ಉಚ್ಛಾಟಿತ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಕೋರ್ಟ್‌ ಅಸ್ತು


Team Udayavani, May 4, 2019, 2:33 PM IST

Udayavani Kannada Newspaper

ಹಾವೇರಿ: ಕಾಲೇಜಿನಿಂದ ಉಚ್ಛಾಟಿಸಿ, ಪರೀಕ್ಷೆ ಬರೆಯಲು ಪ್ರವೇಶಪತ್ರ ನೀಡಲು ನಿರಾಕರಿಸಿದ ಇಲ್ಲಿಯ ಜಿ.ಎಚ್. ಕಾಲೇಜಿನ ಕ್ರಮಕ್ಕೆ ವಿದ್ಯಾರ್ಥಿಯೋರ್ವ ನ್ಯಾಯಾಲಯದಿಂದ ಮಧ್ಯಂತರ ತಡೆ ತಂದು ಪರೀಕ್ಷೆ ಬರೆದ ಘಟನೆ ಶುಕ್ರವಾರ ನಗರದಲ್ಲಿ ನಡೆಯಿತು.

ಬಿಎ 4ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ ನಿಖೀಲ್ ಕೊಟ್ರೇಶ ದೊಗ್ಗಳ್ಳಿ ಕಾಲೇಜಿನ ಕ್ರಮದ ವಿರುದ್ಧ ತಡೆಯಾಜ್ಞೆ ತಂದು ಪರೀಕ್ಷೆ ಬರೆದ ವಿದ್ಯಾರ್ಥಿ.

ನ್ಯಾಯಾಲಯದ ಆದೇಶ ಪತ್ರ ನೀಡಿದರೂ ಪ್ರಾಂಶುಪಾಲರು ಒಂದು ಗಂಟೆ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿರಲಿಲ್ಲ. ತಮ್ಮ ಕಾರ್ಯಾಲಯದಲ್ಲಿ ಕೂರಿಸಿಕೊಂಡು, ಇಲ್ಲಸಲ್ಲದ ಆರೋಪ ಮಾಡಿ ಒಂದು ತಾಸು ಕಳೆದ ಮೇಲೆ ಅವಕಾಶ ನೀಡಿದ್ದಾರೆ ಎಂದು ವಿದ್ಯಾರ್ಥಿಪರ ವಕೀಲ ಎಸ್‌.ಆರ್‌. ಹೆಗಡೆ ಆರೋಪಿಸಿದ್ದಾರೆ.

ಏಕೆ ಉಚ್ಛಾಟನೆ ?: ತರಗತಿಗೆ ಹಾಜರಾಗದೇ ಕ್ಯಾಂಪಸ್‌ನಲ್ಲಿ ತಿರುಗುತ್ತ ಶಾಂತತೆ ಮತ್ತು ಶಿಸ್ತು ಉಲ್ಲಂಘಿಸಿರುವುದು, ಡ್ರೆಸ್‌ ಕೋಡ್‌ ಬದಲಾಗಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸುತ್ತ ಕಾಲೇಜಿಗೆ ಬರುವುದು, ಕಾಲೇಜಿನ ಹೂಕುಂಡ ಮತ್ತು ಸೂಚನಾ ಫಲಕಗಳಿಗೆ ಹಾನಿ, ಕಿಡಕಿ ಗಾಜು ಒಡೆದಿರುವುದು, ಹಲಗೆ ವಾದ್ಯದ ತಂಡ ಕರೆಸಿಕೊಂಡು ಕಾಲೇಜಿನ ಗೇಟಿನ ಮುಂದೆ ವಿಕಾರ ರೂಪದಲ್ಲಿ ನೃತ್ಯ ಮಾಡಿದ್ದು, ಮದ್ಯ ಸೇವಿಸಿ ಕಾಲೇಜಿಗೆ ಬಂದು ಅಸಭ್ಯ ವರ್ತನೆ, ವಾರ್ಷಿಕೋತ್ಸವದಲ್ಲಿ ಜಿಲ್ಲಾಧಿಕಾರಿ ಆಗಮಿಸಿದ್ದ ವೇಳೆ ಮುಖಕ್ಕೆ ಬೇರೆ ಬಣ್ಣ ಬಳಿದುಕೊಂಡು ವಿಕಾರವಾಗಿ ಕೂಗುತ್ತ ಒಳಬಂದು ಅಗೌರವ ತೋರಿಸಿದ್ದು, ಬೋಧಕ, ಬೋಧಕೇತರ ಸಿಬ್ಬಂದಿಗೆ ಅಗೌರವ ತೋರಿಸಿದ್ದು ಸೇರಿದಂತೆ 10 ಕಾರಣಗಳನ್ನು ನೀಡಿ ಕಾಲೇಜಿನ ಪ್ರಾಂಶುಪಾಲರು ಬಿಎ, ಬಿಕಾಂ ಪದವಿ ಓದುತ್ತಿದ್ದ 21 ವಿದ್ಯಾರ್ಥಿಗಳನ್ನು ಕಳೆದ ಮಾ. 28ರಂದು ಕಾಲೇಜಿನಿಂದ ಉಚ್ಛಾಟಿಸಿ ಆದೇಶಿಸಿದ್ದರು. ಈ ಕುರಿತು ಪಾಲಕರಿಗೆ ನೋಟಿಸ್‌ ಕಳಿಸಿದ್ದರು.

ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ಕೊಡುವಂತೆ ಪಾಲಕರು ಬಂದು ಎಷ್ಟೇ ಕೇಳಿ ಕೊಂಡರೂ ಅವಕಾಶ ಕೊಡದೆ ಇರುವುದರಿಂದ ಓರ್ವ ವಿದ್ಯಾರ್ಥಿ ನ್ಯಾಯವಾದಿಗಳ ಮೂಲಕ ನ್ಯಾಯಾಲಯದ ಮೊರೆ ಹೋಗಿ ಮಧ್ಯಂತರ ಆದೇಶ ತಂದು ಪರೀಕ್ಷೆ ಬರೆದನು. ಉಳಿದ ವಿದ್ಯಾರ್ಥಿಗಳು ಹಣ ಇನ್ನಿತರ ಸಮಸ್ಯೆ ಕಾರಣದಿಂದ ನ್ಯಾಯಾಲಯದ ಮೊರೆ ಹೋಗಿರಲಿಲ್ಲ.

ಶುಕ್ರವಾರ ಸಹ ವಿದ್ಯಾರ್ಥಿ ಪಾಲಕರು, ವಿವಿಧ ಸಂಘ ಸಂಸ್ಥೆಯವರು ಬಂದು ವಿನಂತಿಸಿಕೊಂಡರೂ ಕಾಲೇಜು ಆಡಳಿತ ಮಂಡಳಿಯವರು ತಾವು ಮಾಡಿದ್ದೇ ಸರಿ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದರು.

ಏಕ ಕಾಲಕ್ಕೆ ಬರೋಬರಿ 21 ವಿದ್ಯಾರ್ಥಿಗಳನ್ನು ಉಚ್ಛಾಟನೆ ಮಾಡಿರುವ ಪ್ರಕರಣ ಮುಂದಿನ ದಿನದಲ್ಲಿ ಗಂಭೀರ ಸ್ವರೂಪ ಪಡೆದುಕೊಳ್ಳುವ ಸುಳಿವು ಅರಿತ ಆಡಳಿತ ಮಂಡಳಿಯವರು ಕೊನೆಯ ಘಳಿಗೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುವ ನಿರ್ಣಯ ಕೈಗೊಂಡಿದೆ.

ಕಾಲೇಜು ಆಡಳಿತ ಮಂಡಳಿಯವರು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದಿರುವುದು ಸರಿಯಲ್ಲ. ಒಂದು ವೇಳೆ ವಿದ್ಯಾರ್ಥಿ ಅಶಿಸ್ತು ಪ್ರದರ್ಶಿಸಿದರೆ ಪಾಲಕರನ್ನು ಕರೆದು ತಿಳಿಹೇಳಬಹುದಿತ್ತು. ಕಾಲೇಜಿನಿಂದ ಉಚ್ಚಾಟಿಸಿರುವುದು, ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡದೆ ಇರುವುದು ವಿದ್ಯಾರ್ಥಿ ಹಕ್ಕು ಉಲ್ಲಂಘನೆಯಾಗಿದ್ದು, ಈ ಕುರಿತು ಕಾನೂನು ಹೋರಾಟ ನಡೆಸಲಾಗುವುದು.
•ಎಸ್‌.ಆರ್‌. ಹೆಗಡೆ, ವಿದ್ಯಾರ್ಥಿಗಳ ಪರ ವಕೀಲರು.

ಕಾಲೇಜು ನಿಯಮ ಉಲ್ಲಂಘಿಸಿದ ಹಾಗೂ ಅಶಿಸ್ತು ಪ್ರದರ್ಶಿಸಿದ ವಿದ್ಯಾರ್ಥಿಗಳನ್ನು ಉಚ್ಛಾಟಿಸಲಾಗಿತ್ತು. ವಿದ್ಯಾರ್ಥಿಗಳಲ್ಲಿ ಈಗಿನಿಂದಲೇ ಶಿಸ್ತು ಬರಬೇಕು ಎಂಬ ಕಾರಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಈಗ ಎಲ್ಲ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತಿದೆ.
•ಎಂ.ಎಸ್‌. ಯರಗೊಪ, ಪ್ರಾಂಶುಪಾಲರು, ಜಿಎಚ್ ಕಾಲೇಜು

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bommai BJP

By election; ಶಿಗ್ಗಾವಿ ಟಿಕೆಟ್‌ ಆಕಾಂಕ್ಷಿಗಳ ಎದೆಯಲ್ಲಿ ಢವಢವ

Havery ಧಾರಾಕಾರ ಮಳೆ; ರಸ್ತೆ ಕಾಣದೆ ಚರಂಡಿಗೆ ಬಿದ್ದು ಕೊಚ್ಚಿ ಹೋದ ಬಾಲಕ

Haveri: ಧಾರಾಕಾರ ಮಳೆ; ರಸ್ತೆ ಕಾಣದೆ ಚರಂಡಿಗೆ ಬಿದ್ದು ಕೊಚ್ಚಿ ಹೋದ ಬಾಲಕ

ಗಾಯತ್ರಿ ಮಂತ್ರ ಜಪದಿಂದ ದೇಹದ ನಾಡಿ ಶುದ್ಧಿ: ನಾಗರಾಜಾನಂದ ಮಹಾಸ್ವಾಮಿ

ಗಾಯತ್ರಿ ಮಂತ್ರ ಜಪದಿಂದ ದೇಹದ ನಾಡಿ ಶುದ್ಧಿ: ನಾಗರಾಜಾನಂದ ಮಹಾಸ್ವಾಮಿ

4

Savanur: ಮನೆಯವರು ಟ್ರಿಪ್‌ ಹೋದ ಸಂದರ್ಭದಲ್ಲಿ ಮನೆಯಿಂದ ಕಳ್ಳತನ

ಹುಕ್ಕೇರಿಮಠ ಶಿಕ್ಷಣ ಸಂಸ್ಥೆಯ ಕಾರ್ಯ ಸ್ಮರಣೀಯ-ಡಾ|ವಿಜಯಮಹಾಂತೇಶ

ಹುಕ್ಕೇರಿಮಠ ಶಿಕ್ಷಣ ಸಂಸ್ಥೆಯ ಕಾರ್ಯ ಸ್ಮರಣೀಯ-ಡಾ|ವಿಜಯಮಹಾಂತೇಶ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.