ಘಟಿಕೋತ್ಸವಕ್ಕೆ ಹಾಡಿನ ಮೆರುಗು


Team Udayavani, May 3, 2019, 6:00 AM IST

ghatikotsava-

ಮಂಗಳೂರು ವಿಶ್ವವಿದ್ಯಾನಿಲಯದ 37ನೇ ಘಟಿಕೋತ್ಸವ. ಸಾಂಪ್ರದಾಯಿಕ ಪದವಿ ಪ್ರದಾನದ ಬಳಿಕ ಜನಸ್ತೋಮವನ್ನು ಮಂತ್ರಮುಗ್ಧಗೊಳಿಸಿದ್ದು ಕನ್ನಡದ ಹಾಡುಗಳು. ವಚನ, ತತ್ವಪದ, ಕೀರ್ತನೆ, ಜಾನಪದ ಹಾಡುಗಳ ಸಾಹಿತ್ಯವನ್ನು ಮನಮುಟ್ಟುವಂತೆ ಅರಳಿಸಿ ಹಾಡಿ ಮುದಗೊಳಿಸಿದವರು ಬೆಂಗಳೂರಿನ ಸವಿತಕ್ಕ ಮತ್ತು ಬಳಗ. ಈಗಾಗಲೇ ಸವಿತಕ್ಕನ ಅಳ್ಳಿಬ್ಯಾಂಡ್‌ ಎಂಬ ತಂಡದೊಂದಿಗೆ ಸವಿತಕ್ಕ ಜನಪದವನ್ನೂ ಒಳಗೊಂಡ ಹಾಗೆ ಕನ್ನಡ ಹಾಡುಗಳನ್ನು ತಮ್ಮ ಏರು ಧ್ವನಿಯ ಮಧುರಕಂಠದಿಂದ ಹಾಡಿ ಜನಪ್ರಿಯರಾದವರು. ಮಂಗಳಗಂಗೋತ್ರಿಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವು ರಂಜನೆ ಮತ್ತು ಚಿಂತನೆಗಳ ಸಂಯೋಜಿತ ಗುತ್ಛವಾಗಿ ಸಹೃದಯರ ಮೆಚ್ಚುಗೆಗೆ ಪಾತ್ರವಾಯಿತು.

ಬಂದೇವು ನಾವು ನಿಮ್ಮ ಚರಣಕ… ಎಂಬ ಗೀಗೀಪದದ ಸಮೂಹ ಗಾಯನದ ಮೂಲಕ ಆರಂಭಗೊಂಡ ಈ ನಾದ ನಿನಾದ ಕಾರ್ಯಕ್ರಮ ಮುಂದೆ ವಚನಗಳ ಕಡೆಗೆ ಹರಿಯಿತು. ದೇವರು ನಾದಪ್ರಿಯ, ವೇದಪ್ರಿಯ ಎಂದೆಲ್ಲಾ ಹೇಳುತ್ತಾರೆ ಆದರೆ ದೇವರು ನಿಜವಾಗಿ ಭಕ್ತಪ್ರಿಯ ಎಂಬ ಸಂದೇಶವನ್ನು ಸಾರುವ ಬಸವಣ್ಣನ ವಚನದ ಪ್ರಸ್ತುತಿ ಗಮನಸೆಳೆಯಿತು. ಮುಂದೆ ಸವಿತಕ್ಕ ಸವದತ್ತಿ ಎಲ್ಲಮ್ಮನ ಕುರಿತ ಜನಪದ ಗೀತೆಯನ್ನು ಹಾಡತೊಡಗಿದಾಗ ಅವರ ಕಂಠದ ಝೇಂಕಾರ ಮಾಧುರ್ಯ ಬಿ.ಜಯಶ್ರೀಯವರನ್ನು ನೆನಪಿಸಿತು.

ಹಾಡಿಗೆ ಕೇಕೆ ಹಾಕುತ್ತಾ ಸಂಭ್ರಮಿಸುತ್ತಿದ್ದ ಸಭಾಂಗಣ ಮೌನಕ್ಕೆ ಜಾರಿದ್ದು ಒಳಿತು ಮಾಡು ಮನುಸ ನೀ ಇರೊದು ಮೂರು ದಿವಸ… ಉಸಿರು ನಿಂತ ಮೇಲೆ ನಿನ್ನ ಹೆಸರು ಹೇಳುತಾರ… ಎಂಬ ಭಾವಪೂರ್ಣ ಗಾಯನಕ್ಕೆ. ಸಂಬಂಧ, ಸಂಪತ್ತು, ಆಕರ್ಷಣೆ ಎಲ್ಲವೂ ಕ್ಷಣಿಕ. ಅಣ್ಣ ಅಮ್ಮ ಅಕ್ಕ ತಂಗಿ ಎಲ್ಲ ಎಲ್ಲಿ ತನಕ ಮಣ್ಣು ಮುಚ್ಚೋ ತನಕ ಎಂಬ ಬದುಕಿನ ಕಠೊರ ಸತ್ಯವನ್ನು ಒಂದೊಂದೇ ಬಿಚ್ಚಿಡುತ್ತಾ ಸವಿತಕ್ಕ ಮೌನಕ್ಕೆ ಜಾರಿದ ಸಹೃದಯ ಮನಸಿನಲಿ ತಳಮಳದ ತರಂಗ ಸೃಷ್ಟಿಸಿ ಬದುಕಿನಲಿ ದ್ವೇಷ ಸುಟ್ಟು ಹಾಕಬೇಕಾ … ಪ್ರೀತಿ ಹಣತೆ ಹಚ್ಚಬೇಕಾ… ಎಂದು ತಿಳಿಹೇಳಿದರು. ಬಳಿಕ ಜನಪದ ಹಾಡುಗಳ ಗುಂಗಿನಿಂದ ಶರೀಫ‌ರ ತತ್ವಪದಗಳ ಲೋಕಕ್ಕೆ ನಾದಯಾನ ಸಾಗಿತು. ಕೋಡಗನ ಕೋಳಿ ನುಂಗಿತ್ತಾ… ಹಾಡು ಉತ್ಸಾಹದ ಮಳೆಗರೆಯಿತು. ನಿಂಬಿಯಾ ಬನಾದ ಮ್ಯಾಲೆ… ಹಾಡಿಗಂತೂ ಇಡೀ ಸಭೆ ಪ್ರತಿಸ್ಪಂದನ ನೀಡಿ ಸಹೃದಯ ಬಳಗ ತಮ್ಮ ಸಂಗೀತ ಜ್ಞಾನ ಮತ್ತು ಪ್ರೀತಿಯನ್ನು ಹಂಚಿ ಗಾಯಕರ ಮೆಚ್ಚುಗೆಗೆ ಪಾತ್ರವಾಯಿತು. ಸಾವಿರದ ಶರಣವ್ವ ಕರಿಮಾಯಿ ತಾಯಿ … ಎಂಬ ರಂಗಗೀತೆಯ ಪ್ರಸ್ತುತಿ ಚಪ್ಪಾಳೆಯ ಪ್ರಶಂಸೆ ಪಡೆಯಿತು.

ಸಹಗಾಯಕರಾಗಿ ದಿವ್ಯಾ, ನಿರ್ಮಲಾ ಡಿ. ಆರ್‌., ರಾಜೀವ್‌ ಅಗಲಿ, ಬಸಂತ್‌ ಜಿ. ಪ್ರಸಾದ್‌, ಶಂಕರ್‌ ದಾವಣಗೆರೆ (ರಿದಂ), ವಿ|ಪುಟ್ಟರಾಜು ಗೋನಾಳ್‌(ತಬಲಾ), ಪುಣ್ಯೇಷ್‌ ಕುಮಾರ್‌ (ಕೀಬೋರ್ಡ್‌), ಲೋಕೇಶ್‌ (ಕೊಳಲು) ಉತ್ತಮ ನಿರ್ವಹಣೆಯನ್ನು ತೋರಿದರು. ಹಾಡಿನ ನಡುವೆ ಯುವ ಸಮುದಾಯವನ್ನು ರಂಜಿಸಲೋಸುಗ ಎದ್ದು ಕುಣಿಯುವಂತೆ, ಕೇಕೆ ಹಾಕುವಂತೆ ಉತ್ತೇಜಿಸಿದ್ದು ಹಾಡಿನ ಆಸ್ವಾದನೆಗೆ ತೊಂದರೆಕೊಟ್ಟದ್ದು ಹೊರತು ಪಡಿಸಿದರೆ ಸದಭಿರುಚಿಯ ಉತ್ತಮ ಕಾರ್ಯಕ್ರಮ.

ವಚನ, ತತ್ವಪದ, ಕೀರ್ತನೆ, ಜಾನಪದ ಹಾಡುಗಳ ಸಾಹಿತ್ಯವನ್ನು ಮನಮುಟ್ಟುವಂತೆ ಅರಳಿಸಿ ಹಾಡಿ ಮುದಗೊಳಿಸಿದವರು ಸವಿತಕ್ಕ ಮತ್ತು ಬಳಗ. ಸವಿತಕ್ಕನ ಅಳ್ಳಿಬ್ಯಾಂಡ್‌ ತಂಡದೊಂದಿಗೆ ಜನಪದವನ್ನೂ ಒಳಗೊಂಡ ಹಾಗೆ ಹಾಡುಗಳನ್ನು ಏರು ಧ್ವನಿಯ ಹಾಡಿ ಜನಪ್ರಿಯರಾದವರು.

-ಡಾ.ಧನಂಜಯ ಕುಂಬ್ಳೆ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.