ವಿದ್ಯಾರ್ಥಿಗಳ ಸಾಧನೆಯೇ ಗುರುವಿಗೆ ಕಾಣಿಕೆ: ಮಿರ್ಜಿ
Team Udayavani, May 14, 2019, 12:10 PM IST
ಹುನಗುಂದ: ಗುರು ಶಿಷ್ಯರ ಸಂಬಂಧ ಸದಾ ಕಾಲ ಅಮರವಾದುದು ಎಂದು ಬೀಳಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಜಿ. ಮಿರ್ಜಿ ಹೇಳಿದರು.
ಪಟ್ಟಣದ ಟಿಸಿಎಚ್ ಕಾಲೇಜನಲ್ಲಿ 2005-06 ನೆಯ ಸಾಲಿನ ಟಿಸಿಎಚ್ ವಿದ್ಯಾರ್ಥಿಗಳ ಗುರುವಂದನಾ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಧಕರಿಗೆ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು. ಅಂದಾಗ ಮಾತ್ರ ಸಾಧನೆಯ ಹಾದಿ ಸರಳವಾಗುತ್ತದೆ. ಸದಾ ಪ್ರಯತ್ನದ ಮೂಲಕ ಉನ್ನತ ಹುದ್ದೆಯನ್ನು ಅಲಂಕರಿಸಿದಾಗ ಗುರುವಿಗೆ ಕೊಡಬೇಕಾದ ಗೌರವ ಮತ್ತು ತಂದೆ ತಾಯಿಗಳಿಗೆ ನೀಡಬೇಕಾದ ಸೇವೆಯನ್ನು ಎಂದು ಮರೆಯಬಾರದು. ಮಗುವಿದ್ದಾಗ ಮೊದಲು ಸಂಸ್ಕಾರದ ಪಾಠ ಹೇಳಿದ ತಾಯಿ, ನಂತರ ಸಮಾಜದಲ್ಲಿ ಬದುಕಲು ಕಲಿಸಿದ ಶಿಕ್ಷಕ ಒಂದು ನಾಣ್ಯದ ಎರಡು ಮುಖ್ಯಗಳಿದಂತೆ ಎಂದರು.
ನಾವು ಉನ್ನತ ಸರ್ಕಾರಿ ಹುದ್ದೆ ಪಡೆದುಕೊಂಡಾಗ ಹುದ್ದೆಯಲ್ಲಿ ನಾವು ದೊಡ್ಡವರಾದರೂ ತಂದೆ ತಾಯಿ ಮತ್ತು ಗುರುಗಳಿಗೆ ನಾವು ಸಣ್ಣವರೆ ಎಂದು ಭಾವಿಸಿ ತಲೆ ಬಾಗಿಸಿಕೊಡುವ ಗೌರವದ ಮುಂದೆ ಬಹುದೊಡ್ಡ ಕೊಡುಗೆ ಮತ್ತೂಂದಿಲ್ಲ. ಇನ್ನು ಕಲಿಕೆಯಲ್ಲಿ ಸೇರಿದ ಸ್ನೇಹ ಅದು ಜೀವನದ ಪರಿಯಾಂತರವಾಗಿ ಮರೆಯದ ಅನುಭಂದ. ಈ ಸ್ನೇಹ ಸಂಭಂಧಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸ್ನೇಹದಲ್ಲಿ ಯಾವದೇ ಭಿನ್ನತೆ ವೈಮನಸ್ಸು ಬರದಂತೆ ಸದಾ ಸ್ನೇಹಮಯ ಜೀವನ ನಡೆಸುವುದು ಮುಖ್ಯ ಎಂದರು.
ಬಳ್ಳಾರಿ ಡಿವೈಎಸ್ಪಿ ಜಾವಿದ್ ಇನಾಮದಾರ ಮಾತನಾಡಿ, ನಾನು ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆ ಪಡೆದುಕೊಂಡಿದ್ದರೂ ಗುರುವಿಗೆ ನಾನು ಇಂದಿಗೂ ಆತ್ಮೀಯ ಶಿಷ್ಯನಾಗಿ ಸದಾ ಗುರುವಿನ ಗುಲಾಮನಾಗಿದ್ದೇನೆ. ಈ ದೊಡ್ಡ ಹುದ್ದೆಯ ಕನಸ್ಸು ನನ್ನದಾದರೂ ಅದನ್ನು ನನಸ್ಸುಗೊಳಿಸಿದ್ದು ಗುರು ಕೊಟ್ಟ ಅಕ್ಷರದ ಜ್ಞಾನದಿಂದ ಎನ್ನುವುದನ್ನು ಮರೆತಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗುರುಗಳಿಗೆ ಮತ್ತು ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಆರ್ಎಂಎಸ್ಎ ಶಾಲೆಯ ಮುಖ್ಯೋಪಾಧ್ಯಾಯ ಎಸ್.ಜಿ.ಕಡಿವಾಲ ವಹಿಸಿದ್ದರು. ಲಲಿತಾ ಹೊಸಪ್ಯಾಟಿ, ವಿ.ಎಸ್. ಮೇಟಿ, ಜಿ.ಎಂ. ಪಾಟೀಲ, ಬಿ.ಎಲ್. ಕಂಚಗಾರ, ಎಸ್.ಎಚ್. ದಳವಾಯಿ, ಎಂ.ಎಂ. ಶಿರೂರ, ಎಸ್.ಎಸ್. ಹೊಸಮನಿ, ಶಂಕರ ಬೆಳ್ಳುಬ್ಬಿ, ಜಿ.ಬಿ. ಕಾಂತಿ, ಜಿ.ಎಚ್. ಪಾಟೀಲ, ಎಸ್.ಆರ್. ಸೊನ್ನದ, ರಮೇಶ ವಡವಾಣಿ, ಎ.ಐ. ಮಾನ್ವಿ ಉಪಸ್ಥಿತರಿದ್ದರು.
ಬಿ.ಎಚ್. ಜೋಗಿ ಸ್ವಾಗತಿಸಿದರು. ಶ್ರೀಕಾಂತ ಪಾರಗೊಂಡ ಪರಿಚಯಿಸಿದರು. ಮಹಾಂತೇಶ ತಿಪ್ಪಣ್ಣವರ ಮತ್ತು ಮಹಾಂತೇಶ ವಡಗೇರಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಗಲಕೋಟೆ:ಕೋಟೆಕಲ್ಲಲ್ಲೊಂದು ಅಪೂರ್ವ ಜ್ಞಾನದೇಗುಲ-ಉಲ್ಲಾಸದ ವಾತಾವರಣ
Mudhola: ಮೆಕ್ಕೆಜೋಳಕ್ಕೂ ಕುತ್ತು; ರೈತರ ಆರ್ಥಿಕತೆಗೆ ಮಾರಕ ಹೊಡೆತ
ದೇಗುಲ ಕಟ್ಟಡಕ್ಕೆ ಭಕ್ತರ ದೇಣಿಗೆ ಮಾತ್ರ ಬಳಕೆ: ಗುಡಗುಂಟಿಮಠ
ಕ್ಷೇತ್ರದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುವೆ: ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ
ಭೈರನಹಟ್ಟಿ: ಕಾರ್ಗಿಲ್ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.