊಂಡು ಮಕ್ಕಳಿಗೆ ತಿಳಿ ಹೇಳಬೇಕು. ಯಾವುದೇ ಕಾರಣಕ್ಕೂ ಕಾಳಿದಾಸರಂತ ಶ್ರೇಷ್ಠ ಕವಿಗಳ ಸಾಹಿತ್ಯ ಕೇವಲ ಪುಸ್ತಕಗಳಿಗೆ ಸೀಮಿತವಾಗಬಾರದು ಎಂದು ತಿಳಿಸಿದರು.
ಲ್ಯಾಟಿನ್ ಮತ್ತು ಗ್ರೀಕ್ ಸಾಹಿತ್ಯದಲ್ಲಿನ ಎರಡರಷ್ಟು ಉತ್ತಮ ಸಾಹಿತ್ಯ ಸಂಸ್ಕೃತ ಭಾಷೆಯಲ್ಲಿದೆ.ನಮ್ಮ ಹಿರಿಯರು ಶೇಷ್ಠ ನಾಟಕಗಳ ಜತೆಗೆ ಸಾಹಿತ್ಯವನ್ನು ರಚಿಸಿದ್ದು, ಇದನ್ನು ನಮ್ಮ ಮುಂದಿನ ಜನಾಂಗಕ್ಕೆ ಬಳುವಳಿಯಾಗಿ ನೀಡುವ ನಿಟ್ಟಿನಲ್ಲಿ ಕೆಲಸವಾಗಬೇಕಾಗಿದೆ ಎಂದು ಹೇಳಿದರು.
ನನಗೆ ಸಂಸ್ಕೃತ ಭಾಷೆ ಮಾತನಾಡಲು ಬರುವುದಿಲ್ಲ.ಆದರೆ, ಏನು ಮಾತನಾಡಿದರು ಎಂಬುವುದು ಅರ್ಥವಾಗುತ್ತದೆ. ನಮ್ಮ ತಾತ ನನಗೆ ಕಾಳಿದಾಸ ಕಾವ್ಯಗಳನ್ನು ಸಂಸ್ಕೃತದಲ್ಲಿ ಹೇಳಿಕೊಡುತ್ತಿದ್ದರು. ಹೀಗಾಗಿ ಕಾಳಿದಾಸನ ಕಾವ್ಯಗಳ ಬಗ್ಗೆ ನನಗೆ ಅರಿವಿದೆ. ಜ್ಞಾನ-ವಿಜ್ಞಾನ ಈ ಭಾಷೆಯಲ್ಲಿ ಅಡಗಿದೆ ಎಂದರು.
ಲೇಖಕ ಮತ್ತು ಚಿಂತಕ ಶತಾವಧಾನಿ ಡಾ.ಆರ್.ಗಣೇಶ್ ಮಾತನಾಡಿ, ದೇವುಡು ನರಸಿಂಹ ಶಾಸ್ತ್ರೀ ಅವರ ಗದ್ಯ ಕಾವ್ಯದಲ್ಲಿದ್ದ “ಮಹಾಬ್ರಾಹ್ಮಣ’ ಕೃತಿಯನ್ನು ಸಂಸ್ಕೃತ ಭಾಷೆಯಲ್ಲಿ ತಂದಿರುವುದು ಖುಷಿ ಕೊಟ್ಟಿದೆ. ಗದ್ಯ ಕಾವ್ಯದಲ್ಲಿದ್ದ ಕೃತಿಯನ್ನು ಸಂಸ್ಕೃತದಲ್ಲಿ ಪದ್ಯರೂಪಕ್ಕೆ ತರುವುದು ಎಷ್ಟು ಕಷ್ಟ ಎಂಬ ಅರಿವು ನನಗಾಯಿತು ಎಂದು ಹೇಳಿದರು.
ನಾಗಪುರದ ಕಾಳಿದಾಸ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಶ್ರೀನಿವಾಸ ವರಖೇಡಿ, ದೇವುಡು ಪ್ರತಿಷ್ಠಾನದ ಗಂಗಾಧರ ದೇವುಡು, ಪ್ರೇಕ್ಷಾ ಸಂಪಾದಕ ಗಣ್ಯ ಸದಸ್ಯ ಬಿ.ಎನ್.ಶಶಿಕಿರಣ ಉಪಸ್ಥಿತರಿದ್ದರು.
10 ಲಕ್ಷ ರೂ. ದೇಣಿಗೆ: ಸಂಸ್ಕೃತ ಕಲಿಸುವ ನಿಟ್ಟಿನಲ್ಲಿ ಸಂಸ್ಕೃತ ಭಾರತಿ ಸಂಸ್ಥೆ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದು, ಸಂಸ್ಕೃತವನ್ನು ಮತ್ತಷ್ಟು ಜನರಿಗೆ ಕಲಿಸಲಿ ಎಂಬ ಉದ್ದೇಶದಿಂದ ಇನ್ಫೋಸಿಸ್ ಫೌಂಡೇಷನ್ ವತಿಯಿಂದ ಸಂಸ್ಕೃತ ಭಾರತಿ ಸಂಸ್ಥೆಗೆ 10 ಲಕ್ಷ ರೂ.ದೇಣಿಗೆ ನೀಡುವುದಾಗಿ ಸುಧಾಮೂರ್ತಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಕುಡಿದು ಜಗಳ ಮಾಡಿದ ಸ್ನೇಹಿತನ ಕತ್ತು ಹಿಸುಕಿ ಹತ್ಯೆ
Bengaluru: ಮೆಡಿಕಲ್ ಸೀಟು ಕೊಡಿಸುವುದಾಗಿ 1.57 ಕೋಟಿ ರೂ. ವಂಚನೆ!
Bengaluru: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ದೋಷಾರೋಪ ಪಟ್ಟಿ ಸಲ್ಲಿಕೆ
Bengaluru: 2.5 ಕೋಟಿ ರೂ. ಮೌಲ್ಯದ ಕೆರೆ ಒತ್ತುವರಿ ಜಾಗ ತೆರವು ಕಾರ್ಯಾಚರಣೆ
Bengaluru: ಚರ್ಚ್ ಸ್ಟ್ರೀಟ್ ನಲ್ಲಿದ್ದ 50 ಅನಧಿಕೃತ ಅಂಗಡಿ ತೆರವು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bengaluru: ಕುಡಿದು ಜಗಳ ಮಾಡಿದ ಸ್ನೇಹಿತನ ಕತ್ತು ಹಿಸುಕಿ ಹತ್ಯೆ
Bengaluru: ಮೆಡಿಕಲ್ ಸೀಟು ಕೊಡಿಸುವುದಾಗಿ 1.57 ಕೋಟಿ ರೂ. ವಂಚನೆ!
ಕೇಂದ್ರದಿಂದ ರಾಜ್ಯ ಸರ್ಕಾರದ ಅಸ್ಥಿರ ಪ್ರಯತ್ನ ಎಂಬುದು ಕಾಂಗ್ರೆಸ್ ನ ಭ್ರಮೆ: ಸಂಸದ ಜಿಗಜಿಣಗಿ
Bengaluru: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ದೋಷಾರೋಪ ಪಟ್ಟಿ ಸಲ್ಲಿಕೆ
Bengaluru: 2.5 ಕೋಟಿ ರೂ. ಮೌಲ್ಯದ ಕೆರೆ ಒತ್ತುವರಿ ಜಾಗ ತೆರವು ಕಾರ್ಯಾಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.