ನಮ್ಮಲ್ಲೇ ಇದೆ ಸಂತೋಷದ ಕೀಲಿಕೈ


Team Udayavani, May 13, 2019, 6:00 AM IST

A1

ನಾವು ನಮ್ಮವರು ಎನ್ನುವ ಲೋಕವಿದೆಯಲ್ಲ ಅದೊಂದು ಕಂಪರ್ಟ್‌ ಝೋನ್‌ ಇದ್ದ ಹಾಗೆ. ನಮ್ಮ ಖುಷಿ, ಸಂತೋಷಗಳೆಲ್ಲ್ಲ ಈ ವಲಯದಲ್ಲೇ ಹಂಚಿ ಹೋಗಿರುತ್ತದೆ. ಎಲ್ಲಿಯೂ ಹೇಳದ ಮನದ ತುಮುಲಗಳನ್ನೆಲ್ಲ ತೆರೆದಿಡಲು ಈ ವಲಯವೇ ಸೂಕ್ತ ವೇದಿಕೆಯಾಗಿರುತ್ತದೆ.

ಮನದಾಳದ ದುಃಖವನ್ನು ಅಪರಿಚಿತ ವ್ಯಕ್ತಿ ಮತ್ತು ಆತ್ಮೀಯರೊಂದಿಗೆ ಹಂಚಿಕೊಂಡಾಗ ಅಲ್ಲಿ ಎರಡು ಭಿನ್ನ ಪ್ರತಿಕ್ರಿಯೆಗಳು ಬರಬಹುದು. ಅಪರಿಚಿತರು ನಮ್ಮ ಸಮಸ್ಯೆಗಳಿಗೆ ಮುಗುಳ್ನಕ್ಕು ಮುಂದೆ ನಡೆದು ಹೋಗಿಬಿಡುವರು. ಆದರೆ ನಮ್ಮವರು ಎನ್ನುವವರು ನಮ್ಮ ಖುಷಿಗೆ ಅವರು ದುಪ್ಪಟ್ಟು ಖುಷಿಪಟ್ಟು ನಮ್ಮ ಕಷ್ಟಗಳಿಗೆ ಮರುಗಿ ಅವರದ್ದೇ ಸಮಸ್ಯೆ ಎಂದು ಪರಿಹರಿಸಲು ಮುಂದೆ ಬರುತ್ತಾರೆ. ಇದೇ ಆತ್ಮೀಯರು ಮತ್ತು ಅಪರಿಚಿತರ ನಡುವೆ ಇರುವ ವ್ಯತ್ಯಾಸ.

ನಮ್ಮವರು ಎನ್ನುವ ಪ್ರಪಂಚದಲ್ಲಿ ಹೆಚ್ಚಿನ ನಿರೀಕ್ಷೆಗಳಿರುತ್ತವೆ. ನಮ್ಮ ಖುಷಿ, ಸಂತೋಷಗಳಿಗೆ ಸರಿಯಾದ ಪ್ರತಿಕ್ರಿಯೆ ಸಿಗದಿದ್ದರೆ ಯಾಕೆ ಹೀಗೆ ವರ್ತಿಸುತ್ತಿದ್ದಾರೆ ಎನ್ನುವ ಪ್ರಶ್ನೆಗಳು ಎದುರಾಗುವುದು. ಈ ರೀತಿಯ ಅನೇಕ ವಿಷಯಗಳು ನಮ್ಮವರಲ್ಲಿ ಹಂಚಿಕೊಂಡಾಗ ಅದಕ್ಕೆ ನಮ್ಮ ನಿರೀಕ್ಷೆಯ ಪ್ರತಿಕ್ರಿಯೆ ತೋರದಿದ್ದಾಗ ನಾವೇ ನೊಂದುಕೊಳ್ಳುತ್ತೇವೆ. ಎಷ್ಟೋ ಬಾರಿ ನಮ್ಮ ಖುಷಿ ಬೇರೆಯವರು ಕೊಡುವ ಪ್ರತಿಕ್ರಿಯೆಯನ್ನು ಆಧರಿಸಿರುತ್ತದೆ. ಆದರೆ ಅದು ಶಾಶ್ವತವಾಗಿರಲು ಹೇಗೆ ಸಾಧ್ಯ.

ಬಹಳ ಹಿಂದಿನಿಂದ ಬಂದ ಮಾತಿದೆ ನಮ್ಮ ಕಷ್ಟ ಸುಖಗಳನ್ನು ನಮ್ಮವರಲ್ಲೇ ಹಂಚಿಕೊಂಡು ಪರಿಹರಿಸಬೇಕು. ಹಾಗಂತ ಎಲ್ಲರೂ ನಿಮ್ಮ ಸಮಸ್ಯೆಗಳಿಗೆ ಕಿವಿಯಾಗುತ್ತಾರೆ ಎಂಬುದನ್ನು ನಂಬಬಾರದು. ನೀವು ಯಾರನ್ನು ಆತ್ಮೀಯ ಎಂದು ಎನಿಸುಕೊಳ್ಳುವ ವ್ಯಕ್ತಿ ನಿಮ್ಮನ್ನು ಅಪರೂಪಕ್ಕೆ ಪರಿಚಯವಾದ ಜಸ್ಟ್‌ ಫ್ರೆಂಡ್‌ ಅನ್ನುವ ಸ್ಥಾನದಲ್ಲಿ ಇಟ್ಟಿರಬಹುದು. ಆದರೆ ಅದು ನಿಮಗೆ ಗೊತ್ತಾಗುವ ಹೊತ್ತಿಗೆ ನೀವು ನೋವಿನ ಭಾವದಲ್ಲಿರುತ್ತೀರಿ ಆ ಕಾರಣಕ್ಕಾಗಿ ಎಲ್ಲರೂ ನಮ್ಮವರೆನ್ನುವ ಭ್ರಮಾ ಲೋಕದಲ್ಲಿ ತೇಲಿಬಿಡಬೇಡಿ. ಹಾಗಂತ ಎಲ್ಲ ಸಮಸ್ಯೆಗಳಿಗೂ ಇನ್ನೊಬ್ಬರ ಬಳಿಯೇ ಪರಿಹಾರ ಇದೆ ಎಂದು ನಂಬಿದರೆ ನಮ್ಮ ಬದುಕು ಪರಿಪೂರ್ಣವಾಗಲು ಸಾಧ್ಯವಿದೆ. ನಾವು ಬೆಳೆಯಬೇಕಾದರೆ ನಮ್ಮ ಸಂತೋಷವನ್ನು ನಾವೇ ಹುಡುಕಲು ಕಲಿಯಬೇಕು. ಆಗ ಬದುಕು ನಮಗೆ ಸಾಕಷ್ಟು ಅನುಭವವನ್ನು ಕಟ್ಟಿಕೊಡುತ್ತದೆ.

-ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.