ಜೇನು ಸಂತಾನ ಅಭಿವೃದ್ಧಿಗೊಳಿಸಿ


Team Udayavani, Apr 21, 2019, 4:47 PM IST

nc-3

ಶಿರಸಿ: ಜೇನು ಗೂ‌ನ್ನು ರಕ್ಷಿಸಿ ಅದರ ಸಂತಾನವನ್ನು ಅಭಿವೃದ್ಧಿ ಪಡಿಸುವುದೆ ನಮ್ಮ ಧ್ಯೇಯವಾಗಬೇಕು. ಆ ಮೂಲಕ ಜೇನು ತಳಿ ಉಳಿಸಬೇಕು ಎಂದು ಕೋಡ್ಸರದ ಜೇನು ಕೃಷಿಕ ಚಂದ್ರಶೇಖರ ಹೆಗಡೆ ಆಶಿಸಿದರು.

ಅವರು ಕೋಡಸರದಲ್ಲಿ ಇಲ್ಲಿನ ಪ್ರಕೃತಿ ಸಂಸ್ಥೆ ನಡೆಸಿದ ಜೇನು ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿ, ಜೇನು ಕೃಷಿ ಮಾಡಿದರೆ ತೋಟಗಾರಿಕಾ ಉತ್ಪನ್ನಗಳೂ ಹೆಚ್ಚಳವಾಗುತ್ತವೆ. ಜೇನು ಕೃಷಿ ಜೊತೆಗೆ ನಾವೂ ಅವುಗಳ ಸಂತತಿ ಉಳಿಸಬೇಕು ಎಂದರು.

ಪೆಟ್ಟಿಗೆಯ ಜೊತೆಗೆ ಪಾರಂಪರಿಕವಾಗಿ ಗಡಿಗೆ, ಬೈನೆ ಮರದ ತುಂಡನ್ನು ಉಪಯೋಗಿಸಿ ಕಾಡಿನೊಳಗೆ ಇವುಗಳನ್ನು ಇಟ್ಟು ಸ್ಥಳೀಯ ಜೇನು ಸಾಕಾಣಿಕೆ ಮಾಡುತ್ತಿರುವುದನ್ನು ತೋರಿಸಿದರು. ಜೊತೆಗೆ 9 ಮಿಸರಿ ಜೇನು ಪಡೆಗಳನ್ನು ಸಾಕಿರುವುದು ಒಂದು ವಿಶೇಷ ಸಂಗತಿಯಾಗಿದೆ ಎಂದರು.

ಸಂಸ್ಥೆಯ ಮುಖ್ಯಸ್ಥ ಪಾಂಡುರಂಗ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಕಳೆದ 18 ವರ್ಷಗಳಿಂದ ಸತತವಾಗಿ ಜೇನು ಹಬ್ಬವನ್ನು ಆಚರಿಸುತ್ತಾ ಬಂದಿದ್ದು, 19ನೇ ವರ್ಷದ ಮೊದಲ ಜೇನು ಹಬ್ಬ ಇದಾಗಿದೆ ಎಂದು ದಶಕಗಳ ಕಾಲ ಜೇನಿನ ಕುರಿತಾಗಿ ನಿರಂತರ ಜಾಗೃತಿ ಮೂಡಿಸುವ ಕೆಲಸ ಸಫಲವಾಗಿ ನಡೆದು ಬಂದ ದಾರಿಯ ಬಗ್ಗೆ ಮಾಹಿತಿ ನೀಡಿದರು.

ಜೇನು ಗೂಡಿನ ಪರಿಚಯ, ಜೇನು ಹುಳುಗಳ ಕುರಿತು ಪ್ರಾತ್ಯಕ್ಷಿಕೆಯನ್ನು ಮಾಡಿ ಭಾಗವಹಿಸಿದ ಜನರಿಗೆ ಹೆಣ್ಣು ಮತ್ತು ಗಂಡು ಜೇನು ಹುಳಗಳು, ಕೋಶಾವಸ್ಥೆಯಲ್ಲಿರುವ ಮೊಟ್ಟೆ, ಜೇನಿನ ಆಹಾರವಾದ ಪರಾಗ ಮತ್ತು ರಾಣಿ ಹುಳಗಳ ಕುರಿತು ಮಾಹಿತಿ ನೀಡಲಾಯಿತು.

ನಂತರ ಜೇನು ತುಪ್ಪವನ್ನು ಅಹಿಂಸಾತ್ಮಕವಾಗಿ ಹೇಗೆ ತೆಗೆಯಲು ಸಾಧ್ಯ ಎಂಬುದನ್ನು ನೆರೆದ ಜನರಿಂದಲೇ ತುಪ್ಪ ತುಂಬಿದ ಸೀಲ್ ಮಾಡಿದ ಫ್ರೇಮ್‌ಗಳನ್ನು ಜೇನು ಪೆಟ್ಟಿಗೆಯ ಮೇಲಿನ ಸೊಪರ್‌ನಿಂದ ತೆಗೆದು ಜೇನು ತೆಗೆಯುವ ಮಶೀನ್‌ನಲ್ಲಿ ಹಾಕಿ ತಿರುಗಿಸಿ ಶುದ್ಧ ತಾಜಾ ಜೇನು ತುಪ್ಪವನ್ನು ಹೇಗೆ ತೆಗೆಯಲು ಸಾಧ್ಯ ಎಂದು ತೋರಿಸಲಾಯಿತು.

ಜೇನು ಹಬ್ಬದ ಆಚರಣೆಯಲ್ಲಿ ಶುದ್ಧವಾದ, ತಾಜಾ ಜೇನು ತುಪ್ಪದ ರುಚಿಯನ್ನು ಸವಿದ ನಂತರ ಜೇನು ಸಂತತಿಯ ಕುರಿತು ಜನರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಜೇನು ಹೇಗೆ ಮೇಣದ ರಟ್ಟನ್ನು ತಯಾರಿಸುತ್ತದೆ, ಜೇನು ಮತ್ತು ರಾಣಿ ನೊಣದ ಆಯುಸ್ಸು, ಜೇನು ಹುಳು ಕಚ್ಚಿದರೆ ಯಾಕೆ ಮತ್ತು ಹೇಗೆ ಮನುಷ್ಯನ ದೇಹದಲ್ಲಿ ಯಾವ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಸ್ವಾರಸ್ಯಕರ ಚರ್ಚೆ ನಡೆಯಿತು.

ಕೋಡ್ಸರದ ದತ್ತಾತ್ರೇಯ ಹೆಗಡೆ, ಪ್ರಕೃತಿ ಸಂಸ್ಥೆಯ ಸುಬ್ಬಣ್ಣ, ಹೊಸಮನೆಯ ಗೌತಮ್‌, ಯಲುಗಾರಿನ ಉಮೇಶ ಜೋಶಿ, ಹುಣಸೇಕೊಪ್ಪದ ಮಹಾಬಲೇಶ್ವರ ಹೆಗಡೆ, ಸಂಕದಮನೆ ನೀಲಕಂಠ, ವಿದ್ಯಾಧರ ಮತ್ತಿತರರು ಭಾಗವಹಿಸಿದ್ದರು.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

12

Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.