ಬೇಸಿಗೆ ಶಿಬಿರದಲ್ಲಿ ವೈವಿಧ್ಯಮಯ ಕಲಿಕೆಗೆ ಆದ್ಯತೆ

ಮಕ್ಕಳ ಮನೋಭಾವಕ್ಕೆ ತಕ್ಕಂತೆ ಸ್ಪಂದನೆ ಅಗತ್ಯ: ವಾಸವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ.ಎ.ಸೋಮೇಶ್ವರ ಗುಪ್ತ ಅಭಿಪ್ರಾಯ

Team Udayavani, May 7, 2019, 5:15 PM IST

tumkur-tdy-4..

ತುಮಕೂರು ನಗರದ ವಾಸವಿ ಶಾಲೆಯಲ್ಲಿ ನಡೆದ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳೊಂದಿಗೆ ಗಣ್ಯರು.

ತುಮಕೂರು: ಪ್ರತಿದಿನ ಶಾಲಾ ಅವಧಿಯಲ್ಲಿ ವೇಳಾಪಟ್ಟಿಯಂತೆ ಪಾಠ ಪ್ರವಚನಗಳು ನಡೆಯುತ್ತವೆ. ಇಲ್ಲಿ ಕಲಿಕೆ ಯಾಂತ್ರಿಕವಾಗಿರುತ್ತದೆ. ಆದರೆ, ಬೇಸಿಗೆ ಶಿಬಿರಗಳಲ್ಲಿ ಕಲಿತ ವೈವಿಧ್ಯಮಯ ವಾದಂತಹ ಕಲೆ ಅದು, ವಿದ್ಯಾರ್ಥಿಗಳ ಇಡೀ ಜೀವನ ನೆನಪಿನಲ್ಲಿ ಉಳಿಯುತ್ತದೆ ಎಂದು ವಾಸವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಿ.ಎ.ಸೋಮೇಶ್ವರ ಗುಪ್ತ ಹೇಳಿದರು.

ತುಮಕೂರು ನಗರದ ಚಿಕ್ಕಪೇಟೆಯ ಗಾರ್ಡನ್‌ ರಸ್ತೆಯಲ್ಲಿರುವ ವಾಸವಿ ಶಾಲೆಯಲ್ಲಿ ನಡೆದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ಮಕ್ಕಳ ಮನಸ್ಥಿತಿ ಯನ್ನು ಅರ್ಥಮಾಡಿಕೊಂಡು ಅವರ ಮನೋ ಭಾವಕ್ಕೆ ತಕ್ಕಂತೆ ಸ್ಪಂದಿಸಬೇಕು. ಇವತ್ತು ಶಿಕ್ಷಣ ಅನ್ನುವುದು ವ್ಯಾಪಾರವಾಗಿದೆ. ಯಾವ ಶಾಲೆ ಯವರು ಹೆಚ್ಚು ಡೊನೇಷನ್‌ ತೆಗೆದುಕೊಳ್ಳುತ್ತಾರೋ ಆ ಶಾಲೆ ಚನ್ನಾಗಿರುತ್ತದೆ ಎಂಬ ಭ್ರಮೆ ಕೆಲವು ತಂದೆ- ತಾಯಿಗಳಲ್ಲಿದೆ. ಆದರೆ, ನಮ್ಮ ವಾಸವಿ ಶಿಕ್ಷಣ ಸಂಸ್ಥೆ ಸೇವೆ ಮಾಡುವ ಹಿತದೃಷ್ಟಿಯಿಂದ ಪ್ರಾರಂಭ ಮಾಡಿ ಯಶಸ್ಸನ್ನು ಕಂಡುಕೊಂಡಿದೆ ಎಂದು ತಿಳಿಸಿದರು.

ಪ್ರೀತಿಯಿಂದ ಎಲ್ಲವನ್ನೂ ಕಲಿಸಬಹುದು: ವಾಸವಿ ಶಿಕ್ಷಣ ಸಂಸ್ಥೆಯ ಸಂಚಾಲಕ ಸಿ.ಆರ್‌.ಮೋಹನ್‌ಕುಮಾರ್‌ ಮಾತನಾಡಿ, ಮಕ್ಕಳಿಗೆ ವಿದ್ಯೆಯನ್ನು ಹೇಳಿಕೊಡುವ ಶಿಕ್ಷಕರು ಮತ್ತು ಮನೆಯಲ್ಲಿ ಮೊದಲು ಅಕ್ಷರ ಕಲಿಸುವ ಎಲ್ಲಾ ತಾಯಂದಿರು ಗಳನ್ನು ಮಾತೃದೇವೋಭವ ಎಂದು ಸಂಬೋಧಿ ಸುತ್ತೇವೆ. ಮಕ್ಕಳಿಗೆ ಪ್ರೀತಿಯಿಂದ ಏನನ್ನಾದರೂ ಕಲಿಸಬಹುದು ಎಂದು ಹೇಳಿದರು.

ಪ್ರೖಮರಿ ಶಾಲೆಯ ಮೇಲ್ವಿಚಾರಕ ಬಿ.ಅಮರ್‌ನಾಥ್‌ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಕ್ರಿಯಾ ತ್ಮಕವಾದ ಪ್ರತಿಭೆಗಳನ್ನು ಇಂತಹ ಬೇಸಿಗೆ ಶಿಬಿರ ಗಳಿಂದ ಗುರುತಿಸಬಹುದು. ಹೆಚ್ಚು ವಿದ್ಯಾರ್ಥಿಗಳು ಇಂತಹ ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವಂತೆ ಎಲ್ಲಾ ಶಿಕ್ಷಕರು ಶ್ರಮ ವಹಿಸಬೇಕು ಎಂದರು.

ಗ್ರಾಮೀಣ ಆಟಗಳ ಪರಿಚಯ ಮಾಡಿ: ವಾಸವಿ ಮಹಿಳಾ ಮಂಡಳಿಯ ಅಧ್ಯಕ್ಷೆ ಧನಲಕ್ಷ್ಮ ಅಮರ್‌ನಾಥ್‌ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಮಕ್ಕಳು ಮಾಡಿರುವ ವಿವಿಧ ಕಲಾ ಪ್ರಕಾರಗಳನ್ನು ನೋಡಿ ಮೆಚ್ಚಿಕೊಂಡು ಮನಸಾರೆ ಹೊಗಳಿದರು. ಇದರ ಜೊತೆಗೆ ಬೇಸಿಗೆ ಶಿಬಿರಗಳಲ್ಲಿ ದೇಶಿ ಸೊಗಡಿನ ಅರ್ಥಾತ್‌ ಗ್ರಾಮೀಣ ಆಟಗಳನ್ನು ಆಡುವುದರ ಜೊತೆಗೆ ಆ ಆಟಗಳ ಪರಿಚಯವನ್ನು ಮಾಡಿಕೊಡ ಬೇಕು ಎಂದು ಸಲಹೆ ನೀಡಿದರು.

ಪ್ರಕೃತಿ ಸಹಜ ಬದುಕನ್ನು ಅರ್ಥೈಸಿ: ವಾಸವಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎನ್‌.ನಾಗಪ್ಪ ಮಾತ ನಾಡಿ, ಮಕ್ಕಳು ರಜೆಯಲ್ಲಿ ಮನೆಯೊಳಗೆ ಟೀವಿ ಮತ್ತು ಮೊಬೈಲ್ನಿಂದ ಕಳೆದು ಹೋಗುವುದರಿಂದ ಆ ಬಂಧನದಿಂದ ಹೊರಬಂದು ಪ್ರಕೃತಿ ಸಹಜ ಬದುಕನ್ನು ಅವರಿಗೆ ಅರ್ಥೈಸಬೇಕಾಗಿದೆ. ಶಿಬಿರದಲ್ಲಿ ಕಲಿತದ್ದು ತಮ್ಮ ಬದುಕಿಗೆ ಆಸರೆಯಾಗುತ್ತದೆ ಎಂದು ಸಲಹೆ ನೀಡಿದರು. ಈ ವೇಳೆ ಬೃಹತಿ, ಖುಷಿ, ಸುಹಾಸ್‌, ಯುವರಾಜ್‌, ಯಶವಂತ, ದಿವ್ಯ, ಜಮುನಾ, ರಾಮ ಚರಣ, ವೇದಿಕ ಮತ್ತು ಮೋಕ್ಷಿತ್‌ ಬಹುಮಾನ ಪಡೆದರು. ಸಮಾರಂಭದಲ್ಲಿ ಮಂಜುಳಾ, ಮೀನಾ ಕುಮಾರಿ, ಮುಖ್ಯಶಿಕ್ಷಕ ಪ್ರಭಾಕರ್‌, ಗ್ರೇಸಿಪಿಂಟೋ, ಗಾಯತ್ರಿ, ಬೃಂದಾ, ಬೃಹತಿ ಎಂ.ಎಲ್.ತೇಜಾವತಿ ಮತ್ತಿತರರು ಇದ್ದರು.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kunigal: ಗೆಳತಿಯರ ಜೊತೆ ಆಟವಾಡುವ ವೇಳೆ ಹಾವು ಕಚ್ಚಿ ಬಾಲಕಿ ಮೃತ್ಯು

Kunigal: ಗೆಳತಿಯರ ಜೊತೆ ಆಟವಾಡುವ ವೇಳೆ ಹಾವು ಕಚ್ಚಿ ಬಾಲಕಿ ಮೃತ್ಯು

Pavagada; ವಾಹನ ಸಹಿತ ವ್ಯಕ್ತಿ ಸಜೀವದಹನ

Pavagada; ವಾಹನ ಸಹಿತ ವ್ಯಕ್ತಿ ಸಜೀವದಹನ

Tumakur

Wage Workers: ತುಮಕೂರಿನ ಶುಂಠಿ ಕ್ಯಾಂಪ್‌ನಲ್ಲಿ ಜೀತ ಪದ್ಧತಿ ಜೀವಂತ!

1-kunigal

Kunigal: ಕೌಟುಂಬಿಕ ಕಲಹ; ಗೃಹಣಿ ಆತ್ಮಹತ್ಯೆ

Laxmi-Minister

Reality Check: ʼನಮ್ಮ ಅತ್ತೆ ಹೊಡೆಯುತ್ತಿದ್ದಾರೆ ಸಹಾಯ ಮಾಡುವಿರಾʼ ಎಂದ ಸಚಿವೆ ಲಕ್ಷ್ಮೀ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.