ಪರಂಪರೆಯಲ್ಲಿ ಮೂಡಿಬಂದ ಲಂಕಿಣಿ ಮೋಕ್ಷ-ಗರುಡ ಗರ್ವಭಂಗ


Team Udayavani, May 17, 2019, 6:00 AM IST

1

ಕೊಡಂಕೂರು ಶ್ರೀಸತ್ಯಸಾಯಿ ಮಂದಿರದಲ್ಲಿ ರಾಮ ನವಮಿ ಉತ್ಸವದಂಗವಾಗಿ ಭಗವತಿ ಯಕ್ಷಗಾನ ಬಳಗದ ಹವ್ಯಾಸಿ ಕಲಾವಿದರಿಂದ “ಲಂಕಿಣಿ ಮೋಕ್ಷ’ ಮತ್ತು “ಗರುಡ ಗರ್ವಭಂಗ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.

ಪರದೆಯ ಹಿಂದೆ ಮತ್ತು ಮುಂದೆ ಹನುಮಂತನ (ಕು| ವಿಂಧ್ಯಾ ಆಚಾರ್ಯ) ಒಡ್ಡೋಲಗವು ಪರಂಪರೆಯ ಮತ್ತು ಶಾಸ್ತ್ರೀಯ ಹಿನ್ನೆಲೆಯಲ್ಲಿತ್ತು. ನೃತ್ಯದಲ್ಲಿ ವೈವಿಧ್ಯ, ದೃಷ್ಟಿ, ಚಲನೆ, ಅಂಗ ಚೇಷ್ಟೆ, ದಶಾವತಾರದ ನೃತ್ಯವನ್ನು ಅಳವಡಿಸಿದ್ದು ಸ್ವಚ್ಚವಾದ, ಶ್ರುತಿಬದ್ಧವಾದ ಅರ್ಧಗಂಟೆಯ ನೃತ್ಯ ಚಪ್ಪಾಳೆಗಿಟ್ಟಿಸಿಕೊಂಡಿತು.

ರಾಮ (ಮಾ| ಸಮರ್ಥ) ಜಾಂಬವಂತ (ಮಾ| ಶ್ರೀಶ ಕೆದ್ಲಾಯ ) ಲಕ್ಷ್ಮಣ (ಮಾ| ರಘುವೀರ), ಸುಗ್ರೀವ (ಕು| ಹರ್ಷಿತಾ)ರೊಂದಿಗೆ 7 ವಾನರರ ಪ್ರವೇಶವಾಯಿತು. ರಾಮನು ಸೀತಾನ್ವೇಷಣೆಗೆ ಲಂಕೆಗೆ ಕಳುಹಿಸಬೇಕು ಎಂದು ಪೀಠಿಕೆಯ ಹಿನ್ನೆಲೆಯಲ್ಲಿ ವಿವರಿಸಿದ್ದು ಲಕ್ಷ್ಮಣ, ಸುಗ್ರೀವರ ಕುಣಿಕೆ ಹಾಗೂ ಮಾತುಗಾರಿಕೆಯು ಪೂರಕವಾಗಿತ್ತು. ನೀನೇ ಕಲಿ ಹನುಮ ಎಂಬ ಪದಕ್ಕೆ ಹನುಮನ ನೃತ್ಯವೂ ಮನಮೋಹಕವಾಗಿತ್ತು. ಜಾಂಬವಂತರು ಪ್ರಾಯಕ್ಕೆ ತಕ್ಕಂತೆ ಕುಣಿದರು. ಹನುಮನು ಲಂಕೆಯನ್ನು ದಾಟಿ ಮುಂದೆ ಹೋಗಲು ಸೂಚನೆ ನೀಡಿದರು.

ಲಂಕಿಣಿ (ಪ್ರಮೋದ ತಂತ್ರಿ) ವೇಷವು ಭರ್ಜರಿಯಾಗಿತ್ತು ಮತ್ತು ಪಾರಂಪರಿಕ ನೃತ್ಯ ಆಕರ್ಷಣೀಯವಾಗಿತ್ತು. ಮಧ್ಯರಾತ್ರಿ ಕಾಲದಲ್ಲಿ ಪದಕ್ಕೆ ಹನುಮ ಲಂಕಿಣಿಯರ ಸಂಭಾಷಣೆಯು ಅಮೋಘವಾಗಿತ್ತು. ಮಹಾಶಿವನ ಶಾಪಗ್ರಸ್ತ ಲಂಕಿಣಿಯು ರಾಮಭಕ್ತ ಹನುಮನಿಂದ ಮೋಕ್ಷಗೊಳ್ಳುವುದು ಇಲ್ಲಿನ ಕಥಾಭಾಗ.

ಗರುಡ ಗರ್ವಭಂಗದಲ್ಲಿ ಶ್ರೀಕೃಷ್ಣನ (ನಿರುಪಮಾ ತಂತ್ರಿ) ಪೀಠಿಕೆಯಲ್ಲಿ ತನ್ನ ಜನ್ಮ ಮತ್ತು ಮಥುರೆಯಲ್ಲಿ ಕಂಸವಧೆ , ಸಮುದ್ರ ಮಧ್ಯೆ ಮಯನಿಂದ ದ್ವಾರಕೆಯ ನಿರ್ಮಾಣ ಹಾಗೂ ಅಣ್ಣ ಬಲರಾಮನಿಗೆ ಯಜಮಾನಿಕೆಯನ್ನು ಕೊಟ್ಟ ಸನ್ನಿವೇಶ ಹಾಗೂ ಬಲರಾಮನ ಅಹಂಕಾರವನ್ನು ಸೂಕ್ಷ್ಮವಾಗಿ ವಿವರಿಸಿದರು.

ಹನುಮಂತ (ನಾಗರಾಜ) ಉತ್ತಮ ನರ್ತನ ಮತ್ತು ಅಭಿನಯಗಳಿಂದ ಗಮನ ಸೆಳೆದರು. ಬಲರಾಮ (ಡಾ| ಸುನೀಲ್‌ ಮುಂಡ್ಕೂರು) ಪೀಠಿಕೆಯಲ್ಲಿ ಯಯಾತಿಯ ಶಾಪ ಮಾಗಧನಿಗೆ ಹೆದರಿ ದ್ವಾರಕೆಯ ನಿರ್ಮಾಣ ಯಾದವ ಸೇನೆಯನ್ನು ಒಟ್ಟುಗೂಡಿಸಿ, ಹಲಧರ ಎನಿಸಿ ರೇವತಿಯೊಂದಿಗೆ ವಿವಾಹವಾಗಿ ಆಡಳಿತವನ್ನು ನಡೆಸುತ್ತಿದ್ದೇನೆ ಎಂಬ ಪುರಾಣ ಕಥೆಯನ್ನು ಪ್ರಾಸಬದ್ಧವಾಗಿ ರಸವತ್ತಾಗಿ ಹೇಳಿದರು.

ಹನುಮನು ಶ್ರೀರಾಮ ಶ್ರೇಷ್ಠ ಎಂದರೆ ಬಲರಾಮ ತಾನೇ ಶ್ರೇಷ್ಠ ಎಂಬ ಚರ್ಚೆಯು ಯುದ್ಧದಲ್ಲಿ ಅಂತ್ಯಗೊಂಡು ಬಲರಾಮನ ಗರ್ವವನ್ನು, ಅಹಂಕಾರವನ್ನು ಸದೆಬಡಿಯುವಲ್ಲಿ ಪರಿಣಾಮಕಾರಿಯಾಗಿ ಮೂಡಿಬಂತು.

ಎರಡನೇ ಕೃಷ್ಣನಾಗಿ (ಕು| ಪ್ರಣಮ್ಯಾ ತಂತ್ರಿ) ಉತ್ತಮ ವೇಷಭೂಷಣ ಮತ್ತು ನೃತ್ಯ ಸಂಯೋಜನೆಯಿಂದ ಗಮನ ಸೆಳೆದರು. ಬಲರಾಮ ಮತ್ತು ಕೃಷ್ಣನ ಸಂವಾದವು ಹಾಸ್ಯಮಯವಾಗಿತ್ತು. ಬಲರಾಮನು ತನ್ನ ಸೋಲನ್ನು ಒಪ್ಪದೆ ಪರದಾಡುತ್ತಿರುವುದನ್ನು ಕೃಷ್ಣನು ಗಮನಿಸಿ ತನ್ನ ವಾಹನ ಗರುಡನ (ಅಶ್ವಿ‌ತ್‌ ಸರಳಾಯ) ಗರ್ವವನ್ನು ಮುರಿಯಬೇಕೆಂದು ಹನುಮನೆಡೆಗೆ ಕಳುಹಿಸುವನು. ಗರುಡನ ಆರ್ಭಟಯುತ್ತ ನೃತ್ಯ ಮತ್ತು ಅಮೃತ ತಂದ ಪರಾಕ್ರಮ ಇತ್ಯಾದಿಗಳು ಗಂಭೀರವಾಗಿ ಪ್ರಸ್ತುತವಾಯಿತು . ಹನುಮಂತ ಮತ್ತು ಗರುಡರ ನಡುವೆ ಸಂವಾದ ನಡೆದು ಗರುಡ ಗರ್ವಭಂಗವಾಯಿತು. ಈ ಪ್ರಸಂ‌ಗಳ ಬಾಲಕಲಾವಿದರು ಮಾ|ಧೀರಜ್‌, ಸುಧನ್ವ ಮುಂಡ್ಕೂರು, ಸುಮನ್ಯು ಮುಂಡ್ಕೂರು.

ಭಾಗವತರಾಗಿ ದೇವಿಪ್ರಸಾದ ಕಟೀಲು , ಮದ್ದಳೆಗಾರರಾಗಿ ನೆಕ್ಕರೆ ಮೂಲೆ ಗಣೇಶ್‌ ಭಟ್‌, ಚೆಂಡೆಯಲ್ಲಿ ಮುರಾರಿ ಕಡಂಬಳಿತ್ತಾಯ ಮತ್ತು ಚಕ್ರತಾಳದಲ್ಲಿ ರಾಮಕೃಷ್ಣ ನಂದಿಕೂರು ಸಹಕರಿಸಿದರು.

ಡಾ|ಸುನಿಲ್‌ ಸಿ. ಮುಂಡ್ಕೂರು

ಟಾಪ್ ನ್ಯೂಸ್

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.