ಮಣ್ಣು ಒಯ್ಯಲು ಅಗೆದ ತಗ್ಗಲ್ಲಿ: ನೀರು ಶೇಖರಣೆ

ಈಜು ಕಲಿಯಲು ಯುವಕರ ಆಗಮನ

Team Udayavani, May 9, 2019, 5:33 PM IST

9-May-34

ಶಹಾಪುರ: ಬೆನಕನಹಳ್ಳಿ ಗ್ರಾಮ ಸಮೀಪದ ಜಮೀನೊಂದರಲ್ಲಿ ಮಣ್ಣು ಒಯ್ಯಲು ತೋಡಿದ್ದ ತೆಗ್ಗಿನಲ್ಲಿ ನೀರಿನ ಸೆಲೆ ಕಂಡು ಬಂದ ದೃಶ್ಯ.

ಶಹಾಪುರ: ಕೆಂಪು ಮಣ್ಣು ಒಯ್ಯಲು ಜೆಸಿಬಿ ಮೂಲಕ ಭೂಮಿ ಅಗೆಯುವಾಗ 50 ಅಡಿ ಅಗೆದ ಮೇಲೆ ಆಳದಲ್ಲಿ ನೀರಿನ ಸೆಲೆ ಉಂಟಾಗಿದ್ದು, ಅಂದಾಜು ಒಂದು ಎಕರೆದಷ್ಟು ಭೂಮಿಯಲ್ಲಿ 25ರಿಂದ 30 ಅಡಿ ನೀರು ತುಂಬಿಕೊಂಡಿದ್ದು, ಯುವಕರ ಮೈ ಮನ ತಣಿಸುವ ಪ್ರಕೃತಿ ನಿರ್ಮಿತ ಈಜುಕೊಳದಂತಾಗಿದೆ.

ತಾಲೂಕಿನ ಬೆನಕಹಳ್ಳಿ ಗ್ರಾಮ ಸಮೀಪ ಜಮೀನೊಂದರಲ್ಲಿ ಮಣ್ಣು ಅಗೆಯಲಾಗಿದೆ. ಪ್ರಸ್ತುತ ಇಲ್ಲಿಗೆ ನೂರಾರು ಯುವಕರು ಈಜು ಕಲಿಯಲು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

ಈ ಬಾರಿ ಮಳೆ ಅಭಾವದಿಂದ ಸಾಕಷ್ಟು ಹಳ್ಳ, ಕೊಳ್ಳ ತೆರೆದ ಬಾವಿಗಳಲ್ಲಿ ನೀರು ಬತ್ತಿದ್ದು, ಸಂಕಷ್ಟ ಎದುರಿಸುವ ಸಂದರ್ಭದಲ್ಲಿ ಭೂಮಿಯೊಂದರಲ್ಲಿ ಅಂತರ್ಜಲ ಪತ್ತೆಯಾಗಿ ನೀರು ತುಂಬಿಕೊಂಡಿರುವುದು ಜನರಲ್ಲಿ ಉತ್ಸಾಹ ಮೂಡಿಸಿದೆ.

ಬರದಿಂದ ಕಂಗಾಲಾದ ಜನಕ್ಕೆ ಕುಡಿಯಲು ನೀರು ದೊರೆಯದಂತ ಸ್ಥಿತಿಯಲ್ಲಿ ಯುವಕರಿಗೆ ಈಜಾಡಲು ಇಷ್ಟೊಂದು ದೊಡ್ಡ ಮಟ್ಟದಲ್ಲಿ ನೀರಿನ ಸೆಲೆ ಕಂಡು ಬಂದಿದ್ದು, ನಿಜಕ್ಕೂ ಆಶ್ಚರ್ಯವಾಗಿದೆ ಎನ್ನುತ್ತಾರೆ ಇಲ್ಲಿಗೆ ಆಗಮಿಸಿದ ಯುವಕರು.

ನಗರ ಸಮೀಪದ ಬೆನಕನಹಳ್ಳಿ ಗ್ರಾಮದ ಮೇಲ್ಭಾಗ ರೈಲು ನಿಲ್ದಾಣ ಕಾಮಗಾರಿ ಮತ್ತು ಈ ಮೂಲಕ ಹಾದು ಹೋಗಿರುವ ರೈಲು ಹಳಿ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಕಾಮಗಾರಿಗಾಗಿ ಸಾಕಷ್ಟು ಕೆಂಪು ಮಣ್ಣು ಅಗತ್ಯವಿರುವ ಕಾರಣ ರೈಲು ಹಳಿ ನಿರ್ಮಾಣದ ಗುತ್ತಿಗೆದಾರರು ಸಮೀಪದ ಕೆಂಪು ಮಣ್ಣು ಹೊಂದಿದ ಜಮೀನುಗಳನ್ನು ದುಡ್ಡು ಕೊಟ್ಟು ಗುತ್ತಿಗೆ ಪಡೆದು ಆ ಮಣ್ಣು ತೋಡಿ ಅದನ್ನು ತೆಗೆದುಕೊಂಡು ಬಂದು ಕಾಮಗಾರಿಗೆ ಬಳಕೆ ಮಾಡುತ್ತಿದ್ದಾರೆ.

ಬೆನಕನಹಳ್ಳಿ ಸಮೀಪದ ಓರ್ವ ರೈತನ ಜಮೀನು ಪಡೆದಿದ್ದ, ರೈಲು ಹಳಿ ನಿರ್ಮಾಣ ಗುತ್ತಿಗೆದಾರರು, ಇಲ್ಲಿ ನಿಯಮಕ್ಕೂ ಮೀರಿ ಹೆಚ್ಚು ಆಳ ತೋಡಿದ್ದು, ನೀರಿನ ಸೆಲೆ ಬುಗ್ಗೆ ಮೇಲೆದ್ದಿವೆ. ಇದರಿಂದಾಗಿ ತೋಡಿದ್ದ ಅಷ್ಟು ಆಳ ನೀರಿನಿಂದ ಶೇಖರಣೆ ಆಗುತ್ತಿದೆ.

ರೈಲು ಹಳಿ ಕಾಮಗಾರಿಗೆ ಇಲ್ಲಿಂದ ಮಣ್ಣು ಒಯ್ಯುತ್ತಿದ್ದರು. ಸಾಕಷ್ಟು ಆಳ ತೋಡಿದ್ದು, ನೀರಿನ ಸೆಲೆ ಎದ್ದಿವೆ. ಅದರಿಂದ ಇಡಿ ತಗ್ಗು ಪ್ರದೇಶ ನೀರಿನಿಂದ ತುಂಬುತ್ತಿದೆ. ನೀರು ಚೆನ್ನಾಗಿವೆ. ಸದ್ಯ ಬಿಸಿಲ ಬೇಗೆ ತಣಿಸಿಕೊಳ್ಳಲು ಯುವ ಸಮೂಹಕ್ಕೆ ಸಹಕಾರವಾಗಿದೆ.
ಶರಣು ಕಟ್ಟಿಮನಿ, ಸ್ಥಳೀಯ

ಟಾಪ್ ನ್ಯೂಸ್

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-mudhola

ತಿಮ್ಮಾಪುರ ಮಾತಿಗೆ ಯತ್ನಾಳ‌ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

DarshanBellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2-mudhola

ತಿಮ್ಮಾಪುರ ಮಾತಿಗೆ ಯತ್ನಾಳ‌ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.