ಅಸ್ತಂಗತರಾದ ಹಾಸ್ಯಗಾರ ಚಂದ್ರ ಶೆಟ್ಟಿ


Team Udayavani, May 17, 2019, 5:50 AM IST

5

ಬಡಗುತಿಟ್ಟು ಬಯಲಾಟ ರಂಗಭೂಮಿಯ ಅಗ್ರಮಾನ್ಯ ಹಾಸ್ಯಗಾರ, ಕಮಲಶಿಲೆ ಒಂದನೇ ಮೇಳದ ಪ್ರಧಾನ ಹಾಸ್ಯಗಾರ ಬೆದ್ರಳ್ಳಿ ಚಂದ್ರ ಶೆಟ್ಟಿ 54ನೇ ವಯಸ್ಸಿನಲ್ಲಿ ಯಕ್ಷಗಾನರಂಗವನ್ನಗಲಿ ಹೋಗಿದ್ದಾರೆ.

ಸುಮಾರು 4 ದಶಕಗಳ ಕಾಲ ಬಡಗುತಿಟ್ಟಿನ ಬಯಲಾಟ ರಂಗಸ್ಥಳವನ್ನು ಹಾಸ್ಯ ಪಾತ್ರಗಳಿಂದ ಎತ್ತರಕ್ಕೇರಿಸಿದ ಅವರು ಎಳವೆಯಲ್ಲಿಯೇ ಯಕ್ಷಗಾನವನ್ನು ವೃತ್ತಿಯಾಗಿ ಪರಿಗಣಿಸಿದವರು.ಪಾತ್ರನಿಷ್ಠರಾಗಿ ಗರಿಷ್ಟ ಮಟ್ಟದ ಹಾಸ್ಯರಸವನ್ನು ಬಿಂಬಿಸುವ ಅನುಭವಿ ಕಲಾವಿದರಾದ ಅವರು 16ರ ಹರೆಯದಲ್ಲಿ ಕಲಾಲೋಕ ಪ್ರವೇಶಿಸಿದರು.ಇವರ ತಂದೆ ಹವ್ಯಾಸಿ ಕಲಾವಿದರಾಗಿದ್ದು ಕಲೆಯ ನಂಟುತನ ಆ ಮೂಲಕ ಅವರಿಗೆ ಪ್ರಾಪ್ತವಾಗಿತ್ತು.ಮಾರಣಕಟ್ಟೆ ಮೇಳದಲ್ಲಿದ್ದ ಆಗಿನ ಹಿರಿಯ ಹಾಸ್ಯಗಾರ ದರ್ಲ್ಯಾಣಿ ನಾಗಯ್ಯ ಶೆಟ್ಟರಿಂದ ಯಕ್ಷಗಾನ ಶಿಕ್ಷಣ ಪಡೆದ ಅವರು ವೃತ್ತಿ ಮೇಳದಲ್ಲಿ ಸುಯೋಗ್ಯ ವಿದೂಷಕರಾಗಿ ಬಹುಬೇಗ ಗುರುತಿಸಿಕೊಂಡರು.ಸೌಕೂರು ಮೇಳದಲ್ಲಿ ಗೆಜ್ಜೆ ಕಟ್ಟಿದ ಅವರು ಬಳಿಕ ಕಳುವಾಡಿ, ಅಮೃತೇಶ್ವರಿ, ಮಡಾಮಕ್ಕಿ, ಕಮಲಶಿಲೆ, ಸಿಗಂದೂರು ಮತ್ತಿತರ ಮೇಳಗಳಲ್ಲಿ ಸುಮಾರು 38 ವರ್ಷಗಳ ಕಾಲ ಕಲಾಸೇವೆ ಮಾಡಿದ್ದರು.ಹಾಸ್ಯ ಭೂಮಿಕೆಗೊಪ್ಪುವ ಆಳಂಗ ವೇಷ, ಭಾಷೆ, ನೃತ್ಯ, ಆಂಗಿಕಾಭಿನಯ, ರಂಗನೆಡೆಯನ್ನು ಹೊಂದಿದ ಅವರು ಬಯಲಾಟದ ಪೌರಾಣಿಕ ಪ್ರಸಂಗಗಳ ಹಾಸ್ಯಕ್ಕೆ ಗರಿಷ್ಟ ಮಟ್ಟದ ನ್ಯಾಯ ಒದಗಿಸಿದ್ದರು.ಹಾಗಾಗಿ ಅವರ ಬೇಡರ ಕಣ್ಣಪ್ಪದ ಮಾಣಿ, ಭೀಷ್ಮ ವಿಜಯ, ದಕ್ಷಯಜ್ಞ ಮುಂತಾದ ಪ್ರಸಂಗಗಳ ಬ್ರಾಹ್ಮಣ, ಕನಕಾಂಗಿ ಕಲ್ಯಾಣದ ರಕ್ಕಸದೂತ ಬಲರಾಮ ದೂತ,ಬಾಹುಕ,ಕಂದರ, ಚಂದಗೋಪ, ಚಂದ್ರಾವಳಿ ವಿಲಾಸ ಮತ್ತು ಚಿತ್ರಾಕ್ಷಿ ಕಲ್ಯಾಣ ಅಜ್ಜಿ, ಮೂಖಾಸುರ,ಕಪ್ಪದ ದೂತ,ಕಮಲಭೂಪ ದೂತ ಮುಂತಾದ ಪಾತ್ರಗಳು ಅಪಾರ ಜನಮನ್ನಣೆ ಪಡೆದಿವೆ. ಶೆಟ್ಟರು ಅನೇಕ ಶಿಷ್ಯರನ್ನು ಸೃಷ್ಟಿಸಿದ್ದರೂ ಬಯಲಾಟ ಮೇಳಗಳಲ್ಲೇ ಸೇವೆ ಸಲ್ಲಿಸಿದ್ದರಿಂದ ಅವರ ಪ್ರತಿಭೆ, ಕೀರ್ತಿ ಎಲ್ಲವೂ ಎಲೆಯ ಮರೆಯಾಗಿಯೇ ಉಳಿಯಿತು ಎನ್ನುವುದು ನಿಷ್ಟುರವಾದ ಸತ್ಯ.

ಚಂದ್ರ ಶೆಟ್ಟಿಯವರ ಇನ್ನೊಂದು ಪ್ರತಿಭೆ ಯಕ್ಷಗಾನ ಪ್ರಸಂಗ ರಚನೆ. ಅನೇಕ ಮೌಲ್ಯಯುತ ಆಧುನಿಕ ಪ್ರಸಂಗಗಳನ್ನು ರಚಿಸಿದ ಕೀರ್ತಿ ಅವರಿಗೆ ಸಂದಿದೆ. ದೈವ ಸಂಕಲ್ಪ, ಸೌಮ್ಯಸುಗಂಧಿ, ಜ್ಯೋತಿ ಚಂದ್ರಮ,ನಾಗದರ್ಶನ,ಸೌಮ್ಯಶ್ರೀ ಮುಂತಾದ ಅವರ ಪ್ರಸಂಗಗಳು ಅನೇಕ ಮೇಳಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿದ್ದವು.

ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.