ಸನಾತನ ಸಂಸ್ಕೃತಿಯ ಹಿಂದುತ್ವಕ್ಕೆ ಸಾವಿಲ್ಲ

ಹಿಂದೂಗಳು ಕೋಮುವಾದಿಗಳಲ್ಲ •ದೇಶದಲ್ಲಿ ಹಿಂದೂಗಳನ್ನು ಹತ್ತಿಕ್ಕುವ ಪ್ರಯತ್ನ: ಬಡಿಗೇರ್‌

Team Udayavani, May 8, 2019, 10:56 AM IST

8-May-6

ಹರಿಹರ: ಹಿಂದೂ ಜಾಗರಣ ವೇದಿಕೆಯಿಂದ ಶ್ರೀರಾಮ ನವಮಿ, ಹಿಂದೂ ವಿರಾಟ್ ಸಮಾಜೋತ್ಸವ ನಿಮಿತ್ತ ಮಂಗಳವಾರ ಬೃಹತ್‌ ಶೋಭಾಯಾತ್ರೆ ನಡೆಯಿತು.

ಹರಿಹರ: ಸನಾತನ ಸಂಸ್ಕೃತಿಯಾದ ಹಿಂದುತ್ವಕ್ಕೆ ಸಾವಿಲ್ಲ. ಅದೆಷ್ಟೋ ನಾಗರಿಕತೆಗಳು ಬಂದು ಹೋಗಿರಬಹುದು. ಆದರೆ ಹಿಂದುತ್ವ ಅಜರಾಮರ ಎಂದು ಹಿಂದೂ ಜಾಗರಣ ವೇದಿಕೆ ಉತ್ತರ ಪ್ರಾಂತ್ಯ ಪ್ರಧಾನ ಸಂಚಾಲಕ ಶಿವಾನಂದಪ್ಪ ಬಡಿಗೇರ್‌ ಹೇಳಿದರು.

ಶ್ರೀರಾಮ ನವಮಿ ನಿಮಿತ್ತ ನಗರದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಹಿಂದೂ ವಿರಾಟ್ ಸಮಾಜೋತ್ಸವದಲ್ಲಿ ಮಾತನಾಡಿದ ಅವರು, ಹುಟ್ಟಿದ ಮೇಲೆ ಸಾಯುವುದು ಪ್ರಕೃತಿ ನಿಯಮ. ಇಸ್ಲಾಂ, ಕ್ರೈಸ್ತ ಧರ್ಮಗಳು ನಿರ್ದಿಷ್ಟ ದಿನಾಂಕದಂದು ಹುಟ್ಟಿದ್ದು, ಅವುಗಳಿಗೆ ಎಂದಾದರೊಮ್ಮೆ ಅಂತ್ಯವಿದೆ. ಆದರೆ ಹಿಂದೂತ್ವ ಹುಟಿದ್ದಕ್ಕೆ ದಿನಾಂಕ, ಸಮಯವಿಲ್ಲ. ಹಿಂದುತ್ವ ನಿರಂತರ ಎಂದರು.

ವಿವಿಧ ಜನಾಂಗದವರು ಹಿಂದೂತ್ವ ಮುಗಿಸಲು ಕಳೆದ 2000 ವರ್ಷಗಳಿಂದಲೂ ದಾಳಿ ಮಾಡುತ್ತಿದ್ದರೂ ಯಶಸ್ವಿಯಾಗಿಲ್ಲ. ಪುನರ್‌ಜನ್ಮದ ಮೇಲೆ ನಂಬಿಕೆ ಇಟ್ಟಿರುವ ಹಿಂದೂಗಳನ್ನು ಕೊನೆಗಾಣಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಯುದ್ಧವಿಲ್ಲದೆ, ಕೇಸು-ಕೋರ್ಟ್‌ ಅಲೆದಾಡದೆ, ನಗುನಗುತ್ತಲೇ ಭಾರತವನ್ನು ಮುಸ್ಲಿಂ ದೇಶವಾಗಿಸುವ ಹುನ್ನಾರ ಲವ್‌ ಜಿಹಾದ್‌. ಸ್ವಾತಂತ್ರ್ಯ ಸಿಕ್ಕಾಗ ದೇಶದಲ್ಲಿ ಶೇ. 4 ರಷ್ಟಿದ್ದ ಅಲ್ಪಸಂಖ್ಯಾತರು ಇಂದು ಶೇ. 18ರಷ್ಟಾಗಿದ್ದಾರೆ. ಹಿಂದೂಗಳು ಆರ್ಥಿಕ ಶಕ್ತಿಯಿದ್ದರೂ ಕೇವಲ ಒಂದೆರಡು ಮಕ್ಕಳು ಸಾಕೆನ್ನುತ್ತಿದ್ದರೆ, ಅಲ್ಪಸಂಖ್ಯಾತರು ಹಲವು ಮಕ್ಕಳನ್ನು ಹೆತ್ತು ಬಹುಸಂಖ್ಯಾತರಾಗುತ್ತಿದ್ದಾರೆ ಎಂದರು.

ಹಿಂದೂಗಳು ಕೋಮವಾದಿಗಳಲ್ಲ. ಸಹಿಷ್ಣುತಾವಾದಿಗಳು. ಹಿಂದೂಗಳ ಉದಾತ್ತ ಮನೋಭಾವವನ್ನು ದೌರ್ಬಲ್ಯವೆಂದುಕೊಳ್ಳಬಾರದು. ಹಿಂದೂ ಮುಸ್ಲಿಂ ಭಾಯಿ ಭಾಯಿ ಎನ್ನುವುದು ಎರಡೂ ಕಡೆಯಿಂದ ಆಗಬೇಕು. ನಾವು ಕುರಾನ್‌ ದೇವರ ಮನೆಯಲ್ಲಿಟ್ಟು ಪೂಜಿಸಬಲ್ಲೆವು. ಮುಸ್ಲಿಮ್‌ರು ಭಗವದ್ಗೀತೆ ಇಟ್ಟುಕೊಳ್ಳುತ್ತಾರೆಯೇ? ಬಸವಣ್ಣ ಹೇಳಿದಂತೆ ದೇವನೊಬ್ಬ ನಾಮ ಹಲವು ಎಂಬುದನ್ನು ಒಪ್ಪುತ್ತಾರೆಯೇ ಎಂದರು.

ನಮ್ಮ ಪೂರ್ವಜರನ್ನು ಕೊಂದು ಹಾಕಿದ ಟಿಪ್ಪು ಸುಲ್ತಾನನ ಜಯಂತಿ ಆಚರಿಸುವವರಿಗೆ ಹಿಂದೂ ಮುಸ್ಲಿಮ್‌ರ ಸಾಮರಸ್ಯ ಸಾಧಿಸಿದ ಸಂತ ಶಿಶುನಾಳ ಶರೀಫ್‌, ಅಬ್ದುಲ್ ಕಲಾಂ ಜಯಂತಿ ಬೇಕಿಲ್ಲ ಎಂದರು.

ಜಾತಿ, ಕುಲಗಳೆನ್ನೆಲ್ಲ ತೊಡೆದು ಹಿಂದೂಗಳನ್ನು ಒಗ್ಗೂಡಿಸಿದ ಬಸವಣ್ಣ ಅಲ್ಲದೆ ಸಂಗೊಳ್ಳಿ ರಾಯಣ್ಣ, ವಾಲ್ಮೀಕಿ, ಕನಕದಾಸ ಇವರೆಲ್ಲಾ ಇಂದು ಸಣ್ಣ-ಪುಟ್ಟ ಸಮಾಜಕ್ಕೆ ಸೀಮಿತರಾಗಿದ್ದಾರೆ. ಇದೆ ರೀತಿ ಛತ್ರಪತಿ ಶಿವಾಜಿಯನ್ನು ಮರಾಠಾ ಸಮಾಜಕ್ಕೆ ಸೀಮಿತಗೊಳಿಸುವ ಪ್ರಯತ್ನ ನಡೆಯುತ್ತಿರುವುದು ಅಪಾಯಕಾರಿ ಎಂದರು.

ಸಮಾಜೋತ್ಸವ ನಿಮಿತ್ತ ಬೈಕ್‌ ರ್ಯಾಲಿಗೆ ಅನುಮತಿ ನೀಡದಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಭಾರತದಲ್ಲಿ ರಾಮ ನವಮಿ ಆಚರಿಸಲೂ ಪರವಾನಿಗೆ ಪಡೆಯಬೇಕು. ಆದರೆ ಪ್ರಾರ್ಥನೆ ಮಾಡಲು ಯಾವುದೇ ಅನುಮತಿ ಬೇಕಿಲ್ಲ. ಇದು ಬಹುಸಂಖ್ಯಾತ ಹಿಂದೂಗಳನ್ನು ಹತ್ತಿಕ್ಕುವ ಪ್ರಯತ್ನ ಎಂದು ಆರೋಪಿಸಿದರು. ಹಿಂಜಾವೆ ತಾಲೂಕು ಅಧ್ಯಕ್ಷ ದಿನೇಶ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ವೀರೇಶ್‌, ಜಿಲ್ಲಾ ಸಂಚಾಲಕ ಸತೀಶ್‌ ಪೂಜಾರಿ ಮತ್ತಿತರರಿದ್ದರು.

ಟಾಪ್ ನ್ಯೂಸ್

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

DarshanBellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

Mangaluru; ಕಸಬಾ ಬೆಂಗ್ರೆ: ಯುವತಿ ನಾಪತ್ತೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.