ವ್ಯಕ್ತಿ ಕೊಂದಿದ್ದ ಸಲಗಗಳು ಕಾಡಿನತ್ತ


Team Udayavani, May 6, 2019, 3:00 AM IST

vyakti

ಎಚ್‌.ಡಿ.ಕೋಟೆ: ಕಾಡಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದು ಕೂಲಿ ಕಾರ್ಮಿಕನೋರ್ವನನ್ನು ದಾರುಣವಾಗಿ ಕೊಂದು ಹಾಕಿದ್ದ ಎರಡು ಸಲಗಗಳನ್ನು ಕಾರ್ಯಚರಣೆ ನಡೆಸಿ ಕಾಡಿಗಟ್ಟುವಲ್ಲಿ ಎಚ್‌.ಡಿ.ಕೋಟೆ ಸಾಮಾಜಿಕ ವಲಯಾರಣ್ಯದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಮೇ 4ರ ಶನಿವಾರ ಹೆಬ್ಟಾಳ ಜಲಾಶಯದ ನಾಲೆ ಲೈನಿಂಗ್‌ ಕಾಮಗಾರಿ ಕೆಲಸಕ್ಕೆ ಬಂದಿದ್ದ ಉತ್ತರ ಕರ್ನಾಟಕದ ಯಾದಗಿರಿ ಜಿಲ್ಲೆ ಶಹಾಪುರ ದಸರಾ ಆನೆಗಳಿಂದ ಕಾರ್ಯಾಚರಣೆ: ತಾಲೂಕಿನ ಕಿಕ್ಕೇರಿ ಗ್ರಾಮದ ನಿವಾಸಿ ಹನುಮಂತರಾಯಪ್ಪ 53 ವರ್ಷ ಎಂಬುವವರ ಮೇಲೆ ತಾಲೂಕಿನ ಮಾದಾಪುರ ಗ್ರಾಮದ ದೇವರಾಜ ಕಾಲೋನಿ ಸಮೀಪ ಆನೆ ದಾಳಿ ಮಾಡಿ ದಂತದಿಂದ ಚುಚ್ಚಿ ಕೊಂದು ಹಾಕಿತ್ತು.

ಘಟನೆ ಬಳಿಕ ಎಚ್ಚೆತ್ತ ಅರಣ್ಯಾಧಿಕಾರಿಗಳು ಹೆಚ್ಚಿನ ಸಿಬ್ಬಂದಿ ಜತೆಗೆ ದಸರಾ ಆನೆಗಳನ್ನು ಕರೆಸಿ ಸಂಜೆ 6 ನಂತರ ಕಾಡಾನೆಗಳನ್ನು ಮತ್ತೆ ಕಾಡಿಗಟ್ಟಲು ಕಾರ್ಯಚರಣೆ ಪ್ರಾರಂಭಿಸಿ ಸುಮಾರು ರಾತ್ರಿ 8 ಗಂಟೆ ವೇಳೆಗೆ ಸರಗೂರು ಸಾಮಾಜಿಕ ವಲಯಾರಣ್ಯದ ಚಿಕ್ಕದೇವಮ್ಮ ಬೆಟ್ಟದ ಕಾಡಿಗೆ ಸೇರಿಸುವಲ್ಲಿ ಯಶಸ್ವಿಯಾದರು.

ಓಂಕಾರ್‌ ಅರಣ್ಯಕ್ಕೆ: ಈ ಪ್ರದೇಶದ ಸಂರಕ್ಷಿತಾ ಅರಣ್ಯ ಪ್ರದೇಶವಾಗಿದ್ದು, ಮತ್ತೆ ಇಲ್ಲಿಂದ ಸಲಗಗಳು ಹೊರಗೆ ಬರುವ ಸಾಧ್ಯತೆ ಇರುವ ಬಗ್ಗೆ ಮಾಹಿತಿ ತಿಳಿದಿರುವ ಅಧಿಕಾರಿಗಳು, ಭಾನುವಾರ ಕಾರ್ಯಚರಣೆ ನಡೆಸಿ, ಆನೆಗಳನ್ನು ಬಂಡೀಪುರ ವನ್ಯಜೀವಿ ವಲಯದ ಓಂಕಾರ್‌ ಅರಣ್ಯ ಪ್ರದೇಶಕ್ಕೆ ಸೇರಿಸಲಾಗುವುದು ಎಂದು ಎಚ್‌.ಡಿ.ಕೋಟೆ ಸಾಮಾಜಿಕ ವಲಯಾರಣ್ಯಾಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ದಂತದಿಂದ ಚುಚ್ಚಿದ್ದವು: ಕಾಡಾನೆಗಳು ಮೇ 4 ರ ಶನಿವಾರ ಮೊದಲು ಬೆಳಗ್ಗೆ 6ರ ಸಮಯದಲ್ಲಿ ಪಡುಕೋಟೆಯಲ್ಲಿ ಕಾಣಿಸಿಕೊಂಡವು. ನಂತರ ಕೊಡಸೀಗೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಾಗಿ ಮಲಾರ ಕಾಲೋನಿ ಮಾರ್ಗವಾಗಿ ಮಾದಾಪುರ ತಲುಪಿದವು.

ಗ್ರಾಮದ ದೇವರಾಜ ಕಾಲೋನಿ ಬಳಿ ನಡೆಯುತ್ತಿರುವ ಹೆಬ್ಟಾಳ ನಾಲೆಗಳ ಲೈನಿಂಗ್‌ ಕಾಮಗಾರಿ ಕೆಲಸಕ್ಕಾಗಿ ತೆರಳಿದ್ದ ಹನುಮಂತರಾಯಪ್ಪ ಅವರ ಮೇಲೆ ಕಾಡಾನೆಗಳು ದಾಳಿ ಮಾಡಿ ತನ್ನ ದಂತದಿಂದ ಚುಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದರಿಂದ ಹನುಮಂತಪ್ಪ ಸಾವನ್ನಪ್ಪಿದ್ದರು.

ಕಾರ್ಯಾಚರಣೆಗೆ ತೊಂದರೆ: ತಾಲೂಕಿನ ಮಾದಾಪುರ ಗ್ರಾಮದ ದೇವರಾಜ ಕಾಲೋನಿ ಬಳಿ ಕಾಡಾನೆ ದಾಳಿ ಮಾಡಿ ಬಡ ಕೂಲಿ ಕಾರ್ಮಿಕನನ್ನು ಕೊಂದು ಹಾಕಿದ್ದ ವಿಷಯ ಮಾದಾಪುರ ಗ್ರಾಮ ಸೇರಿ ಅಕ್ಕಪಕ್ಕದ ಗ್ರಾಮದ ಸುಮಾರು 2 ಸಾವಿರಕ್ಕಿಂತಲೂ ಹೆಚ್ಚು ಜನರು ಕಾಡಾನೆಗಳನ್ನು ನೋಡಲು ಸೇರಿದ್ದರಿಂದ ಕಾರ್ಯಚರಣೆ ವಿಳಂಬ ಆಯ್ತು.

ಇನ್ನಾದರೂ ಕಾರ್ಯಚರಣೆ ಸಂದರ್ಭ ಜನರು ಸಾಗರೋಪಾದಿಯಲ್ಲಿ ಸೇರಿ ಕಾರ್ಯಾಚರಣೆಗೆ ಮತ್ತು ಕಾಡು ಪ್ರಾಣಿಗಳಿಗೆ ತೊಂದರೆ ಆಗದಂತೆ ಜಾಗೃತರಾಗಿ ಅರಣ್ಯ ಇಲಾಖೆ ಜೊತೆ ಸಹಕರಿಸುವಂತೆ ಎಚ್‌.ಡಿ.ಕೋಟೆ ಸಾಮಾಜಿಕ ವಲಯಾರಣ್ಯದ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಘಟನೆಗೆ ನೊಂದ ಅರಣ್ಯಾಧಿಕಾರಿ: ಕಾಡಿನಿಂದ ತಪ್ಪಿಸಿಕೊಂಡು ಬಂದು ತಾಲೂಕಿನ ಕೆಲ ಗ್ರಾಮಗಳ ಬಳಿ ಕಾಣಿಸಿಕೊಂಡಿದ್ದ ಕಾಡಾನೆಗಳನ್ನು ಕಂಡ ಜನರು ಸಿಳ್ಳೆ, ಕೂಗಾಟ, ಹುಚ್ಚಾಟದಿಂದಾಗಿ ಗಾಬರಿಗೊಂಡಿದ್ದವು.

ಈ ಕಾಡಾನೆಗಳು ಅದೇ ಹೆಬ್ಟಾಳ ನಾಲೆಯ ಲೈನಿಂಗ್‌ ಕಾಮಗಾರಿಯಲ್ಲಿ ತೊಡಗಲು ನಾಲೆ ಏರಿ ಮೇಲೆ ನಡೆದು ಬರುತ್ತಿದ್ದ ಹನುಮಂತರಾಯಪ್ಪ ಎಂಬ ಕೂಲಿ ಕಾರ್ಮಿಕನ ಮೇಲೆ ದಾಳಿ ಮಾಡಿ ಕೊಂದು ಹಾಕಿವೆ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅರಣ್ಯ ಅಧಿಕಾರಿಯೊಬ್ಬರು ಮರುಕ ವ್ಯಕ್ತಪಡಿಸಿದ್ದಾರೆ.

* ಬಿ.ನಿಂಗಣ್ಣಕೋಟೆ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು

Mys-Udgiri-1

Mob Attack: ಉದಯಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ

24

80 ಸಾವಿರ ಲಂಚ ಸ್ವೀಕರಿಸುವಾಗ ಸಬ್‌ ಇನ್ಸ್‌ಪೆಕ್ಟರ್‌ ಲೋಕ ಬಲೆಗೆ

11

Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್‌’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.