ಕಣ್ಮನ ಸೆಳೆದ ಕನಕ ಮೃಗ

ಗೀತ ರೂಪಕವಾದ ಕವನ

Team Udayavani, May 3, 2019, 6:03 AM IST

Kanakamruga-2

ಡಾ| ಉಪ್ಪಂಗಳ ರಾಮ ಭಟ್‌ ವಿರಚಿತ “ಹೊಂಗಿರಣ’ ದೀರ್ಘ‌ ಕವನವನ್ನು “ಕನಕ ಮೃಗ’ ಹೆಸರಿನಲ್ಲಿ ಉಡುಪಿಯ ನೃತ್ಯ ನಿಕೇತನದವರು ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಗೀತ ರೂಪಕವಾಗಿ ಪ್ರದರ್ಶಿಸಿದರು.

ಶ್ರೀ ರಾಮನ ವನವಾಸದ ಕಾಲದಲ್ಲಿ ಪಂಚವಟಿಯಲ್ಲಿ ರಾವಣನು ಸೀತೆಯನ್ನು ಅಪಹರಿಸಲು ಮಾರೀಚ ಚಿನ್ನದ ಜಿಂಕೆಯಾಗಿ ಸೀತೆಯ ಮನಸೆಳೆದು ರಾಮ ಲಕ್ಷ್ಮಣರು ಹೊರಹೋಗುವಂತೆ ಮಾಡಿ ತನ್ನ ಕಾರ್ಯಸಾಧನೆ ಮಾಡಿಕೊಂಡ ಕತೆಯನ್ನೊಳಗೊಂಡ “ಕನಕ ಮೃಗ’ ಲಕ್ಷ್ಮೀಗುರುರಾಜ ಅವರ ನಿರ್ದೇಶನದಲ್ಲಿ ಮೂಡಿಬಂದು ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.

ಆರಂಭದಲ್ಲಿನ ಪ್ರಕೃತಿ ವರ್ಣನೆ ಸ್ಪಷ್ಟ ಪಡಿಸಲು ಸಮೂಹ ನೃತ್ಯದಲ್ಲಿ ಸುಪ್ರಿಯಾ, ಸುಪ್ರೀತಾ, ಅನನ್ಯಾ, ಸುಶ್ಮಿತಾ, ನಿಹಾರಿಕಾಹಾಗೂ ಜಿಂಕೆಗಳಾಗಿ ಮೇದಿನಿ, ಪ್ರತಿಮಾ ಭರವಸೆ ಮೂಡಿಸಿದರು. ಶ್ರೀರಾಮನಾಗಿ ಲಕ್ಷ್ಮೀಗುರುರಾಜ್‌ ಎಲ್ಲಾ ದೃಶ್ಯಗಳಲ್ಲೂ ತಮ್ಮ ಪ್ರೌಢಿಮೆಯನ್ನು ಮನದಟ್ಟು ಮಾಡಿಸಿದರು. ಸೀತೆಯಾಗಿ ವಿ|ಮಿಥಿಲಾ ಉಪಾಧ್ಯ ಜಿಂಕೆಗೆ ಆಕರ್ಷಿತಳಾಗುವಾಗ ಹಾಗೂ ಲಕ್ಷ್ಮಣನನ್ನು ಅಪಾಯ ತಿಳಿದುಕೊಳ್ಳಲು ಕಳುಹಿಸುವಾಗ ವಿಶೇಷ ಮೆಚ್ಚುಗೆ ಪಡೆದರು. ಮಯೂರಿ ಗುರುರಾಜ್‌ ಲಕ್ಷ್ಮಣನಾಗಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಬೇಬಿ ಶ್ರೀಲಕ್ಷ್ಮಿಯ ಮಾಯಾ ಜಿಂಕೆ ಲವಲವಲವಿಕೆಯಿಂದ ನೆನಪಿನಲ್ಲುಳಿಯುವಂತೆ ಮಾಡಿತು. ವಿ| ವಿದ್ಯಾ ಸಂದೇಶ್‌ ಅವರ ರಾವಣ ರೂಪಕಕ್ಕೆ ಹೊಸ ರೂಪ ನೀಡಿತಲ್ಲದೆ ಮಾಯಾ ರಾವಣನಾಗಿಯೂ ಅವರೇ ಅಭಿನಯಿಸಿ ಸೀತೆಯನ್ನು ಅಪಹರಿಸುವಲ್ಲಿ ಪ್ರಭಾವ ಬೀರಿದರು.

ಸಂಗೀತಾ ಬಾಲಚಂದ್ರರವರ ಹಾಡುಗಾರಿಕೆ, ಲಕ್ಷ್ಮೀಗುರುರಾಜ್‌, ಶ್ರೀವಿದ್ಯಾ ಸಂದೇಶ್‌ರವರ ನಟುವಾಂಗಂ, ಬಾಲಚಂದ್ರ ಭಾಗವತರ ಮೃದಂಗ, ಶ್ರೀಧರ ಆಚಾರ್ಯರ ವಯೋಲಿನ್‌, ಮುರಳೀಧರ ಕೆ. ಅವರ ಕೊಳಲು “ಕನಕ ಮೃಗ’ ಮರೆಯದಂತೆ ಮಾಡಲು ಕಾರಣವಾಗಿತ್ತು. ಕೇವಲ ಒಂದು ತಾಸಿನ ಕಡಿಮೆ ಅವಧಿಯ ಈ ಗೀತರೂಪಕವು ಹಿಮ್ಮೇಳದವರ ಹಾಗೂ ಕಲಾವಿದೆಯರ ಶ್ರಮದಿಂದ ಬಹುಕಾಲ ನೆನಪಿನಲ್ಲುಳಿಯುವಂತೆ ಮಾಡಿತು.

– ಬಾ. ಸಾಮಗ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.