ಕೃಷ್ಣಾ ಕಣಿವೆಯಲ್ಲಿ ತೈಲ ನಿಕ್ಷೇಪ ಶೋಧ


Team Udayavani, May 15, 2019, 3:07 AM IST

krishna

ಆಲಮಟ್ಟಿ: ನೈಸರ್ಗಿಕ ಸಂಪತ್ತುಗಳಾದ ಡೀಸೆಲ್‌, ಪೆಟ್ರೋಲ್‌, ಕೆರೋಸಿನ್‌ ಹಾಗೂ ಗ್ಯಾಸ್‌ (ನೈಸರ್ಗಿಕ ಅನಿಲ) ಕೃಷ್ಣಾ ಕಣಿವೆಯಲ್ಲಿ ಹೇರಳವಾಗಿದೆ ಎಂದು ಕೇಂದ್ರ ಸರ್ಕಾರ ಶೋಧನೆಗೆ ಮುಂದಾಗಿದ್ದು, ಅದರನ್ವಯ ಆಲಮಟ್ಟಿ ಸುತ್ತಮುತ್ತಲಿನ ಜಮೀನುಗಳಲ್ಲಿ ರಂಧ್ರ ಕೊರೆಯುವ ಕಾರ್ಯ ಚುರುಕುಗೊಂಡಿದೆ.

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ವತಿಯಿಂದ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಸೂಚಿಸಿದ್ದರಿಂದ ಈ ಅಧ್ಯಯನ ಕಾರ್ಯ ನಡೆಯುತ್ತಿದೆ. ಅಲಾ ಜಿಯೋ ಇಂಡಿಯಾ ಲಿ. ಸಂಸ್ಥೆ ಭೂಮಿಯಲ್ಲಿ ರಂಧ್ರ ಕೊರೆದು ಆಳವನ್ನು ಆಧರಿಸಿ ಆಂತರಿಕ ಸ್ಫೋಟ ನಡೆಸಿ ದತ್ತಾಂಶ ಸಂಗ್ರಹಿಸುತ್ತಿದೆ.

ಆಲಮಟ್ಟಿ ಬಳಿ ಕೆಲವು ಜಮೀನು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಕೆಲ ಜಮೀನುಗಳಲ್ಲಿ ಕೊರೆಯಲಾಗಿರುವ ರಂಧ್ರಗಳಲ್ಲಿ ಹಲವು ರಂಧ್ರಗಳಲ್ಲಿ ನೀರು ಬರುತ್ತಿದ್ದರೆ, ಇನ್ನು ಕೆಲವು ರಂಧ್ರಗಳಲ್ಲಿ ನೀರು ಬರದೇ ಕೇವಲ ಕಲ್ಲಿನ ಪುಡಿ ಬರುತ್ತಿದೆ. ಒಂದೆರಡು ರಂಧ್ರಗಳಲ್ಲಿ ಬರುತ್ತಿರುವ ನೀರಿನಲ್ಲಿ ತೈಲದ ವಾಸನೆಯಿದೆ ಎನ್ನುತ್ತಾರೆ ಕರ್ತವ್ಯದಲ್ಲಿ ತೊಡಗಿದ್ದ ಆಂಧ್ರ ಮೂಲದ ಕಾರ್ಮಿಕರು.

ಆಲಾ ಜಿಯೋ ಸಂಸ್ಥೆ 3 ಕಿಮೀಗೆ ಒಂದರಂತೆ ಕೊಳವೆ ಬಾವಿ ಕೊರೆಯುತ್ತಿದೆ. ಈ ಅಧ್ಯಯನವು ಉಪಗ್ರಹ (ಸ್ಯಾಟ್‌ಲೆçಟ್‌) ಆಧರಿಸಿ ನಡೆಯುತ್ತದೆ. ಕೊಳವೆ(ರಂಧ್ರ) ಕೊರೆಯುವ ಜಮೀನುಗಳಲ್ಲಿ ಮೊದಲು ಜಿಯೋಫೋನ್‌ ಭೂಮಿಯಲ್ಲಿ ಹೂತಿಟ್ಟು ಅದರ ಮೂಲಕ ದತ್ತಾಂಶವನ್ನು ಗಣಕ ಯಂತ್ರದ ಸಹಾಯದಿಂದ ಸಂಗ್ರಹಿಸಲಾಗುತ್ತಿದೆ.

ಈಗಾಗಲೇ ಆಲಮಟ್ಟಿಯಿಂದ ವಿಜಯಪುರಕ್ಕೆ ತೆರಳುವ ಮಾರ್ಗದ ಅರಳದಿನ್ನಿ ಹಾಗೂ ಯಲಗೂರ ಜಮೀನುಗಳಲ್ಲಿ ಮತ್ತು ಆಲಮಟ್ಟಿ-ನಾರಾಯಣಪುರ ರಾಜ್ಯ ಹೆದ್ದಾರಿಯ ಹಡೇಕರ ಮಂಜಪ್ಪ ಸ್ಮಾರಕ ಶೈಕ್ಷಣಿಕ ಕೇಂದ್ರಗಳ ಸಮೀಪದಲ್ಲಿ ಸುಮಾರು 10 ಕಿಮೀ ಉದ್ದದಲ್ಲಿ ಕೇಬಲ್‌ ಹಾಕಲಾಗಿದೆ.

2-3 ದಿನಗಳಿಂದ ಆಲಮಟ್ಟಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಜಲಾಶಯದ ಮುಂಭಾಗದಲ್ಲಿ ಸುಮಾರು 2 ಕಿಮೀ ಅಂತರದಲ್ಲಿ 30ಕ್ಕೂ ಅಧಿ ಕ ಯಂತ್ರಗಳಿಂದ ರೈತರ ಜಮೀನು, ಸರ್ಕಾರಿ ಜಮೀನುಗಳಲ್ಲದೇ ರಸ್ತೆಯ ಪಕ್ಕದಲ್ಲಿ 70 ಅಡಿಯಿಂದ 100 ಅಡಿವರೆಗೆ ರಂಧ್ರಗಳನ್ನು ಕೊರೆಯಲಾಗುತ್ತಿದೆ.

ಈಗಾಗಲೇ ಸುಮಾರು 300ಕ್ಕೂ ಅ ಧಿಕ ರಂಧ್ರಗಳನ್ನು ಕೊರೆದು ಅದರಲ್ಲಿ ಬರುವ ಮಣ್ಣು ಹಾಗೂ ಮರಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಇದರಿಂದ ಈ ಭಾಗದಲ್ಲಿ ತೈಲದ ನಿಕ್ಷೇಪ ಹಾಗೂ ನೈಸರ್ಗಿಕ ಅನಿಲದ ನಿಕ್ಷೇಪಗಳಿವೆಯೋ ಎನ್ನುವುದು ಸ್ಪಷ್ಟವಾಗುತ್ತದೆ.

ಹಿಂದೆಯೂ ನಡೆದಿತ್ತು ಅಧ್ಯಯನ: 2011-12ರಲ್ಲಿ ಸುಮಾರು ಮೂರು ಬಾರಿ ಭೂಗರ್ಭ ಇಲಾಖೆ ವತಿಯಿಂದ ಹೆಲಿಕಾಪ್ಟರ್‌ನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಕೃಷ್ಣಾ ನದಿ ದಡದಲ್ಲಿರುವ ಸುಮಾರು 10 ಕಿಮೀ ವ್ಯಾಪ್ತಿಯನ್ನೊಳಗೊಂಡಂತೆ ಭೂಗರ್ಭದಲ್ಲಿರುವ ಯುರೇನಿಯಂ, ಚಿನ್ನ, ತೈಲ ಹಾಗೂ ನೈಸರ್ಗಿಕ ಅನಿಲ ಹೀಗೆ ಹಲವಾರು ಸಂಪತ್ತುಗಳ ಕುರಿತು ಅಧ್ಯಯನ ನಡೆಸಲಾಗಿತ್ತು.

ತೈಲ ಹಾಗೂ ನೈಸರ್ಗಿಕ ಅನಿಲ ಪತ್ತೆಗಾಗಿ ಸೀಮಾಂಧ್ರ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಇಂಧನ ಶೋಧ ನಡೆಸಲಾಗುತ್ತಿದೆ. ನಾವು ಸಂಗ್ರಹಿಸಿದ ದತ್ತಾಂಶವನ್ನು ಒಎನ್‌ಜಿಸಿ ಅ ಧಿಕಾರಿಗಳಿಗೆ ಸಲ್ಲಿಸುತ್ತೇವೆ. ಬೆಳೆಯಿಲ್ಲದ ಜಮೀನುಗಳಲ್ಲಿ ಮಾತ್ರ ರಂಧ್ರ ಕೊರೆಯುತ್ತಿದ್ದೇವೆ. ಬೆಳೆ ಇರುವಲ್ಲಿ ರಂಧ್ರವನ್ನು ಕೊರೆಯುವುದಿಲ್ಲ.
-ಮುನ್ನಾ ಜಮಾದಾರ, ಕ್ಷೇತ್ರ ಮೇಲ್ವಿಚಾರಕ

ನಮ್ಮ ಜಮೀನಿನಲ್ಲಿ ರಾತ್ರೋ ರಾತ್ರಿ 16 ಕಡೆ ರಂಧ್ರ ಕೊರೆದಿದ್ದಾರೆ. ಇತ್ತೀಚೆಗಷ್ಟೇ ನೀರಿನ ಲಭ್ಯತೆಯಿರುವುದರಿಂದ ಸೋಮವಾರ ತೊಗರಿ ಬಿತ್ತನೆ ಮಾಡಲಾಗಿತ್ತು. ಮಂಗಳವಾರ ನೀರು ಹಾಯಿಸಬೇಕೆಂದರೆ ಬೃಹತ್‌ ವಾಹನಗಳನ್ನು ಬಳಸಿ ಜಮೀನನ್ನು ಹಾಳು ಮಾಡಿದ್ದಾರೆ. ಇವರು ಯಾರು, ರಂಧ್ರಗಳನ್ನು ಏಕೆ ಕೊರೆದಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ.
-ಎಸ್‌.ಜಿ. ಹಿರೇಮಠ, ರೈತ

ಯುಪಿಎ ಅವಧಿಯಲ್ಲಿ ಹೆಲಿಕಾಪ್ಟರ್‌ ಮೂಲಕ ಅಧ್ಯಯನ ನಡೆಸಲಾಗಿತ್ತು. ಪೆಟ್ರೋಲಿಯಂ ಉತ್ಪನ್ನ ಹಾಗೂ ನೈಸರ್ಗಿಕ ಅನಿಲ ನಮ್ಮ ದೇಶದಲ್ಲಿ ದೊರೆತರೆ ಕೊಲ್ಲಿ ರಾಷ್ಟ್ರಗಳತ್ತ ಮುಖ ಮಾಡುವುದು ತಪ್ಪುತ್ತದೆ. ಇದು ಉತ್ತಮ ಕಾರ್ಯವಾಗಿದ್ದು ಅಧ್ಯಯನ ತಂಡದವರು ರಂಧ್ರ ಕೊರೆಯುವುದಕ್ಕಿಂತ ಮುಂಚೆ ರೈತರ ಗಮನಕ್ಕೆ ತರಬೇಕು.
-ಮಲ್ಲು ರಾಠೊಡ, ತಾಪಂ ಸದಸ್ಯ

* ಶಂಕರ ಜಲ್ಲಿ

ಟಾಪ್ ನ್ಯೂಸ್

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Eid-Milad

Eid Milad Festival: ಕರಾವಳಿಯಾದ್ಯಂತ ಸಂಭ್ರಮದ ಈದ್‌ ಮಿಲಾದ್‌

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-kota-shivanand

ಕಾಳಿಂಗ ನಾವಡ ಪ್ರಶಸ್ತಿಗೆ ಕೋಟ ಶಿವಾನಂದ ಆಯ್ಕೆ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

Chaluvaraj ಕುಟುಂಬಕ್ಕೆ ಧೈರ್ಯ ತುಂಬಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

BYV

Talk Fight: ಯಾರು ಏನೇ ಅಂದ್ರೂ ಬಿಜೆಪಿ ಕಾರ್ಯಕರ್ತರು ನನ್ನ ಒಪ್ಪಿದ್ದಾರೆ: ವಿಜಯೇಂದ್ರ

COngress-Meet

Munirathna:ಒಕ್ಕಲಿಗ ಹೆಣ್ಣುಮಕ್ಕಳ ಬಗ್ಗೆ ಹೇಳಿಕೆ; ಸಮುದಾಯದ ಸಚಿವ, ಶಾಸಕರಿಂದ ಸಿಎಂಗೆ ಮನವಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.