ಮುಂಬಯಿ-ದಿಲ್ಲಿ ನಡುವೆ 2ನೇ ವಂದೇ ಭಾರತ್‌?

ದೇಶದ 2ನೇ ಸೆಮಿ ಹೈ ಸ್ಪೀಡ್‌ ರೈಲು

Team Udayavani, May 10, 2019, 4:25 PM IST

1-bbb

ಮುಂಬಯಿ: ಸ್ವದೇಶಿ ನಿರ್ಮಿತ ಸೆಮಿ ಹೈ ಸ್ಪೀಡ್‌ ರೈಲು ವಂದೇ ಭಾರತ್‌ (ಟ್ರೈನ್‌ -18) ಪ್ರಸಕ್ತ ತಿಂಗಳ ಅಂತ್ಯದ ವೇಳೆಗೆ ಚೆನ್ನೈ ಇಂಟೆಗ್ರಲ್‌ ಕೋಚ್‌ ಫ್ಯಾಕ್ಟರಿ (ಐಸಿಎಫ್‌)ಯಿಂದ ಹೊರಬರಲಿದೆ.

ದೇಶದ 2ನೇ ಸೆಮಿ ಹೈ ಸ್ಪೀಡ್‌ ರೈಲು ಆಗಿರುವ ಇದು ದಿಲ್ಲಿ ಮತ್ತು ಮುಂಬಯಿ ನಡುವೆ ಓಡುವ ನಿರೀಕ್ಷೆಯಿದೆ. ವಂದೇ ಭಾರತ್‌ ಅನ್ನು ಮೂಲತಃ ಟ್ರೈನ್‌ 18 ಹೆಸರಿನಿಂದ ವಿನ್ಯಾಸಗೊಳಿಸಲಾಗಿತ್ತು. 2018ರ ಕಾರಣದಿಂದಾಗಿ ಅದಕ್ಕೆ ಈ ಹೆಸರು ಬಂದಿತ್ತು. ಇದಾದ ಬಳಿಕ ಟ್ರೈನ್‌-19 ಎಂಬ ಹೆಸರಿನೊಂದಿಗೆ ಈ ವರ್ಷ ಒಂದು ಹೊಸ ರೀತಿಯ ರೈಲಿನ ಸೆಟ್‌ ಅನ್ನು ತರಲು ಯೋಚಿಸಲಾಗಿತ್ತು. ಆದರೆ ಈಗ ಆ ಯೋಜನೆಯನ್ನು ರದ್ದುಗೊಳಿಸಲಾಗಿದ್ದು, ಟ್ರೈನ್‌-19 ಬದಲಿಗೆ ಟ್ರೈನ್‌-18 ಮಾದರಿಯ ಹೆಚ್ಚುವರಿ ರೈಲುಗಳನ್ನು ತರಲು ನಿರ್ಣಯಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಹೊಸ ರೈಲಿನ ವಿನ್ಯಾಸದಲ್ಲಿ ಬದಲಾವಣೆ
ಹೊಸ ವಂದೇ ಭಾರತ್‌ ರೈಲಿನ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಇದರಲ್ಲಿ ಮೊದಲು ಊಟಕ್ಕೆ ಸಾಕಷ್ಟು ಸ್ಥಳಾವಕಾಶ ಇದ್ದಿರಲಿಲ್ಲ. ಆದರೆ, ಈಗ ಸಾಕಷ್ಟು ಸ್ಥಳವನ್ನು ಉಪಲಬ್ಧಗೊಳಿಸಲಾಗಿದೆ. ರೈಲು ಹರಿದು ಜಾನುವಾರುಗಳು ಕತ್ತರಿಸಲ್ಪಡುವಂ ತಹ ಘಟನೆಗಳನ್ನು ತಪ್ಪಿಸಲು ಈ ರೈಲಿನಲ್ಲಿ ಕ್ಯಾಟಲ್‌ ಗಾರ್ಡ್‌ನೂ° ಅಳವಡಿಸಲಾಗಿದೆ.
ವಂದೇ ಭಾರತ್‌ನ ಹೊಸ ರೈಲುಗಳ ಸೆಟ್ಟು ಅಸ್ತಿತ್ವದಲ್ಲಿರುವ ರೈಲಿನ ತುಲನೆಯಲ್ಲಿ ಹಲವು ರೀತಿಯಲ್ಲಿ ಭಿನ್ನ ಮತ್ತು ಉತ್ತಮವಾಗಿರಲಿದೆ. ಉದಾಹರಣೆಗೆ, ಇದರ ಸೀಟುಗಳನ್ನು ಶತಾಬ್ದಿ ರೈಲಿನ ಸೀಟುಗಳಿಗಿಂತಲೂ ಹೆಚ್ಚು ಹಿಂದಕ್ಕೆ ಬಾಗಿಸಬಹುದಾಗಿದೆ. ಅಷ್ಟೇ ಅಲ್ಲದೆ, ಸ್ವಯಂಚಾಲಿತ ಬಾಗಿಲುಗಳು ಜಾಮ್‌ ಆಗುವ ಸಂದರ್ಭದಲ್ಲಿ ಅದನ್ನು ಕೈಯಾರೆ ತೆರೆಯಲು ಕೂಡ ಇದರಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ.

2 ಎಕ್ಸಿಕ್ಯೂಟಿವ್‌ ಬೋಗಿ
ಇದು 16 ಎಸಿ ಬೋಗಿಗಳು, 2 ಎಕ್ಸ್‌ಕ್ಯೂಟಿವ್‌ ಬೋಗಿಗಳನ್ನು ಹೊಂದರಲಿದೆ. ಡ್ರೈವಿಂಗ್‌ ಬೋಗಿಯಲ್ಲಿ 44 ಸೀಟುಗಳಿದ್ದರೆ, ಟ್ರೇಲರ್‌ ಬೋಗಿಯಲ್ಲಿ 78 ಸೀಟುಗಳಿರಲಿವೆ. ಎಕ್ಸಿಕ್ಯೂಟಿವ್‌ ಚೇರ್‌ ಕಾರ್‌ನಲ್ಲಿ 52 ಸೀಟುಗಳಿರಲಿವೆ. ರೈಲಿನ ಗರಿಷ್ಠ ವೇಗ ಗಂಟೆಗೆ 220 ಕಿ.ಮೀ. ಆಗಿದೆ. ಶತಾಬ್ದಿ ಅಥವಾ ರಾಜಧಾನಿ ಎಕ್ಸ್‌ಪ್ರೆಸ್‌ಗಿಂತ ಇದರ ವೇಗ ಶೇ.10ರಿಂದ 15ರಷ್ಟು ಹೆಚ್ಚಾಗಿದೆ. ಅಂದಹಾಗೆ ಈ ರೈಲು ಲೋಕೋಮೋಟಿವ್‌ ಅಲ್ಲ ಎಂಬುದು ಗಮನಿಸಬೇಕಾದ ಅಂಶ. ಯಂತ್ರಗಳ ಸಹಾಯದಿಂದ ಚಲಿಸುತ್ತದೆ.

ಸಮಯದ ಉಳಿತಾಯ
ಎರಡನೇ ಸೆಮಿ ಹೈ ಸ್ಪೀಡ್‌ ಟ್ರೈನ್‌ ವಂದೇ ಭಾರತ್‌ ಮುಂಬಯಿ-ಹೊಸದಿಲ್ಲಿ ಮಾರ್ಗದ ನಡುವೆ ಓಡಲಿರುವ ಬಗ್ಗೆ ರೈಲ್ವೇ ಮಂಡಳಿಯು ಸಂಕೇತವನ್ನು ನೀಡಿದೆ. ಈ ರೈಲು ಮುಂಬಯಿಯಿಂದ ದಿಲ್ಲಿಯನ್ನು ತಲುಪಲು 12 ಗಂಟೆಗಳನ್ನು ತೆಗೆದುಕೊಳ್ಳಲಿದೆ. ಅದೇ, ಮುಂಬಯಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ದಿಲ್ಲಿ ಮತ್ತು ಮುಂಬಯಿ ನಡುವಿನ ಅಂತರವನ್ನು ಕ್ರಮಿಸಲು 16 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇಂಥದರಲ್ಲಿ ವಂದೇ ಭಾರತ್‌ ಪ್ರಯಾಣಿಕರನ್ನು 4 ಗಂಟೆಗಳ ಮೊದಲೇ ಅವರ ಗಮ್ಯ ಸ್ಥಾನಕ್ಕೆ ತಲುಪಿಸಲಿದೆ.

ಟಾಪ್ ನ್ಯೂಸ್

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

High Court: ಮಹಿಳೆ ಅಪಹರಣ ಕೇಸ್‌; ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

High Court: ಮಹಿಳೆ ಅಪಹರಣ ಕೇಸ್‌; ಎಚ್‌.ಡಿ.ರೇವಣ್ಣ ಅರ್ಜಿ ವಿಚಾರಣೆ ಮುಂದಕ್ಕೆ

11

Eshwara Khandre: ಮಹದಾಯಿಗೆ ಅನುಮತಿ ಸಿಗೋವರೆಗೂ ಮರ ಕಡಿಯಲು ಬಿಡಲ್ಲ

H.D.Kumaraswamy

H. D. Kumaraswamy: ರಾಜಕೀಯ ಮಾಡಲು, ಬೆಂಕಿ ಹಚ್ಚಲು ಬಂದಿಲ್ಲ

1-frr

BJP ಶಾಸಕ ಮುನಿರತ್ನಗೆ ಷರತ್ತುಬದ್ಧ ಜಾಮೀನು; ಆದರೂ ತಪ್ಪಿಲ್ಲ ಸಂಕಷ್ಟ!

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ

HP ಯಿಂದ ಹೊಸ ಪ್ರಿಂಟರ್‌ಗಳ ಬಿಡುಗಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

1-tirupati-laddu

Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

Chennai: ಗ್ರಾಹಕ ನಿಂದಿಸಿದ್ದಕ್ಕೆ ಖಿನ್ನತೆಗೆ ಒಳಗಾಗಿ ಫುಡ್‌ ಡೆಲಿವರಿ ಯುವಕ ಆತ್ಮಹತ್ಯೆ

Haryana: Financial assistance to women, MSP promised; BJP manifesto released

Haryana: ಮಹಿಳೆಯರಿಗೆ ವಿತ್ತ ನೆರವು, ಎಂಎಸ್‌ ಪಿ ಭರವಸೆ; ಬಿಜೆಪಿ ಪ್ರಣಾಳಿಕೆ ಬಿಡುಗಡೆ

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

Chennai: ರಸ್ತೆ ಬದಿ ಪತ್ತೆಯಾದ ಸೂಟ್‌ಕೇಸ್‌ನಲ್ಲಿತ್ತು ಮಹಿಳೆಯ ಕತ್ತರಿಸಿದ ದೇಹದ ಭಾಗಗಳು…

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

Kundapura: ಪ್ರಾಣಿ ತ್ಯಾಜ್ಯ ಚೀಲದಲ್ಲಿ ಪತ್ತೆ… ಕೇಸು ದಾಖಲು

1-baa

Mangalore Port ಇಬ್ಬರು ಬಾಲಕಾರ್ಮಿಕರ ರಕ್ಷಣೆ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

Kundapura: ಖಾಸಗಿ ಬಸ್‌ಗಳ ಮಧ್ಯೆ ಪೈಪೋಟಿ… ನಿರ್ವಾಹಕನಿಗೆ ಗಾಯ

12

High Court: ಬಿಎಸ್‌ವೈ ಪೋಕ್ಸೋ ಕೇಸ್‌: ಸೆ.27ಕ್ಕೆ ವಿಚಾರಣೆ ಮುಂದಕ್ಕೆ

Modi (2)

PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.