ತಂಪು ಬಾಟಲಿ ನೀರಿನ ಹೆಸರಲ್ಲಿ ಸುಲಿಗೆ ದಂಧೆ


Team Udayavani, May 16, 2019, 10:08 AM IST

Udayavani Kannada Newspaper

ವಾಡಿ: ಜಲ ಕ್ರಾಂತಿಯ ಕಾಲವೇ ಬೇಸಿಗೆಯಾದರೆ, ಜನರ ಬಾಯಾರಿಕೆಯೇ ಬಾಟಲಿ ನೀರಿನ ಕಂಪನಿಗಳಿಗೆ ಬಂಡವಾಳ. ಅಂತರ್ಜಲ ಬತ್ತಿದ್ದರಿಂದ ಉಂಟಾದ ನೀರಿನ ಬವಣೆ ಸಂದರ್ಭವನ್ನೇ ಬಳಸಿಕೊಳ್ಳುತ್ತಿರುವ ನೀರು ಮಾರಾಟಗಾರರು, ದುಪ್ಪಟ್ಟು ದರ ವಸೂಲಿ ಮಾಡುವ ಮೂಲಕ ಗ್ರಾಹಕರ ಸುಲುಗೆಗೆ ನಿಂತಿದ್ದಾರೆ.

ಕಾಲ ಬದಲಾಗುವುದನ್ನೇ ಕಾಯುತ್ತ ಕುಳಿತಿದ್ದ ನೀರು ದಂಧೆಕೋರರು, ಶುದ್ಧ ಮಿನಿರಲ್ ವಾಟರ್‌ ಹೆಸರಿನಲ್ಲಿ ಬಾಟಲಿಗೆ ನೀರು ತುಂಬಿ ಪಟ್ಟಣದ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಪ್ರಸಕ್ತ ಸಾಲಿನ ಫೆಬ್ರುವರಿ, ಮಾರ್ಚ್‌, ಏಪ್ರಿಲ್ ಹಾಗೂ ಮೇ ತಿಂಗಳು ಪುರ್ತಿ ಮಾರುಕಟ್ಟೆಯಲ್ಲಿ ಅಸಲಿ ಕಂಪನಿಗಳ ಜತೆಗೆ ನಕಲಿ ನೀರಿನ ಕಂಪನಿಗಳ ನೀರು ಜನರ ಗಂಟಲಿಗೆ ಇಳಿದಿದೆ. 10ರೂ.ಗೆ (ಒಂದು ಲೀಟರ್‌) ಸಿಗುವ ಬಾಟಲಿ ನೀರು 20ರೂ.ಗೆ ಮತ್ತು 15ರೂ.ಗೆ ದೊರೆಯುವ ನೀರು 20ರೂ.ಗೆ ಮಾರಾಟವಾಗುತ್ತಿವೆ. ಎಳೆ ನೀರಿನ ಸ್ವಾದ ನೀಡುವ ಮಿನಿರಲ್ ವಾಟರ್‌ಗಳು ಒಂದೆಡೆಯಾದರೆ, ಗಟಾರದ ವಾಸನೆ ಬೀರುವ ನಕಲಿ ಕಂಪನಿಗಳ ಬಾಟಲಿಯ ಅಶುದ್ಧ ನೀರು ಮತ್ತೂಂದೆಡೆ. ಹೀಗೆ ಜನರ ಬಾಯಾರಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ಸುಲಿಗೆ ಕಂಪನಿಗಳು, ರಾಜಾರೋಷವಾಗಿ ಗ್ರಾಹಕರಿಗೆ ಮೋಸ ಮಾಡುತ್ತಿವೆ.

ನಗರ ಮತ್ತು ಪಟ್ಟಣಗಳ ಬೇಕರಿಗಳಲ್ಲಿ, ಹೋಟೆಲ್, ಖಾನಾವಳಿಗಳಲ್ಲಿ ಮಾತ್ರ ಲಭ್ಯವಿರುತ್ತಿದ್ದ ತಂಪು ನೀರಿನ ಬಾಟಲಿಗಳು, ಈಗ ಕಿರಾಣಿ ಅಂಗಡಿ, ಮೊಬೈಲ್ ರಿಚಾರ್ಜ್‌ ಶಾಪ್‌, ಸೈಕಲ್ ಪಂಕ್ಚರ್‌ ಅಂಗಡಿ, ಗುಟುಕಾ, ಪಾನ್‌ ಬೀಡಾ ಅಂಗಡಿಗಳಲ್ಲೂ ಮಾರಾಟವಾಗುತ್ತಿವೆ. ನೀರಿನ ವ್ಯಾಪಾರವು ಹಲವರಿಗೆ ಸ್ವಯಂ ಉದ್ಯೋಗ ಒದಗಿಸಿ ಉಪಜೀವನಕ್ಕೆ ದಾರಿಯಾಗಿದ್ದು ಖುಷಿಯ ಸಮಾಚಾರವೇ ಸರಿ. ಆದರೆ, ಕಲುಷಿತ ನೀರು ಬಾಟಲಿಗೆ ಮತ್ತು ಪ್ಲ್ಯಾಸ್ಟಿಕ್‌ ಪ್ಯಾಕೆಟ್‌ಗಳಿಗೆ ತುಂಬಿ ಸುಲಿಗೆ ದಂಧೆಗಿಳಿದಿರುವ ವಂಚಕರ ದೊಡ್ಡ ಜಾಲ ಆಹಾರ ಇಲಾಖೆ ಅಧಿಕಾರಿಗಳ ಬಲೆಗೆ ಬೀಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಅತ್ತ ನೀರೂ ನಕಲಿ, ಇತ್ತ ದರವೂ ದುಪ್ಪಟ್ಟು. ಇದರ ಪೆಟ್ಟು ನೇರವಾಗಿ ಗ್ರಾಹಕರ ಮೇಲೆ ಬೀಳುತ್ತಿದೆ.

ಸುಡುವ ಬಿಸಿಲ ತಾಪ ತಾಳಲಾಗದೆ ಪದೇಪದೆ ಬಾಯಾರಿಕೆ ಉಂಟಾಗಿ ಒಡಲು ತಂಪು ನೀರು ಬಯಸುವುದು ಸಹಜ. ಹೀಗಾಗಿ ಜನರು ತಂಪು ನೀರಿನ ಬಾಟಲಿ ಖರೀದಿಸುವುದು ಅನಿವಾರ್ಯವಾಗಿದೆ. ನೂರಾರು ಕಂಪನಿಗಳ ಹೆಸರಿನಲ್ಲಿ ಬಾಟಲಿ ನೀರು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದ್ದು, ಶುದ್ಧ ನೀರಿನ ಮಧ್ಯೆ ಅಶುದ್ಧ ನೀರು ಸರಬರಾಜು ಸದ್ದಿಲ್ಲದೆ ಸಾಗಿದೆ. ಬಾಟಲಿಗಳ ಮೇಲೆ ಮುದ್ರಿತವಾದ ದರಕ್ಕೂ ಗ್ರಾಹಕರಿಂದ ವಸೂಲಿ ಮಾಡಲಾಗುತ್ತಿರುವ ಹಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕಂಪನಿಗಳ ಮೋಸ, ವಂಚನೆ ಹಾಗೂ ಸುಲಿಗೆಗೆ ಕಡಿವಾಣ ಹಾಕಬೇಕಿರುವ ಸಂಬಂಧಿತ ಅಧಿಕಾರಿಗಳು ಮೌನ ವಹಿಸಿರುವುದು ಗ್ರಾಹಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಮಡಿವಾಳಪ್ಪ ಹೇರೂರ

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-kharge

Kalaburagi: ಹಂತ- ಹಂತವಾಗಿ ಪಿಸಿಸಿ ಅಧ್ಯಕ್ಷರ ಬದಲಾವಣೆ: ಎಐಸಿಸಿ ಅಧ್ಯಕ್ಷ ಖರ್ಗೆ

13-

Kalaburagi: ಜಾತ್ರೆಗಳಲ್ಲಿ ಕಾರುಗಳ ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳರ ತಂಡ ಬಂಧನ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

Kalaburagi: 5 ಲಕ್ಷ ರೂ. ಸುಪಾರಿ ಕೊಟ್ಟು ಪತಿ ಕಾಲು ಮುರಿಸಿದ ಪತ್ನಿ

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

MUDA Case: ಸಿಎಂಗೆ ಕೋರ್ಟ್ ರಿಲೀಫ್; ಸತ್ಯ ಮೇವ ಜಯತೆ ಎಂದ ಸಚಿವ ಈಶ್ವರ ಖಂಡ್ರೆ‌

Yathanaa

BJP Rift: ಬಿ.ವೈ.ವಿಜಯೇಂದ್ರ ಪುನರಾಯ್ಕೆ ಆದರೆ ನಮ್ಮ ನಿರ್ಧಾರ ಪ್ರಕಟ: ಶಾಸಕ ಯತ್ನಾಳ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.