ಸೇತುವೆ ಇಲ್ಲವೆಂದು ಊರನ್ನೇ ತೊರೆದ ಜನ!
Team Udayavani, May 9, 2019, 4:40 PM IST
ಯಲ್ಲಾಪುರ: ತಾಲೂಕಿನ ಚಂದ್ಗುಳಿ ಗ್ರಾಪಂ ವ್ಯಾಪ್ತಿಯ ನಾಗುಂದ ಭಾಗದವರು ಸರಕಾರಕ್ಕೆ ಹಿಡಿಶಾಪ ಹಾಕುತ್ತ ಕಾಲು ಸಂಕದ ಮೇಲೆ ಓಡಾಡುತ್ತಿದ್ದಾರೆ. ಇಲ್ಲಿನ ಕೆಲ ಕುಟುಂಬಗಳು ಸೇತುವೆ ಇಲ್ಲವೆಂದು ಊರನ್ನೇ ತೊರೆದಿವೆ. ಚುನಾವಣೆ ವೇಳೆ ಕೋಟಿ ವೆಚ್ಚದ ಮಾತನಾಡುವ ಸರಕಾರಕ್ಕೆ ಈ ಜನರ ಕಷ್ಟ ಇನ್ನೂ ಕಂಡಿಲ್ಲ.
ಮಳಲಗಾಂವ್ ಸಮೀಪದ ನಾಗುಂದ ಬೃಹತ್ ಹಳ್ಳ ಮಳೆಗಾದಲ್ಲಿ ಗ್ರಾಮಸ್ಥರಿಗೆ ಆಚೆ-ಈಚೆ ಹೋಗುವುದಾದರೆ ಸಾವಿನ ನೆನಪಾಗುತ್ತದೆ. ನಾಗುಂದ ಮಜರೆಯ ಆರೆಂಟು ಮನೆಗಳು ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳದಿಂದಾಗಿ ಅತಂತ್ರಸ್ಥಿತಿ ಅನುಭವಿಸಬೇಕಾಗುತ್ತದೆ. ಸಣ್ಣ ವಸ್ತುಗಳನ್ನು ತರಲು ಕನಿಷ್ಠ 5-6 ಕಿ.ಮೀ ದೂರದ ಉಪಳೇಶ್ವರಕ್ಕೆ ಬರಬೇಕು. ಮಕ್ಕಳು ಶಾಲೆಗೆ ಬರಬೇಕೆಂದರೆ ಹಳ್ಳ ಮಳೆಗಾಲದಲ್ಲಿ ಅಡ್ಡಿಯಾಗಿ ನಿಲ್ಲುತ್ತದೆ. ಅಪಾಯಕಾರಿ ಹಳ್ಳ ದಾಟಿದರೆ ಎರಡೂವರೆ ಕಿಮೀ ಕೃಮಿಸಿ ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಮಳಲಗಾಂವ್ ಶಾಲೆಗೆ ಬರಬೇಕು. ಏರಿಳಿತದ ಬೆಟ್ಟ-ಗುಡ್ಡ ಕಾಡು ಕಣಿವೆಯ ದಾರಿಯಲ್ಲಿ ಬರಬೇಕು. ಕೃಷಿಯನ್ನು ನಂಬಿಕೊಂಡು ಬಂದಿರುವ ಇಲ್ಲಿನವರ ಏಕೈಕ ಬೇಡಿಕೆ ಎಂದರೆ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡಿ ಎಂಬುದಾಗಿದೆ.
ಸೇತುವೆಯ ಸಲುವಾಗಿ ಮನವಿ ಕೊಟ್ಟು ಸಾಕಾಗಿದೆ. ಗ್ರಾಮಸ್ಥರು ಹಳ್ಳದಲ್ಲಿರುವ ಮರಕ್ಕೆ ಸಂಕಕಟ್ಟಿ ಹಳ್ಳದಾಟಲು ತಾತ್ಕಾಲಿಕ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ. ಶಿಥಿಲಗೊಂಡ ಕಾಲುಸಂಕ ಮೇಲೆ ಮಳೆಗಾಲದ ಸಂದರ್ಭದಲ್ಲಿ ತುಂಬಿ ಹರಿಯುವ ಹಳ್ಳವನ್ನು ಜೀವ ಕೈಯಲ್ಲಿ ಹಿಡಿದು ದಾಟಬೇಕಾದ ಸ್ಥಿತಿ ಇದೆ. ಶಾಲೆಯ ಮಕ್ಕಳು ಇಂತಹ ಸ್ಥಿತಿಯಲ್ಲಿ ಶಾಲೆಗೆ ಹೋಗುವುದು ದುಸ್ತರವಾಗಿದೆ. ಕಾರಣ ಸೇತುವೆ ನಿರ್ಮಿಸಿಕೊಡಬೇಕಾಗಿದೆ. ಕೆಲವರು ಈ ಹಳ್ಳದ ಕಾಲುಸಂಕದ ಹಿನ್ನೆಲೆಯಲ್ಲಿ ಜಮೀನನ್ನೇ ಬಿಟ್ಟು ಬಂದಿದ್ದಾರೆ. ಕೆಲವೇ ಜನರಿರುವ ಹಳ್ಳಿಯಾದ್ದರಿಂದ ಇವರ ಕೂಗು ಈವರೆಗೆ ಯಾರಿಗೂ ಕೇಳಿಸಿಲ್ಲ.
ಸಾಮಾಜಿಕ ಕಾರ್ಯಕರ್ತರಾದ ಎನ್.ಎನ್. ಹೆಬ್ಟಾರ ಕಳಚೆ, ಮಹಾಬಲೇಶ್ವರ ಭಟ್ಟ, ಗ್ರಾ.ಪಂ. ಸದಸ್ಯ ಎಸ್.ಕೆ. ಭಾಗ್ವತ್, ಗ್ರಾಮಸ್ಥರಾದ ನಾರಾಯಣ ಗೌಡ, ಮಂಜುನಾಥ ಭಂಡಾರಿ, ರಾಜು ಭಂಡಾರಿ ಮುಂತಾದವರು ಸ್ಥಳಿಯರಿಗೆ, ಶಾಲಾ ಮಕ್ಕಳ ಓಡಾಟದ ಅನುಕೂಲತೆಯ ಸಲುವಾಗಿ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ದ್ವಿಚಕ್ರ ವಾಹನ: ಇಬ್ಬರಿಗೆ ಗಾಯ
Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್ ಮಲ್ಪೆ ತಂಡದ ಕಾರ್ಯಾಚರಣೆ
Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ
Roopali Naik: ರಾಷ್ಟ್ರದ ಸಮಗ್ರ ಅಭಿವೃದ್ಧಿಯೇ ಬಿಜೆಪಿಯ ಗುರಿ
ಶಿರೂರುಗುಡ್ಡ ಕುಸಿತ ಸ್ಥಳ ತಲುಪಿದ ಡ್ರೆಜ್ಜಿಂಗ್ ಯಂತ್ರ-3 ಕುಟುಂಬಕ್ಕೆ ಪರಿಹಾರ ಸಿಕ್ಕಿಲ್ಲ!
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.