ಬದುಕೊಂದು ಸಂಗೀತ ಮೇಳ!


Team Udayavani, May 13, 2019, 6:27 AM IST

Awesome

ದೇಶ ಕಂಡ ಶ್ರೇಷ್ಠ ರಾಷ್ಟ್ರಪತಿಗಳಲ್ಲಿ ಒಬ್ಬರಾಗಿರುವ ಅಬ್ದುಲ್‌ ಕಲಾಂ ಕ್ಷಿಪಣಿ ವಿಜ್ಞಾನಿಯಾಗಿದ್ದರು. ಜತೆಗೆ ಅವರೊಳಗೊಬ್ಬ ಉತ್ತಮ ವೀಣಾ ವಾದಕನಿದ್ದ. ಇಸ್ರೋ ಅಧ್ಯಕ್ಷರಾಗಿದ್ದ ಕೆ. ರಾಧಾಕೃಷ್ಣನ್‌ ಕೂಡ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರು. ಮಾತ್ರವಲ್ಲದೆ, ಪ್ರದರ್ಶನ ನೀಡಬಲ್ಲ ಕಥಕಳಿ ಕಲಾವಿದರೂ ಹೌದು. ಸಾಹಿತಿಯಾಗಿ ಚಿರಪರಿಚಿತರಾಗಿರುವ ಜಯಂತ ಕಾಯ್ಕಿಣಿ ಬಯೊಟೆಕ್ನಾಲಜಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದವರು.

ಶಿಕ್ಷಣ- ವೃತ್ತಿ ಒಂದು ಧ್ರುವ, ಪ್ರವೃತ್ತಿ ಇನ್ನೊಂದು ಧ್ರುವ ಎಂಬ ಹಾಗೆ ಕಾಣಿಸಬಹುದು ಇದು. ಆದರೆ ಹಾಗಲ್ಲ. ಸಂಗೀತವೋ ಯಕ್ಷಗಾನವೋ ಕಥಕಳಿಯೋ ಫೊಟೋಗ್ರಫಿಯೋ – ಆ ಇನ್ನೊಂದು ಅವರ ಪ್ಯಾಶನ್‌ ಆಗಿರುತ್ತದೆ. ವೃತ್ತಿ ಬದುಕಿನ ಉನ್ನತ ಸಾಧನೆಯ ಜತೆಗೆ ಈ ಪ್ಯಾಶನ್‌ ಉಗ್ರವಾಗಿ ಅವರನ್ನು ಇನ್ನೊಂದು ಆಯಾಮದ ಪರಿಣತಿಯತ್ತ ಸೆಳೆಯುತ್ತದೆ. ಅದು ಅವರ ಹೃದಯಕ್ಕೆ ಹತ್ತಿರವಾದದ್ದು, ಅದು ಲೋಕಮುಖಕ್ಕೆ ಬಹಿರಂಗವಾಗಿರುವುದಕ್ಕೆ ಅಲ್ಲ; ಆತ್ಮ ಸಂತೋಷಕ್ಕೆ.
ನಮಗೂ ಹೃದಯಕ್ಕೆ ಹತ್ತಿರವಾದುದ ನ್ನು ಕಂಡುಕೊಳ್ಳುವುದು ಕಷ್ಟವೇನಲ್ಲ. ವ್ಯವಸ್ಥಿತವಾಗಿ ಕೆಲಸ ಮಾಡಿದರೆ ಅದನ್ನು ಕಂಡುಕೊಳ್ಳಬಹುದು. ಇಲ್ಲೊಂದಿಷ್ಟು ಪ್ರಶ್ನೆಗಳಿವೆ. ಅಚ್ಚುಕಟ್ಟಾಗಿ ಅವುಗಳಿಗೆ ಉತ್ತರ ಹುಡುಕುತ್ತ, ಲಭಿಸಿದ ಉತ್ತರಗಳನ್ನು ಚೊಕ್ಕವಾಗಿ ನೋಟ್‌ ಮಾಡಿ.

ನೀವು ಯಾವುದರಲ್ಲಿ ಪರಿಣಿತರು?
ಶಾಲೆಗೆ ಹೋಗುತ್ತಿದ್ದಾಗ, ಕಾಲೇಜಿನಲ್ಲಿದ್ದಾಗ ಏನೆಲ್ಲ ಮಾಡುತ್ತಿದ್ದಿರಿ? ಚಿತ್ರ ಬಿಡಿಸುತ್ತಿದ್ದಿರಾ? ಹಾಡುತ್ತಿದ್ದಿರಾ? ಅಪ್ಪನ ಜತೆಗೆ ತೋಟದಲ್ಲಿ ಚೆನ್ನಾಗಿ ಕೆಲಸ ಮಾಡುತ್ತಾ ಇದ್ದಿರಾ? ಸ್ಪೆಶಲ್‌ ಅಡುಗೆ ಮಾಡಿ ಮನೆಯ ಎಲ್ಲರಿಗೂ ಉಣಬಡಿಸುವುದರಲ್ಲಿ ಖುಷಿ ಕಾಣುತ್ತಿದ್ದಿರಾ? ಅದನ್ನು ನೆನಪು ಮಾಡಿಕೊಂಡು ಯಾವುದು ನಿಮ್ಮ ಬೆಸ್ಟ್‌ ಎಂಬುದನ್ನು ಮರಳಿ ಕಂಡುಕೊಳ್ಳಿ.

ಯಾವುದು ನಿಮ್ಮನ್ನು ಉಲ್ಲಾಸಗೊಳಿಸುತ್ತದೆ?
ವೃತ್ತಿಯಲ್ಲಾಗಿರಬಹುದು- ಅದರ ಒಂದು ಭಾಗ ನಿಮ್ಮನ್ನು ಉಲ್ಲಾಸಗೊಳಿಸುತ್ತದೆ. ಅದ್ಯಾವುದು ಅಂತ ಕಂಡುಕೊಳ್ಳಿ. ಒಂದು ಉಪವೃತ್ತಿ, ಒಂದು ಹವ್ಯಾಸ, ಸಮಾರಂಭಗಳಲ್ಲಿ ಅನ್ನ-ಸಾಂಬಾರು ಬಡಿಸುವುದು, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು- ಹೀಗೆ ಯಾವುದೋ ಒಂದು ನಿಮಗೆ ಇನ್ನೆಲ್ಲದಕ್ಕಿಂತ ಹೆಚ್ಚು ಉಲ್ಲಾಸ ಕೊಡುತ್ತದೆ. ಅದನ್ನು ಕಂಡುಕೊಳ್ಳಿ.

ಯಾವುದರ ಬಗ್ಗೆ ಓದುತ್ತೀರಿ, ನೋಡುತ್ತೀರಿ, ಸರ್ಚ್‌ ಮಾಡುತ್ತೀರಿ?
ಇಂಟರ್‌ನೆಟ್‌ನಲ್ಲಿ ಆಗಾಗ ಯಾವುದರ ಬಗ್ಗೆ ಶೋಧಿಸುತ್ತೀರಿ ಅಥವಾ ದಿನಪತ್ರಿಕೆ, ಪುಸ್ತಕ ಗಳಲ್ಲಿ ಹೆಚ್ಚು ಇಷ್ಟಪಟ್ಟು ಆರಿಸಿಕೊಂಡು ಓದುವ ವಿಷಯ ಯಾವುದು? ಇದನ್ನೂ ಲಿಸ್ಟ್‌ಗೆ ಸೇರಿಸಿ.

ಕನಸು ಕಾಣುವುದು ಯಾವುದರ ಬಗ್ಗೆ?
ನಾನು ಅದು ಮಾಡಬೇಕು, ಇದು ಮಾಡಬೇಕು ಅಂತ ನಿಮ್ಮಷ್ಟಕ್ಕೆ ನೀವು ಕನಸು ಕಾಣುವುದು ಯಾವುದರ ಬಗ್ಗೆ? ಬರಹಗಾರನಾಗುವುದು, ಅತ್ಯುತ್ತಮ ಬ್ಯಾಟ್ಸ್‌ಮನ್‌ ಆಗುವುದು..ಇನ್ನೇನೇನೋ! ಇದನ್ನೂ ಬರೆದಿಟ್ಟುಕೊಳ್ಳಿ.

ಲಿಸ್ಟ್‌ ತಯಾರಾದ ಮೇಲೆ ಅದರಲ್ಲಿ ತೊಡಗಿಸಿಕೊಳ್ಳುವುದು. ಇದಕ್ಕೆ ಸ್ವಲ್ಪ ಕಲಿಕೆ, ಪರಿಶ್ರಮ ಬೇಕಾಗುತ್ತದೆ. ನಿಮ್ಮ ಪಟ್ಟಿಯಲ್ಲಿ ನಾಲ್ಕೈದು ಐಟಂ ಇದ್ದರೆ ಪ್ರಯೋಗ ಮಾಡಿನೋಡಬೇಕಾಗುತ್ತದೆ.

ನಿಮ್ಮ ಪಟ್ಟಿಯಿಂದ ಅತ್ಯಂತ ಪ್ರಿಯವಾದದ್ದನ್ನು ಆರಿಸಿಕೊಳ್ಳಿ. ಅದರ ಬಗ್ಗೆ ಹೆಚ್ಚು ಓದಿ, ಅಧ್ಯಯನ ಮಾಡಿ. ಪರಿಣಿತರಾಗಿರುವವರ ಜತೆಗೆ ಚರ್ಚಿಸಿ, ಮಾರ್ಗದರ್ಶನ ಪಡೆಯಿರಿ. ನಿಮ್ಮಲ್ಲಿ ಈಗಾಗಲೇ ಇರುವ ಆಸಕ್ತಿ, ಕೌಶಲಗಳನ್ನು ಹರಿತಗೊಳಿಸಲು ಬೇಕಾದ ಎಲ್ಲವನ್ನೂ ಪಟ್ಟುಬಿಡದೆ ನಡೆಸಿ.

ಎರಡೂ¾ರು ವಿಷಯಗಳು ನಿಮ್ಮ ಪಟ್ಟಿಯಲ್ಲಿದ್ದರೆ ಒಂದೆರಡು ತಿಂಗಳು ಒಂದು ವಿಷಯದ ಹಾಗೆ ತೊಡಗಿ ಕೊಂಡು ನಿಮ್ಮನ್ನೇ ನೀವು ಪ್ರಯೋಗಕ್ಕೆ ಒಡ್ಡಿಕೊಳ್ಳಿ. ಕೊನೆಯಲ್ಲಿ ಯಾವುದು ಅತ್ಯಂತ ಇಷ್ಟ, ಎಂಬುದು ತಿಳಿಯುತ್ತದೆ.

ಇನ್ನೊಂದು ಪ್ರಾಮುಖ್ಯವಾದ ಸಂಗತಿ- ಭಯ, ಅಂಜಿಕೆ, ಹಿಂಜರಿಕೆ ಬಿಡಿ. ಯಾರೇನೋ ಅಂದುಕೊಳ್ಳುತ್ತಾರೆ ಎಂಬ ಮುಜುಗರ ಬೇಡ. ನಿಮ್ಮ ಪ್ಯಾಶನ್‌ ಅನ್ನು ಹುಡುಕಿ ತೊಡಗಿಕೊಳ್ಳಲು ವಯಸ್ಸಿನ ಅಭ್ಯಂತರವೂ ಇಲ್ಲ. ಸಮಯ ಹೊಂದಿಸಿಕೊಳ್ಳುವುದು ಇನ್ನೊಂದು ವಿಚಾರ. ನಿಮಗಿಷ್ಟವಾದ ಹವ್ಯಾಸವನ್ನು ಒಂದು ವೃತ್ತಿಯಾಗಿಸಿ.

ಇದು ರಾತ್ರಿ ಬೆಳಗಾಗುವುದರೊಳಗೆ ಆಗುವುದಿಲ್ಲ; ವರ್ಷಗಳು ಬೇಕಾಗಬಹುದು. ಆದರೆ ಅಂತಹ ಒಂದು ಸಾಧ್ಯತೆಯೂ ಇದೆ ಎನ್ನುವುದನ್ನು ಮರೆಯಬೇಡಿ.

ಕೊನೆಯದಾಗಿ, ಇದೆಲ್ಲವೂ ಬಾಳೆಹಣ್ಣು ಸುಲಿದು ತಿಂದಷ್ಟು ಸುಲಭವಲ್ಲ. ನಿಮ್ಮ ಈಗಿನ ವೃತ್ತಿಯೋ ಕಲಿಕೆಯೋ – ಅದಕ್ಕೆ ನೀವು ಎಷ್ಟು ಪರಿಶ್ರಮ ಹಾಕುತ್ತಿರೋ ಅಷ್ಟೇ ಶ್ರಮ ಇಲ್ಲೂ ಬೇಕಾಗುತ್ತದೆ. ಏಕಾಗ್ರತೆ, ಆತ್ಮಾವಲೋಕನ, ತಾಲೀಮು, ಒಂದಿಷ್ಟು ಹಣ ಎಲ್ಲವೂ ಅಗತ್ಯ. ಈ ಎಲ್ಲ ಸಾಧನೆಗಳಿಂದ ನಿಮಗೆ ಬೇಕಾದ ಬದುಕು ನಿಮಗೆ ಸಿಗುತ್ತದೆ ಎಂಬುದು ನಿಮ್ಮ ನೆನಪಿನಲ್ಲಿರಲಿ.

ನೀವು ಪ್ರೀತಿಸುವ ವೃತ್ತಿಯನ್ನೇ ಆರಿಸಿಕೊಳ್ಳಿ; ಆಗ ನಿಮ್ಮ ಬದುಕಿನಲ್ಲಿ ಒಂದೇ ಒಂದು ದಿನವೂ ನೀವು “ಕೆಲಸ’ ಮಾಡಬೇಕಾಗಿ ಬರುವುದಿಲ್ಲ
– ಕನ್‌ಫ್ಯೂಶಿಯಸ್‌

ಚಾರು

 

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.