ಭಾಷೆ ಮೀರಿದ ಭಾವ


Team Udayavani, May 24, 2019, 6:00 AM IST

q-12

ಮೊದಲಿನಿಂದಲೂ ವಾಚಾಳಿಯಲ್ಲದ ನನಗೆ ಎಲ್ಲಿ ನಾನು ಕೂಪಮಂಡೂಕದಂತಾಗಿ ಬಿಡುತ್ತೇನೋ ಎಂಬ ಭಯವಿತ್ತು. ಹೊಸದೇನನ್ನಾದರೂ ಕಲಿಯಬೇಕೆನ್ನುವ ಬಯಕೆ ಇತ್ತಾದರೂ ಏನು ಕಲಿಯಬೇಕು ಎನ್ನುವುದು ತಿಳಿದಿರಲಿಲ್ಲ. ಹೀಗೊಂದು ದಿನ ರಾಹುಲ್‌ ಎಂಬಾತನ ಪರಿಚಯವಾಯಿತು. ಅವನಿಗೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ, ಅವನು ಮೂಲತಃ ಕೇರಳದ ಮಲಯಾಳಿಯಾಗಿದ್ದ. ಆತನ ಭಾಷೆ ಕೇಳಿದ ನನಗೆ ನಾನೇಕೆ ಮಲಯಾಳ ಕಲಿಯಬಾರದು? ಎಂದೆನಿಸಿತು. ಧೈರ್ಯಮಾಡಿ ಅವನಲ್ಲಿ, “”ಅಣ್ಣಾ, ನನಗೂ ನಿಮ್ಮ ಭಾಷೆ ಕಲಿಸುವಿರಾ?” ಎಂದು ಕೇಳಿದೆ. ಅಷ್ಟು ಕೇಳಿದ್ದೇ ತಡ ಆತ ನನ್ನ ಒಡಹುಟ್ಟಿದವನಂತೇ ಆಗಿಬಿಟ್ಟ.

ಅವನು ನನ್ನ ಮೊದಲ ಮಲಯಾಳಂ ಗುರು. ಹೊಸ ಭಾಷೆಯಲ್ಲಿ ಕುಶ‌ಲೋಪರಿ ವಿಚಾರಿಸುವುದನ್ನು ಕಲಿತ ನನಗೆ ಎಲ್ಲೇ ಮಲಯಾಳಿಗಳು ಸಿಕ್ಕರೂ ಎಲ್ಲಿಲ್ಲದ ಸಂತೋಷವಾಗುತ್ತಿತ್ತು. “ನೀವು ಮಲಯಾಳಿಗಳಾ?’ ಎಂದು ಪ್ರಾರಂಭವಾಗುತ್ತಿದ್ದ ಮಾತು ಮುಗಿಯುತ್ತಲೇ ಇರಲಿಲ್ಲ. ಈಗಲೂ ನನ್ನ ಭಾಷಾ ಕಲಿಕೆ ನಡೆಯುತ್ತಲೇ ಇದೆ. ಕಾಲೇಜು ಹಾಗೂ ಹಾಸ್ಟೆಲ್‌ನಲ್ಲಿರುವ ಬಹುತೇಕ ಮಲಯಾಳಿಗಳು ನನ್ನ ಸ್ನೇಹಿತರು. ಕಾಲೇಜು, ಪರೀಕ್ಷೆ, ಓದು, ಹಾಸ್ಟೆಲ್‌ನಲ್ಲಿ ಇರುವ ನನಗೆ ಮನೆಯ ನೆನಪು ಇವೆಲ್ಲದರ ನಡುವೆ ಹೊಸಬರೊಬ್ಬರ ಪರಿಚಯವಾದಾಗ ಏನೋ ಸಂತೋಷ, ಮನಸ್ಸಿಗೆ ನೆಮ್ಮದಿ. ನನ್ನ ಹಾಗೂ ಮಲಯಾಳಿಗಳ ನಂಟು ಕೇವಲ ಹರಟೆ, ಅಥವಾ ವಾಟ್ಸಾಪ್‌ ಗ್ರೂಪಿಗೆ ಸೀಮಿತವಾಗಿಲ್ಲ. ಹೊಸ ವಿಷಯಗಳ ಕುರಿತು ಚರ್ಚೆ, ಕೇರಳ ಹಾಗೂ ಕರ್ನಾಟಕದ ನಡುವಿನ ವ್ಯತ್ಯಾಸಗಳ ವಿಮರ್ಶೆ, ಅಲ್ಲಿನ ಸಂಸ್ಕೃತಿ, ರಾಜಕೀಯ ಬೆಳವಣಿಗೆ, ಸಿನಿಮಾ ರಂಗದಲ್ಲಾಗುವ ಬೆಳವಣಿಗೆ ಹೀಗೆ ಹಲವಾರು ವಿಷಯಗಳ ವಿನಿಮಯವೂ ನಡೆಯುತ್ತದೆ. ದಿನದಲ್ಲಿ ಕನಿಷ್ಟ ಮೂವತ್ತು ನಿಮಿಷವನ್ನು ಭಾಷಾ ಕಲಿಕೆಗಾಗಿ ಮೀಸಲಿಟ್ಟಿರುವ ನನಗೆ ಆಗಿರುವ ಲಾಭಗಳು ಹಲವು. ಈಗ ಮಲಯಾಳಿಗಳಿಗೆ ಕನ್ನಡ ಕಲಿಸುತ್ತ ಅವರಿಂದ ದಿನವೂ ಹೊಸ ಶಬ್ದಗಳನ್ನು ಕಲಿಯುವುದು ನನ್ನ ನೆಚ್ಚಿನ ಹವ್ಯಾಸಗಳಲ್ಲೊಂದಾಗಿದೆ. ಪರಿಚಿತರೂ ನಮ್ಮನ್ನು ಸರಿಯಾಗಿ ಮಾತನಾಡಿಸದ ಈ ಕಾಲದಲ್ಲಿ ಭಾಷೆಯಿಂದಾಗಿ ಅಪರಿಚಿತರೂ ನನ್ನವರಾಗಿದ್ದಾರೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ.

ಸಿಂಧೂ ಹೆಗಡೆ
ಪ್ರಥಮ ಬಿ. ಎ.ಎಸ್‌ಡಿಎಮ್‌ ಕಾಲೇಜು, ಉಜಿರೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.