ಯಕ್ಷ ಶಾಸ್ತ್ರಜ್ಞನಿಗೆ ಕೀರಿಕ್ಕಾಡು ಪ್ರಶಸ್ತಿ


Team Udayavani, May 3, 2019, 6:00 AM IST

Yas

ಕಾಸರಗೋಡಿನ ದೇಲಂಪಾಡಿಯಲ್ಲಿ ಆರೇಳು ದಶಕಗಳ ಹಿಂದೆಯೇ ಯಕ್ಷಗಾನವನ್ನು ಜೀವಂತವಾಗಿರಿಸಲು ಹೆಣಗಿದವರು ದಿ| ಕೀರಿಕ್ಕಾಡು ಮಾಸ್ಟರ್‌ ವಿಷ್ಣು ಭಟ್ಟರು . ಅವರು 1944ರಲ್ಲಿ ಹುಟ್ಟುಹಾಕಿದ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಅವರ ಹೆಸರಿನಲ್ಲಿ ವರ್ಷವೂ ಕೊಡುವ ಕೀರಿಕ್ಕಾಡು ಪ್ರಶಸ್ತಿ ಈ ಬಾರಿ ಯಕ್ಷಗಾನದ ಖ್ಯಾತ ಹಿಮ್ಮೇಳ ವಾದಕ ಗುರು ಗೋಪಾಲಕೃಷ್ಣ ಕುರುಪರಿಗೆ ಸಲ್ಲಲಿದೆ.

ಗೋಪಾಲಕೃಷ್ಣ ಕುರುಪರು ನಿಡುಗಾಲ ಯಕ್ಷಗಾನ ಮೇಳಗಳಲ್ಲಿ ಹಿಮ್ಮೇಳ ವಾದಕರಾಗಿ ದುಡಿದ ಅನುಭವ ಸಂಪನ್ನ. ಹಿರಿಯ ಕಿರಿಯ ಬಲಿಪ ನಾರಾಯಣ ಭಾಗವತರ ಕರಾರುವಾಕ್ಕಾದ ಹಾಡಿಗೆ ಇಡಿಪೆಟ್ಟುಗಳ ನಿಖರ ನುಡಿತ. ದಿ| ಅಗರಿ ಶ್ರೀನಿವಾಸ ಭಾಗವತರ ಹಾಡಿನ ಲಾಲಿತ್ಯವನ್ನು ಪೋಷಿಸುವ ಕುರುಪರ ಲಯವಿನ್ಯಾಸದ ಸೊಗಸು ಈಗ ಚರಿತ್ರೆ. ಧರ್ಮಸ್ಥಳ, ಕೂಡ್ಲು, ಕುಂಡಾವು, ಸುರತ್ಕಲ್ಲು, ಬಳ್ಳಂಬೆಟ್ಟು, ಪೊಳಲಿ, ಕುಂಬ್ಳೆ ಮುಂತಾದ ಮೇಳಗಳಲ್ಲಿ ನಾಲ್ಕು ದಶಕಗಳಿಗೂ ಮಿಕ್ಕಿ ಹಿಮ್ಮೇಳವಾದಕರಾಗಿ ದುಡಿದ ಅನುಭವ ಅವರದು. ತೆಂಕು ತಿಟ್ಟಿನ ಪ್ರಾಥಮಿಕ ಯಕ್ಷಗಾನ ಪಾಠಗಳು, ತೆಂಕುತಿಟ್ಟು ಯಕ್ಷಗಾನ ಮದ್ದಳೆ ವಾದನದ ಕ್ರಮ, ತೆಂಕುತಿಟ್ಟು ಯಕ್ಷಗಾನ ಚೆಂಡೆವಾದನದ ಕ್ರಮ ಮತ್ತು ತಿತ್ತಿತ್ತೆç ಯಕ್ಷಗಾನ ತಾಳ ಸಂಬಂಧಿ ಅಧ್ಯಯನ ಹೀಗೆ ನಾಲ್ಕು ಶಾಸ್ತ್ರೀಯ ಕೃತಿಗಳನ್ನು ರಚಿಸಿದ್ದಾರೆ. ಯಕ್ಷಗಾನ ಕಮ್ಮಟಗಳಲ್ಲಿ ಅವರೊಬ್ಬ ಅಸಾಧಾರಣ ಸಂಪನ್ಮೂಲ ವ್ಯಕ್ತಿ.ಅವರ ವಾದನದಲ್ಲಿ ಬೆರಗು ಹುಟ್ಟಿಸುವ ಚಮತ್ಕಾರಗಳಿಲ್ಲ. ಮಾತಿನಲ್ಲಿ ಎಷ್ಟೇ ನಯವಿದ್ದರೂ, ಕಲೆಯಲ್ಲಿ ನಿಷ್ಠರತೆ. ಲಯ ಶುದ್ಧಿ, ವಾದನದ ಸ್ಪಷ್ಟತೆ, ಪೆಟ್ಟುಗಳ ಏರಿಳಿತ, ಪ್ರಸಂಗಜ್ಞಾನ, ರಂಗನಡೆ ಎಲ್ಲವೂ ತಿಳಿದ ಅವರೊಬ್ಬ ಪ್ರಬುದ್ಧ ಮದ್ದಳೆಗಾರ. ನಾಟ್ಯದ ಹೆಜ್ಜೆಗಳನ್ನೂ ಬಲ್ಲ ಅವರು ವೇಷಧಾರಿ ತಪ್ಪಿದರೆ ತಿದ್ದಿ ಹೇಳುವ ಸಾಮರ್ಥ್ಯವುಳ್ಳವರು.

ತಾಳಗಳ ಸಾಲಿನಲ್ಲಿ ಎಲ್ಲೂ ಹೆಸರಿರದ ತಿತ್ತಿತ್ತೈ, ತೆಂಕುತಿಟ್ಟಿನಲ್ಲಿ ಬಹಳ ಅಪರೂಪದಲ್ಲಿ ಹಳೆಯ ಭಾಗವತರು ಹಾಡುತ್ತಿದ್ದ ಚೌತಾಳ ಪ್ರಯೋಗದಲ್ಲೇ ಇಲ್ಲದ ಸಪ್ತತಾಳಗಳಲ್ಲಿ ಒಂದಾದ ಧ್ರುವ ತಾಳ ಇವುಗಳಿಗೆಲ್ಲ ಗೌರವಯುತ ಸ್ಥಾನ ದೊರೆಯಬೇಕೆಂದು ಹೆಣಗಿದವರು ಅವರು. ಅವುಗಳಿಗೆ ಭಿಡ್ತಿಗೆ, ಮುಕ್ತಾಯಗಳನ್ನು ರಚಿಸಿ, ಪದ್ಯದ ಅಕ್ಷರಗಳು ತಾಳಕ್ಕೆ ಹೊಂದುವ ರೀತಿಯನ್ನು ಅಧ್ಯಯನ ನಡೆಸಿ ಅದು ಹೀಗೆಯೇ ಎಂದು ಖಚಿತವಾಗಿ ನಿರೂಪಿಸಬಲ್ಲರು. ಕೆಲವು ಕಮ್ಮಟಗಳಲ್ಲಿ ಇದನ್ನು ಮಾಡಿ ತೋರಿಸಿದ್ದಾರೆ. ಭಾಗವತರಿಗೆ, ಮದ್ದಳೆವಾದಕರಿಗೆ ದಾರಿ ತೋರಿದ್ದಾರೆ.

-ವೆಂಕಟರಾಮ ಭಟ್ಟ ಸುಳ್ಯ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.