ಬಮೂಲ್ ಚುನಾವಣೆ: ಜೆಡಿಎಸ್‌ನಿಂದ ನಾಗರಾಜ್‌ ಕಣಕ್ಕೆ

ಬಮೂಲ್ ನಿರ್ದೇಶಕ ಸ್ಥಾನಕ್ಕೆ ಮೇ 12ರಂದು ನಡೆಯುವ ಚುನಾವಣೆ

Team Udayavani, Apr 30, 2019, 3:52 PM IST

ramanagar-2-tdy..

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ತಾಲೂಕು ಅಧ್ಯಕ್ಷ ರಾಜಶೇಖರ್‌ ಮಾತನಾಡಿದರು.

ರಾಮನಗರ: ಮೇ 12ರಂದು ನಡೆಯುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ (ಬಮೂಲ್) ನಿರ್ದೇಶಕ ಸ್ಥಾನ ಚುನಾವಣೆಗೆ ರಾಮನಗರ ಕ್ಷೇತ್ರದಿಂದ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ಪಿ.ನಾಗರಾಜು ಅವರನ್ನು ಕಣಕ್ಕಿಳಿಸಿದ್ದು, ಎಂಪಿಸಿಎಸ್‌ ಅಧ್ಯಕ್ಷರು ಅವರಿಗೆ ಬೆಂಬಲ ನೀಡಬೇಕು ಎಂದು ಜೆಡಿಎಸ್‌ ತಾಲೂಕು ಘಟಕದ ಅಧ್ಯಕ್ಷ ರಾಜಶೇಖರ್‌ ಮನವಿ ಮಾಡಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ. ದೇವೇ ಗೌಡ, ಸಿಎಂ ಕುಮಾರಸ್ವಾಮಿ, ಶಾಸಕಿ ಅನಿತಾ ಈಗಾಗಲೇ ಪಿ.ನಾಗರಾಜು ಅವರ ಸ್ಪರ್ಧೆಗೆ ಹಸಿರು ನಿಶಾನೆ ತೋರಿಸಿದ್ದಾರೆ. ಎಂದರು.

2 ಬಾರಿ ಅವಿರೋಧ ಆಯ್ಕೆ: ಪಿ.ನಾಗರಾಜು ಅವರು ಇದು 5ನೇ ಬಾರಿಗೆ ಸ್ಪರ್ಧಿಸುತ್ತಿದ್ದಾರೆ. ಎರಡು ಬಾರಿ ಅವಿರೋಧವಾಗಿ ಆಯ್ಕೆಯಾ ಗಿದ್ದಾರೆ. ಕಳೆದ ನಾಲ್ಕು ಅವಧಿಯಲ್ಲಿ ಹೈನುಗಾ ರಿಕೆಯ ಅಭಿವೃದ್ಧಿಗೆ ಮತ್ತು ಹೈನುಗಾರ ಕುಟುಂ ಬಗಳಿಗೆ ಆರ್ಥಿಕವಾಗಿ ಸಬಲರಾಗುವಲ್ಲಿ ಶ್ರಮಿಸಿದ್ದಾರೆ. ಅವರ ಕಾರ್ಯ ವೈಖರಿ, ಕ್ರಿಯಾ ಶೀಲತೆಯನ್ನು ಜನಸಾಮಾನ್ಯರು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಮೆಚ್ಚಿಕೊಂಡಿದ್ದಾರೆ ಎಂದರು. ಹಾಲು ಸಹಕಾರ ಕ್ಷೇತ್ರಕ್ಕೆ ಅವರ ಸೇವೆ ಇನ್ನೂ ಅಗತ್ಯವಿದೆ. ಹೀಗಾಗಿ ಎಲ್ಲಾ ಡೇರಿಗಳ ಅಧ್ಯಕ್ಷರು ಪಿ.ನಾಗರಾಜು ಅವರನ್ನು ಬಮೂಲ್ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಆರೋಪ ನಿರಾಧಾರ: ರಾಮನಗರ ಕ್ಷೇತ್ರ ದಿಂದ ನಿರ್ದೇಶಕ ಸ್ಥಾನದ ಚುನಾವಣೆಗೆ ಕರಡು ಮತದಾರರ ಪಟ್ಟಿಯಲ್ಲಿ ವಿವಿಧ ಕಾರಣಗಳಿಗೆ 74 ಎಂಪಿಸಿಎಸ್‌ ಅಧ್ಯಕ್ಷರ ಮತ ದಾನಕ್ಕೆ ಅನರ್ಹರು ಎಂದು ಘೋಷಿಸಲಾಗಿತ್ತು. ಮತದಾನದಿಂದ ವಂಚಿತವಾಗಿರುವ ಸಂಘದ ಅಧ್ಯಕ್ಷರಿಗೆ ಆಗಿರುವ ಅನ್ಯಾಯವನ್ನು ನಾಗರಾಜ್‌ ಮಾರ್ಗದರ್ಶನದಲ್ಲಿ ಚಿಕ್ಕಕುಂಟನಹಳ್ಳಿ ಎಂಪಿಸಿಎಸ್‌ ಅಧ್ಯಕ್ಷ ಮುನಿಸ್ವಾಮಯ್ಯ ಸೇರಿದಂತೆ 58 ಸಂಘಗಳ‌ ಅಧ್ಯಕ್ಷರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ನ್ಯಾಯಾಧೀಶ ಎಸ್‌.ಎನ್‌.ಸತ್ಯನಾರಾಯಣ ಅರ್ಜಿ ವಿಚಾರಣೆ ನಡೆಸಿ ಮಧ್ಯಂತರ ಆದೇಶದ ಮೂಲಕ ಎಲ್ಲಾ 58 ಸಂಘಗಳ ಅಧ್ಯಕ್ಷರಿಗೂ ಮತದಾನಕ್ಕೆ ಅವಕಾಶ ನೀಡಿದ್ದಾರೆ.

159 ಸಂಘದ ಅಧ್ಯಕ್ಷರಿಗೆ ಅವಕಾಶ: ಆದರೆ ಈ ವಿಚಾರದಲ್ಲಿ ಬಿಡದಿ ಹೋಬಳಿ ರಾಮನಹಳ್ಳಿ ಎಂಪಿಸಿಎಸ್‌ನ ಅಧ್ಯಕ್ಷ ಆರ್‌.ಎ. ಗೋಪಾಲ್ ಹಾಗೂ ಇಟ್ಟಮಡು ಎಂಪಿಸಿಎಸ್‌ನ ಮಾಜಿ ಕಾರ್ಯದರ್ಶಿ ಎನ್‌.ಪುಟ್ಟಪ್ಪ ಅವರು ಪಿ.ನಾಗರಾಜು ಅವರ ವಿರುದ್ಧ ಸಲ್ಲದ ಆರೋಪ ಮಾಡಿದ್ದಾರೆ. ಸಂಘಗಳ ಅಧ್ಯಕ್ಷರ ವಕಾಲತ್ತಿಗೆ ಸಹಿ ಹಾಕಿಸಿಕೊಂಡಿದ್ದರು, ನ್ಯಾಯಾ ಲಯಕ್ಕೆ ಕೊಡಲಿಲ್ಲ ಎಂಬಿತ್ಯಾದಿ ಆರೋಪ ಗಳೆಲ್ಲ ನಿರಾಧಾರ. ಅಸಲಿಗೆ ಪಿ.ನಾಗರಾಜ್‌ ಅವರ ಮಾರ್ಗದರ್ಶನದಂತೆ 58 ಅಧ್ಯಕ್ಷರ ರಿಟ್ ಅರ್ಜಿ ಏ.15ರಂದೇ ಹೈಕೋರ್ಟಿಗೆ ಸಲ್ಲಿಕೆಯಾಗಿತ್ತು ಎಂದು ಪಿ.ನಾಗರಾಜ್‌ರನ್ನು ಸಮರ್ಥಿಸಿ ಕೊಂ ಡರು. ಇದೀಗ ರಾಮನಗರ ತಾಲೂಕಿನ 159 ಸಂಘಗಳ ಅಧ್ಯಕ್ಷರಿಗೆ ಮತದಾನಕ್ಕೆ ಅವಕಾಶ ಸಿಕ್ಕಂತಾಗಿದ ಎಂದು ಮಾಹಿತಿ ನೀಡಿದರು.

ಅಧ್ಯಕ್ಷರಿಗೆ ಮತದಾನ ಮಾಡಲು ಅವಕಾಶ:

ಮೇ 12ರಂದು ನಡೆಯುವ ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಗೆ ರಾಜ್ಯ ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶದಲ್ಲಿ ಈ ಎಂ.ಪಿ.ಸಿ.ಎಸ್‌ಗಳ ಅಧ್ಯಕ್ಷರಿಗೆ ಮತಾದನಕ್ಕೆ ಅವಕಾಶ ಸಿಕ್ಕಿದೆ. ಚಿಕ್ಕಕುಂಟನಹಳ್ಳಿ, ಕರಡೀಗೌಡನ ದೊಡ್ಡಿ, ಮೊಟ್ಟೆದೊಡ್ಡಿ, ನಿಜಿಯಪ್ಪನದೊಡ್ಡಿ, ಹೆಗ್ಗಡ ಗೆರೆ, ಅರಳೀಮರದದೊಡ್ಡಿ, ಬಿಲ್ಲಕೆಂಪನ ಹಳ್ಳಿ, ಐಜೂರು, ಬಿ.ಗೊಲ್ಲಳ್ಳಿ, ಅರಳಾಳು ಸಂದ್ರ, ಹರಳೀಮರದದೊಡ್ಡಿ, ಗಾಣಕಲ್, ಮದರ್‌ಸಾಬರದೊಡ್ಡಿ, ಕೊಡಿಯಾಲ, ತಡಿಕವಾಗಿಲು, ಅಂಚೀಪುರ, ಜೆ.ಕುರುಬರಹಳ್ಳಿ, ವೀರೇಗೌಡನ ದೊಡ್ಡಿ, ಅರ್ಚಕರಹಳ್ಳಿ, ಬೋರೇಹಳ್ಳಿ, ಕಲ್ಲುಗೋ ಪಳ್ಳಿ, ಮನಗನಹಳ್ಳಿ, ಅವ್ವೇರಹಳ್ಳಿ, ನಾಗೋ ಹಳ್ಳಿ, ವಾಜರಹಳ್ಳಿ, ತೆಂಗಿನಕಲ್ಲು, ಹುಣಸೆ ದೊಡ್ಡಿ, ಪಾದರಹಳ್ಳಿ, ಮೇಡನಹಳ್ಳಿ, ಗುನ್ನೂರು, ತಿಮ್ಮಸಂದ್ರ, ಲಕ್ಷ್ಮೀಪುರ, ನಂಜೇಗೌಡನದೊಡ್ಡಿ, ಚಾಮುಂಡಿಪುರ, ಪೇಟೆ ಕುರುಬರಹಳ್ಳಿ, ಕೃಷ್ಣಪ್ಪನ ದೊಡ್ಡಿ, ಬಿಳಗುಂಬ, ತುಂಬೇನಹಳ್ಳಿ, ಸಂಜೀವಯ್ಯನದೊಡ್ಡಿ, ಜೋಗನಪಾಳ್ಯ, ಜಿ.ಅಂಕನಹಳ್ಳಿ, ನಾಗರಕಲ್ಲುದೊಡ್ಡಿ, ಎಂ.ಜಿ.ಪಾಳ್ಯ, ಚಿಕ್ಕಬೈರಮಂಗಲ, ಅಂಚೀ ಪುರ ಕಾಲೋನಿ, ಚನ್ನಮಾರೇ ಗೌಡನ ದೊಡ್ಡಿ, ಕದಲೀಗೌಡನದೊಡ್ಡಿ, ಜಡೇನ ಹಳ್ಳಿ, ಶ್ಯಾನುಭೋಗನಹಳ್ಳಿ, ಕಾಂಚೀ ದೊಡ್ಡಿ, ಕೆಂಚನಕುಪ್ಪೆ, ಬಿ.ಬನ್ನಿಕುಪ್ಪೆ, ಹುಣ ಸನಹಳ್ಳಿ, ಕೂಟಗಲ್, ಲಕ್ಕೋಜನಹಳ್ಳಿ, ಕೃಷ್ಣರಾಜಪುರ, ತಾಳವಾಡಿ, ವಡ್ಡರಹಳ್ಳಿ.

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ramanagara: ಬೈಕ್‌ ಗೆ ಲಾರಿ ಡಿಕ್ಕಿ; ಬೈಕ್‌ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

Ramanagara: ಬೈಕ್‌ ಗೆ ಲಾರಿ ಡಿಕ್ಕಿ; ಬೈಕ್‌ ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು

Nikhil

Political: ಎಚ್‌.ಡಿ.ಕುಮಾರಸ್ವಾಮಿ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುವರು: ನಿಖಿಲ್‌

CM-Siid

By Election: ಚನ್ನಪಟ್ಟಣ ಮುಖಂಡರ ಜತೆ ಸಿಎಂ ಸಿದ್ದರಾಮಯ್ಯ ಸಭೆ

Chennapatana

Teachers Village: ಚನ್ನಪಟ್ಟಣದ ಚಕ್ಕೆರೆಯಲ್ಲಿ ಮನೆಗೊಬ್ಬ ಶಿಕ್ಷಕರು!

Donkey milk: ಬೊಂಬೆನಗರಿಯಲ್ಲಿ ಕತ್ತೆ ಹಾಲಿಗೆ ಬೇಡಿಕೆ!

Donkey milk: ಬೊಂಬೆನಗರಿಯಲ್ಲಿ ಕತ್ತೆ ಹಾಲಿಗೆ ಬೇಡಿಕೆ!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.