ಬಜೆ ಡ್ಯಾಂ: ಕೃತಕ ಒಳಹರಿವು ತುಸು ಹೆಚ್ಚಳ

6 ದಿನಗಳ ಅಂತರ ಮುಂದುವರಿಕೆ

Team Udayavani, May 15, 2019, 6:10 AM IST

krutaka-ola-harivu

ಉಡುಪಿ: ಸುಮಾರು 10 ದಿನಗಳಿಗೆ ಹೋಲಿಸಿದರೆ ಬಜೆ ಡ್ಯಾಂಗೆ ಹರಿದು ಬರುವ ನೀರಿನ ಹರಿವು ತುಸು ಹೆಚ್ಚಾಗಿದೆ. ಇದು ನೀರು ಬೇಗನೆ ಆವಿಯಾಗುವುದನ್ನು ತಡೆಯಲಿದೆ ಎಂಬ ವಿಶ್ವಾಸ ಅಧಿಕಾರಿ, ಜನಪ್ರತಿನಿಧಿಗಳಲ್ಲಿ ಮೂಡಿದೆ. ನೀರಿನ ಬವಣೆ ಎರಡು ದಿನಗಳಲ್ಲಿ ಹೆಚ್ಚಾಗಿಲ್ಲವಾದರೂ ಒಂದು ಹಂತದಲ್ಲಿ ಸಮಸ್ಯೆ ಉಳಿದುಕೊಂಡಿದೆ.

ರೇಷನಿಂಗ್‌ನಂತೆ 6 ದಿನಗಳಿಗೆ ಒಂದು ವಿಭಾಗಕ್ಕೆ ನೀರು ಪೂರೈಸಲಾಗುತ್ತಿದ್ದು, ಎರಡನೇ ಸುತ್ತಿನಲ್ಲಿ ಮಂಗಳವಾರ ಈ ಹಿಂದೆ ಮೊದಲ ಸುತ್ತಿನಲ್ಲಿ ನೀಡಿದ ಪ್ರದೇಶಗಳಿಗೆ ಒದಗಿಸಲಾಯಿತು. ಜತೆಗೆ ಮೊದಲ ಸುತ್ತಿನಲ್ಲಿ ನೀರು ತಲುಪದೆ ಇರಬಹುದಾದ ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಲ್ಲಿಗೂ ಪೂರೈಸುವ ಪ್ರಯತ್ನಗಳು ಮುಂದುವರಿದಿವೆ. ಬುಧವಾರ ದೊಡ್ಡಣಗುಡ್ಡೆ, ಗುಂಡಿಬೈಲು, ನಿಟ್ಟೂರು, ಸಂತೆಕಟ್ಟೆ, ಹನುಮಂತನಗರ ಮೊದಲಾದೆಡೆ ಪೂರೈಕೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಟ್ಟ ತುಸು ಹೆಚ್ಚಳ
ಶ್ರಮದಾನ, ಹಿಟಾಚಿ ಮೂಲಕ ಬಂಡೆಗಳ ತೆರವಿನಿಂದ ಮತ್ತು ನದಿಯ ಅಲ್ಲಲ್ಲಿ ದೊಡ್ಡ ಹಳ್ಳಗಳಲ್ಲಿ ತುಂಬಿರುವ ನೀರನ್ನು ಪಂಪ್‌ ಮಾಡುವ ಮೂಲಕ “ಕೃತಕ ಒಳಹರಿವು’ ಸೃಷ್ಟಿ ಫ‌ಲ ನೀಡಿದೆ. ಪರಿಣಾಮ ನೀರಿನ ಮಟ್ಟ ಸ್ವಲ್ಪ ಹೆಚ್ಚಳವಾಗಿತ್ತು. ಸೋಮವಾರ ಸುಮಾರು 1.06 ಮೀ. ಇದ್ದ ಮಟ್ಟ ಮಂಗಳವಾರ 1.80ಕ್ಕೆ ಹೆಚ್ಚಿತ್ತು. ಪ್ರಸ್ತುತ ಡ್ಯಾಂನ ಜ್ಯಾಕ್‌ವೆಲ್‌ ಸನಿಹದಲ್ಲಿಯೇ ನಿರಂತರವಾಗಿ ಹೂಳೆತ್ತುವ ಕೆಲಸ ಮುಂದುವರಿದಿದೆ. ಇದು ಶಾಸಕ ರಘುಪತಿ ಭಟ್‌ ಅವರ ಮುತುವರ್ಜಿಯಿಂದ ನಡೆಯುತ್ತಿದೆ.

ಹಳ್ಳಗಳಿಂದ ನೀರು ಪಂಪ್‌ ಮಾಡುವ ಕಾರ್ಯ ಜಿಲ್ಲಾಡಳಿತ, ನಗರಸಭೆ ಅಧಿಕಾರಿಗಳ ಮುತುವರ್ಜಿಯಲ್ಲಿ ಸಾಗಿದೆ. ಬಜೆ ಡ್ಯಾಂ ಬಳಿ ಹೂಳಿನೊಂದಿಗೆ ಮಂಗಳವಾರ ಖಾಲಿ ಗೋಣಿಗಳ ರಾಶಿ ಕೂಡ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಇಲ್ಲಿ 2007ರ ಅನಂತರ ಹೂಳೆತ್ತಿರಲಿಲ್ಲ. ಪೌರಾಯುಕ್ತ ಆನಂದ ಕಲ್ಲೋಳಿಕರ್‌, ಎಂಜಿನಿಯರ್‌ಗಳಾದ ಗಣೇಶ್‌, ರಾಘವೇಂದ್ರ, ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ ಅವರನ್ನೊಳಗೊಂಡ ತಂಡ ಸ್ಥಳದಲ್ಲಿದ್ದು, ನಿಗಾ ವಹಿಸಿದೆ. ಶಾಸಕರು, ಕೆಲವು ಮಂದಿ ನಗರಸಭಾ ಸದಸ್ಯರು, ಸಮಾಜಸೇವಕರು ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮುಂದುವರಿಸಿದ್ದಾರೆ.

ದೂರು ಇಳಿಕೆ
ನಗರಸಭೆಯಿಂದ 8 ಟ್ಯಾಂಕರ್‌ಗಳಲ್ಲಿ ಮಂಗಳವಾರವೂ ನೀರು ಪೂರೈಸಲಾಗಿದೆ. ಎಸ್‌ಟಿ/ಎಸ್‌ಸಿ ಸೇರಿದಂತೆ ಕಾಲನಿಗಳು, ಮನೆಗಳಿಗೆ ಒದಗಿಸಲಾಯಿತು. ಸೋಮವಾರ 70ಕ್ಕೂ ಅಧಿಕ ದೂರುಗಳು ಬಂದಿದ್ದವು. ಆದರೆ ಮಂಗಳವಾರ ದೂರಿನ ಸಂಖ್ಯೆ 46ಕ್ಕೆ ಇಳಿದಿತ್ತು. ದೂರುಗಳಿಗೆ ಶೀಘ್ರ ಸ್ಪಂದಿಸಲು ಯತ್ನಿಸಲಾಗುತ್ತಿದೆ ಎಂದು ನಗರಸಭೆ ಮೂಲಗಳು ತಿಳಿಸಿವೆ.

ಟಾಪ್ ನ್ಯೂಸ್

Glasgow Commonwealth Games: No place to Hockey, Cricket, Wrestling, Badminton

Glasgow Commonwealth Games: ಹಾಕಿ, ಕ್ರಿಕೆಟ್‌, ಕುಸ್ತಿ, ಬ್ಯಾಡ್ಮಿಂಟನ್‌ಗೆ ಖೋ

Channapatna By-Election: ಯೋಗೇಶ್ವರ್‌ ಎನ್‌ಡಿಎ ಅಭ್ಯರ್ಥಿ?

Channapatna By-Election: ಯೋಗೇಶ್ವರ್‌ ಎನ್‌ಡಿಎ ಅಭ್ಯರ್ಥಿ?

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

fake court in gujarat

Gujarat: ನಕಲಿ ಪೊಲೀಸ್‌ ಆಯ್ತು, ಅರೆಸ್ಟ್‌ ಆಯ್ತು.. ಈಗ ನಕಲಿ ಕೋರ್ಟ್‌!

hockey; India playing against Germany

Hockey: ಜರ್ಮನಿ ವಿರುದ್ಧ “ಪ್ಯಾರಿಸ್‌ ಪ್ರತಿಕಾರ’ಕ್ಕೆ ಸಿದ್ಧತೆ

13 thousand recruitment in top 5 IT firms in first half of this year

IT: ಈ ವರ್ಷದ ಮೊದಲಾರ್ಧದಲ್ಲಿ ಅಗ್ರ 5 ಐಟಿ ಸಂಸ್ಥೆಗಳಲ್ಲಿ 13 ಸಾವಿರ ನೇಮಕ

Prime Minister Modi preached peace mantra to Putin again!

Narendra Modi: ಪುತಿನ್‌ಗೆ ಮತ್ತೆ ಶಾಂತಿ ಮಂತ್ರ ಬೋಧಿಸಿದ ಪ್ರಧಾನಿ ಮೋದಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-72: ಶಬ್ದ ಬಳಕೆಯಲ್ಲಿ ಧ್ವನ್ಯಾರ್ಥ ವಿಶೇಷಣ

Udupi: ಗೀತಾರ್ಥ ಚಿಂತನೆ-72: ಶಬ್ದ ಬಳಕೆಯಲ್ಲಿ ಧ್ವನ್ಯಾರ್ಥ ವಿಶೇಷಣ

Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ

Udupi: 51ನೇ ಅ.ಭಾ. ಪ್ರಾಚ್ಯವಿದ್ಯಾ ಸಮ್ಮೇಳನ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ

15(1)

Manipal: ಮಲ್ಪೆಯ ಮರಳು ಭೂಮಿಯಲ್ಲೊಂದು ಸುಂದರ ಉದ್ಯಾನ!

13(3)

Udupi: ಎರಡು ವರ್ಷಗಳಲ್ಲಿ ಚಿರತೆ ದಾಳಿಗೆ 122 ಜಾನುವಾರುಗಳು ಬಲಿ!

7

Udupi: ಕರ್ನಾಟಕ ಪಾಲಿಟೆಕ್ನಿಕ್ ನಿವೃತ್ತ ಸಿಬ್ಬಂದಿ ಎ.ಮಾಧವ ಪೂಜಾರಿ ಅಂಬಲಪಾಡಿ ನಿಧನ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Glasgow Commonwealth Games: No place to Hockey, Cricket, Wrestling, Badminton

Glasgow Commonwealth Games: ಹಾಕಿ, ಕ್ರಿಕೆಟ್‌, ಕುಸ್ತಿ, ಬ್ಯಾಡ್ಮಿಂಟನ್‌ಗೆ ಖೋ

16

Mangaluru: ಹಳೆಯ ಹೆಲ್ಮೆಟ್‌ ಇಟ್ಟು ಹೊಸ ಹೆಲ್ಮೆಟ್‌ ಕಳವು!

Channapatna By-Election: ಯೋಗೇಶ್ವರ್‌ ಎನ್‌ಡಿಎ ಅಭ್ಯರ್ಥಿ?

Channapatna By-Election: ಯೋಗೇಶ್ವರ್‌ ಎನ್‌ಡಿಎ ಅಭ್ಯರ್ಥಿ?

Belagavi: ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…

fake court in gujarat

Gujarat: ನಕಲಿ ಪೊಲೀಸ್‌ ಆಯ್ತು, ಅರೆಸ್ಟ್‌ ಆಯ್ತು.. ಈಗ ನಕಲಿ ಕೋರ್ಟ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.