ಕಾರ್ಮಿಕರ ಹಕ್ಕು-ಸವಲತ್ತು ರಕ್ಷಣೆಗೆ ಮೇ ದಿನ ಸ್ಫೂರ್ತಿ: ವಸಂತ ಬಂಗೇರ
Team Udayavani, May 2, 2019, 6:08 AM IST
ಬೆಳ್ತಂಗಡಿ : ಕಾರ್ಮಿಕರ ದಿನವನ್ನು ಕಾರ್ಮಿಕರ ಹಬ್ಬವಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದ್ದು, ಕಾರ್ಮಿಕರಿಗೆ ತಮ್ಮ ಹಕ್ಕು, ಸವಲತ್ತುಗಳನ್ನು ರಕ್ಷಿಸಲು ಸ್ಫೂ³ರ್ತಿ ನೀಡುವ ದಿನವೇ ಮೇ ದಿನವಾಗಿದೆ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಬುಧವಾರ ಇಲ್ಲಿನ ಅಂಬೇಡ್ಕರ್ ಭವನದ ಬಳಿಯ ಮೈದಾನದಲ್ಲಿ ಕಾರ್ಮಿಕ ಸಂಘಟನೆಗಳ ಆಶ್ರಯದಲ್ಲಿ ನಡೆದ ಮೇ ದಿನಾಚರಣೆಯನ್ನುದ್ದೇಶಿಸಿ ಮಾತ ನಾಡಿ, ಕಾರ್ಮಿಕರ ಕೂಗು ಸರಕಾರಕ್ಕೆ ತಲುಪಿದಾಗಲೇ ಶ್ರಮಿಕ ವರ್ಗಕ್ಕೆ ಕೆಲ ವೊಂದು ಸವಲತ್ತುಗಳು ಸಿಗಲು ಸಾಧ್ಯ ವಾಗುತ್ತವೆ. ಇದಕ್ಕಾಗಿಯೇ ಕಾರ್ಮಿಕ ಸಂಘಗಳು ಬೆಳೆಯಬೇಕಿದೆ ಎಂದರು.
ಹಿರಿಯ ಕಾರ್ಮಿಕ ಮುಂದಾಳು ಗಳಾದ ಮಂಜುನಾಥ, ಲಕ್ಷ್ಮಣ ಗೌಡ, ಬಿ. ವಿಷ್ಣುಮೂರ್ತಿ ಭಟ್ ಅವರು ತಮ್ಮ ಹೋರಾಟದ ಹಾದಿಗಳನ್ನು ಸ್ಮರಿಸಿ ಕಾರ್ಮಿಕರಿಗೆ ಶುಭಹಾರೈಸಿದರು.
ಪ್ರಮುಖರಾದ ಲೋಕೇಶ್ ಕುದ್ಯಾಡಿ, ನೆಬಿಸಾ, ಜಯರಾಮ ಮಯ್ಯ, ನಾರಾಯಣ ಕೈಕಂಬ, ಡೊಂಬಯ ಗೌಡ, ಧನಂಜಯ ಗೌಡ, ಸಂಜೀವ ನಾಯ್ಕ, ರಾಮಚಂದ್ರ, ಜಯಶ್ರೀ, ಪುಷ್ಪಾ, ಶೇಖರ ವೇಣೂರು, ವೇದಾವತಿ, ಸುಮಿತ್ರ, ಸುಜಾತಾ ಹೆಗ್ಡೆ, ಬಿ.ಎ. ರಝಾಕ್, ದಿನೇಶ್ ಮಾಚಾರು, ದೀಕ್ಷಿತಾ, ಅದಿತಿ, ಕಿರಣಪ್ರಭಾ, ಕುಮಾರಿ, ಮಹೇಶ್, ಚನಿಯಪ್ಪ ಮಲೆಕುಡಿಯ ಮತ್ತಿತರರಿದ್ದರು.
ತಾಲೂಕು ಮುಂದಾಳುಗಳಾದ ದೇವಕಿ ಸ್ವಾಗತಿಸಿ, ಈಶ್ವರಿ ವಂದಿಸಿದರು. ಶ್ಯಾಮರಾಜ ನಿರೂಪಿಸಿದರು.
ಪ್ರೀತಿ-ವಿಶ್ವಾಸವೇ ಸ್ಫೂರ್ತಿ
ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಮುಂದಾಳು ಬಿ.ಎಂ. ಭಟ್ ಮಾತನಾಡಿ, ಯಾವ ಉದ್ದೇಶಕ್ಕಾಗಿ ಮೇ ದಿನ ಉದಯಿಸಿತೋ ಅವರ ತ್ಯಾಗ, ಬಲಿದಾನಗಳು ನಮಗೆ ಪ್ರರಣೆಯಾಗಬೇಕಿದೆ. ಬೀಡಿ ಕಾರ್ಮಿಕರ ಡಿಎಗಾಗಿ ಹೋರಾಡುವ ನನ್ನಂತವರಿಗೆ ಕಾರ್ಮಿಕರ ಪ್ರೀತಿ-ವಿಶ್ವಾಸವೇ ಸ್ಫೂರ್ತಿಯಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
ಶಿರೂರುಗುಡ್ಡ ಕುಸಿತ ಸ್ಥಳ ತಲುಪಿದ ಡ್ರೆಜ್ಜಿಂಗ್ ಯಂತ್ರ-3 ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ!
Congress ಪಕ್ಷವನ್ನು ತುಕ್ಡೆ ತುಕ್ಡೆ ಗ್ಯಾಂಗ್, ನಗರ ನಕ್ಸಲರು ನಡೆಸುತ್ತಿದ್ದಾರೆ:ಮೋದಿ
Mangaluru: ಜಮೀನಿನ ಪಾಲು ಕೇಳಿದ್ದ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ
SC ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ರದ್ದು ಅರ್ಜಿ ಎರಡು ವಾರ ಮುಂದೂಡಿಕೆ
Recipe: ಫಾಸ್ಟ್ ಫುಡ್ ಆಹಾರಗಳಿಗೆ ಮಾರು ಹೋಗುವ ಬದಲು ಈ ಫುಡ್ ಟ್ರೈ ಮಾಡಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.