ಜನರ ಹೃದಯದಲ್ಲಿದ್ದಾನೆ ದೇವರು


Team Udayavani, May 14, 2019, 4:14 PM IST

nc-5

ಕಾರವಾರ: ನಮ್ಮ ನಡುವೆ ಮಾನವೀಯತೆ ಬದುಕಿದೆ ಎಂಬುದಕ್ಕೆ ಇಲ್ಲಿನ ಕತೆ ಸಾಕ್ಷಿಯಾಗಿದೆ. ಗೋವಾದ ಪ್ರವಾಸಿಗರು ಹುಬ್ಬಳ್ಳಿಗೆ ಹೋಗುವಾಗ ದಾರಿಯಲ್ಲಿ ನೀರು ಕುಡಿಯಲು ನಿಂತು ಬಡವರ ಕಷ್ಟ ಕೇಳಿ, ಅದನ್ನೇ ಸೋಶಿಯಲ್ ಮೀಡಿಯಾ(ಫೇಸ್‌ ಬುಕ್‌)ದಲ್ಲಿ ಹಾಕಿ, ನೆರವು ಕೋರಿದ್ದಕ್ಕೆ ನೂರಾರು ಜನರು ಮತ್ತು ಗದಗ ಕನ್ನಡ ವೈಶ್ಯ ವೆಲ್ಫೇರ್‌ ಟ್ರಸ್ಟ್‌ ಅಗಸೂರಿನ ರಾಮಚಂದ್ರ ಶೆಟ್ಟಿ ಮತ್ತು ಅವರ ವಯೋವೃದ್ಧ ತಾಯಿ ಸರೋಜಿನಿ ಶೆಟ್ಟಿ ಅವರ ನೆರವಿಗೆ ಬಂದಿದೆ.

ಹದಿನೈದು ದಿನಗಳ ಹಿಂದೆ ಗೋವಾ ಮೂಲದವರು ಹುಬ್ಬಳ್ಳಿಗೆ ಪ್ರವಾಸ ಮಾಡುತ್ತಿದ್ದರು. ದಾರಿ ಮಧ್ಯೆ ಅಂಕೋಲಾದ ಅಗಸೂರಿನಲ್ಲಿ ಗೂಡಂಗಡಿ ಎದುರು ವಾಹನ ನಿಲ್ಲಿಸಿ ಕುಡಿಯುವ ನೀರನ್ನು ರಾಮಚಂದ್ರ ಶೆಟ್ಟಿ (45) ಅವರಿಂದ ಪಡೆದರು. ಹಾಗೂ ಅವರ ಕಷ್ಟ ಆಲಿಸಿದರು. ರಾಮಚಂದ್ರ ಅವರು ತಮಗಿರುವ ದೃಷ್ಟಿ ಸಮಸ್ಯೆ ಹಾಗೂ ತಾಯಿಯ ವಯೋ ಸಹಜ ಕಾಯಿಲೆ ವಿವರಿಸಿದರು.

75 ವರ್ಷದ ತಾಯಿಗೆ ಆರೋಗ್ಯ ಸಮಸ್ಯೆ, ಅಂಕೋಲಾಕ್ಕೆ ಚಿಕಿತ್ಸೆಗೆ ಕರೆದೊಯ್ಯಬೇಕು. ಅರ್ಥಿಕ ಸಂಕಷ್ಟ, ಕಳೆದ ವರ್ಷ ಮಳೆಗಾಲದಲ್ಲಿ ಮನೆ ಕುಸಿದು ಹೋದದ್ದನ್ನು ಹಾಗೂ ಗ್ರಾಮಸ್ಥರು ನೆರವಿಗೆ ಬಂದು ಪುಟ್ಟ ಮನೆ ನಿರ್ಮಿಸಿಕೊಟ್ಟದ್ದನ್ನು ಹೇಳಿಕೊಂಡರು. ಇದನ್ನು ಆಲಿಸಿದ ಗೋವಾದ ಎರಡು ಮೂರು ಜನ ಪ್ರವಾಸಿಗರು, ರಾಮಚಂದ್ರ ಅವರಿಗೆ ತಮ್ಮಿಂದ ಆದ ನೆರವು ಮಾಡಿದರು. ಅಲ್ಲದೇ ರಾಮಚಂದ್ರ ಹಾಗೂ ಅವರ ವಯೋವೃದ್ಧ ತಾಯಿಯ ಕಷ್ಟ ವಿವರಿಸಿ, ನೆರವಿಗೆ ಬರುವಂತೆ ಸೋಶಿಯಲ್ ಮೀಡಿಯಾದಲ್ಲಿ ವಿನಂತಿಸಿದರು.

ಚರ್ಚ್‌, ಮಸೀದಿ, ದೇವಸ್ಥಾನಗಳಿಗೆ ಹಣಕಾಸು ನೆರವು, ದಾನ ನೀಡುವ ಬದಲು ಕಣ್ಣಿನ ದೃಷ್ಟಿದೋಷದ ನಡುವೆಯೂ ಛಲದಿಂದ ಬದುಕುವ ರಾಮಚಂದ್ರ ಶೆಟ್ಟಿ ಅವರಿಗೆ ನೆರವಾಗಿ ಎಂದು ಮನವಿ ಮಾಡಲಾಯಿತು. ತಕ್ಷಣ ವಿಳಾಸ, ಬ್ಯಾಂಕ್‌ ಆಕೌಂಟ್ ಪಡೆದ ಹೃದಯವಂತ ಜನರು ಆರ್ಥಿಕ ನೆರವು ನೀಡಿದ್ದಾರೆ.

ಹೀಗೆ ಹರಿದು ಬಂದ ಆರ್ಥಿಕ ನೆರವಿನಿಂದ ತಾಯಿಯ ಬ್ಯಾಕ್‌ ಬೋನ್‌ ಸಮಸ್ಯೆಗೆ ಚಿಕಿತ್ಸೆ ಕೊಡಿಸಲು ರಾಮಚಂದ್ರ ಶೆಟ್ಟಿ ಮುಂದಾಗಿದ್ದಾರೆ. ಅಲ್ಲದೇ ಗದಗ ನಗರದ ಕನ್ನಡ ವೈಶ್ಯ ವೆಲ್ಫೇರ್‌ ಟ್ರಸ್ಟ್‌ ಒಂದು ಲಕ್ಷ ರೂ. ದೇಣಿಗೆ ನೀಡಲು ಮುಂದೆ ಬಂದಿದೆ.

ವಾರದಲ್ಲಿ ಆರ್ಥಿಕ ನೆರವು ಮಾಡುವುದಾಗಿ ಟ್ರಸ್ಟ್‌ನ ಸದಸ್ಯರಾದ ದೀಪಕ್‌ ಶೆಟ್ಟಿ ಪ್ರಕಟಿಸಿದ್ದಾರೆ. ವ್ಯಾಪಾರಕ್ಕೆ ಅನುಕೂಲವಾಗುವಂತೆ ಶೆಡ್‌ವೊಂದು ಸಜ್ಜಾಗಿದ್ದು, ರಾಮಚಂದ್ರ ಅವರ ಮನೆಯ ಪಕ್ಕವೇ ಅದನ್ನು ಸ್ಥಾಪಿಸಲಾಗಿದೆ. ಸಣ್ಣ ಕಿರಾಣಿ ಅಂಗಡಿ ನಡೆಸುತ್ತಾ ಜೀವನ ಮಾಡುತ್ತಿದ್ದ ರಾಮಚಂದ್ರ ಶೆಟ್ಟಿ ಅವರು ನೆರವಾದ ಜನಗಳ ಹೃದಯದಲ್ಲಿ ದೇವರು ಕಂಡಿದ್ದಾನೆ. ಸಮಾಜದಲ್ಲಿ ಮಾನವೀಯತೆ ಬದುಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಗದಗ ಕನ್ನಡ ವೈಶ್ಯ ವೆಲ್ಫೇರ್‌ ಟ್ರಸ್ಟ್‌ ನಿಂದ 1ಲಕ್ಷ ರೂ. ನೆರವು

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣ: 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ-ಸ್ವಾಮೀಜಿ

ಗೋಕರ್ಣ: 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ-ಸ್ವಾಮೀಜಿ

Karnataka ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ : ಆರ್.ವಿ.ದೇಶಪಾಂಡೆ

Karnataka ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ : ಆರ್.ವಿ.ದೇಶಪಾಂಡೆ

Swimming; 19 ಕಿಮೀ ಗಂಗಾ ನದಿಯಲ್ಲಿ ಈಜಿ 4ನೇ ಸ್ಥಾನ ಗೆದ್ದ ಗೋಕರ್ಣದ ನೇಹಾ

Swimming; 19 ಕಿಮೀ ಗಂಗಾ ನದಿಯಲ್ಲಿ ಈಜಿ 4ನೇ ಸ್ಥಾನ ಗೆದ್ದ ಗೋಕರ್ಣದ ನೇಹಾ

4-sirsi

Sirsi: ಗುಂಡಿಗದ್ದೆ ಬಳಿ ರಸ್ತೆ ದಾಟಿದ ಚಿರತೆ! : ಸ್ಥಳೀಯರಲ್ಲಿ ಆತಂಕ

Sirsi: ದೇಶಪಾಂಡೆ ಸಿಎಂ ಆಗುವ ತೀರ್ಮಾನ ಪಕ್ಷದ ವರಿಷ್ಠರು ಕೈಗೊಳ್ಳುತ್ತಾರೆ: ಭೀಮಣ್ಣ ನಾಯ್ಕ

Sirsi: ದೇಶಪಾಂಡೆ ಸಿಎಂ ಆಗುವ ತೀರ್ಮಾನ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ: ಭೀಮಣ್ಣ ನಾಯ್ಕ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.