ಕಾರವಾರದಲ್ಲಿ ನೀರಿಗೆ ಹಾಹಾಕಾರ
•ಪರಿಸ್ಥಿತಿ ನಿಭಾಯಿಸಿದ ನಗರಸಭೆ•ಗಂಗಾವಳಿ ನೀರು ನಗರದಲ್ಲಿ ಪೂರೈಕೆಗೆ ಹಲವು ಅಡ್ಡಿ
Team Udayavani, May 10, 2019, 4:26 PM IST
ಕಾರವಾರ: ಜನ ಟ್ಯಾಂಕರ್ ಮೂಲಕ ನೀರು ಪಡೆಯುತ್ತಿರುವುದು.
ಕಾರವಾರ: ನಗರದಲ್ಲಿ ಮೊಟ್ಟ ಮೊದಲ ಬಾರಿಗೆ ಕುಡಿಯುವ ನೀರಿಗಾಗಿ ಜನ ಪರಿತಪಿದ್ದು ಗುರುವಾರ ಕಂಡುಬಂದಿತು. ಎರಡು ದಶಕಗಳಲ್ಲಿ ಮೊದಲ ಬಾರಿ ತೀವ್ರತರ ಕುಡಿಯುವ ನೀರಿನ ಸಮಸ್ಯೆ ನಗರದ ನಾಗರಿಕರನ್ನು ಬಾಧಿಸಿತು.
ಬಿಸಿಲಿನ ತಾಪ ಅತೀಯಾಗಿದ್ದು, ನಗರದ ಬೀದಿಗಳಲ್ಲಿ ಜನ ಸಂಚಾರ ಸಹ ವಿರಳವಾಗಿದೆ. ಕುಡಿಯುವ ನೀರು ಪೂರೈಕೆಯಲ್ಲಿ ನಗರಸಭೆ ಅಧಿಕಾರಿ ಸಿಬ್ಬಂದಿ ಮುಂದಾದದ್ದು ಕಂಡು ಬರುತ್ತಿದೆ.
ನಗರಕ್ಕೆ ಪೂರೈಕೆಯಾಗುತ್ತಿದ್ದ ಗಂಗಾವಳಿ ನದಿ ನೀರು ಡೆಡ್ ಸ್ಟೋರೆಜ್ ತಲುಪಿದ ಕಾರಣ ನಗರದಲ್ಲಿನ ಜಲಮೂಲದ ಬಾವಿಗಳನ್ನು ಶುದ್ಧೀಕರಿಸಿ, ಟ್ಯಾಂಕರ್ಗಳಲ್ಲಿ ನಗರದ ವಿವಿಧ ವಾರ್ಡ್ಗಳಿಗೆ ನೀರು ಪೂರೈಕೆ ಮಾಡುವಲ್ಲಿ ನಗರಸಭೆ ನಿರತವಾಗಿದೆ. ಗುರುವಾರ ಇಡೀ ಹಗಲು ವಿದ್ಯುತ್ ಕೈಕೊಟ್ಟ ಪರಿಣಾಮ ನಗರದ ಬೋರ್ವೆಲ್ ಮತ್ತು ಬಾವಿಗಳಿಂದ ಸಾರ್ವಜನಿಕರು ಅವರವರ ಮನೆಗಳ ನೀರಿನ ಟಾಕಿಗಳಿಗೆ ನೀರು ಸಂಗ್ರಹಿಸಿ ಇಟ್ಟುಕೊಳ್ಳಲಾಗದೇ ತೀವ್ರ ತೊಂದರೆ ಅನುಭವಿಸಿದರು. ಮೂರು ದಿನಗಳಿಂದ ಪೂರ್ಣ ಪ್ರಮಾಣದಲ್ಲಿ ಗಂಗಾವಳಿ ನೀರು ಪೂರೈಕೆ ಸಹ ನಿಂತಿದ್ದು, ಜನರು ನೀರಿಗಾಗಿ ಚಡಪಡಿಸಿದರು.
ಅಂಗಡಿಗಳಲ್ಲಿ ಮಿನರಲ್ ವಾಟರ್ ಲಭ್ಯತೆ ಸಹ ಕೊರತೆ ಉಂಟಾಗಿದೆ. ಹಾಗಾಗಿ ಜನರು ನಗರಸಭೆ ಟ್ಯಾಂಕರ್ಗಳಿಗೆ ಮುಗಿಬಿದ್ದು ನೀರು ಸಂಗ್ರಹಿಸಿಕೊಂಡರು.
ಏಳು ಟ್ಯಾಂಕರ್ಗಳಿಂದ ನೀರು ಪೂರೈಕೆ: ನಗರದಲ್ಲಿ 31 ವಾರ್ಡ್ಗಳಿದ್ದು, ವಿವಿಧ ವಾರ್ಡ್ಗಳಿಗೆ ನೀರು ಪೂರೈಸಲಾಯಿತು. 7 ಟ್ಯಾಂಕರ್ಗಳು ದಿನವಿಡಿ ನೀರು ಪೂರೈಸಿದರು. ನ್ಯೂ ಕೆಎಚ್ಬಿ ಕಾಲೋನಿ, ಗಾಂಧಿನಗರ, ಸೀತಾ ನಗರ, ವಾರ್ಡ್ 1 ರಿಂದ 4ನೇ ವಾರ್ಡ್ಗಳಲ್ಲಿ ಸೇರಿದಂತೆ ಹಲವೆಡೆ ನೀರು ಪೂರೈಸಲಾಗುತ್ತಿದೆ. ನೀರಿನ ಬೇಡಿಕೆ ಬಂದ ವಾರ್ಡ್ಗೆ ತಕ್ಷಣ ನೀರಿನ ಟ್ಯಾಂಕರ್ ಕಳಿಸುವ ವ್ಯವಸ್ಥೆಯನ್ನು ಪೌರಾಯುಕ್ತರು ಮಾಡಿದ್ದು, ಸಾರ್ವಜನಿಕರ ಶ್ಲಾಘನೆಗೆ ಒಳಗಾಗಿದೆ. 7 ಟ್ಯಾಂಕರ್ಗಳಲ್ಲಿ ದಿನವೊಂದಕ್ಕೆ 1.5 ಲಕ್ಷ ಲೀಟರ್ ನೀರು ಪೂರೈಸಲಾಗುತ್ತಿದೆ. ನೀರನ್ನು ಕಾಯಿಸಿ ಕುಡಿಯಬೇಕೆಂದು ನಗರಸಭೆ ಸೂಚಿಸಿದೆ. ಅಲ್ಲದೇ ನೌಕಾನೆಲೆ ಮತ್ತು ಬೈತಖೋಲ ಜನರು ಹಾಗೂ ಕೆಲ ಗ್ರಾಪಂಗಳು ನಗರಸಭೆಗೆ ದೂರವಾಣಿ ಕರೆ ಮಾಡಿ ನೀರು ಪೂರೈಸುವಂತೆ ವಿನಂತಿಸಿವೆ. ಕೆಲ ಗ್ರಾ.ಪಂಗಳಿಂದ ನೀರು ಕೊಡಿ, ಹಣ ಬೇಕಾದರೆ ಕೊಡುತ್ತೇವೆ ಎಂಬ ಬೇಡಿಕೆ ಬಂದಿದೆ. ಇನ್ನೂ 50 ಸಾವಿರ ಲೀಟರ್ ನೀರಿನ ಬೇಡಿಕೆ ದಿನವೊಂದಕ್ಕೆ ಬರುತ್ತಿದೆ. 2 ಲಕ್ಷ ಲೀಟರ್ ದಿನವೊಂದಕ್ಕೆ ನೀಡಲು ಸಾಧ್ಯವಿದೆ. ಗಾಂಧಿನಗರ, ಕಾರವಾರ ನಗರಸಭೆಯ ಆವರಣದ ಬಾವಿಯನ್ನು ನೀರು ಪೂರೈಸಲು ಬಳಸಲಾಗುತ್ತಿದೆ. ದೇವಭಾಗದಲ್ಲಿನ ಬಾವಿಯ ನೀರನ್ನು ಸಹ ಟ್ಯಾಂಕರ್ ಒಂದಕ್ಕೆ 150 ರೂ. ನೀಡಿ ಪಡೆಯಲಾಗುತ್ತಿದೆ. 7 ಟ್ಯಾಂಕರ್ಗಳಲ್ಲಿ ಮೂರು ವಾಹನ ಬಾಡಿಗೆ ಪಡೆದಿದ್ದರೆ, 4 ವಾಹನ ನಗರಸಭೆಗೆ ಸೇರಿದವುಗಳಾಗಿವೆ ಎಂದು ಪೌರಾಯುಕ್ತ ಎಸ್. ಯೋಗೇಶ್ವರ ವಿವರಿಸಿದ್ದಾರೆ.
ಗಂಗಾವಳಿಯಲ್ಲಿ ನೀರಿನ ಸ್ಟೊರೇಜ್ ಸ್ವಲ್ಪ ಮಟ್ಟಿಗೆ ಇದೆ. 5 ಲಕ್ಷ ಲೀಟರ್ ನೀರನ್ನು ಪೂರೈಸಲಾಗುತ್ತಿದೆ ಎಂದು ನೀರು ಸರಬರಾಜು ಇಲಾಖೆ ಹೇಳುತ್ತಿದೆ. ಪೈಪ್ಲೈನ್ ದೋಷದಿಂದ 5 ಲಕ್ಷ ಲೀಟರ್ ನೀರು ಎಲ್ಲಿ ಬಳಕೆಯಾಗುತ್ತಿದೆ, ಎಲ್ಲಿ ಸೋರಿಕೆಯಾಗುತ್ತಿದೆ ಎಂಬ ಲೆಕ್ಕ ಸಿಗುತ್ತಿಲ್ಲ ಎಂದು ನಗರಸಭೆಯ ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾಗಿ ಕುಡಿಯುವ ಶುದ್ಧ ನೀರಿಗೆ ಖಾಸಗಿಯ ಮಿನರಲ್ ವಾಟರ್ ಅವಲಂಬಿಸುವಂತಾಗಿದೆ. 20 ದಿನಗಳನ್ನು ಹೇಗೋ ನಿಭಾಯಿಸಬೇಕಿದೆ. ಎರಡು ದಶಕಗಳಲ್ಲಿ ಕಾರವಾರ ನಗರ ಮೊಟ್ಟ ಮೊದಲ ಬಾರಿಗೆ ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವಂತಾಗಿದೆ.
ಕೋಡಿಬಾಗ, ಮಾಜಾಳಿಯಲ್ಲಿ ಜಲಮೂಲ ಹುಡುಕಾಡಲಾಗಿದೆ. ನಗರದಲ್ಲಿ ಭರಪೂರ ನೀರು ಇರುವ ಬಾವಿಗಳನ್ನು ನಗರಸಭೆ ಶುದ್ಧೀಕರಿಸಲು ಮುಂದಾಗಿದೆ. ಅಲ್ಲದೇ ಮೂಡಗೇರಿ ಅರ್ಥಲಾವ ಕೆರೆಯಲ್ಲಿ ಸ್ವಲ್ಪ ಜಲಮೂಲವಿದ್ದು, ಅಲ್ಲಿಂದ ನೀರು ತರಲು ನೂರಾರು ಮೀಟರ್ ಉದ್ದಕ್ಕೆ ಪೈಪ್ ಲೈನ್ ಹಾಕಬೇಕು ಎಂಬ ಕಾರಣದಿಂದ ಯೋಜನೆ ಕೈ ಬಿಡಲಾಗಿದೆ. ಗೊಟೆಗಾಳಿಯಲ್ಲಿನ ಕೆರೆಯನ್ನು ಸಹ ನೀರಿನ ಮೂಲಕ್ಕಾಗಿ ಹುಡುಕಲಾಗಿದೆ. ಕಾರವಾರ ಸುತ್ತಮುತ್ತ 16 ಕಿ.ಮೀ. ದೂರದಲ್ಲಿ ನೀರಿನ ಮೂಲಗಳು ಸಿಗುತ್ತಿಲ್ಲ. ಹಾಗಾಗಿ ಜಲಮೂಲದ ಬಾವಿಗಳಿಗೆ ಈಗ ಬೇಡಿಕೆ ಬಂದಿದೆ. ಖಾಸಗಿಯವರ ಬಾವಿಗಳಲ್ಲಿ ನೀರಿದ್ದರೆ ಅವುಗಳನ್ನು ಸಹ ಪಡೆಯಲು ನಗರಸಭೆ ಚಿಂತಿಸಿದೆ. ಯಾರಾದರೂ ನೀರು ಬೇಕೆಂದು ಕರೆ ಮಾಡಿದ ತಕ್ಷಣಕ್ಕೆ ನೀರು ಪೂರೈಸಲು ನಗರಸಭೆ ಸಜ್ಜಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಸರಕು ತುಂಬಿದ ಲಾರಿ ಪಲ್ಟಿಯಾಗಿ ಸಂಚಾರ ಸಂಪೂರ್ಣ ಸ್ಥಗಿತ
Dandeli: ಗ್ರಾಹಕರ ಸೋಗಿನಲ್ಲಿ ಬಂದು ಇಬ್ಬರು ಮಹಿಳೆಯರಿಂದ ಕಳ್ಳತನ: ವಿಡಿಯೋ ವೈರಲ್
Vaccine: ಇನ್ನೆರಡು ವರ್ಷದೊಳಗೆ ಕೆಎಫ್ಡಿ ಲಸಿಕೆ ಬಳಕೆಗೆ ಲಭ್ಯ: ಆರೋಗ್ಯ ಸಚಿವ ದಿನೇಶ್
Sirsi: ಹಿರಿಯ ಯಕ್ಷಗಾನ ಗುರು, ಭಾಗವತ ಕೆ.ಪಿ. ಹೆಗಡೆಗೆ ವಾರ್ಷಿಕ ಸಿರಿಕಲಾ ಪ್ರಶಸ್ತಿ
Sirsi ಜಿಲ್ಲೆ ಹೋರಾಟ ಮತ್ತೆ ಮುನ್ನಲೆಗೆ: ಅನಂತಮೂರ್ತಿ ನೇತೃತ್ವ
MUST WATCH
ಹೊಸ ಸೇರ್ಪಡೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Recommendation: ನ್ಯಾ. ಸಂಜೀವ್ ಖನ್ನಾ ಸುಪ್ರೀಂಕೋರ್ಟ್ ಮುಂದಿನ ಮುಖ್ಯ ನ್ಯಾಯಮೂರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.