ಜಿಮ್‌ ಬದಲು ಯೋಗ: ಇದು ಗೇಲ್ ಮಂತ್ರ


Team Udayavani, May 16, 2019, 6:00 AM IST

World-Cup,-Chris-Gayle

ಹೊಸದಿಲ್ಲಿ: ಐದನೇ ಹಾಗೂ ಕೊನೆಯ ವಿಶ್ವಕಪ್‌ ಆಡಲಿರುವ ಜಮೈಕನ್‌ ದೈತ್ಯ ಕ್ರಿಸ್‌ ಗೇಲ್ 39ರ ಹರೆಯದಲ್ಲೂ ಫಿಟ್‌ನೆಸ್‌ ಬಗ್ಗೆ ಭಾರೀ ಕಾಳಜಿ ವಹಿಸುತ್ತಿದ್ದಾರೆ. ಇದಕ್ಕಾಗಿ ಅವರು ಜಿಮ್‌ಗೆ ತೆರಳುವುದಿಲ್ಲ, ಬದಲು ಕಳೆದೆರಡು ತಿಂಗಳಿಂದ ಯೋಗದ ಮೊರೆಹೋಗಿದ್ದಾರೆ!

ಫಿಟ್‌ನೆಸ್‌ ಫಾರ್ಮುಲಾ ಕುರಿತು ಮಾತಾಡಿದ ‘ಯುನಿವರ್ಸ್‌ ಬಾಸ್‌’ ಖ್ಯಾತಿಯ ಕ್ರಿಸ್‌ ಗೇಲ್, ‘ಯೋಗ ಮತ್ತು ಮಸಾಜ್‌ ಮಾಡುವುದರಿಂದ ಸಹಜ ಸಾಮರ್ಥ್ಯ ಲಭಿಸುತ್ತದೆ. ಇದರಿಂದ ದಿನವಿಡೀ ಅಂಗಳದಲ್ಲಿ ಕಳೆಯಲು ಸಾಧ್ಯವಾಗುತ್ತದೆ. ಹಾಗೆಯೇ ಸುದೀರ್ಘ‌ ವಿಶ್ರಾಂತಿ ಕೂಡ ಲಭಿಸುತ್ತದೆ’ ಎಂದರು.

ವಿಶ್ವಕಪ್‌ಗೆ ಭರ್ಜರಿ ತಯಾರಿ
ಕಳೆದ ಐಪಿಎಲ್ನಲ್ಲಿ 40.83ರ ಸರಾಸರಿಯಲ್ಲಿ 490 ರನ್‌ ಪೇರಿಸಿದ ಕ್ರಿಸ್‌ ಗೇಲ್ ವಿಶ್ವಕಪ್‌ಗೆ ಭರ್ಜರಿ ತಯಾರಿ ನಡೆಸಿದ್ದಾರೆ. ‘ಇದೊಂದು ಫ‌ನ್ನಿ ಗೇಮ್‌. ವಿಶ್ವಕಪ್‌ ಸಮೀಪಿಸುತ್ತಿರುವಾಗಲೇ ನನ್ನ ಬ್ಯಾಟಿನಿಂದ ರನ್‌ ಹರಿದು ಬರುತ್ತಿದೆ. ನನ್ನ ಈಗಿನ ಬ್ಯಾಟಿಂಗ್‌ ತೃಪ್ತಿ ಹಾಗೂ ಸಂತಸ ಕೊಟ್ಟಿದೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಕ್ರಿಸ್‌ ಗೇಲ್ ಹೇಳಿದರು.

‘ವಯಸ್ಸು ಹೆಚ್ಚುತ್ತಲೇ ಹೋಗುತ್ತದೆ. ನಾವಿನ್ನು ಎಳೆಯರಾ ಗುವುದಿಲ್ಲ. ಆದರೆ ಮಾನಸಿಕವಾಗಿ ಗಟ್ಟಿಯಾಗಿರುವುದು ಮುಖ್ಯ. ಕಳೆದೆರಡು ತಿಂಗಳಿಂದ ನಾನು ಜಿಮ್‌ಗೆ ತೆರಳಿ ದೇಹ ದಂಡಿಸಿಕೊಂಡಿಲ್ಲ. ಇದರ ಬದಲು ಯೋಗ ನಡೆಸುತ್ತಿದ್ದೇನೆ. ಇದರಿಂದ ಪ್ರತಿಯೊಂದು ಪಂದ್ಯಕ್ಕೂ ಫ್ರೆಶ್‌ ಆಗಿ ಕಣಕ್ಕಿಳಿಯಲು ಸಾಧ್ಯವಾ ಗುತ್ತದೆ’ ಎಂದು ಏಕದಿನದಲ್ಲಿ 10,151 ರನ್‌ ರಾಶಿ ಹಾಕಿದ ಗೇಲ್ ಹೇಳಿದರು.

ಒಂದು ಕಾಲದ ಕ್ರಿಕೆಟ್ ದೈತ್ಯ ನೆನಿಸಿಕೊಂಡು ಏಕದಿನ ವಿಶ್ವವನ್ನು ಆಳಿದ ವೆಸ್ಟ್‌ ಇಂಡೀಸ್‌, ಕ್ರಿಸ್‌ ಗೇಲ್ ಕಾಲದಲ್ಲಿ ವಿಶ್ವ ಚಾಂಪಿಯನ್‌ ಆಗಿಲ್ಲ. ಇದೊಂದು ಕೊರತೆ ಅವರನ್ನು ಕಾಡುತ್ತಿದೆ. ತಂಡದ ಯುವ ಆಟಗಾ ರರು ತನಗಾಗಿ ವಿಶ್ವಕಪ್‌ ಗೆದ್ದು ಕೊಡಲಿ, ಇದರಲ್ಲಿ ತನ್ನದೂ ಪಾಲಿರಲಿ ಎಂಬುದು ಗೇಲ್ ಆಶಯ.

ಬೆಂಗಳೂರು, ಮೇ 15: ಭಾರತದ ವಿಶ್ವಕಪ್‌ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ ಇರಬೇಕಿತ್ತು ಎಂಬುದಾಗಿ ಮಾಜಿ ಕ್ರಿಕೆಟಿಗ, 1983ರ ವಿಶ್ವಕಪ್‌ ವಿಜೇತ ತಂಡದ ಸದಸ್ಯ ಸಯ್ಯದ್‌ ಕಿರ್ಮಾನಿ ಹೇಳಿದ್ದಾರೆ.

ಭಾರತದ ಮಧ್ಯಮ ಕ್ರಮಾಂಕ ಹೆಚ್ಚು ಗಟ್ಟಿಯಾಗಿಲ್ಲ ಎಂದು ಅಭಿಪ್ರಾಯಪಟ್ಟ ಕಿರ್ಮಾನಿ, ‘ವಿಜಯ್‌ ಶಂಕರ್‌ ಬದಲು ಕೇದಾರ್‌ ಜಾಧವ್‌ ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸುವುದು ಸೂಕ್ತ. ಅಕಸ್ಮಾತ್‌ ಗಾಯಾಳು ಜಾಧವ್‌ ಲಭ್ಯರಾಗದೇ ಹೋದಲ್ಲಿ ಈ ಅವಕಾಶವನ್ನು ಅಂಬಾಟಿ ರಾಯುಡು ಅವರಿಗೆ ನೀಡಬೇಕು. ಅಜಿಂಕ್ಯ ರಹಾನೆ ಕೂಡ ಸೂಕ್ತ ಆಯ್ಕೆಯಾಗಲಿದೆ’ ಎಂದರು.’ಭಾರತ ತಂಡದ ಮೇಲೆ ನನಗೆ ನಂಬಿಕೆ ಇದೆ. ವಿಶ್ವಕಪ್‌ಗ್ೂ ಮುನ್ನ ಉಳಿದ ತಂಡಗಳೆಲ್ಲ ಸಾಕಷ್ಟು ಏಕದಿನ ಪಂದ್ಯಗಳನ್ನಾಡಿ ತಯಾರಿ ನಡೆಸಿವೆ. ಈ ನಿಟ್ಟಿನಲ್ಲಿ ಭಾರತವೇ ಹಿಂದಿದೆ. ಇದರಿಂದ ಕೊಹ್ಲಿ ಪಡೆಗೇನೂ ಅಡ್ಡಿಯಾಗದು’ ಎಂದರು.

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Diamond League: ಡೈಮಂಡ್‌ ಲೀಗ್‌ ಋತು ಫೈನಲಿಗೆ ನೀರಜ್‌ ಚೋಪ್ರಾ ಅರ್ಹತೆ

Diamond League: ಡೈಮಂಡ್‌ ಲೀಗ್‌ ಋತು ಫೈನಲಿಗೆ ನೀರಜ್‌ ಚೋಪ್ರಾ ಅರ್ಹತೆ

Paralympics closing ceremony: ಸಮಾರೋಪ ಸಮಾರಂಭದಲ್ಲಿ ಹರ್ವಿಂದರ್‌, ಪ್ರೀತಿ ಧ್ವಜಧಾರಿಗಳು

Paralympics: ಸಮಾರೋಪ ಸಮಾರಂಭದಲ್ಲಿ ಹರ್ವಿಂದರ್‌ ಸಿಂಗ್‌, ಪ್ರೀತಿ ಪಾಲ್‌ ಧ್ವಜಧಾರಿಗಳು

US Open: ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಮ್‌: ಪೆಗುಲಾ-ಸಬಲೆಂಕಾ ನಡುವೆ ಫೈನಲ್‌

US Open: ಯುಎಸ್‌ ಓಪನ್‌ ಟೆನಿಸ್‌ ಗ್ರ್ಯಾನ್‌ ಸ್ಲಾಮ್‌: ಪೆಗುಲಾ-ಸಬಲೆಂಕಾ ನಡುವೆ ಫೈನಲ್‌

Paris Paralympics; Another gold for India; Praveen Kumar won gold in high jump

Paralympics; ಭಾರತಕ್ಕೆ ಮತ್ತೊಂದು ಬಂಗಾರ; ಹೈಜಂಪ್‌ ನಲ್ಲಿ ಚಿನ್ನ ಗೆದ್ದ ಪ್ರವೀಣ್‌ ಕುಮಾರ್

Vikram Rathore; Former coach of Team India joined New Zealand team

Vikram Rathour; ನ್ಯೂಜಿಲ್ಯಾಂಡ್‌ ತಂಡ ಸೇರಿದ ಟೀಂ ಇಂಡಿಯಾ ಮಾಜಿ ಕೋಚ್

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.