ದಂಪತಿ ಬಾಳು ಬೆಳಗಿದ ಅಗರಬತ್ತಿ

20 ವರ್ಷದಿಂದ ಅಗರಬತ್ತಿ ತಯಾರಿಸುವ ಕಾಯಕ

Team Udayavani, May 17, 2019, 5:13 PM IST

haveri-tdy-5..

ಅಗರಬತ್ತಿ ತಯಾರಿಕೆಯಲ್ಲಿ ಚನ್ನೇಶಶಾಸ್ತ್ರಿ ಮಠದ.

ಹಿರೇಕೆರೂರ: ಕುಂಬಾರ ಓಣಿ ನಿವಾಸಿಯಾದ ಚನ್ನೇಶಶಾಸ್ತ್ರಿ-ಜಯಮ್ಮ ಮಠದ ದಂಪತಿ ಕಳೆದ 20 ವರ್ಷಗಳಿಂದ ಅಗರಬತ್ತಿ ತಯಾರಿಸುವ ಕಾಯಕದಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ. ಓಂ ಅಗರಬತ್ತಿ ಹೆಸರಿನಲ್ಲಿ ಇವರು ತಯಾರಿಸುವ ಅಗರಬತ್ತಿಗಳು ಹಿರೇಕೆರೂರ, ಚಿಕ್ಕೇರೂರು ಮಾರುಕಟ್ಟೆ ಸೇರಿದಂತೆ ತಾಲೂಕಿನಲ್ಲಿ ಸುವಾಸನೆ ಬೀರುತ್ತಿವೆ.

ಮೊದಲು ಅಗರಬತ್ತಿ ತಯಾರಿಸಲು ಅಕ್ಕಪಕ್ಕದ ಮನೆಗಳ ಆಯ್ದ ಮಹಿಳೆಯರಿಗೆ ಕಚ್ಚಾವಸ್ತುಗಳನ್ನು ನೀಡಿ ಅವರಿಗೆ ಕೂಲಿಯನ್ನು ಕೊಟ್ಟು ಅಗರಬತ್ತಿ ತಯಾರು ಮಾಡಿಸುತ್ತಿದ್ದರು. ಅವುಗಳನ್ನು ಪಟ್ಟಣದಲ್ಲಿ ನಡೆಯುವ ವಾರದ ಸಂತೆ ಹಾಗೂ ಚಿಕ್ಕೇರೂರು ಗ್ರಾಮದಲ್ಲಿ ನಡೆಯುವ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು.

ಉತ್ತಮ ಗುಣಮಟ್ಟದ ಅಗರಬತ್ತಿ ಆಗಿರುವುದರಿಂದ ಹಾಗೂ ಕಡಿಮೆ ಬೆಲೆಯಲ್ಲಿ ಹೆಚ್ಚು ದೊರೆಯುವುದರಿಂದ ಗ್ರಾಹಕರನ್ನು ಸೆಳೆಯಲು ಸಾಧ್ಯವಾಯಿತು. ಕೆಜಿ ಲೆಕ್ಕದಲ್ಲಿ ಅಗರಬತ್ತಿ ಮಾರಾಟ ಆರಂಭಿಸಿದ ಮೊದಲಿಗ ನಾನು. ಅಂಗಡಿಗಳಿಗೆ ಮಾರಾಟ ಮಾಡದೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದರಿಂದ ಕಡಿಮೆ ಬೆಲೆಯಲ್ಲಿ ಅಗರಬತ್ತಿ ಗ್ರಾಹಕರಿಗೆ ಸಿಗುವಂತಾಯಿತು. ಈಗ ನಮಗೆ ಕಾಯಂ ಗ್ರಾಹಕರು ಇದ್ದಾರೆ ಎಂದು ಚನ್ನೇಶಶಾಸ್ತ್ರಿ ಹೇಳುತ್ತಾರೆ.

ಜಾಗತೀಕರಣದ ಪರಿಣಾಮ ಮಾರುಕಟ್ಟೆಯಲ್ಲಿ ನಡೆಯುವ ಸ್ಪರ್ಧೆಯಿಂದ ಒಂದಿಷ್ಟು ವ್ಯಾಪಾರ ಕುಂಠಿತಗೊಂಡಿದೆ. ಕಾರ್ಮಿಕರ ಕೊರತೆ ಸಹ ಕಾಡುತ್ತಿದೆ ಎನ್ನುವುದು ಅವರ ಅಭಿಪ್ರಾಯ. ಬದಲಾವಣೆಗೆ ಹೊದಿಕೊಳ್ಳಬೇಕೆಂಬ ಮನೋಭಾವದಿಂದ 3 ವರ್ಷಗಳ ಹಿಂದೆ ಸುಮಾರು 2.50 ಲಕ್ಷ ರೂ. ತೊಡಗಿಸಿ 2 ಅಗರಬತ್ತಿ ತಯಾರಿಸುವ ಯಂತ್ರಗಳನ್ನು ಖರೀದಿಸಿದ್ದಾರೆ. ಪರಿಣಾಮವಾಗಿ ಕಾರ್ಮಿಕರ ಅವಲಂಬನೆ ಇಲ್ಲದೇ ಪತ್ನಿ ಜಯಮ್ಮನ ಜೊತೆಗೆ ಸೇರಿಕೊಂಡು ಇಬ್ಬರೇ ಅಗರಬತ್ತಿ ತಯಾರಿಸುವ ಕಾಯಕವನ್ನು ಮುಂದುವರೆಸಿದ್ದಾರೆ. ಯಂತ್ರದ ಮೂಲಕ ತಯಾರಿಸುವ ಅಗರಬತ್ತಿಗಳು ಕೈಯಿಂದ ತಯಾರಿಸಿದ ಅಗರಬತ್ತಿಗಳಿಗಿಂತ ದಪ್ಪ ಇರುತ್ತವೆ. ಕಾರ್ಮಿಕರ ಕೊರತೆಯಿಂದ ಅನಿವಾರ್ಯವಾಗಿ ಯಂತ್ರಗಳಿಗೆ ಹೊಂದಿಕೊಳ್ಳಬೇಕಾಯಿತು ಎನ್ನುತ್ತಾರೆ ಚನ್ನೇಶಶಾಸ್ತ್ರಿ.

ಕಚ್ಚಾ ವಸ್ತುಗಳನ್ನು ಸಗಟು ಖರೀದಿ ಮೂಲಕ ಬೆಂಗಳೂರಿನಿಂದ ಖರೀದಿಸಿ ತರುವ ಇವರು 5 ಬಗೆಯ ಸುವಾಸನೆಯುಳ್ಳ ಅಗರಬತ್ತಿ ತಯಾರಿಸುತ್ತಾರೆ. ಓಂ ಅಗರಬತ್ತಿ ಹೆಸರಿನಲ್ಲಿ ಇವರು ತಯಾರಿಸುವ ಅಗರಬತ್ತಿಗಳು ತಾಲೂಕಿನಲ್ಲಿ ಸುವಾಸನೆ ಬೀರುತ್ತಿವೆ.

.ಸಿದ್ಧಲಿಂಗಯ್ಯ ಗೌಡರ್‌

ಟಾಪ್ ನ್ಯೂಸ್

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಕ್ಕಳಿಗೆ ಉತ್ತಮ ಶಿಕ್ಷಣ-ಸಂಸ್ಕಾರ ‌ಕಲಿಸಿ: ಚೌಡಯ್ಯ ಸ್ವಾಮೀಜಿ

ಮಕ್ಕಳಿಗೆ ಉತ್ತಮ ಶಿಕ್ಷಣ-ಸಂಸ್ಕಾರ ‌ಕಲಿಸಿ: ಚೌಡಯ್ಯ ಸ್ವಾಮೀಜಿ

ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಬಲ್ಲ ದು ಕ್ರೀಡೆ-ಮಮತಾ ಆರೆಗೊಪ್ಪ

pramod muthalik

Haveri; ಮುಸ್ಲಿಮರನ್ನು ಬಹಿಷ್ಕರಿಸಿ, ಅವರ ಜತೆ ಯಾವುದೇ ವ್ಯವಹಾರ ಮಾಡಬೇಡಿ: ಮುತಾಲಿಕ್‌ ಕಿಡಿ

ಸಾಹಿತ್ಯ ಸಮಾಜ ಮುಖಿಯಾಗಿರಲಿ: ಡಾ| ಎಂ.ಈ. ಶಿವಕುಮಾರ ಹೊನ್ನಾಳಿ

ಸಾಹಿತ್ಯ ಸಮಾಜ ಮುಖಿಯಾಗಿರಲಿ: ಡಾ| ಎಂ.ಈ. ಶಿವಕುಮಾರ ಹೊನ್ನಾಳಿ

ಗಣೇಶೋತ್ಸವ ಹಿಂದೂ ಧರ್ಮದ ಜಾಗೃತಿಯ ಸಂಕೇತ-ಸ್ವಾಮಿ ಪ್ರಕಾಶಾನಂದಜಿ

ಗಣೇಶೋತ್ಸವ ಹಿಂದೂ ಧರ್ಮದ ಜಾಗೃತಿಯ ಸಂಕೇತ-ಸ್ವಾಮಿ ಪ್ರಕಾಶಾನಂದಜಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.