ಬಾಳು ಬೆಳಗುವ ರಶ್ಮಿ


Team Udayavani, May 7, 2019, 10:47 PM IST

rashmi

ಅಲ್ಲೆಲ್ಲೋ ಲಂಡನ್ನಿನಲ್ಲಿ ಕಣ್ಮುಚ್ಚಿದ ತನ್ನ ಮಗಳ ನೆನಪಿನಲ್ಲಿ ಈ ತಂದೆ ಒಂದು ಶಾಲೆ ತೆರೆದರು. ದಾವಣಗೆರೆಯ ರಶ್ಮಿ ಹೆಣ್ಣುಮಕ್ಕಳ ವಸತಿಶಾಲೆ, ಹೆಣ್ಣು ಹೆತ್ತ ಬಡವರ ಪಾಲಿಗೊಂದು ಆಶಾಕಿರಣ…

‘ಪುತ್ರ ಶೋಕ ನಿರಂತರ’ ಎಂಬ ಮಾತಿದೆ. ಅಂದರೆ, ಕರುಳ ಕುಡಿಗಳ ಸಾವಿನ ನೋವು ಹೆತ್ತವರನ್ನು ಸದಾ ಕಾಡುತ್ತದೆ ಎಂದರ್ಥ. ಲಂಡನ್‌ನಲ್ಲಿರುವ ರಶ್ಮಿ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ‌ ಮಾಲೀಕರಾದ ಪಿ. ಸುರೇಂದ್ರ ಅವರೂ ಆ ನೋವಿಗೆ ತುತ್ತಾದರು. 1993ರಲ್ಲಿ ಅವರ ಮುದ್ದಿನ ಮಗಳು, 21ರ ಹರೆಯದ ರಶ್ಮಿ ರಸ್ತೆ ಅಪಘಾತದಲ್ಲಿ ಮಡಿದಳು. ಇದ್ದಕ್ಕಿದ್ದಂತೆ ಬಂದೆರಗಿದ ನೋವನ್ನು ಒಪ್ಪಿಕೊಳ್ಳಲು ಬಹಳಷ್ಟು ಸಮಯ ಬೇಕಾಯ್ತು. ವರ್ಷಗಳು ಉರುಳಿದರೂ, ಹೃದಯದ ನೋವು ಮಾಸಲಿಲ್ಲ. ಮಗಳ ನೆನಪಿನಲ್ಲಿ ಏನಾದರೂ ಒಳ್ಳೇ ಕೆಲಸ ಮಾಡಬೇಕು, ಆ ಮೂಲಕವಾದರೂ ಅವಳನ್ನು ಜೊತೆಗಿರಿಸಿಕೊಳ್ಳಬೇಕು ಅಂತ ಸುರೇಂದ್ರ ಅವರು ನಿರ್ಧರಿಸಿದರು. ಹಾಗೆ ಕಣ್ತೆರೆದಿದ್ದೇ, ದಾವಣಗೆರೆಯ ‘ರಶ್ಮಿ ಹೆಣ್ಣುಮಕ್ಕಳ ವಸತಿ ಶಾಲೆ’. 2000ನೇ ಇಸವಿಯಲ್ಲಿ ಪ್ರಾರಂಭವಾದ ಈ ಶಾಲೆ, ಬಡ ಮತ್ತು ನಿರ್ಗತಿಕ ಹೆಣ್ಣುಮಕ್ಕಳಿಗೆ ಉಚಿತ ವಿದ್ಯೆ- ವಸತಿ- ಊಟವನ್ನು ಒದಗಿಸುತ್ತಿದೆ. ಮೊದಲ ವರ್ಷ 25 ಹೆಣ್ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಿಕೊಳ್ಳಲಾಯ್ತು. ಮುಂದಿನ ವರ್ಷ ಮತ್ತೆ 25 ಹುಡುಗಿಯರು ಸೇರಿದರು.

ಹೀಗೆ ಪ್ರತಿ ವರ್ಷ ಒಂದೊಂದು ತರಗತಿಯನ್ನು ಸೇರಿಸಿಕೊಳ್ಳುತ್ತಾ ಬೆಳೆದ ಈ ಶಾಲೆಯಲ್ಲಿ ಈಗ 250 ವಿದ್ಯಾರ್ಥಿನಿಯರಿದ್ದಾರೆ. ಇಲ್ಲಿನ ವಿದ್ಯಾರ್ಥಿನಿಯರು ಎಲ್ಲ ವಿಷಯದಲ್ಲೂ ಬಹಳ ಚುರುಕು. ಓದು, ಆಟೋಟ, ಸಾಂಸ್ಕೃತಿಕ ಚಟುವಟಿಕೆ, ಕಂಪ್ಯೂಟರ್‌ ಬಳಕೆ, ಯೋಗ, ಧ್ಯಾನ… ಹೀಗೆ ಯಾವ ಖಾಸಗಿ ಶಾಲೆಗೂ ಕಡಿಮೆಯಿಲ್ಲದಂತೆ ಫಿಟ್ ಇದ್ದಾರೆ. ಶಾಲೆಯ ಹಿಂದಿರುವ ಕೈ ತೋಟದಲ್ಲಿ ಮಕ್ಕಳೇ ಹಣ್ಣು- ತರಕಾರಿಗಳನ್ನು ಬೆಳೆಯುತ್ತಾರೆ. ಅಲ್ಲಿನ ಉತ್ಪನ್ನಗಳೇ ಹಾಸ್ಟೆಲ್ನ ಅಡುಗೆ ಕೋಣೆಯಲ್ಲಿ ಆಹಾರವಾಗಿ, ಹುಡುಗಿಯರ ತಟ್ಟೆ ಸೇರುತ್ತದೆ. ಆರೋಗ್ಯ ತಪಾಸಣೆ ನಡೆಸುತ್ತಾರೆ. ಇಲ್ಲಿನ ಶಿಕ್ಷಕಿಯರೂ, ಮಕ್ಕಳ ಜೊತೆಗೆ ಹಾಸ್ಟೆಲ್ನಲ್ಲಿದ್ದು ಅವರ ಬೇಕು- ಬೇಡಗಳನ್ನು ನೋಡಿಕೊಳ್ಳುತ್ತಾರೆ. ಹತ್ತನೇ ತರಗತಿ ಮುಗಿದ ನಂತರ, ನಿಮ್ಮ ದಾರಿ ನಿಮ್ಮದು ಅಂತ ಹುಡುಗಿಯರನ್ನು ಒಂಟಿ ಮಾಡುವುದಿಲ್ಲ ಈ ಶಾಲೆ. ಪಾಲಕರಿಲ್ಲದ ಹುಡುಗಿಯರ ಮುಂದಿನ ಶಿಕ್ಷಣಕ್ಕೂ ಶಾಲೆಯೇ ವ್ಯವಸ್ಥೆ ಮಾಡುತ್ತದೆ.

ದಾವಣಗೆರೆಯ ಕೆಲವು ಕಾಲೇಜುಗಳು, ಈ ಶಾಲೆಯ ಹುಡುಗಿಯರಿಗೆ ಅತಿ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುತ್ತವೆ. ಇಲ್ಲಿ ಓದಿದ 6 ಹುಡುಗಿಯರು ಎಂಜಿನಿಯರ್‌ ಆಗಿದ್ದರೆ, ಕೆಲವರು ಬ್ಯಾಂಕ್‌ ನೌಕರಿ ಹಿಡಿದಿದ್ದಾರೆ. ಬಿಎಸ್‌ಸಿ ಅಗ್ರಿ, ನರ್ಸಿಂಗ್‌ನಂಥ ಕೋರ್ಸ್‌ ಮಾಡಿ, ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಡಾ. ಪರ್ವತಪ್ಪ (ಸುರೇಂದ್ರ ಅವರ ತಂದೆ) ಮೆಮೊರಿಯಲ್ ಟ್ರಸ್ಟ್‌ನಡಿಯಲ್ಲಿ ಈ ಶಾಲೆ ನಡೆಯುತ್ತಿದೆ. ಸುರೇಂದ್ರ ಅವರ ಸೋದರ ಡಾ. ನಾಗರಾಜ್‌ ಮತ್ತು ಅವರ ಪತ್ನಿ ಪ್ರೇಮಾ ನಾಗರಾಜ್‌, ಶಾಲೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ.

  • ಪ್ರಿಯಾಂಕ ಎನ್‌

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.