ಮುದ ನೀಡಿದ ಪಂಚ ದಿನ ಯಕ್ಷೋತ್ಸವ


Team Udayavani, May 17, 2019, 6:00 AM IST

3

ರಾಮ ನವಮಿ ಆರಾಧನ ಮಂಡಳಿ(ರಿ.) ಕುಳಾಯಿ ಇದರ 17ನೇ ವರ್ಷದ ರಾಮೋತ್ಸವದ ಸಲುವಾಗಿ ನಿರಂತರ 5ದಿನ ಸರಣಿ ಯಕ್ಷಗಾನ ಬಯಲಾಟವು ಜರಗಿತು.

ಮೊದಲ ದಿನದಲ್ಲಿ ಜಯ- ವಿಜಯ ಮತ್ತು ಹಿರಣಾಕ್ಷ ಆಖ್ಯಾನವನ್ನು ಆಡಿ ತೋರಿಸಲಾಯಿತು. ತ್ರಿಜನ್ಮ ಮೊಕ್ಷದ ಜಯ- ವಿಜಯದಿಂದ ಮೂರು ಪ್ರಸಂಗಗಳನ್ನು ಎಲ್ಲೂರು ರಾಮಚಂದ್ರ ಭಟ್ರರ ಯಕ್ಷಕೂಟ ಕದ್ರಿ ಇದರ ಕಲಾವಿದರು ಪ್ರದರ್ಶಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ದಯಾನಂದ ಕೋಡಿಕಲ್‌, ಚೆಂಡೆಯಲ್ಲಿ ಸುಬ್ರಮಣ್ಯ ಚಿತ್ರಾಪುರ, ಮದ್ದಲೆಯಲ್ಲಿ ಕೃಷ್ಣರಾಜ ನಂದಳಿಕೆ ಸಹಕರಿಸಿದರು. ದಯಾನಂದ ಕೋಡಿಕಲ್‌ ತನ್ನ ನೈಜ ಸುಶ್ರಾವ್ಯ ಕಂಠದಿಂದ ಜನಸ್ತೋಮವನ್ನು ರಂಜಿಸಿದರು. ಮಮ್ಮೇಳದಲ್ಲಿ ರಂಜಿತಾ ಎಲ್ಲೂರು, ತನ್ನ ಗತ್ತು ಗಾಂಭಿರ್ಯದ ನೈಜ ನಟನೆಯನ್ನು ಮೆರೆದರು. ಉಳಿದಂತೆ ವನಿತಾ ಆರ್‌. ಭಟ್‌, ರಕ್ಷಿತಾ ಎಲ್ಲೂರು, ಪ್ರಕೃತಿ, ಪೂರ್ಣಿಮಾ, ಶ್ರೀಶ ಕದ್ರಿಯವರು ತಮ್ಮ ಒಳಗಿರುವ ನಟನೆಯನ್ನು ಪ್ರದರ್ಶಿಸಿ ಮುದ ನೀಡಿದರು.

ಎರಡನೇ ದಿನ ತ್ರಿಜನ್ಮ ಮೋಕ್ಷದ ಮುಂದುವರಿದ ಭಾಗ ಹಿರಣ್ಯಕಶ್ಯಪು, ರಾವಣ-ಕುಂಭಕರ್ಣ, ಆಖ್ಯಾನವು ಪ್ರದರ್ಶಿಸಲ್ಪಟ್ಟಿತು. ಭಾಗವತರಾಗಿ ದಯಾನಂದ ಕೋಡಿಕಲ್‌, ಚೆಂಡೆಯಲ್ಲಿ ಸುಬ್ರಮಣ್ಯ ಚಿತ್ರಾಪುರ, ಮದ್ದಲೆಯಲ್ಲಿ ನಂದಳಿಕೆ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ತೆಂಕು ತಿಟ್ಟುವಿನ ಪ್ರಸಿದ್ಧ ಸ್ತ್ರೀ ವೇಷಧಾರಿ ಸಂಜಯ್‌ ಕುಮಾರ್‌ ಗೋಣಿ ಬೀಡು ಖಯಾದುವಿನ ಪಾತ್ರದಲ್ಲಿ ಮಿಂಚಿದರು. ಹಿರಣ್ಯಕಶ್ಯಪುವಾಗಿ ವಿಜಯಕುಮಾರ್‌ ಶೆಟ್ಟಿ ಮೈಲೊಟ್ಟು ಪಾತ್ರಕ್ಕೆ ತಕ್ಕ ಗಣತೆಯನ್ನು ತಂದುಕೊಟ್ಟರು. ಉಳಿದಂತೆ ರಾಮಕೃಷ್ಣ ನಂದಿಕೂರು, ಸುರೇಶ್‌ ಕೊಲಕಾಡಿ, ಸಚಿನ್‌ ಉದ್ಯಾವರ,ಆಯುಷ್‌ ಕುಲಾಲ್‌ ತಮ್ಮ ಪಾತ್ರಕ್ಕೆ ತಕ್ಕಂತೆ ರಂಗಕ್ಕೊಂದು ಮೆರಗು ಕೊಟ್ಟರು.

ಮೂರನೇ ದಿನ ಜಯ- ವಿಜಯರ ಮೂರನೇ ಮತ್ತು ಕೊನೆಯ ಅವತಾರ ಶಿಶುಪಾಲ- ದಂತವಕ್ರ ಆಖ್ಯಾನವು ಬಯಲಾಟವಾಗಿ ಮೂಡಿ ಬಂತು. ಹಿಮ್ಮೇಳದಲ್ಲಿ ಕೋಡಿಕಲ್‌,ನಂದಳಿಕೆ, ಚಿತ್ರಾಪುರ,ಮುಮ್ಮೇಳದಲ್ಲಿ ಶಿಶುಪಾಲರಾಗಿ ಎಲ್ಲೂರು ರಾಮಚಂದ್ರ ಭಟ್‌ ರಂಗದಲ್ಲಿ ತಮ್ಮ ನೈಜ ಅಭಿನಯ ಚಾತುರ್ಯದಿಂದ ಜನರ ಮನಮುಟ್ಟಿದರು. ದಂತವಕ್ರನಾಗಿ ರಾಮಕೃಷ್ಣ ನಂದಿಕೂರು ವಿಜೃಂಭಿಸಿದರು. ಭಗದತ್ತನಾಗಿ ನಿತಿನ್‌ ಕುತ್ತೆತ್ತೂರು ಸಹಜ ಅಭಿನಯದಿಂದ ಗಮನ ಸೆಳೆದರು.

ನಾಲ್ಕನೇ ದಿನದ ಭಕ್ತ ಪಾರಮ್ಯ (ಸುದರ್ಶನ) ಆಖ್ಯಾನವು ಹೆಚ್ಚಿನ ಮಹತ್ವ ಪಡೆಯಿತು. ಕಾರಣ ಇಲ್ಲಿ ತೆಂಕುತಿಟ್ಟುವಿನ ಪ್ರಸಿದ್ಧ ಭಾಗವತರಾದ ಪಟ್ಲ ಸತೀಶ್‌ ಶೆಟ್ಟರ ಭಾಗವತಿಕೆಯನ್ನು ಕೇಳಲೆಂದೆ ಜನರು ಸೇರಿದ್ದರು. ಅವರೊಂದಿಗೆ ಮದ್ದಲೆಯಲ್ಲಿ ಕೃಷ್ಣಪ್ರಸಾದ್‌ ಉಳಿತ್ತಾಯ, ಚೆಂಡೆಯಲ್ಲಿ ಪದ್ಮನಾಭ ಉಪಾಧ್ಯಾಯ, ಚಕ್ರತಾಳದಲ್ಲಿ ಅನಿರುದ್ಧ ಅತ್ತಾವರ ಭಾಗವಹಿಸಿದ್ದರು.ಸುದರ್ಶನನಾಗಿ ಕು|ರಂಜಿತಾ ಎಲ್ಲೂರರ ನಟನೆಗೆ ಜನಸ್ತೋಮ ಬೆರಗಾಯಿತು. ಯಕ್ಷಗಾನದ ಯಾವುದೇ ದೊಡ್ಡ ಕಲಾವಿದರಿಗೆ ಸರಿಸಮಾನವಾಗಿ ಅಭಿನಯಿಸಿದ್ದರು ಉಳಿದಂತೆ ಎಲ್ಲರ ನಟನೆಯು ಸಾಮಾನ್ಯವಾಗಿತ್ತು.

ಕೊನೆಯ ದಿನ ರಾಮೇಶ್ವರ ಮಹಾತ್ಮೆ, ರಾಮ ಪಟ್ಟಾಭಿಷೇಕ ಭಾಗವತರಾಗಿ ಪ್ರಪುಲ್ಲ ಚಂದ್ರ ನೆಲ್ಯಾಡಿ ಇದ್ದರು. ಮುಮ್ಮೇಳದಲ್ಲಿ ರಾಮನಾಗಿ ಉಜಿರೆ ಅಶೋಕ್‌ ಭಟ್‌ ತಮ್ಮ ವಾಕ್‌ ಚಾತುರ್ಯದಿಂದ ಮನ ಗೆದ್ದರು. ಸೀತೆಯಾಗಿ ಸಂಜಯ್‌ ಕುಮಾರ್‌ ಗೋಣಿಬೀಡು ಸರಿಸಾಟಿಯಾಗಿ ಅಭಿನಯಿಸಿದರು. ಹನುಮಂತನಾಗಿ ಎಲ್ಲೂರು ರಾಮಚಂದ್ರ ಭಟ್‌ ಇವರ ಅಭಿನಯ ಮನೋಜ್ಞವಾಗಿತ್ತು.

ಯೋಗೀಶ್‌ ಕಾಂಚನ್‌

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.