ಪುರಸಭೆ: ಗರಿಗೆದರಿದ ರಾಜಕೀಯ ಚಟುವಟಿಕೆ


Team Udayavani, May 4, 2019, 11:56 AM IST

mandya-3-tdy..

ಮೀಸಲಾತಿ ವಿವಾದ ಬಗೆಹರಿಯುವ ಮುನ್ನವೇ ಚುನಾವಣೆ ಘೋಷಣೆ

ಶ್ರೀರಂಗಪಟ್ಟಣ; ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಪಟ್ಟಣ, ಪುರಸಭೆ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆ ಬೆನ್ನಲ್ಲೇ ಮತ್ತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಳ್ಳುತ್ತಿವೆ.

ಶ್ರೀರಂಗಪಟ್ಟಣ ಪುರಸಭೆ ಚುನಾವಣೆಯ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಮೇ 29ಕ್ಕೆ ಚುನಾವಣೆ ನಿಗದಿಯಾಗಿದೆ. ವಿವಿಧ ಪಕ್ಷಗಳಿಂದ ಟಿಕೆಟ್ ಆಕಾಂಕ್ಷಿತರು ಈಗಾಗಲೇ ನಾಯಕರ ಬೆನ್ನು ಹತ್ತಿ ಪೈಪೋಟಿ ನಡೆಸಲಾರಂಭಿಸಿದ್ದಾರೆ.

ಶ್ರೀರಂಗಪಟ್ಟಣ ಪುರಸಭೆಗೆ ಕಳೆದ 5 ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಒಟ್ಟು 23 ಸ್ಥಾನಗಳಲ್ಲಿ ಕಾಂಗ್ರೆಸ್‌-7, ಜೆಡಿಎಸ್‌-6, ಬಿಜೆಪಿ-3, ಪಕ್ಷೇತರ-6 ಹಾಗೂ ಬಿಎಸ್‌ಆರ್‌ ಕಾಂಗ್ರೆಸ್‌-1 ಸ್ಥಾನವನ್ನು ಪಡೆದುಕೊಂಡಿತ್ತು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಮೇಶ್‌ ಬಂಡಿಸಿದ್ದೇಗೌಡ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ ಬಳಿಕ ಬಿಎಸ್‌ಆರ್‌ ಕಾಂಗ್ರೆಸ್‌ ಹಾಗೂ ಪಕ್ಷೇತರ ಸದಸ್ಯರೊಬ್ಬರು ಇವರೊಂದಿಗೆ ಗುರುತಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ 7 ಸದಸ್ಯರು ಇಬ್ಬರು ಶಾಸಕ ರವೀಂದ್ರ ಪರ ನಿಂತಿದ್ದಾರೆ. ಜೊತೆಗೆ ಬಿಜೆಪಿ ಸದಸ್ಯರೊಬ್ಬರು ಶಾಸಕರ ಜೊತೆ ಗುರುತಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ಮೀಸಲಾತಿ ವಿವಾದ: ಕಳೆದ ಅವಧಿ ಯಲ್ಲಿ ಎರಡೂವರೆ ವರ್ಷ ಮಾತ್ರ ಆಡಳಿತ ನಡೆಸಲಾಗಿದ್ದು, ಇನ್ನು ಉಳಿದ ಅವಧಿ ಅಧ್ಯಕ್ಷ ಹುದ್ದೆಯ ಮೀಸಲಾತಿ ವಿಚಾರ ವಿವಾದದ ಸ್ವರೂಪ ಪಡೆದು ನ್ಯಾಯಾಲಯದ ಮೆಟ್ಟಿಲೇರಿದ್ದು, ಪುರಸಭೆಗೆ ಆಡಳಿತಾಧಿಕಾರಿ ನೇಮಕ ಗೊಂಡಿದ್ದರು. ಆಡಳಿತಾಧಿಕಾರಿ ನೇಮಕ ಗೊಂಡ ನಂತರ ಪುರಸಭೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೆ ಎಲ್ಲವೂ ಕುಂಠಿತಗೊಂಡಿದೆ.

ಪರಿಶಿಷ್ಟರಿಗೆ ಮೀಸಲು: ಕಳೆದ ಆಡಳಿತ ಮಂಡಳಿಯಲ್ಲಿ ಮೊದಲು ಅಧ್ಯಕ್ಷಗಾದಿಗೆ ಪರಿಶಿಷ್ಟ ಜಾತಿಗೆ ಮೀಸಲಾಗಿತ್ತು. ಎರಡೂವರೆ ವರ್ಷ ಆಡಳಿತ ಸುಗಮವಾಗಿ ನಡೆದಿತ್ತು. ಇನ್ನುಳಿದ ಎರಡು ವರ್ಷಕ್ಕೆ ಸಾಮಾನ್ಯ ವರ್ಗಕ್ಕೆ ಅಧ್ಯಕ್ಷ ಸ್ಥಾನದ ಮೀಸಲಾತಿ ಯನ್ನು ಸರ್ಕಾರ ನಿಗದಿ ಪಡಿಸಿತ್ತು. ಅದರೆ ಮೀಸಲಾತಿಯಲ್ಲಿ ಹಿಂದುಳಿದ ವರ್ಗಕ್ಕೆ ಅನ್ಯಾಯವಾಗಿದೆ ಎಂದು ಪುರಸಭಾ ಸದಸ್ಯರೊಬ್ಬರು ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲೇರಿದ್ದರಿಂದ ಅದು ಎರಡೂವರೆ ವರ್ಷ ಕಳೆದರೂ ಮೀಸಲಾತಿಯ ತೀರ್ಮಾನವಾಗದೆ ನನೆಗುದಿಗೆ ಬಿದ್ದಿತ್ತು.

ಮೀಸಲಾತಿ: ಪಟ್ಟಣ ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು, ಅದರ ಮೀಸಲಾತಿಯನ್ನು ಎರಡು ತಿಂಗಳ ಹಿಂದೆಯೇ ಸರ್ಕಾರ ಪ್ರಕಟ ಗೊಳಿಸಲಾಗಿತ್ತು. ಒಂದನೇ ವಾರ್ಡ್‌ (ಪರಿಶಿಷ್ಟ ಪಂಗಡ), 2ನೇ ವಾರ್ಡ್‌ (ಹಿಂದು ಳಿದ ವರ್ಗ), 3ನೇ ವಾರ್ಡ್‌ (ಸಾಮಾನ್ಯ), 4ನೇ ವಾರ್ಡ್‌ (ಸಾಮಾನ್ಯ ಮಹಿಳೆ), 5ನೇ ವಾರ್ಡ್‌ (ಸಾಮಾನ್ಯ), 6ನೇ ವಾರ್ಡ್‌ (ಸಾಮಾನ್ಯ), 7ನೇ ವಾರ್ಡ್‌ (ಸಾಮಾನ್ಯ ಮಹಿಳೆ), 8ನೇವಾರ್ಡ್‌ (ಸಾಮಾನ್ಯ ಮಹಿಳೆ), 9ನೇ ವಾರ್ಡ್‌ (ಹಿಂದುಳಿದ ವರ್ಗ ಮಹಿಳೆ), 10ನೇ ವಾರ್ಡ್‌ (ಸಾಮಾನ್ಯ), 11ನೇ ವಾರ್ಡ್‌ (ಸಾಮಾನ್ಯ), 12ನೇ ವಾರ್ಡ್‌ (ಹಿಂದುಳಿದ ವರ್ಗ), 13ನೇ ವಾರ್ಡ್‌ (ಹಿಂದುಳಿದ ವರ್ಗ ಮಹಿಳೆ), 14ನೇ ವಾರ್ಡ್‌(ಹಿಂದುಳಿದ ವರ್ಗ ಮಹಿಳೆ), 15ನೇ ವಾರ್ಡ್‌ (ಹಿಂದುಳಿದ ವರ್ಗ), 16ನೇ ವಾರ್ಡ್‌(ಹಿಂದುಳಿದ ವರ್ಗ ಬ. ಮಹಿಳೆ), 18ನೇ ವಾರ್ಡ್‌(ಪರಿಶಿಷ್ಟ ಜಾತಿ ಮಹಿಳೆ), 19ನೇ ವಾರ್ಡ್‌ (ಸಾಮಾನ್ಯ ಮಹಿಳೆ), 20ನೇ ವಾರ್ಡ್‌ (ಹಿಂದುಳಿದ ವರ್ಗ),21ನೇ ವಾರ್ಡ್‌(ಪರಿಶಿಷ್ಟ ಜಾತಿ), 22ನೇ ವಾರ್ಡ್‌ (ಸಾಮಾನ್ಯ ಮಹಿಳೆ), 23ನೇ ವಾರ್ಡ್‌ (ಸಾಮಾನ್ಯ ಮಹಿಳೆ)ಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ.

ಮತದಾರರು: ಪುರಸಭೆಯ ವ್ಯಾಪ್ತಿ ಯಲ್ಲಿ ಒಟ್ಟು 19,295 ಮತದಾರರಿ ದ್ದಾರೆ. ಇದರಲ್ಲಿ ಇನ್ನು ಹೊಸ ಮತ ದಾರರ ಸೇರ್ಪಡಿಸಲಾಗಿದೆ.

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

festcide

Mandya: ಭ್ರೂಣ ಹತ್ಯೆ ತಲೆಮರೆಸಿಕೊಂಡಿದ್ದ 12 ಆರೋಪಿಗಳ ಬಂಧನ

Malavalli: ಸಾರಿಗೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು…

Malavalli: ಸಾರಿಗೆ ಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತ್ಯು…

Bommai

Governer Procicution: ಹೈಕೋರ್ಟ್‌ ತೀರ್ಪಿನ ಮೇಲೆ ಸಿಎಂ ಸ್ಥಾನ ನಿರ್ಧಾರ: ಬೊಮ್ಮಾಯಿ

suicide (2)

Mandya; ರೋಡ್ ರೋಮಿಯೋಗಳ ಕಿರುಕುಳ: 14 ವರ್ಷದ ವಿದ್ಯಾರ್ಥಿನಿ ಆತ್ಮಹ*ತ್ಯೆ

1-wwwww

BJP 12 ವರ್ಷಗಳಿಂದ ತುಕ್ಕು ಹಿಡಿದಿದ್ದ ಪ್ರಕರಣಕ್ಕೆ ಜೀವ ನೀಡಿದೆ: ಸಚಿವ ಮಧು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.