ಕೆರಕಲಮಟ್ಟಿ ವಾಡೆ


Team Udayavani, May 4, 2019, 6:00 AM IST

2554

ಬಾಗಲಕೋಟೆಯ ಜಿಲ್ಲೆ ಬಾದಾಮಿ ತಾಲೂಕಿನಲ್ಲಿ ಕೆರಕಲಮಟ್ಟಿ ಗ್ರಾಮವಿದೆ. ಬಾಗಲಕೋಟೆ ಜಿಲ್ಲಾ ಕೇಂದ್ರದಿಂದ 20 ಕಿ.ಮೀ ದೂರದಲ್ಲಿರುವ ಈ ಗ್ರಾಮವು ನಾಡಗೌಡರ ವಾಡೆಯ ಮೂಲಕ ಪ್ರಸಿದ್ದಿ ಪಡೆದಿದೆ.

ಈ ವಾಡೆಯನ್ನು 1930 ರಲ್ಲಿ, ಆಗಿನ ಕೆರೂರ ಪಟ್ಟಣದ ಇನಾಮದಾರಿಕೆ ಮಾಡುತ್ತಿದ್ದ ರಾಮಚಂದ್ರಗೌಡ ನಾಡಗೌಡ ನಿರ್ಮಿಸಿದ್ದಾರೆ. ಈ ವಾಡೆಯನ್ನು ಸುಮಾರು 15 ವರ್ಷ ಕಾಲಾವಕಾಶ ತೆಗೆದುಕೊಂಡು ನಿರ್ಮಿಸಲಾಗಿದೆ.

ಈ ವಾಡೆಯ ಗೋಡೆಯು ಅಂದಾಜು 35 ಅಡಿ ಎತ್ತರವಿದ್ದು, 2 ಎಕರೆ ಜಾಗದುದ್ದಕ್ಕೂ ಹರಡಿಕೊಂಡಿದೆ ಈ ವಾಡೆಯನ್ನು ಚುಂಚನಗುಡ್ಡ ಹಾಗೂ ಸುತ್ತಲಿನ ಪ್ರದೇಶಗಳಲ್ಲಿನ ಕಲ್ಲು, ಉಸುಕು ಹಾಗೂ ಗಚ್ಚು ಬಳಸಿಕೊಂಡು ನಿರ್ಮಿಸಲಾಗಿದೆ. ಈ ವಾಡೆಯ ಪ್ರವೇಶಕ್ಕೆ ಸುಂದರ ಕಲಾಕೃತಿಯ ತಲಬಾಗಿಲು (ದ್ವಾರ ಬಾಗಿಲು)ಇದೆ. ವಾಡೆಯಲ್ಲಿ ಅಡುಗೆ ಕೋಣೆ, ದೇವರ ಜಗಲಿ, ಚೌಕಿ, ಖಜಾನೆ, ಶಸ್ತ್ರಾಗಾರ, ಪಡಸಾಲೆ, ಸದರ (ನ್ಯಾಯ ಮಾಡುವ ಸ್ಥಳ), ವಿಶ್ರಾಂತಿ ಗೃಹ, ಶಯ್ನಾಗಾರ, ಹೆರಿಗೆ ಕೋಣೆ, ಪ್ರಸಾದ ಕೋಣೆ, ದವಸ ಧಾನ್ಯ ಶೇಖರಿಸುವ ಸ್ಥಳ, ನೆಲಮನೆ, ದಾಖಲೆಗಳ ಕೋಣೆ, ಆಡಳಿತ ಕಚೇರಿ ಕೋಣೆ, ಕುದುರೆ ಲಾಯ, ಸೇವಕರು-ಗುಮಾಸ್ತರು-ಕೆಲಸಗಾರರು ವಾಸಿಸುವ ಕೋಣೆಗಳು ಇಂದಿಗೂ ಅಸ್ತಿತ್ವ ಉಳಿಸಿಕೊಂಡಿವೆ. ಆದರೆ, ಈ ವಾಡೆಯ ಕಟ್ಟಡದ ಮೇಲೆ ಮೂಲಕಾರಕನಾದ ಇನಾಮದಾರ ರಾಮಚಂದ್ರಗೌಡರ ಹೆಸರನ್ನು ಹಾಕಿ¨ªಾರೆಯೇ ಹೊರತು ಅದನ್ನು ಕಟ್ಟಿದ ನಿಪುಣನ ಹೆಸರನ್ನಾಗಲಿ, ಇತರೆ ದಾಖಲೆಯನ್ನೂ ಅಲ್ಲಿ ಕಾಣಸಿಗುವುದಿಲ್ಲ. ಇಂದು ಈ ವಾಡೆಯಲ್ಲಿ ರಾಮಚಂದ್ರಗೌಡರ ವಂಶಸ್ಥರು ವಾಸಿಸುತ್ತಿ¨ªಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಆಗಿನ ಕೆರೂರ ಪಟ್ಟಣದ ವ್ಯಾಪ್ತಿಯಲ್ಲಿ ಬರುತ್ತಿದ್ದ ಈ ಕೆರಕಲಮಟ್ಟಿಯ ನಾಡಗೌಡರು, ಸುತ್ತಲಿನ 14 ಹಳ್ಳಿಯ ಮೇಲುಸ್ತುವಾರಿಯ ಇನಾಮದಾರಿಕೆಯ ಜವಾಬ್ದಾರಿ ಪಡೆದುಕೊಂಡಿದ್ದರು. ಮೇಲು-ಕೀಳು, ಅಧಿಕಾರದ ದರ್ಪ ಇದ್ಯಾವುದೂ ರಾಮಚಂದ್ರಗೌಡ ಆಡಳಿತದಲ್ಲಿರಲಿಲ್ಲ. ಇದೊಂದು ಸರ್ವಜನಾಂಗದವರು ಸ್ವತಂತ್ರವಾಗಿ ಓಡಾಡುವ ಸ್ಥಳವಾಗಿತ್ತು. ರಾಮಚಂದ್ರಗೌಡರು ಒಳ್ಳೆಯ ಮನಸುಳ್ಳ ಹಾಗೂ ಸರ್ವರೂ ಸಮಾನರೆಂದು ತಿಳಿಯುತ್ತಿದ್ದ ಇನಾಮದಾರರಾಗಿದ್ದರು.

ಅಂಥ ಅಪರೂಪದ ವ್ಯಕ್ತಿತ್ವ ಹೊಂದಿರುವ ನಾಡಗೌಡರ ಮನೆತನದ ವಾಡೆಯು ಒಂದು ನ್ಯಾಯ ದೇವತೆಯ ಸ್ಥಳದಂತೆ ಜನರು ಭಾವಿಸಿಕೊಂಡು ಇಂದಿಗೂ ತಮ್ಮ ಸಣ್ಣಪುಟ್ಟ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುತ್ತಾರೆ. ರಾಮಚಂದ್ರಗೌಡ ನಾಡಗೌಡರ ವಾಡೆಯಲ್ಲಿ ಅಂದೂ ನಿರಂತರ ದಾಸೋಹ ಇರುತ್ತಿತ್ತು. ಇಂದಿಗೂ ಆ ಊರಿನ ಜನರಲ್ಲಿ ವಾಡೆಯ ಬಗ್ಗೆ ಕಿಂಚಿತ್ತೂ ಗೌರವ, ಅಭಿಮಾನ ಕಡಿಮೆಯಾಗಿಲ್ಲ. ತನ್ನ ಕಲಾವಿನ್ಯಾಸದಿಂದಲೇ ನೋಡುಗರನ್ನು ವಿಸ್ಮಯಗೊಳಿಸುತ್ತದೆ.

ಅಪೂರ್ಣಗೊಂಡ ವಾಡೆ
14 ಹಳ್ಳಿಗಳಿಂದ ಬರುವ ಆದಾಯದಿಂದ ರಾಮಚಂದ್ರಗೌಡ ನಾಡಗೌಡರು ಈ ವಾಡೆಯ ಕೆಲಸ ಪ್ರಾರಂಭಿಸಿದರು. 1930 ರಲ್ಲಿ ವಾಡೆಯ ಅರ್ಧ ಕಾಮಗಾರಿ ಪೂರ್ಣಗೊಂಡಿತ್ತು. ಜ್ಯೋತಿಷಿಯೊಬ್ಬರು ಈ ವಾಡೆಯ ವಾಸ್ತು ಸರಿಯಿಲ್ಲ ಎಂದು ಹೇಳಿದರಂತೆ. ಆ ಜ್ಯೋತಿಷಿಯ ಮಾತು ಕೇಳಿದ ನಾಡಗೌಡರು ವಾಡೆಯ ಕಟ್ಟಡದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದರು. ರಾಮಚಂದ್ರಗೌಡರು ಅಪೂರ್ಣಗೊಳಿಸಿದ ವಾಡೆಯ ಕಟ್ಟಡವನ್ನು ಪೂರ್ಣಗೊಳಿಸುವ ಸಾಹಸ ಕಾರ್ಯಕ್ಕೆ ಅವರ ವಂಸಸ್ಥರು ಕೈ ಹಾಕಲಿಲ್ಲ. ವಾಡೆಯು ಅಪೂರ್ಣವಾಗಿದ್ದರೂ ನೋಡುಗಗನ್ನೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತದೆ.

ಮುಳುಗಿದ ವಾಡೆಗಳು

ಬಾಗಲಕೋಟೆ ಜಿಲ್ಲೆಯಲ್ಲಿನ ಕೆಲವು ವಾಡೆಗಳು ಸಂರಕ್ಷಿಸದೇ ನೆಲಕಚ್ಚಿವೆ. ಆಲಮಟ್ಟಿ ಆಣೆಕಟ್ಟಿನ ಹಿನ್ನೀರಿನಲ್ಲಿ ಸುಮಾರು 15 ವಾಡೆಗಳು ಮತ್ತು ಮಲಪ್ರಭಾ ನದಿಗೆ ಕಟ್ಟಲಾಗಿರುವ ರೇಣುಕಾ ಅಣೆಕಟ್ಟೆ
ಹಿನ್ನೀರ ಒಡಲಲ್ಲಿ ಕನಿಷ್ಠ ಎರಡು ವಾಡೆಗಳು ಮುಳುಗಿ ಹೋಗಿವೆ. ಈ ಬಾಗಲಕೋಟೆ ಜಿಲ್ಲೆಯ ಪೈಕಿ 89-90 ವರ್ಷವಾದರೂ ಮಳೆ, ಗಾಳಿ, ಬರ-ಸಿಡಿಲಿಗೂ ಅಂಜದೇ ತನ್ನ ಸೌಂದರ್ಯ ಕಾಪಾಡಿಕೊಂಡು ಈ ವಾಡೆಯು ಕಂಗೊಳಿಸುತ್ತಿದೆ.

ಒಟ್ಟಿನಲ್ಲಿ ಕರ್ನಾಟಕದಲ್ಲಿ 250ಕ್ಕೂ ಅಧಿಕ ವಾಡೆಗಳಿದ್ದು, ಅವುಗಳು ನಮ್ಮ ಇತಿಹಾಸ, ಸಂಸ್ಕೃತಿ ಸಂಪ್ರದಾಯದ ಪ್ರತಿರೂಪದ ಜತೆಗೆ ಹಿಂದಿನ ಕಾಲದ ಜಹಗೀರುದಾರರ, ದೇಸಾಯಿ, ಇನಾಮದಾರಿಕೆ ಮನೆತನದ ಆಳ್ವಿಕೆಯ ಚಿತ್ರಣ ಕಟ್ಟಿಕೊಡುತ್ತವೆ.

ಬೆಳ್ಳಿ ತೆರೆಯ ನಂಟು

ಸಿನಿಮಾ ಪ್ರಪಂಚದಲ್ಲೂ ವಾಡೆಗಳು ತನ್ನ ಗತ್ತು ಗೈರತ್ತು ತೋರಿಸಿವೆ. ದೇವರಾಜ್‌ ಅಭಿನಯದ ಹುಲಿಯಾ, ಅಕ್ಷಯಕುಮಾರ ಅಭಿನಯದ ರೌಡಿ ರಾಠೊಡ್‌, ದುನಿಯಾ ವಿಜಯ್‌ ಅಭಿನಯದ ಭೀಮಾ ತೀರದಲ್ಲಿ, ಕಿಚ್ಚ ಸುದೀಪ ಅಭಿನಯದ ವೀರ ಮದಕರಿ ಚಿತ್ರಗಳಲ್ಲಿ ಈ ವಾಡೆಯ ಖದರ… ಎದ್ದು ಕಾಣುತ್ತದೆ. ಅಂತಃಪುರ ಧಾರಾವಾಹಿ ಸೇರಿದಂತೆ ಪ್ಯಾಟಿ ಹುಡುಗಿಯರ ಹಳ್ಳಿ ಲೈಫ್ ರಿಯಾಲಿಟಿ ಶೋ ಕೂಡಾ ಈ ವಾಡೆಯಲ್ಲಿ ಚಿತ್ರೀಕರಣಗೊಂಡಿದೆ.

ರೇವಣ್ಣ ಅರಳಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.