ಸುರೇಶ್ಗೌಡ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ
ಶಿಖಂಡಿ ಪದ ಬಳಸಿದ್ದರ ವಿರುದ್ಧ ಆಕ್ರೋಶ • ಜೆಡಿಎಸ್ನವರು ಸಂಸ್ಕೃತಿ ಕಲಿಯಲಿ
Team Udayavani, May 5, 2019, 11:58 AM IST
ಮಂಡ್ಯದ ಪತ್ರಕರ್ತರ ಭವನದಲ್ಲಿ ಅಖೀಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ಮಾತನಾಡಿದರು.
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಮಹಿಳೆಯನ್ನು ಬೆಂಬಲಿಸಿದ್ದಾರೆಂದು ಅನುಮಾನಿಸಿ ಕಾಂಗ್ರೆಸ್ ಮಾಜಿ ಶಾಸಕ ರೊಬ್ಬರನ್ನು ಶಿಖಂಡಿ ಎಂಬ ಪದ ಬಳಸಿ ನಿಂದಿಸಿದ್ದಾರೆ. ಈ ಹೇಳಿಕೆಗೆ ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಅಖೀಲ ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ಆಗ್ರಹಿಸಿದರು.
ಜೆಡಿಎಸ್ನವರು ಮೊದಲು ಸಂಸ್ಕೃತಿಯನ್ನು ಕಲಿಯಬೇಕು. ಮಹಿಳೆಯರ ಬಗ್ಗೆ ಅನಾಗರಿಕ, ಅಸಂವಿಧಾನಿಕ ಪದಗಳನ್ನು ಬಳಸದೆ ಅವರ ಮೇಲೆ ಗೌರವ ಹಾಗೂ ಬದ್ಧತೆ ಪ್ರದರ್ಶಿಸಬೇಕು. ಅವರ ಪಕ್ಷದ ಗುರುತಿನಲ್ಲೂ ಹೊರೆ ಹೊತ್ತ ಮಹಿಳೆಯೇ ಇರುವುದರಿಂದ ಅಸಂವಿಧಾನಿಕ ಪದಗಳನ್ನು ಬಳಸುವುದು ಅಸಹ್ಯ ಹುಟ್ಟಿಸುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಾಜಕೀಯವಾಗಿ ಸಕ್ರಿಯವಾಗಿದ್ದ ಹಲವಾರು ಮುಖಂಡರು ನಿಧನರಾದಾಗ ಅವರ ಪತ್ನಿಯರನ್ನು ಜೆಡಿಎಸ್ ಅಖಾಡಕ್ಕಿಳಿಸಿ ಅನುಕಂಪದ ಆಧಾರದ ಮೇಲೆ ಹಲವಾರು ಚುನಾವಣೆಗಳನ್ನು ನಡೆಸಿರುವ ಸಾಕಷ್ಟು ಉದಾಹರಣೆಗಳಿವೆ. ಈ ಬೆಳವಣಿಗೆಗಳ ಹಿಂದೆ ಇದ್ದ ಜೆಡಿಎಸ್ ವರಿಷ್ಠರ ಬಗ್ಗೆಯೂ ಸುರೇಶ್ಗೌಡರ ಅಭಿಪ್ರಾಯ ಇದೇನಾ ಎಂದು ಪ್ರಶ್ನಿಸಿದರು.
ಮೂಲೆ ಗುಂಪಾದವರು: ಐಆರ್ಎಸ್ ಹುದ್ದೆಯಲ್ಲಿದ್ದ ಲಕ್ಷ್ಮೀ ಅಶ್ವಿನ್ಗೌಡರನ್ನು ರಾಜಕೀಯ ಸ್ಥಾನ-ಮಾನ ನೀಡುವ ಭರವಸೆ ನೀಡಿ ಕೆಲಸಕ್ಕೆ ರಾಜೀನಾಮೆ ಕೊಡಿಸಲಾಯಿತು. ಬಳಿಕ ಅವರಿಗೆ ಚುನಾವಣೆಗಳಿಗೆ ಸಂಪನ್ಮೂಲ ಪಡೆದು ಕೊಳ್ಳಲು ಬಳಸಿಕೊಂಡು ಅಧರ್ಮದಿಂದ ಮೂಲೆಗುಂಪು ಮಾಡಿದವರನ್ನು ಏನೆಂದು ಕರೆಯಬೇಕು ಎಂದು ಪ್ರಶ್ನಿಸಿದರು.
ರಾಜಕೀಯವಾಗಿ ಹಲವಾರು ನಾಯಕರನ್ನು ಹುಟ್ಟುಹಾಕಿ ಅವರ ಬೆಳವಣಿಗೆಗೆ ಕಾರಣರಾದ ಎಸ್.ಡಿ.ಜಯರಾಂ ನಿಧನದ ಬಳಿಕ ಅವರ ಕುಟುಂಬವನ್ನು ಸ್ವಾರ್ಥಕ್ಕೆ ಬಳಸಿಕೊಂಡು ಮೂಲೆಗುಂಪು ಮಾಡಿದ್ದು ಯಾರು? ಮದ್ದೂರಿನಲ್ಲಿ ಜೆಡಿಎಸ್ ಮುಖಂಡ ಸಿದ್ದರಾಜು ಪತ್ನಿ ಕಲ್ಪನಾ ಸಿದ್ದರಾಜು ಪರಿಸ್ಥಿತಿ ಈಗ ಏನಾಗಿದೆ. ಇದಲ್ಲದೆ, ಪಕ್ಕದ ಚನ್ನಪಟ್ಟಣದ ಆಧುನಿಕ ಭಗೀರಥ ಸಿ.ಪಿ.ಯೋಗೇಶ್ವರ್ ಅವರನ್ನು ರಾಜಕೀಯ ವಾಗಿ ಮೂಲೆಗುಂಪು ಮಾಡುವುದಕ್ಕಾಗಿ ಅನಿತಾ ಕುಮಾರಸ್ವಾಮಿ ಅವರನ್ನು ಬಳಸಿಕೊಂಡಿಲ್ಲವೇ? ಅವರನ್ನೆಲ್ಲಾ ಯಾವ ಪದದಿಂದ ಸಂಬೋಧಿಸಬೇಕು ಎಂದು ಕುಟುಕಿದರು. ನಾವು ಯಾರನ್ನೂ ಹೀಯಾಳಿಸುವುದಕ್ಕೆ ಹೋಗುವುದಿಲ್ಲ. ಹಾಗೆ ಮಾಡಿದರೆ ಸುರೇಶ್ಗೌಡರಿಗೂ ನಮಗೂ ವ್ಯತ್ಯಾಸವಿರುವುದಿಲ್ಲ. ಅದಕ್ಕಾಗಿ ಶಿಖಂಡಿ ಎಂಬ ಪದ ಬಳಕೆ ಮಾಡಿರುವ ಸುರೇಶ್ಗೌಡರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ವಿಜಯ್ಕುಮಾರ್, ಜಿ.ಸಿ.ಆನಂದ್, ಹೆಚ್.ಬಿ. ಅರವಿಂದಕುಮಾರ್,ಮುಸ್ಸವೀರ್ಖಾನ್, ಆರೀಫ್ವುಲ್ಲಾ, ಪ್ರಕಾಶ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagamangala ಗಲಭೆಯ ಹಿನ್ನೆಲೆ ಗೊತ್ತಾಗಬೇಕು: ಸಿ.ಎನ್. ಅಶ್ವತ್ಥನಾರಾಯಣ
Bharathinagar: ಕಾರು ಡಿಕ್ಕಿ ಹೊಡೆದು ಅಜ್ಜಿ, ಮೊಮ್ಮಗ ಸ್ಥಳದಲ್ಲೇ ಮೃತ್ಯು
Nagamangala ಗಲಭೆಗೆ ಕೇರಳ ಲಿಂಕ್: ಮಾಹಿತಿ ಸಂಗ್ರಹಕ್ಕೆ ಮುಂದಾದ ಪೊಲೀಸರು
Nagamangala Case ಬಂಧನದ ಭೀತಿ: ಊರು ಬಿಟ್ಟ ಯುವಕರು
Nagamangala Case: “ಟಾರ್ಗೆಟ್ ಮಾಡಿ ಅಂಗಡಿಗಳಿಗೆ ಬೆಂಕಿ’: ಛಲವಾದಿ ನಾರಾಯಣಸ್ವಾಮಿ
MUST WATCH
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.