ಕೋಚಿಂಗ್ ಪಡೆಯದೇ ಎಂಟು ಸರ್ಕಾರಿ ಹುದ್ದೆ ಪಡೆದ ಸಾಧಕಿ
Team Udayavani, May 9, 2019, 12:02 PM IST
ಮಹಾಲಿಂಗಪುರ: ಸ್ಥಳೀಯ ಕೆಎಲ್ಇ ಸಂಸ್ಥೆಯ ಎಸ್ಸಿಪಿ ಕಾಲೇಜಿನ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಯಲ್ಲವ್ವಾ ಮಾಳೇದ ಯಾವುದೇ ಕೋಚಿಂಗ್ ಪಡೆಯದೇ 8 ಸರ್ಕಾರಿ ಹುದ್ದೆ ಪಡೆದಿದ್ದಾರೆ.
ತೇರದಾಳ ಪಟ್ಟಣದ ಕೂಲಿಕಾರರಾದ ಭೀಮಪ್ಪ ಮತ್ತು ಸುಭದ್ರಾ ಮಾಳೇದ ಪುತ್ರಿಯಾದ ಯಲ್ಲವ್ವಾ ಬೆಳೆದದ್ದು ಕಷ್ಟದ ಹಾದಿಯಲ್ಲಿಯೇ. ಇರಲು ಗೇಣುದ್ದ ಜಾಗವಿಲ್ಲ. ಮನೆ, ಹೊಲವಂತೂ ಇಲ್ಲವೇ ಇಲ್ಲ. ಅಜ್ಜಿಯ ಮನೆಯೇ ಇವರಿಗಾಸರೆ.
ಕಾಲೇಜಿನ ಫೀ ಪಾವತಿಸಲು ಪರದಾಟ ನಡೆಸಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದ ಯಲ್ಲವ್ವಾ ಸಮೀರವಾಡಿ ಸೋಮೈಯಾ ಶುಗರ್ ಫ್ಯಾಕ್ಟರಿ ನೀಡಿದ ವಿದ್ಯಾರ್ಥಿ ವೇತನದಿಂದ ಶಿಕ್ಷಣ ಪುನರಾರಂಭಿಸಿ ಬಿಎಸ್ಸಿ, ಎಂಎಸ್ಸಿ ಅಧ್ಯಯನ ಮಾಡಿದ್ದಾರೆ. ಸುಮಾರು ಒಂದು ವರ್ಷದವರೆಗೂ ಹಸಿವು, ನಿದ್ರೆಯೆನ್ನದೇ ಓದಿ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಯಶಸ್ವಿಯಾಗಿದ್ದಾರೆ.
ಈಗ ಏಕಕಾಲಕ್ಕೆ ನವೋದಯ ಶಾಲೆಯಲ್ಲಿ ಪ್ರಥಮ ದರ್ಜೆ ಗಣಕಯಂತ್ರ ಸಹಾಯಕರು, ಮಹಾನಗರ ಪಾಲಿಕೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರು, ಮಹಾನಗರ ಪಾಲಿಕೆಯ ಕರ ವಸೂಲಿಗಾರರು, ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಪ್ರಥಮ ದರ್ಜೆ ಗಣಕಯಂತ್ರ ಸಹಾಯಕರು, ಗ್ರೇಡ್-2 ಮುಖ್ಯಾಧಿಕಾರಿ, ಅಲ್ಪಸಂಖ್ಯಾತರ ಇಲಾಖೆಯ ವರಿಷ್ಠಾಧಿಕಾರಿ, ದತ್ತಾಂಶ ವರದಿಗಾರರು, ರೈಲ್ವೆ ಇಲಾಖೆಯ ಗ್ರೂಪ್ ‘ಡಿ’ ಹುದ್ದೆ ಸೇರಿದಂತೆ ಎಂಟು ಸರ್ಕಾರಿ ಹುದ್ದೆಗಳು ಇವರನ್ನು ಅರಸಿ ಬಂದಿವೆ. ಈ ಎಂಟು ಹುದ್ದೆಗಳಲ್ಲಿ ಯಲ್ಲವ್ವಾ ಮಾಳೇದ ಮಹಾನಗರ ಪಾಲಿಕೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕರ ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸತತ ಪ್ರಯತ್ನ, ಶ್ರದ್ಧೆಯಿಂದ ಓದಿ ಶ್ರಮಪಟ್ಟಿದ್ದರ ಫಲವಾಗಿ ಇವರ ಬಾಳಲ್ಲಿ ಬೆಳಕಿನ ಆಶಾಕಿರಣ ಮೂಡಿದೆ.
•ಯಲ್ಲವ್ವಾ ಮಾಳೇದ, 8 ಸರಕಾರಿ ನೌಕರಿ ಪಡೆದ ಸಾಧಕಿ
•ಮನೆ-ಹೊಲವಿಲ್ಲ ಅಜ್ಜಿಯ ಮನೆಯೇ ಆಸರೆ
•ಸುಭದ್ರಾ ಮಾಳೇದ, ಸಾಧಕಿಯ ತಾಯಿ
ಚಂದ್ರಶೇಖರ ಮೋರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಗಲಕೋಟೆ:ಕೋಟೆಕಲ್ಲಲ್ಲೊಂದು ಅಪೂರ್ವ ಜ್ಞಾನದೇಗುಲ-ಉಲ್ಲಾಸದ ವಾತಾವರಣ
Mudhola: ಮೆಕ್ಕೆಜೋಳಕ್ಕೂ ಕುತ್ತು; ರೈತರ ಆರ್ಥಿಕತೆಗೆ ಮಾರಕ ಹೊಡೆತ
ದೇಗುಲ ಕಟ್ಟಡಕ್ಕೆ ಭಕ್ತರ ದೇಣಿಗೆ ಮಾತ್ರ ಬಳಕೆ: ಗುಡಗುಂಟಿಮಠ
ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುವೆ: ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ
ಭೈರನಹಟ್ಟಿ: ಕಾರ್ಗಿಲ್ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.