ಹೊಗರ್ತಿಯಿಂದ ಗುಳೆ ಹೊಂಟಾರ ಜನ !


Team Udayavani, May 10, 2019, 1:23 PM IST

belegavi-tdy–2..

ಬೈಲಹೊಂಗಲ: ಹೊಗರ್ತಿಯಲ್ಲಿ ನೀರಿಲ್ಲದೆ ಗ್ರಾಮಸ್ಥರ ಗೋಳು

ಬೈಲಹೊಂಗಲ: ತಾಲೂಕಿನ ಹೊಗರ್ತಿ ಗ್ರಾಮದಲ್ಲಿ ನೀರಿಲ್ಲದೇ ಜನ ಊರು ಬಿಟ್ಟು ಗುಳೆ ಹೋಗುವ ಸ್ಥಿತಿ ಉದ್ಭವಿಸಿದೆ.

ಕುಡಿಯಲು ಹೊರವಲಯದಲ್ಲಿರುವ ಹೊಲದ ಪಂಪ್‌ಸೆಟ್ ನೀರೇ ಗತಿ. ಮದುವೆ ಕಾರ್ಯಕ್ರಮಗಳಿಗೆ ನೀರಿಲ್ಲದೇ ಪರದಾಟ. ದಿನಂಪ್ರತಿ ನೀರಿನ ಪಡಿಪಾಟಲಿನಿಂದ ಒದ್ದಾಡಿ ಜನ ಸೋತು ಹೋಗಿದ್ದಾರೆ. ಸುತಗಟ್ಟಿ ಗ್ರಾಪಂ ವ್ಯಾಪ್ತಿಯ ಹೋಗರ್ತಿ ಗ್ರಾಮವು ಸುಮಾರು 1000 ಜನಸಂಖ್ಯೆ ಹೊಂದಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಹಳೆಯ ಸಾರ್ವಜನಿಕ ಬಾವಿ ಮುಚ್ಚಿದೆ. ನೀರು ತರಲು ಗ್ರಾಮದಿಂದ 2 ಕಿಮೀ ದೂರದ ಕಲ್ಲಪ್ಪಜ್ಜನ ಗುಡಿಯ ಬಳಿಯ ರೈತರ ಹೊಲಗಳಿಂದ ನೀರು ತರುವ ಪರಿಸ್ಥಿತಿ ಇದೆ. ಮನೆಯಲ್ಲಿ ದ್ವಿಚಕ್ರ ವಾಹನ ಇದ್ದವರು ಅದರ ಮೂಲಕ ನೀರು ತಂದರೆ. ವಾಹನ ಇಲ್ಲದವರು 2 ಕಿ.ಮೀ ನಡೆದುಕೊಂಡು ಹೋಗಿಯೇ ನೀರು ತುಂಬಿ ತರುವ ಪರಿಸ್ಥಿತಿ ಇದೆ ಎನ್ನುತ್ತಾರೆ ಗ್ರಾಮಸ್ಥರು.

ನಮ್ಮ ಕುಟುಂಬಕ್ಕೆ ನೀರು ಸಿಗುತ್ತಿಲ್ಲ. ಹೀಗಾಗಿ ಬೇಸಿಗೆಯಲ್ಲಿ ಕುಟುಂಬ ಸಮೇತ ದೂರದ ಗೋವಾಕ್ಕೆ ದುಡಿಯಲು ಹೋಗುತ್ತೇವೆ. ಊರಲ್ಲಿ ನೀರು ಸಿಗುವುದಿಲ್ಲ ಎಂದು ತಿಳಿದ ಬೇರೆ ಊರಿನ ಜನ ಇಲ್ಲಿಗೆ ಹೆಣ್ಣು ಕೊಟ್ಟು ಮದುವೆ ಮಾಡಲು ಹಿಂದೇಟು ಹಾಕುತ್ತಾರೆ ಎಂದು ಹೊಗರ್ತಿ ಗ್ರಾಮದ ಬಸಪ್ಪ ನಿಂಗಪ್ಪ ನಂದೆಪ್ಪನ್ನವರ ದೂರುತ್ತಾರೆ. ಮನೆಯಲ್ಲಿ ಮಗಳು ಬಾಣಂತಿ ಇರುವುದರಿಂದ ನೀರು ತರಲು ದೂರದ ಹೊಲಗಳಿಗೆ ಅಲೆಯಬೇಕಾಗಿದೆ ಎಂದು ಅದೇ ಗ್ರಾಮದ ಮಲ್ಲವ್ವ ಕಂಬಾರ ಸಮಸ್ಯೆ ತೋಡಿಕೊಳ್ಳುತ್ತಾರೆ.

ಸ್ಥಳೀಯ ಮುಖಂಡರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಇಲ್ಲದ ಆಶ್ವಾಸನೆ ಕೊಟ್ಟು ಹೋದವರು ಮರಳಿ ಬಂದಿಲ್ಲ. ನೀರಿನ ಸಮಸ್ಯೆ ಪರಿಹರಿಸುತ್ತೇನೆಂದು ಹೇಳಿ ಹೋದವರು ಪತ್ತೆ ಇಲ್ಲ. ಇಂಥವರನ್ನು ಆಯ್ಕೆ ಮಾಡುವುದು ಜನ ಯಾವ ಕಾರಣಕ್ಕೆ ಎಂದು ಗ್ರಾಮದ ಮಲ್ಲವ್ವ ಕಲ್ಲನಾಯ್ಕ, ಸತ್ತೆವ್ವಾ ಮರೆಪ್ಪನ್ನವರ ದೂರುತ್ತಾರೆ.

ಹೊಗರ್ತಿಯಲ್ಲಿ ಬೊರವೆಲ್ಗಳಿಲ್ಲ. ಇಲ್ಲಿ ಇದ್ದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ. ಎರಡು ದಿನಕ್ಕೊಮ್ಮೆ ತಾಲೂಕಾ ಆಡಳಿತ ಟ್ಯಾಂಕರ್‌ ಮೂಲಕ ನಾಮಕಾವಸ್ಥೆ ನೀರು ತಂದು ಬಿಟ್ಟರೂ ಯಾರಿಗೂ ಸಾಕಾಗುವುದಿಲ್ಲ. ಇದಕ್ಕಾಗಿ ಸುತಗಟ್ಟಿ ಗ್ರಾಪಂ ಅನುದಾನಲ್ಲಿ ಪ್ರತಿ ತಿಂಗಳು 45 ಸಾವಿರ ರೂ. ವ್ಯಯಿಸಬೇಕೆಂದು ತಾಲೂಕಾ ಆಡಳಿತ ಹೇಳಿರುವುದರಿಂದ ಮುಂದಿನ ದಿನಗಳಲ್ಲಿ ಇಷ್ಟು ದೊಡ್ಡ ಮೊತ್ತದ ಹಣ ತುಂಬಲು ಗ್ರಾಪಂನಿಂದ ಸಾಧ್ಯವಾಗದೇ ಟ್ಯಾಂಕರ್‌ ನೀರಿನ ವ್ಯವಸ್ಥೆ ನಿಂತು ಹೋಗುವ ಸಂಭವವಿದೆ. 2004ರಲ್ಲಿ ನಿರ್ಮಿಸಲಾದ ಹಣಮನಟ್ಟಿ ಕ್ರಾಸ್‌ ಬಳಿಯ ಸುತಗಟ್ಟಿ ಗ್ರಾಪಂನ 50 ಸಾವಿರ ಲೀ. ಸಂಗ್ರಹಣೆಯ ನೀರಿನ ಘಟಕಕ್ಕೆ ಸಾಕಾಗುವಷ್ಟು ನೀರಿನ ಸಂಗ್ರಹ ಇಲ್ಲದಿರುವುದು ಸಮಸ್ಯೆಯಾಗಿದೆ ಎಂದು ದೂರಿದರು.

ಸುತಗಟ್ಟಿ ಗ್ರಾಪಂಗೆ ನೀರಿನ ಮೂಲಗಳಿಲ್ಲದಿರುವುದರಿಂದ ಹೋಗರ್ತಿ ಬಳಿಯ ನೀರಿನ ಘಟಕಕ್ಕೆ ಕೊಳ್ಳಾನಟ್ಟಿ ಗ್ರಾಮದಲ್ಲಿ 3 ಬೋರ್‌ವೆಲ್ ಕೊರೆಸಿ ಪೈಪ್‌ಲೈನ್‌ ಮೂಲಕ ಹೊಗರ್ತಿಗೆ ನೀರು ಬೀಡಲಾಗುತ್ತಿತ್ತು. ಆದರೆ ಕೊಳ್ಳಾನಟ್ಟಿ ಗ್ರಾಮವು ದೇಶನೂರ ಗ್ರಾಪಂ ವ್ಯಾಪ್ತಿಗೆ ಸೇರಿರುವುದರಿಂದ ಕೊಳ್ಳಾನಟ್ಟಿ ಗ್ರಾಮದಲ್ಲಿಯ ಬೊರವೆಲ್ಗಳಿಂದ ಹೋಗರ್ತಿಗೆ ಹೋಗುತ್ತಿದ್ದ ನೀರಿನ ಸಂಪರ್ಕವನ್ನು ಇತ್ತಿಚೆಗೆ ಸ್ಥಗಿತಗೊಳಿಸಲಾಗಿದೆ. ಇದು ನೀರಿನ ಸಮಸ್ಯೆ ಇನ್ನಷ್ಟು ಹೆಚ್ಚಿಸಿದೆ ಎನ್ನುತ್ತಾರೆ ಗ್ರಾಮಸ್ಥರು. ಕೂಡಲೇ ಹೋಗರ್ತಿಗೆ ಸುತಗಟ್ಟಿ ಗ್ರಾಪಂ, ತಾಲೂಕಾ ಆಡಳಿತದಿಂದ ವತಿಯಿಂದ ಹೆಚ್ಚಿನ ನೀರಿನ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹೊಗರ್ತಿಯಿಂದ ಗುಳೆ ಹೊಂಟಾರ ಜನ !

• ಹೆಚ್ಚಿದೆ ನೀರಿನ ಸಮಸ್ಯೆ

• 2ಕಿಮೀ ಅಲೆದಾಟ

• ಹೇಳ ಹೆಸರಿಲ್ಲದೇ ನಾಪತ್ತೆಯಾದ ನಾಯಕರು

•ಸಿ.ವೈ.ಮೆಣಶಿನಕಾಯಿ

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳಗಾವಿ: 12 ತಾಸು ಈಜಿ ತಾಯಿ-ಮಗ ದಾಖಲೆ

ಬೆಳಗಾವಿ: 12 ತಾಸು ಈಜಿ ತಾಯಿ-ಮಗ ದಾಖಲೆ

Jaya-Swamiji

Reservation: ಬೆಳಗಾವಿಯಲ್ಲಿ ಸೆ.22ಕ್ಕೆ ಲಿಂಗಾಯತ ಪಂಚಮಸಾಲಿ ವಕೀಲರ ಬೃಹತ್ ಸಮಾವೇಶ

Belagavi: ಸಾಲಬಾಧೆಯಿಂದ ಬೇಸತ್ತು ನೇಕಾರ ಆತ್ಮಹತ್ಯೆ…

Belagavi: ಸಾಲಬಾಧೆಯಿಂದ ಬೇಸತ್ತು ನೇಕಾರ ಆತ್ಮಹತ್ಯೆ…

Belagavi: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿಎ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ

Belagavi: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬಿಎ ಸೆಮಿಸ್ಟರ್ ಪರೀಕ್ಷೆ ಮುಂದೂಡಿಕೆ

Coat ಧರಿಸಿ ಕೋರ್ಟ್ ಗೆ ಆಗಮಿಸಿದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ

Missing Case; ಕೋಟ್ ಧರಿಸಿ ಕೋರ್ಟ್ ಗೆ ಆಗಮಿಸಿದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.