![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
![Kanadka-Dooja](https://www.udayavani.com/wp-content/uploads/2025/02/Kanadka-Dooja-415x249.jpg)
Team Udayavani, May 9, 2019, 6:07 AM IST
ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಒಕ್ಕೂಟ ರಚನೆಗೆ ಮುಂದಾಗಿರುವ ಟಿಆರ್ಎಸ್ ಮುಖ್ಯಸ್ಥ ಚಂದ್ರಶೇಖರರಾವ್ ಹಾಗೂ ವೈಎಸ್ಆರ್ ಕಾಂಗ್ರೆಸ್ನ ಮಖ್ಯಸ್ಥ ಜಗನ್ಮೋಹನ್ರೆಡ್ಡಿ ಅವರ ಮನವೊಲಿಸಿ ಮಹಾಘಟ್ಬಂಧನ್ ತೆಕ್ಕೆಗೆ ಸೆಳೆಯಲು ಎಐಸಿಸಿ ಅಧ್ಯಕ್ಷ ರಾಹುಲ್ ಮುಂದಾಗಿದ್ದಾರೆ.
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ಈ ಕುರಿತು ಟಿಆರ್ಎಸ್ನ ಚಂದ್ರಶೇಖರರಾವ್ ಹಾಗೂ ವೈಆರ್ಎಸ್ನ ಜಗನ್ಮೋಹನ್ರೆಡ್ಡಿ ಜತೆ ಮಾತನಾಡುವಂತೆ ರಾಹುಲ್ ಮನವಿ ಮಾಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಟಿಆರ್ಎಸ್ ಮುಖ್ಯಸ್ಥ ಚಂದ್ರಶೇಖರ್ ಅವರು ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿದ ಮಾಹಿತಿ ಪಡೆದುಕೊಂಡಿರುವ ರಾಹುಲ್ಗಾಂಧಿ, ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಒಕ್ಕೂಟ ಸ್ಥಾಪನೆಗಿಂತ ಬಿಜೆಪಿ ದೂರ ಇಡುವ ಗುರಿಯೊಂದಿಗೆ ಮಹಾಘಟ್ಬಂಧನ್ನಲ್ಲೇ ಸೇರುವುದು ಸೂಕ್ತ ಎಂದಿದ್ದಾರೆ.
ಟಿಆರ್ಎಸ್, ವೈಎಸ್ಆರ್, ಎಸ್ಪಿ-ಬಿಎಸ್ಪಿ, ಟಿಎಂಸಿ, ಬಿಜೆಡಿ, ಎಎಪಿ, ಎಡ ಪಕ್ಷಗಳು ಮಹಾಘಟ್ಬಂಧನ್ ಜತೆಗೂಡಿದರೆ ಅಗತ್ಯವಾದರೆ ಮೈತ್ರಿಕೂಟದ ಹೆಸರು ಸರ್ವಸಮ್ಮತವಾಗಿ ಬದಲಾವಣೆ ಸಹ ಮಾಡಬಹುದು. ಆಗ ಬಿಜೆಪಿ ವಿರುದ್ಧ ನಿಜಕ್ಕೂ ಒಂದು ಪ್ರಬಲ ಶಕ್ತಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ರಾಹುಲ್ಗಾಂಧಿ, ದೇವೇಗೌಡರಿಗೆ ತಿಳಿಸಿದ್ದಾರೆ.
ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಜತೆಗೂ ರಾಹುಲ್ಗಾಂಧಿ ಮಾತನಾಡಿದ್ದು, ಈಗಾಗಲೇ ಡಿಎಂಕೆ ಮಹಾಘಟ್ಬಂಧನ್ ಜತೆ ಇರುವುದರಿಂದ ಚಂದ್ರಶೇಖರರಾವ್ ಅವರ ಭೇಟಿಗೆ ಒಪ್ಪಿಲ್ಲ ಎಂದು ಹೇಳಲಾಗಿದೆ.
ಲೋಕಸಭೆ ಚುನಾವಣೆಯ ಐದು ಹಂತಗಳ ಮತದಾನದ ನಂತರದ ಪರಿಸ್ಥಿತಿಯಲ್ಲಿ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಂ ಮಾಧವ್ ಸೇರಿ ಬಿಜೆಪಿ ನಾಯಕರೇ ಅನುಮಾನ ವ್ಯಕ್ತಪಡಿಸುತ್ತಿರುವುದರಿಂದ ಎಲ್ಲರೂ ಒಂದಾದರೆ ಬಿಜೆಪಿಯೇತರ ಮೈತ್ರಿಕೂಟ ಅಧಿಕಾರ ಹಿಡಿಯುವ ಸಾಧ್ಯತೆಯೂ ಇರುವುದರಿಂದ ಟಿಆರ್ಎಸ್-ವೈಎಸ್ಆರ್ ತಮ್ಮ ತೆಕ್ಕೆಗೆ ಸೆಳೆಯುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕಾಂಗ್ರೆಸ್ ಹೊಂದಿದೆ. ಇದೇ ಕಾರಣಕ್ಕೆ ಚಂದ್ರಶೇಖರ ರಾವ್ ಹಾಗೂ ಜಗನ್ಮೋಹನ್ರೆಡ್ಡಿ ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಹೊಂದಿರುವ ದೇವೇಗೌಡರಿಗೆ ತಿಳಿಸಿದೆ ಎಂದು ತಿಳಿದು ಬಂದಿದೆ.
ನಿಲುವು
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್
Sulya: ಪೈಪ್ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
You seem to have an Ad Blocker on.
To continue reading, please turn it off or whitelist Udayavani.