ಸಾಯಿ ಪಲ್ಲವಿ ಒಮ್ಮೆ ಕನ್ನಡಕ್ಕೆ ಬಾರಮ್ಮ ….
ಅಂತೆ-ಕಂತೆ ಕೇಳಿ ಅಭಿಮಾನಿಗಳ ಬೇಸರ
Team Udayavani, May 8, 2019, 3:00 AM IST
ಸಾಯಿ ಪಲ್ಲವಿ ಸದ್ಯ ಸೌತ್ ಸಿನಿ ದುನಿಯಾದ ಬೇಡಿಕೆಯ ನಟಿ. ತನ್ನ ಕ್ಯೂಟ್ ಲುಕ್, ಅಭಿನಯ ಮೂಲಕ ದೊಡ್ಡ ಅಭಿಮಾನಿ ವರ್ಗವನ್ನು ಹೊಂದಿರುವ ಸಾಯಿ ಪಲ್ಲವಿಯನ್ನು ಈಗ ಕನ್ನಡಕ್ಕೆ ಕರೆತರುವ ಪ್ರಯತ್ನ ನಡೆಯುತ್ತಿದೆ. ಸಾಯಿ ಪಲ್ಲವಿ ಬಿಝಿಯಾಗುತ್ತಿದ್ದಂತೆ ಆಕೆಯ ಹೆಸರು ಕೂಡಾ ಒಂದೊಂದೇ ಕನ್ನಡ ಸಿನಿಮಾಗಳಲ್ಲಿ ಕೇಳಿಬರುತ್ತಿದೆ.
ಹಾಗಂತ ಆಕೆ ಕನ್ನಡದಲ್ಲಿ ನಟಿಸುತ್ತಾರಾ ಎಂದರೆ ಸದ್ಯಕ್ಕೆ ಉತ್ತರವಿಲ್ಲ. ಈಗಾಗಲೇ ನಿರ್ದೇಶಕ ಮಹೇಶ್ ಕುಮಾರ್ ತಮ್ಮ “ಮದಗಜ’ ಚಿತ್ರಕ್ಕೆ ಸಾಯಿ ಪಲ್ಲವಿಯನ್ನು ಕರೆತರಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೂ ಮುನ್ನ ನಿರ್ದೇಶಕರೊಬ್ಬರು ಸಾಯಿ ಪಲ್ಲವಿ ಹೆಸರನ್ನು ತಮ್ಮ ಸಿನಿಮಾ ಜೊತೆ ಹರಿಬಿಟ್ಟಿದ್ದರು.
ಆದರೆ, ಆ ಜಾಗಕ್ಕೆ ಬಂದಿದ್ದು, ಮಾತ್ರ ಬೇರೊಬ್ಬ ನವನಟಿ. ಈಗ ದರ್ಶನ್ ಅವರ “ರಾಬರ್ಟ್’ ಚಿತ್ರಕ್ಕೆ ಸಾಯಿ ಪಲ್ಲವಿ ಬರುತ್ತಾರೆಂಬ ಸುದ್ದಿ ಹಬ್ಬಿದೆ. ಹಾಗಂತ ಚಿತ್ರತಂಡ ಮಾತ್ರ ಈ ಬಗ್ಗೆ ಏನೂ ಮಾತನಾಡಿಲ್ಲ. ನಿರ್ದೇಶಕ ತರುಣ್ ಸುಧೀರ್ ಹೇಳುವಂತೆ, ಸಾಯಿ ಪಲ್ಲವಿ ಜೊತೆ ಚಿತ್ರತಂಡ ಮಾತುಕತೆ ನಡೆಸಿಯೇ ಇಲ್ಲವಂತೆ. ಹೀಗಿದ್ದರೂ ಆಕೆಯ ಹೆಸರು ಓಡಾಡುತ್ತಿದೆ.
ಪರಭಾಷಾ ಸ್ಟಾರ್ ನಟಿಯರ ಹೆಸರುಗಳು ಕನ್ನಡದಲ್ಲಿ ಸೆಟ್ಟೇರುತ್ತಿರುವ ದೊಡ್ಡ ಸಿನಿಮಾಗಳ ಸುತ್ತ ಓಡಾಡುವುದು ಇದು ಹೊಸತೇನಲ್ಲ. ಈ ಹಿಂದಿನಿಂದಲೂ ಇದು ನಡೆದುಕೊಂಡು ಬಂದಿದೆ. ಚಿತ್ರದ ನಿರ್ದೇಶಕರಿಗೆ ಆ ಬಗ್ಗೆ ಅರಿವಿಲ್ಲದಿದ್ದರೂ, ಯಾರೋ ಒಬ್ಬರು ದೊಡ್ಡ ನಟಿಯ ಹೆಸರನ್ನು ಹೇಳುವ ಮೂಲಕ ಸುದ್ದಿಗೆ ಕಾರಣರಾಗುತ್ತಾರೆ.
ಈ ಹಿಂದೆ ಅನುಷ್ಕಾ ಶೆಟ್ಟಿ, ಸಮಂತಾ, ತಮನ್ನಾ … ಹೀಗೆ ಅನೇಕ ನಟಿಯರ ಹೆಸರುಗಳು ಸ್ಟಾರ್ ಸಿನಿಮಾಗಳ ನಾಯಕಿಯರ ಪಟ್ಟಿಯಲ್ಲಿ ಓಡಾಡಿವೆ. ನಟಿ ಪ್ರಿಯಾ ವಾರಿಯರ್ ಕಣ್ಸನ್ನೆ ಮೂಲಕ ಜನಪ್ರಿಯವಾಗುತ್ತಿದ್ದಂತೆ ಕನ್ನಡ ಸಿನಿಮಾವೊಂದರಲ್ಲಿ ಆಕೆಯ ಹೆಸರು ಕೂಡಾ ಕೇಳಿಬಂದಿತ್ತು.
ಆದರೆ, ಆಕೆ ಬರಲಿಲ್ಲ ಎಂಬುದು ಬೇರೆ ಮಾತು. ಈಗ ಕನ್ನಡದ ಒಂದಷ್ಟು ಸಿನಿಮಾಗಳು ಸೆಟ್ಟೇರುತ್ತಿದ್ದಂತೆ ಸಾಯಿ ಪಲ್ಲವಿ ಹೆಸರು ಕೇಳಿಬರುತ್ತಿದೆ. ಹೀಗೆ ಸುಖಾಸುಮ್ಮನೆ ಹೆಸರನ್ನು ಕೇಳಿದ ಕನ್ನಡ ಸಿನಿ ಪ್ರೇಮಿಗಳು “ಸಾಯಿ ಪಲ್ಲವಿ ಒಮ್ಮೆ ಕನ್ನಡಕ್ಕೆ ಬಾರಮ್ಮ …’ ಎನ್ನುತ್ತಿರುವುದು ಸುಳ್ಳಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11 ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದ 5 ಕೋಟಿ ಲಂಚ, ರೋಲ್ ಕಾಲ್ ಲಾಯರ್..
Komal Kumar: ತೆರೆಗೆ ಬರಲು ಸಿದ್ದವಾಯ್ತು ʼಯಲಾ ಕುನ್ನಿʼ
Seetha Payana: ಅರ್ಜುನ್ ಸರ್ಜಾ ನಿರ್ದೇಶನದಲ್ಲಿ ʼಸೀತಾ ಪಯಣʼ; ನಿರಂಜನ್ ಹೀರೋ
Chethan Kumar: ನಟ ಚೇತನ್ ವಿರುದ್ಧದ ವಾರಂಟ್ ಹಿಂಪಡೆದ ಕೋರ್ಟ್
Actor Darshan: ಅ.22ಕ್ಕೆ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸಾಧ್ಯತೆ
MUST WATCH
ಹೊಸ ಸೇರ್ಪಡೆ
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Manipur: ಸಿಎಂ ಬಿರೇನ್ ಸಿಂಗ್ ಪದಚ್ಯುತಿಗೆ ಆಗ್ರಹಿಸಿ ಬಿಜೆಪಿ ಶಾಸಕರಿಂದ ಪ್ರಧಾನಿಗೆ ಪತ್ರ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.