ಜೂನ್ ತಿಂಗಳಲ್ಲಿ ರಾಜ್ಯದಲ್ಲಿ ಗ್ರೀನ್ ಇ -ಆಟೋ ಸಂಚಾರ
ಇ-ಆಟೋ ರಿಕ್ಷಾಕ್ಕೆ 2.50 ಲ. ರೂ.; ಕಿ.ಮೀ. ಖರ್ಚು ಕೇವಲ 50 ಪೈಸೆ
Team Udayavani, May 1, 2019, 6:00 AM IST
ಕಾಸರಗೋಡು: ಕೇರಳದ ಸ್ವಂತ ಇಲೆಕ್ಟ್ರಿಕಲ್ ಆಟೋ ರಿಕ್ಷಾವಾದ ಗ್ರೀನ್ ಇ ಆಟೋ ರಿಕ್ಷಾ ಜೂನ್ ತಿಂಗಳಲ್ಲಿ ರಸ್ತೆಗಿಳಿಯಲಿದೆ.
ರಾಜ್ಯ ಉದ್ದಿಮೆ ಖಾತೆಯ ಆಶ್ರಯದಲ್ಲಿ ತಿರುವನಂತಪುರದಲ್ಲಿ ಕಾರ್ಯವೆಸಗುತ್ತಿರುವ ಸಾರ್ವಜನಿಕ ಸಂಸ್ಥೆಯಾದ ಕೇರಳ ಆಟೋಮೊಬೈಲ್ ಲಿಮಿಟೆಡ್ (ಕೆ.ಎ.ಎಲ್.) ಗ್ರೀನ್ – ಇ-ಆಟೋ ರಿಕ್ಷಾಗಳನ್ನು ನಿರ್ಮಿಸಿ ರಸ್ತೆಗಿಳಿಸಲಿದೆ.
ಕೇಂದ್ರದಲ್ಲಿ ಈಗಾಗಲೇ ಹಲವು ಇ-ಆಟೋ ರಿಕ್ಷಾಗಳನ್ನು ನಿರ್ಮಿಸಲಾಗಿದ್ದು, ಅವುಗಳನ್ನು ಪರಿಶೀಲನೆಗಾಗಿ ಆಟೋಮೋಟಿವ್ ರಿಸರ್ಚ್ ಅಸೋಸಿ ಯೇಶನ್ (ಎ.ಆರ್.ಎ.ಐ) ಗೆ ಸಲ್ಲಿಸಲಾಗಿದೆ. ಕೇಂದ್ರ ಉದ್ದಿಮೆ ಖಾತೆಯ ಎ.ಆರ್.ಎ.ಐ. ಅನುಮತಿ ಪತ್ರಲಭಿಸಿದಲ್ಲಿ ಮಾತ್ರವೇ ಇ-ಆಟೋಗಳಿಗೆ ಆರ್ಟಿಎ ಕಚೇರಿಗಳಲ್ಲಿ ನೋಂದಾವಣೆ ನಡೆಸಲು ಸಾಧ್ಯವಾಗಲಿದೆ. ಈಗ ಪರಿಶೀಲನೆಯಲ್ಲಿರುವ ಹಿನ್ನೆಲೆಯಲ್ಲಿ ಅದಕ್ಕೆ ಮುಂದಿನ ತಿಂಗಳು ಅನುಮತಿ ಲಭಿಸುವ ನಿರೀಕ್ಷೆ ಇದೆ. ಹಾಗೆ ನಡೆದಲ್ಲಿ ಮುಂದಿನ ಜೂನ್ ತಿಂಗಳಲ್ಲಿ ಇ-ಆಟೋ ರಿಕ್ಷಾಗಳನ್ನು ಕೇರಳದಲ್ಲಿ ರಸ್ತೆಗಿಳಿಸಲು ಸಾಧ್ಯವಾಗಲಿದೆ ಎಂದು ರಾಜ್ಯ ಉದ್ದಿಮೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳು ಹೊರಬಿಡುವ ಹೊಗೆಯಿಂದಾಗಿ ಭಾರೀ ಪರಿಸರ ಮತ್ತು ವಾಯು ಮಾಲಿನ್ಯ ಸೃಷ್ಟಿಸುತ್ತದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಇ-ಆಟೋ ರಿಕ್ಷಾ ಪರೀಕ್ಷೆಯಲ್ಲಿ ಕೆ.ಎ.ಎಲ್. ತೊಡಗಿ ಅದರಲ್ಲಿ ಯಶಸ್ವಿಯಾಗಿದೆ.
ಇ-ಆಟೋ ರಿಕ್ಷಾಗಳಿಗೆ ಕೇಂದ್ರದ ಅಂಗೀಕಾರ ಲಭಿಸಿದ್ದಲ್ಲಿ ಕೇರಳದಲ್ಲಿ ಇನ್ನು ಕ್ರಮೇಣ ಪೆಟ್ರೋಲಿಯಂ ಇಂಧನ ಚಾಲಿತ ಆಟೋ ರಿಕ್ಷಾಗಳು ಇಲ್ಲವಾಗಿ ಇ – ಆಟೋ ರಿಕ್ಷಾಗಳನ್ನು ಪೂರ್ಣವಾಗಿ ಆವರಿಸಿ ಕೊಳ್ಳುವುದರಲ್ಲಿಸಂಶಯವಿಲ್ಲ
ನಾಲ್ಕು ಚಕ್ರಗಳ ನಾಲ್ವರು ಪ್ರಯಾಣಿಕರು ಸಂಚರಿಸಬಹುದಾದ ಇ-ಆಟೋ ರಿಕ್ಷಾವೊಂದಕ್ಕೆ 2.5 ಲಕ್ಷ ರೂ. ಬೆಲೆ ಇದೆ. ಕಿಲೋ ಮೀಟರ್ಗೆ 50 ಪೈಸೆಯಷ್ಟು ಮಾತ್ರವೇ ಖರ್ಚು ಉಂಟಾಗಲಿದೆ. ಮುಂದೆ ಮೂವರು ಕುಳಿತು ಸಂಚರಿಸಬಹುದಾಗಿರುವ ಆಟೋ ರಿಕ್ಷಾಗಳನ್ನು ನಿರ್ಮಿಸಿ ರಸ್ತೆಗಿಳಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ತಿಮ್ಮಾಪುರ ಮಾತಿಗೆ ಯತ್ನಾಳ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ
Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ
Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ
Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ
Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.