“ಮಾನಸಿಕ,ದೈಹಿಕ ಸಮನ್ವಯತೆಗೆ ಯೋಗ ಸಹಕಾರಿ’
ಶ್ರೀ ರಾಮಕೃಷ್ಣ ಮಠದಲ್ಲಿ ಯೋಗ ಶಿಬಿರಕ್ಕೆ ಚಾಲನೆ
Team Udayavani, Apr 28, 2019, 6:27 AM IST
ಮಹಾನಗರ: ಮನುಷ್ಯನ ಬುದ್ಧಿ ಚಿತ್ತಗಳ ಸಮನ್ವಯತೆ ಸಾಧಿಸಿ, ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಹೊಂದುವಲ್ಲಿ ಯೋಗ ಸಹಕಾರಿ ಎಂದು ಶ್ರೀ ರಾಮಕೃಷ್ಣ ಮಠದ ಜಿತಕಾಮಾನಂದ ಸ್ವಾಮೀಜಿ ಅವರು ಹೇಳಿದರು.
ನಗರದ ಶ್ರೀ ರಾಮಕೃಷ್ಣ ಮಠದಲ್ಲಿ ಇತ್ತೀಚೆಗೆ ನಡೆದ ಯೋಗ ಶಿಬಿರಕ್ಕೆ ಚಾಲನೆ ನೀಡಿ, ಮಾತನಾಡಿದರು. ಯೋಗವು ಭಾರತೀಯ ಪರಂಪರೆಯಿಂದ ಬಳುವಳಿಯಾಗಿ ಬಂದ ವಿದ್ಯೆಯಾಗಿದ್ದು, ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆ ಪಡೆದಿದೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗ ಗುರು ಡಾ| ಎಂ. ಜಗದೀಶ್ ಶೆಟ್ಟಿ ಬಿಜೈ ಅವರಂತಹ ಯೋಗ್ಯ ಶಿಕ್ಷಕರಿಂದ ತರಬೇತಿ ಪಡೆದು ಶಿಬಿರದ ಸದುಪಯೋಗ ಪಡೆಯುವಂತೆ ತಿಳಿಸಿದರು.
ಪತ್ರಕರ್ತ ವೇಣುವಿನೋದ್ ಮಾತ ನಾಡಿ, ಯೋಗವನ್ನು ದಿನಚರಿಯಲ್ಲಿ ಅಳವಡಿಸಿ ಕೊಂಡಾಗ ಚಟುವಟಿಕೆಯಿಂದ ಕೂಡಿದ ಆರೋಗ್ಯಪೂರ್ಣ ಜೀವನ ಸಾಧ್ಯ ಎಂದರು.
ಡಾ| ದೇವರಾಜ್ ಮಾತನಾಡಿ, ನಿರಂ ತರ ಯೋಗಾಭ್ಯಾಸವನ್ನು ಮಾಡಿ ನಾನು ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿರುವುದಾಗಿ ತಿಳಿಸಿದರು.
ಯೋಗದಿಂದ ಮಾನಸಿಕ ನೆಮ್ಮದಿ
ಯೋಗ ಗುರು ಡಾ| ಎಂ. ಜಗದೀಶ್ ಶೆಟ್ಟಿ ಬಿಜೈ ಮಾತನಾಡಿ, ಯೋಗದಿಂದ ಯಾವ ರೋಗವು ಬರದ ಹಾಗೆ ಶರೀರ ಸುಸ್ಥಿತಿಯಲ್ಲಿರಲು, ಮಾನಸಿಕ ನೆಮ್ಮದಿಯಿಂದಿರಲು ಆಸನ, ಪ್ರಾಣಾಯಾಮ, ಯೋಗ ಚಿಕಿತ್ಸಾ ಪದ್ಧತಿ, ಮುದ್ರೆ, ಯೋಗನಿದ್ರೆ, ವೈದಿಕ ಸೂರ್ಯನಮಸ್ಕಾರ ಈ ಒಂದು ಶಿಬಿರದಲ್ಲಿ ಶಿಬಿರಾರ್ಥಿಗಳಿಗೆ ಕಲಿಸಿ ಕೊಡಲಾಗುವುದು ಎಂದರು.
ರಾಧಿಕಾ ಕಾಮತ್ ವಂದಿಸಿದರು. ಸುಬ್ರಾಯ ನಾಯಕ್, ಭಾರತಿ ಶೆಟ್ಟಿ, ಊರ್ಮಿಳಾ, ಶಕೀಲಾ, ಕುಶಲ, ರೂಪಾ, ಡಾ| ಅನುಷಾ, ಲೋಕೇಶ್, ರೂಪಾ, ಮಾಧವ್ ಶೆಣೈ, ಮೋಹನ್ ಭಟ್, ಸುರೇಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಯೋಗದಿಂದ ರೋಗ ಮುಕ್ತಿ
ಅತಿಥಿಯಾಗಿದ್ದ ನಾ. ದಾಮೋದರ್ ಶೆಟ್ಟಿ ಮಾತನಾಡಿ, ಯೋಗಾಭ್ಯಾಸದಿಂದ ಇಂದಿನ ಜೀವನ ಶೈಲಿಯಿಂದ ಬರುವ ರೋಗಗಳನ್ನು ನಿಯಂತ್ರಿಸಬಹುದಾಗಿದೆ. ನಿರಂತರ ಅಭ್ಯಾಸ ಮಾಡುವ ಅಗತ್ಯವಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
BJP MLA ಮುನಿರತ್ನಗೆ ಅಕ್ಟೋಬರ್ 5ರವರೆಗೆ ನ್ಯಾಯಾಂಗ ಬಂಧನ
Ayodhya: 8 ಕಾಲುಗಳ ಕರುವಿಗೆ ಜನ್ಮ ನೀಡಿದ ಎಮ್ಮೆ, ಇದೊಂದು ಪವಾಡ- ಸ್ಥಳೀಯರು
Vijayapura: ತಿರುಪತಿ ಲಡ್ಡು ಪಾವಿತ್ರ್ಯತೆ ಹಾಳು ಮಾಡಿದವರನ್ನು ಗಲ್ಲಿಗೇರಿಸಬೇಕು: ಯತ್ನಾಳ್
Dandeli: ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ದ್ವಿಚಕ್ರ ವಾಹನ: ಇಬ್ಬರಿಗೆ ಗಾಯ
ಕುಡಿದು ಆ್ಯಂಬ್ಯುಲೆನ್ಸ್ ಚಲಾಯಿಸಿ ಟ್ಯಾಂಕರ್ ಗೆ ಡಿಕ್ಕಿ; ಸ್ವಲ್ಪದರಲ್ಲಿ ತಪ್ಪಿದ ಅನಾಹುತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.