ಬಾವಿ ನೀರಿಗಾಗಿ ಅಂಬೆಜೂಗ್‌ ಹಳ್ಳ ದಾಟಬೇಕು


Team Udayavani, May 15, 2019, 2:09 PM IST

uk-tdy-2..

ಕಾರವಾರ: ಹಳ್ಳದಾಟಿ ಕೊಡ ಹೊತ್ತು ನೀರು ತರುತ್ತಿರುವುದು.

ಕಾರವಾರ: ಅಂಬೆಜೂಗ್‌ ಮಜಿರೆಯ 200 ಕುಟುಂಬಗಳ ಮಹಿಳೆಯರು ಕುಡಿಯುವ ನೀರಿಗಾಗಿ ನಿತ್ಯ ಹಳ್ಳ ದಾಟಿ ನೀರು ಹೊತ್ತು ತರುವ ಸಂಕಷ್ಟ ದಶಕಗಳಿಂದ ಮುಂದುವರಿದಿದೆ. ಬೇಸಿಗೆಯಲ್ಲಿ ಟ್ಯಾಂಕರ್‌ ನೀರು ಕಿನ್ನರ ತಲುಪಿದರೂ, ಈ ಭಾಗದ ಮಹಿಳೆಯರು ಹಳ್ಳ ದಾಟುವುದ ಬಿಟ್ಟಿಲ್ಲ.

ತಾಲೂಕಿನ ಕಿನ್ನರ ಗ್ರಾಪಂ ವ್ಯಾಪ್ತಿಯ ಅಂಬೆಜೂಗ್‌, ಭಾಗವಾಡ, ಚಾಮಕುಳಿವಾಡ, ಝಾಡಕಿ ಮಜಿರೆಗಳ ನಿವಾಸಿಗಳು ಕುಡಿಯುವ ನೀರಿಗಾಗಿ ಬವಣೆ ಪಡುತ್ತಿದ್ದಾರೆ. ಅಂಬೆಜೂಗ ಮತ್ತು ದಿಗಾಳಿ ಮಜಿರೆ ಮಧ್ಯೆ ದೊಡ್ಡ ಹಳ್ಳವೊಂದು ಹರಿಯುತ್ತಿದ್ದು, ಹಳ್ಳ ದಾಟಿಯೇ ದಿಗಾಳಿ ಮಜಿರೆ ತಲುಪಬೇಕಿದೆ. ಕಾರಣ ದಿಗಾಳಿಯಲ್ಲಿ ಹನಮಬಾವಿ ಎಂಬ ಸಿಹಿ ನೀರಿನ ಬಾವಿ ಇದೆ. ಅಂಬೆಜೂಗ ಮಜಿರೆಯಲ್ಲಿ ಸುಮಾರು 200 ಮನೆಗಳಿವೆ. ಅಂಬೆಜೂಗ ಮಜಿರೆಯ ಭಾಗವಾಡ, ಚಾಮಕುಳಿವಾಡ, ಝಾಡಕಿಯ 200 ಕುಟುಂಬಗಳ ಜನರು ಬಾವಿ ನೀರಿಗಾಗಿ ದಿನನಿತ್ಯ ಹೊಳೆ ದಾಟುತ್ತಾರೆ. ಇದು ದಶಕಗಳಿಂದ ನಡೆದು ಬಂದಿದೆ. ಈ ಕಷ್ಟ ತಪ್ಪಿಸಲು ಅಂಬೆಜೂಗ್‌ ಮತ್ತು ದಿಗಾಳಿ ಮಧ್ಯೆ ಒಂದು ತೂಗು ಸೇತುವೆ ಅಥವಾ ಕಿರು ಸೇತುವೆ ನಿರ್ಮಿಸಿಕೊಡಬೇಕು ಎಂಬುದು ಅವರ ಬೇಡಿಕೆ. ಆದರೆ ಇದು 40 ರಿಂದ 50 ಲಕ್ಷ ವೆಚ್ಚದ ಯೋಜನೆ ಆದ ಕಾರಣ ತಾಪಂ ಮತ್ತು ಜಿಪಂ ಎದುರು ಬೇಡಿಕೆ ಇಟ್ಟಿದೆ. ಬೇಡಿಕೆ ಸರ್ಕಾರವನ್ನು ತಲುಪಿಲ್ಲ.

ಈಗ ಟ್ಯಾಂಕರ್‌ ನೀರು ಬರುತ್ತಿದೆ: ಕಿನ್ನರ ಗ್ರಾಮಕ್ಕೆ ಟ್ಯಾಂಕರ್‌ ಮೂಲಕ ಬೇಸಿಗೆಯಲ್ಲಿ ನೀರು ಪೂರೈಸಲಾಗುತ್ತಿದೆ. ಆದರೆ ಉಳಿದ ದಿನಗಳಲ್ಲಿ ಜನರು ಬಾವಿ ನೀರನ್ನು ಅವಲಂಬಿಸಿದ್ದಾರೆ. ಅಂಬೆಜೂಗ ಹಳ್ಳವನ್ನು ಮಹಿಳೆಯರು ಮತ್ತು ಪುರುಷರು ಸಹ ದಾಟಿ ಹನಮಬಾವಿಯಿಂದ ಸಿಹಿ ನೀರು ತರುವ ಕಷ್ಟ ಮುಂದುವರಿದಿದೆ. ಜನರು ಕುಡಿಯುವ ನೀರಿಗಾಗಿ ಹಳ್ಳ ದಾಟುವುದು ರೂಢಿಯಾಗಿದೆ. ದಿಗಾಳಿ ಮಜಿರೆಗೆ ರಸ್ತೆ ಮಾರ್ಗವೂ ಇದೆ. ಅದು 2 ಕಿ.ಮೀ. ದೂರ ಸಾಗಬೇಕಾದ ಕಾರಣ ಜನರು 300 ಮೀಟರ್‌ ದೂರವನ್ನು ಹಳ್ಳ ದಾಟಿ ದಿಗಾಳಿ ಮಜಿರೆ ತಲುಪಿ ನೀರು ತರುವುದು ರೂಢಿ ಮಾಡಿಕೊಂಡಿದ್ದಾರೆ.

ಜಿಲ್ಲಾ ಕೇಂದ್ರದ ಸಮೀಪವೇ ಇರುವ ಕಿನ್ನರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಜನರು ಬವಣೆ ಪಡುವುದು ಮುಂದುವರಿದಿದೆ. ಕೆರವಡಿ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಹಂತದಲ್ಲಿದ್ದರೂ, ಸಣ್ಣ ಸಣ್ಣ ಮಜಿರೆಗಳಿಗೆ, ನದಿ ದಂಡೆಯ ಹಿನ್ನೀರಿನ ಗ್ರಾಮ ಮಜಿರೆಗಳಿಗೆ ಬಾವಿ ನೀರು ಕುಡಿಯುವ ಮೂಲಜಲವಾಗಿದೆ. ರಾಜ್ಯ ಸರ್ಕಾರ ಮತ್ತು ಜಿಪಂ ಅಂಬೆಜೂಗ ಗ್ರಾಮಕ್ಕೆ ಕಿರು ಸೇತುವೆ ಮಾಡಿಕೊಟ್ಟರೆ ಸಾಕು. ನಾವು ಹಳ್ಳ ದಾಟುವ ಕಷ್ಟ ತಪ್ಪುತ್ತದೆ ಎಂದು ಭಾಗವಾಡ ನಿವಾಸಿ ಶೈಲಜಾ ತಳೇಕರ್‌ ಅಭಿಪ್ರಾಯಪಟ್ಟರು.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೋಕರ್ಣ: 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ-ಸ್ವಾಮೀಜಿ

ಗೋಕರ್ಣ: 12ರಂದು ಎನ್‌ಎಚ್‌ಎಐ ಕಚೇರಿಗೆ ಮುತ್ತಿಗೆ-ಸ್ವಾಮೀಜಿ

Karnataka ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ : ಆರ್.ವಿ.ದೇಶಪಾಂಡೆ

Karnataka ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ : ಆರ್.ವಿ.ದೇಶಪಾಂಡೆ

Swimming; 19 ಕಿಮೀ ಗಂಗಾ ನದಿಯಲ್ಲಿ ಈಜಿ 4ನೇ ಸ್ಥಾನ ಗೆದ್ದ ಗೋಕರ್ಣದ ನೇಹಾ

Swimming; 19 ಕಿಮೀ ಗಂಗಾ ನದಿಯಲ್ಲಿ ಈಜಿ 4ನೇ ಸ್ಥಾನ ಗೆದ್ದ ಗೋಕರ್ಣದ ನೇಹಾ

4-sirsi

Sirsi: ಗುಂಡಿಗದ್ದೆ ಬಳಿ ರಸ್ತೆ ದಾಟಿದ ಚಿರತೆ! : ಸ್ಥಳೀಯರಲ್ಲಿ ಆತಂಕ

Sirsi: ದೇಶಪಾಂಡೆ ಸಿಎಂ ಆಗುವ ತೀರ್ಮಾನ ಪಕ್ಷದ ವರಿಷ್ಠರು ಕೈಗೊಳ್ಳುತ್ತಾರೆ: ಭೀಮಣ್ಣ ನಾಯ್ಕ

Sirsi: ದೇಶಪಾಂಡೆ ಸಿಎಂ ಆಗುವ ತೀರ್ಮಾನ ಪಕ್ಷದ ವರಿಷ್ಠರು ನಿರ್ಧರಿಸುತ್ತಾರೆ: ಭೀಮಣ್ಣ ನಾಯ್ಕ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.