2018ರಲ್ಲಿ 2.12 ಕೋಟಿ ರೂ. ದಂಡ ವಸೂಲಿ

ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್‌, ಬೀಡಿ ಸೇವನೆ

Team Udayavani, May 1, 2019, 6:08 AM IST

Cigarettes

ಸಾಂದರ್ಭಿಕ ಚಿತ್ರ.

ಕಾಸರಗೋಡು: ಕೇರಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್‌, ಬೀಡಿ ಸೇವನೆ ನಿಷೇಧಿಸಿದ ಹಿನ್ನೆಲೆಯಲ್ಲಿ ಕಳೆದ ವರ್ಷ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್‌, ಬೀಡಿ ಸೇವಿಸಿದ ನಿಮಿತ್ತ ದಂಡದ ರೂಪದಲ್ಲಿ ಪೊಲೀಸರು ಒಟ್ಟು 2.12 ಕೋಟಿ ರೂ. ವಸೂಲು ಮಾಡಿದ್ದಾರೆ.

2017ಕ್ಕೆ ಹೋಲಿಸಿದರೆ 2018ರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್‌ ಮತ್ತು ಬೀಡಿ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೊಕದ್ದಮೆಗಳು ಮತ್ತು ಈ ಸಂಬಂಧ ವಸೂಲಿ ಮಾಡಿರುವ ದಂಡ ಕಡಿಮೆಯಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್‌, ಬೀಡಿ ಮೊದಲಾದವುಗಳ ಸೇವನೆಯನ್ನು ನಿಯಂತ್ರಿಸಲು ಜಾರಿಗೆ ತಂದ “ಸಿಗರೇಟ್‌ ಆ್ಯಂಡ್‌ ಅದರ್‌ ಟೊಬೆಕೋ ಪ್ರಾಡಕ್ಟ್Õ’ (ಕೊಟ್‌³) ಕಾನೂನಿನಂತೆ ಕೇಸು ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ.

2018 ರಲ್ಲಿ 1,10,028 ಮಂದಿಯಿಂದಾಗಿ 2,12,77,150 ರೂ. ದಂಡ ವಸೂಲಿ ಮಾಡಲಾಗಿದೆ. 2017ರಲ್ಲಿ 1,62,606 ಮಂದಿಯಿಂದ 3,33,89,900 ರೂ. ದಂಡ ವಸೂಲಿ ಮಾಡಲಾಗಿದೆ. ಈ ಎರಡು ವರ್ಷಗಳ ದಂಡವನ್ನು ತುಲನೆ ಮಾಡಿದರೆ 2017 ನೇ ವರ್ಷಕ್ಕಿಂತ 2018ರಲ್ಲಿ ವಸೂಲಿ ಮಾಡಿದ ದಂಡದಲ್ಲಿ 1.26 ಕೋಟಿ ರೂ. ಕಡಿಮೆಯಾಗಿದೆ.

2016ನೇ ವರ್ಷದಲ್ಲಿ 2,01,085 ಮಂದಿಯಿಂದ 4,17,00,800 ರೂ. ದಂಡ ವಸೂಲಿ ಮಾಡಲಾಗಿತ್ತು. ಕೇರಳದ 19 ಪೊಲೀಸ್‌ ಜಿಲ್ಲೆಗಳಲ್ಲೂ, ರೈಲ್ವೇ ಪೊಲೀಸರು ದಾಖಲಿಸಿದ ಕೇಸುಗಳಾಗಿವೆ ಇವು. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್‌, ಬೀಡಿ ಮೊದಲಾದವುಗಳನ್ನು ಸೇದುವುದು ಅಪರಾಧವಾಗಿದೆ. ಸಿಗರೇಟ್‌, ಬೀಡಿ ಸೇವನೆಗೆ ಪ್ರೋತ್ಸಾಹ ನೀಡುವುದೂ ಕೂಡಾ ಅಪರಾಧವಾಗಿದೆ. ಜಾಹೀರಾತು ಮೂಲಕ ಪ್ರೋತ್ಸಾಹಿಸುವುದು, 18 ವರ್ಷಕ್ಕಿಂತ ಕೆಳಗಿನ ಹರೆಯದವರಿಗೆ ಹೊಗೆಸೊಪ್ಪು ಉತ್ಪನ್ನಗಳನ್ನು ಮಾರಾಟ ಮಾಡುವುದೂ ಕೂಡ “ಕೊಟ್‌³’ (ಸಿಗರೇಟ್‌ ಆ್ಯಂಡ್‌ ಅದರ್‌ ಟೊಬೆಕೋ ಪ್ರೊಡೆಕ್ಟ್) ಪ್ರಕಾರ ಅಪರಾಧವಾಗಿದೆ. ಹಿಂದೆಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಬೀಡಿ, ಸಿಗರೇಟ್‌ ಮೊದಲಾದವುಗಳನ್ನು ಸೇವಿಸಿದರೆ ನ್ಯಾಯಾಲಯಗಳಲ್ಲಿ ದಂಡ ಪಾವತಿಸಬೇಕಾಗಿತ್ತು. ಇದೀಗ ಪೊಲೀಸರೆ ದಂಡ ವಸೂಲು ಮಾಡುತ್ತಿದ್ದಾರೆ.

2018ರಲ್ಲಿ ಎರ್ನಾಕುಳಂ ಸಿಟಿ ಪೊಲೀಸ್‌ ವ್ಯಾಪ್ತಿ ಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ದಂಡ ವಸೂಲಿ ಮಾಡಲಾಗಿದೆ. 14,893 ಮಂದಿಯಿಂದ 25.80 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ತಿರುವನಂತಪುರ ದ್ವಿತೀಯ ಸ್ಥಾನದಲ್ಲಿದೆ. ಇಲ್ಲಿ 11,017 ಮಂದಿಯಿಂದ 21.56 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಕಣ್ಣೂರಿನಿಂದ 10,551 ಮಂದಿಯಿಂದ 21.10 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. 2016ರ ಮತ್ತು 2017ರಲ್ಲಿ ಕಣ್ಣೂರಿನಲ್ಲಿ ಅತ್ಯಧಿಕ ದಂಡ ವಸೂಲಿ ಮಾಡಲಾಗಿತ್ತು. ಈ ಬಾರಿ ಅತ್ಯಂತ ಕಡಿಮೆ ದಂಡ ವಸೂಲಿ ಮಾಡಿದ ಯಾದಿಯಲ್ಲಿ ತಿರುವನಂತಪುರ ಮತ್ತು ಕೊಲ್ಲಂ ರೂರಲ್‌ ಜಿಲ್ಲೆಗಳು ಸೇರ್ಪಡೆಗೊಂಡಿದೆ.

ಟಾಪ್ ನ್ಯೂಸ್

BSF (2)

Budgam; ಬಸ್ ಪ್ರಪಾತಕ್ಕೆ ಬಿದ್ದು 3 ಯೋಧರು ಮೃ*ತ್ಯು, 9 ಮಂದಿಗೆ ಗಂಭೀರ ಗಾಯ

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ‌ ದೂರು ದಾಖಲು

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Vinay Kulakarni

BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ‌: ಶಾಸಕ ವಿನಯ ಕುಲಕರ್ಣಿ ಆಕ್ರೋಶ

Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್

Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Untitled-1

Kasaragod ಅಪರಾಧ ಸುದ್ದಿಗಳು

BSF (2)

Budgam; ಬಸ್ ಪ್ರಪಾತಕ್ಕೆ ಬಿದ್ದು 3 ಯೋಧರು ಮೃ*ತ್ಯು, 9 ಮಂದಿಗೆ ಗಂಭೀರ ಗಾಯ

Suspend

MLA ಇ. ಚಂದ್ರಶೇಖರನ್‌ ವಿರುದ್ಧ ಫೇಸ್‌ಬುಕ್‌ ಪೋಸ್ಟ್‌; ಡೆಪ್ಯೂಟಿ ತಹಶೀಲ್ದಾರ್‌ ಅಮಾನತು

POlice

Kundapura: ನಿಂದನೆ, ಜೀವ ಬೆದರಿಕೆ: ಕೇಸು ದಾಖಲು

13

Udupi: ಅಪಾಯಕಾರಿಯಾಗಿ ಬಸ್‌ ಚಾಲನೆ: ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.