ಪುರಾತನ ಗೋಕುಂಟೆ, ಕಲ್ಯಾಣಿಗಳ ಪರಭಾರೆ

ಕಣ್ಣುಮುಚ್ಚಿ ಕುಳಿತ ಜಿಲ್ಲಾಡಳಿತ

Team Udayavani, May 8, 2019, 3:15 PM IST

kolar-tdy-3..

ಮಾಲೂರು: ಸದಾ ಬರದಲ್ಲಿರುವ ಜಿಲ್ಲೆಗೆ ಶಾಶ್ವತ ನದಿ ನಾಲೆಗಳಿಲ್ಲ. ಮಳೆಗಾಲದಲ್ಲಿ ಕೆರೆ, ಕುಂಟೆಗಳಲ್ಲಿ ಸಂಗ್ರಹವಾಗುವ ನೀರೇ ಜನ ಜಾನುವಾರುಗಳಿಗೆ ಗತಿ. ಇದನ್ನು ಮನಗಂಡ ಪೂರ್ವಜರು ತಾಲೂಕಿನಲ್ಲಿ ಹತ್ತಾರು ಕೆರೆ ಕುಂಟೆಗಳು ನಿರ್ಮಿಸಿದ್ದರು. ಆದರೆ, ಉಳಿಸಿ ಅಭಿವೃದ್ಧಿಪಡಿಸಬೇಕಾದ ಸ್ಥಳೀಯ ಆಡಳಿತ ಒತ್ತುವರಿ ಮಾಡಿದ್ರೂ ಕ್ರಮಕೈಗೊಳ್ಳುತ್ತಿಲ್ಲ. ಇದರಿಂದ ಕೆರೆ, ಕುಂಟೆ, ಕಲ್ಯಾಣಿಗಳು ಭೂಗಳ್ಳರ ಪಾಲಾಗುತ್ತಿವೆ.

ತಾಲೂಕಿನಲ್ಲಿ 364 ಕೆರೆಗಳಿವೆ ಎಂದು ಅಂಕಿಅಂಶಗಳು ಹೇಳುತ್ತವೆ. ಮಡಿವಾಡ ಚೊಕ್ಕೊಂಡಹಳ್ಳಿ, ಶಿವಾರಪಟ್ಟಣ ಅರಳೇರಿ, ಮಿಂಡಹಳ್ಳಿ, ಮತ್ತಿತರ ಕಡೆಗಳಲ್ಲಿ ಪುರಾತನ ಕಲ್ಯಾಣಿಗಳಿದ್ದು, ಪಟ್ಟಣದಲ್ಲಿಯೂ ಗಜಾಗುಂಡ್ಲ, ಕಪ್ಪಶೆಟ್ಟಿ ಬಾವಿಯಂತಹ ಕಲ್ಯಾಣಗಳಿದ್ದವು. ಜಿಲ್ಲೆಯನ್ನು ಆಳಿದ್ದ ಗಂಗರು ಪ್ರತಿ ಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಿದ್ದರೂ ಎನ್ನಲಾಗಿದೆ. ಇದರ ಜೊತೆಗೆ ಸರ್ಕಾರವು ಜಲಾನಯನ ಇಲಾಖೆಯ ಮೂಲಕ ಕೃಷಿ ಭೂಮಿ ಬಳಿ 275ಕ್ಕೂ ಹೆಚ್ಚು ಚೆಕ್‌ಡ್ಯಾಂ ನಿರ್ಮಿಸಿದೆ.

ಪ್ರತಿವರ್ಷ ಮಳೆಗಾಲದಲ್ಲಿ 750 ರಿಂದ 850 ಮಿ.ಮೀ. ಮಳೆ ಬೀಳುತ್ತದೆ. ಇದರಿಂದ ಕೆರೆ ಕುಂಟೆಗಳಲ್ಲಿ ಸಂಗ್ರಹವಾಗುವ ನೀರೇ ಬೇಸಿಗೆಯಲ್ಲಿ ಜಾನುವಾರುಗಳು, ಕಾಡುಪ್ರಾಣಿಗಳ ದಾಹ ನೀಗುತ್ತಿದೆ. ಮಾಲೂರು ತಾಲೂಕಿನ ಹಲವು ಗ್ರಾಮಗಳ ಮಧ್ಯಭಾಗದಲ್ಲಿನ ಕಲ್ಯಾಣಿಗಳು, ಅರಣ್ಯದಲ್ಲಿನ ಕುಂಟೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಣ್ಮರೆಯಾಗುತ್ತಿವೆ.

ಗೋಕುಂಟೆ ಪರಭಾರೆ: ತಾಲೂಕಿನ ಶಿವಾರಪಟ್ಟಣದ ಗ್ರಾಪಂ ಕಚೇರಿ ಮುಂಭಾಗದ ಸರ್ವೆ ನಂ. 71ರಲ್ಲಿನ ಗೋಕುಂಟೆಯನ್ನು ಗ್ರಾಮದ ಕೆಲವು ಪ್ರಭಾವಿಗಳು ರಾತ್ರೋರಾತ್ರಿ ಮುಚ್ಚಿ ಅದೇ ಸ್ಥಳಕ್ಕೆ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿದ್ದಾರೆ. ಈ ಬಗ್ಗೆ ಗ್ರಾಮದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ತನಿಖೆ ನಡೆಸುವಂತೆ ತಹಶೀಲ್ದಾರ್‌ಗೆ ಜಿಲ್ಲಾಧಿಕಾರಿಗಳು ಮೌಖೀಕ ಅದೇಶ ನೀಡಿದ್ದರೂ ಪ್ರಯೋಜನವಾಗಿಲ್ಲ. 2012 -13ನೇ ಸಾಲಿನಲ್ಲಿ ಜಲಾನಯನ ಇಲಾಖೆಯಿಂದ ಇದೇ ಗೋಕುಂಟೆಯ ದುರಸ್ತಿಗಾಗಿ 36 ಸಾವಿರ ರೂ. ಬಿಡುಗಡೆ ಮಾಡಿ ವೆಚ್ಚ ಮಾಡಿರುವ ದಾಖಲೆಗಳಿದ್ದರೂ ಗೋಕುಂಟೆ ಉಳಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ.

ಕಲ್ಯಾಣಿಗೆ ಕಸ: ಇತ್ತೀಚಿಗೆ ತಾಲೂಕಿನ ಅಬ್ಬೇನಹಳ್ಳಿ ಗ್ರಾಮದ ಹೃದಯ ಭಾಗದಲ್ಲಿನ ಕಲ್ಯಾಣಿಯನ್ನು ಗ್ರಾಪಂ ಅಡಳಿತವೇ ಮುಚ್ಚಿ ಹಾಕಿದೆ. ಪಟ್ಟಣದ ಹೃದಯ ಭಾಗದಲ್ಲಿನ ಗಜಾಗುಂಡ್ಲ ಕಲ್ಯಾಣಿ ಮುಚ್ಚಿಹಾಕುವ ಪ್ರಯತ್ನಗಳು ನಡೆದು ಸಾರ್ವಜನಿಕರ ಹೋರಾಟಗಳಿಂದ ಉಳಿದುಕೊಂಡಿದೆ. ಕಲ್ಯಾಣಿ ಪುನಶ್ಚೇತನಗೊಳಿಸುವ ಕಾರ್ಯಗಳು ಪ್ರಗತಿಯಲ್ಲಿವೆ.

ಮಾಲೂರು ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ತನ್ನದೇ ಪಾತ್ರ ವಹಿಸಿದ್ದ ಕುಪ್ಪಶೆಟ್ಟಿಬಾವಿ ಕಲ್ಯಾಣಿ, ಗಾಂಧಿವೃತ್ತದ ತಿಪ್ಪಾಳಗಳನ್ನು ಮುಚ್ಚಿ ವರ್ಷಗಳೇ ಕಳೆದಿವೆ. ತಿಪ್ಪಾಳದ ಕಲ್ಯಾಣಿಯನ್ನು ಪುರಸಭೆ ಸಾರ್ವಜನಿಕ ಹರಾಜು ಮೂಲಕ ಪರಭಾರೆ ಮಾಡಿಯೂ ಅಗಿದೆ. ರೈಲ್ವೆ ನಿಲ್ದಾಣದ ಬಳಿಯಲ್ಲಿನ ಮಂಡೆಪ್ಪನ ಬಾವಿಯನ್ನು ಮೈಸೂರು ಸಂಸ್ಥಾನದ ದಿವಾನ್‌ ಪೂರ್ಣಯ್ಯ ಕಟ್ಟಿಸಿದ್ದರು. ಪ್ರಸ್ತುತ ನಿರ್ವಹಣೆ ಕೊರತೆ ಕಾರಣ ಮಳೆ ನೀರಿನ ಜೊತೆಗೆ ಚರಂಡಿ ನೀರೂ ನಿಂತು, ಕಸ ಹಾಕಿ ಮುಚ್ಚಲಾಗುತ್ತಿದೆ.

ತಾಲೂಕಿನ ಮಡಿವಾಳ ಗ್ರಾಮದ ಬಳಿಯಲ್ಲಿದ್ದ ಪುರಾತನ ಶಂಕರಯ್ಯನ ಕುಂಟೆಯನ್ನು ಸಮೀಪದಲ್ಲೇ ಬಡಾವಣೆ ಮಾಡುತ್ತಿರುವ ಡೆವಲಪರ್‌ಗಳು ರಾತ್ರೋರಾತ್ರಿ ಮುಚ್ಚುವ ಕಾರ್ಯ ಮಾಡುತ್ತಿದ್ದಾರೆ. ತಾಲೂಕಿನ ಸಂತೇಹಳ್ಳಿ ಗ್ರಾಪಂ ವ್ಯಾಪ್ತಿಯ ಬೇಚರಕ್‌ ಗ್ರಾಮವಾಗಿರುವ ಪಟ್ಟಿಗೆನಹಳ್ಳಿ ಸರ್ವೆ ನಂಬರ್‌ 16ರ ಪೈಕಿ 1.4 ಎಕರೆಯಲ್ಲಿರುವ ಕುಂಟೆಯಲ್ಲಿ ಇಂದಿಗೂ ನೀರಿನ ಸಂಗ್ರಹವಿದೆ. ಈ ಭಾಗದಲ್ಲಿನ ಕಾಡು ಪ್ರಾಣಿಗಳಿಗೆ ಅಶ್ರಯವಾಗಿದೆ. ಆದರೆ, ಸಮರ್ಪಕ ನಿರ್ವಹಣೆ ಕೊರತೆಯಿಂದ 1.4 ಎಕರೆ ಪ್ರದೇಶದ ಕುಂಟೆಯ ಅಕ್ಕಪಕ್ಕದ ಜಮೀನು ಒತ್ತುವರಿಯಾಗಿದ್ದು, ಉಳಿದ ಅಲ್ಪಸ್ವಲ್ಪ ಭಾಗದ ಸರ್ಕಾರಿ ಕುಂಟೆಯು ಭೂ ಮಾಫಿಯಾಗಳ ಪಾಲಾಗುವುದರಲ್ಲಿ ಸಂಶಯವಿಲ್ಲ.

ಪಟ್ಟಿಗೆನಹಳ್ಳಿ ಕುಂಟೆಯಲ್ಲಿನ ನೀರು ಕಾಡು ಪ್ರಾಣಿಗಳಿಗೆ ಅಗತ್ಯವಾಗಿದೆ. ಆದರೆ, ನೀರನ್ನು ಅಕ್ರಮವಾಗಿ ಇಟ್ಟಿಗೆ ಕಾರ್ಖಾನೆಯವರು, ಬಡಾವಣೆ ನಿರ್ಮಾಣಕ್ಕೆ ಉಪಯೋಗವಾಗುತ್ತಿರುವುದನ್ನು ತಡೆಯಬೇಕಾಗಿದೆ. ಕುಂಟೆಯಲ್ಲಿನ ನೀರಿಗೆ ಪಂಪ್‌ಸೆಟ್‌ಗಳನ್ನು ಅಳವಡಿಸಿ ನೀರನ್ನು ಇಟ್ಟಿಗೆ ಕಾರ್ಖಾನೆ, ಲೇಔಟ್‌ಗಳ ನಿರ್ಮಾಣಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದನ್ನು ತಡೆಯಬೇಕಾಗಿದೆ. ನೀರು ಸಾಗಿಸಲು ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆಯುತ್ತಿದ್ದು, ಬೆಸ್ಕಾಂ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.

ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಡಾ.ವಿಶ್ವನಾಥ್‌, ಜಿಪಂ ಸಿಇಒ ಆಗಿದ್ದ ರಾಜೇಂದ್ರಚೋಳನ್‌ ಇಚ್ಛಾಶಕ್ತಿಯ ಫಲವಾಗಿ ತಾಲೂಕಿನ ಹತ್ತಾರು ಕಲ್ಯಾಣಿಗಳು, ಗೋಕುಂಟೆಗಳನ್ನು ಪ್ರತಿವಾರ ಒಂದು ಕಲ್ಯಾಣಿ ಆಯ್ಕೆ ಮಾಡಿಕೊಂಡು ಸರ್ಕಾರಿ ಅಧಿಕಾರಿಗಳು, ಸಾರ್ವಜನಿಕರ ಸಹಕಾರೊಂದಿಗೆ ಹೂಳು ತೆಗೆಯುವ ಕಾರ್ಯ ಮಾಡಿದ್ದರ ಫಲವಾಗಿ ಇಂದಿಗೂ ಕೆಲ ಕಲ್ಯಾಣಿಗಳಲ್ಲಿ ನೀರಿದೆ.

ಇಂತಹ ಮಹತ್ವದ ಕಾರ್ಯದಿಂದಾಗಿ ಜಿಲ್ಲೆಯ ಹತ್ತಾರು ಕಲ್ಯಾಣಿಗಳು ಮತ್ತು ಗೋಕುಂಟೆಗಳು ಮರುಪೂರಣಕ್ಕೆ ಕಾರಣವಾಗಿವೆ. ಇಂತಹ ಮಾದರಿ ಪ್ರಯತ್ನಗಳ ನಡುವೆಯೂ ಪ್ರಸ್ತುತ ಅಡಳಿತವು ಗ್ರಾಮಗಳ ಮಧ್ಯಭಾಗದಲ್ಲಿನ ಕಲ್ಯಾಣಿ, ಗೋಕುಂಟೆ ಮುಚ್ಚುತ್ತಿದೆ.

ಪ್ರಸ್ತುತ ಸರ್ಕಾರ ನೂರಾರು ಕೋಟಿ ರೂ. ವೆಚ್ಚ ಮಾಡಿ ಕೆ.ಸಿ.ವ್ಯಾಲಿ, ಎತ್ತಿನಹೊಳೆ ಹಾಗೂ ಮೇಕೆದಾಟು ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿರುವ ಕಾಲದಲ್ಲಿ ಜಿಲ್ಲೆಯ ಕೆರೆ ಕುಂಟೆ ಕಲ್ಯಾಣಿಗಳು ತುಂಬಿ ಸಮೃದ್ಧಿಯಾಗುವ ವಿಶ್ವಾಸವಿದೆ. ತಾಲೂಕು ಅಡಳಿತ ಅವುಗಳ ಉಳಿಸುವ ಕಾರ್ಯ ಮಾಡಬೇಕಾಗಿದೆ.

● ಎಂ.ರವಿಕುಮಾರ್‌

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TDP ಮುಖಂಡನ ಹತ್ಯೆಗೆ ನೆರವು: ಇಬ್ಬರು ಪೊಲೀಸರ ಅಮಾನತು

Ration Card: 1.25 ಲಕ್ಷ ಪಡಿತರ ಚೀಟಿ ಅನರ್ಹ ಸಾಧ್ಯತೆ!

Ration Card: 1.25 ಲಕ್ಷ ಪಡಿತರ ಚೀಟಿ ಅನರ್ಹ ಸಾಧ್ಯತೆ!

14-bng

Kolar: 1.25 ಲಕ್ಷ ಅನರ್ಹ ಬಿಪಿಎಲ್‌ ಕಾರ್ಡ್‌ಗಳು ಪತ್ತೆ

CM-Dineh

Eagles Eye: ಭ್ರೂಣಲಿಂಗ ಪತ್ತೆ ತಡೆಗೆ ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ನಿಗಾ: ದಿನೇಶ್‌

Benga-Club

Bengaluru Press Club: ಸುದ್ದಿಗೋಷ್ಠಿ ನಡುವೆಯೇ ಮೃತಪಟ್ಟ ಕಾಂಗ್ರೆಸ್‌ ಕಾರ್ಯಕರ್ತ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.