ಮುಚ್ಚಿದ ಶಾಲೆಯನ್ನು ತೆರೆಸಿದ ಶಾಸಕರು: ಪಟ್ಟು ಬಿಡದ ಹೆತ್ತವರು

ಹಳೆಯಂಗಡಿಯ ಸರಕಾರಿ ಅನುದಾನಿತ ಯುಬಿಎಂಸಿ ಶಾಲೆ

Team Udayavani, May 31, 2019, 6:07 AM IST

3005HALE-3

ಹಳೆಯಂಗಡಿ: ಸುಮಾ ರು 180 ವರ್ಷಗಳ ಇತಿಹಾಸ ಇರುವ ಹಳೆಯಂಗಡಿಯ ಸರಕಾರಿ ಅನು ದಾನಿತ ಯುಬಿಎಂಸಿ ಶಾಲೆಗೆ ಬೀಗ ಹಾಕಿರುವುದನ್ನು ಶಾಸಕ ಉಮಾನಾಥ ಕೋಟ್ಯಾನ್‌ ಅವರ ನಿರ್ದೇಶನದಂತೆ ಗುರುವಾರ ತೆರವು ಮಾಡಿ ಸಮಸ್ಯೆಯನ್ನು ಬಗೆಹರಿಸಲು ಕ್ರಮಕೈಗೊಳ್ಳಲಾಯಿತು. ಈ ಕುರಿತು ಮೇ 30 ಉದಯವಾಣಿ ಸುದಿನಲ್ಲಿ ವಿಶೇಷ ವರದಿಯ ಮೂಲಕ ಬೆಳಕು ಚೆಲ್ಲಲಾಗಿತ್ತು.

ಬುಧವಾರ ಶಾಲಾ ಆರಂಭೋತ್ಸ ವದಂದು ಶಾಲೆಗೆ ಬಂದಿದ್ದ ಹೆತ್ತವರಿಗೆ ಮತ್ತು ಮಕ್ಕಳಿಗೆ ಬೀಗ ಜಡಿದು ಸ್ವಾಗತಿಸಿ, ಏಕಾಏಕೀ ಶಾಲೆಗೆ ಬರಬೇಡಿ ಎಂದು ಸೂಚಿಸಿದ್ದರಿಂದ ಆಕ್ರೋಶಗೊಂಡ ಹೆತ್ತವರು, ನಿರಂತರ ಪ್ರಯತ್ನದಿಂದ ಕಳೆದ ಒಂದು ವರ್ಷದ ಹೋರಾಟಕ್ಕೆ ತಾರ್ಕಿಕ ಅಂತ್ಯವನ್ನು ಶಾಸಕರ ಸಮ್ಮುಖದಲ್ಲಿ ಕಂಡಂತಾಗಿದೆ.

ಗುರುವಾರ ಸ್ಥಳಕ್ಕೆ ಆಗಮಿಸಿದ ಶಾಸಕ ಉಮಾನಾಥ ಕೋಟ್ಯಾನ್‌ ಅವರಲ್ಲಿ ಹೆತ್ತವರು, ಶಾಲೆಯನ್ನು ಉಳಿಸಲು ಹೋರಾಟ ನಡೆಸುತ್ತಿರುವ ನಂದಾ ಪಾçಯಸ್‌ ಅವರು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವನ್ನು ವಿವರಿಸಿದರು. ಸುಮಾರು 50 ಮಕ್ಕಳಿದ್ದರೂ ಸಹ ಶಿಕ್ಷಕರನ್ನು ನೀಡದಿರುವುದನ್ನು ಪ್ರತಿಭಟಿಸಿದ ಪೋಷಕರ ಮಾತನ್ನು ಆಲಿಸಿ ಶಿಕ್ಷಣ ಸಂಯೋಜಕರಿಗೆ ದೂರವಾಣಿಯ ಮೂಲಕ ಮಾತನಾಡಿದ ಶಾಸಕರು, ಇಂದೇ ಶಿಕ್ಷಕರನ್ನು ನೇಮಿ ಸಬೇಕು ಎಂದರು.

ಆಡಳಿತ ಮಂಡಳಿಯ ಪರವಾಗಿ ಹಳೆಯಂಗಡಿ ಯುಬಿಎಂಸಿ ಚರ್ಚ್‌ನ ಸಭಾ ಪಾಲಕ ವಂ| ವಿನಯ್‌ಲಾಲ್‌ ಬಂಗೇರ ಅವರೊಂದಿಗೆ ಶಾಸಕರು ಮಾತನಾಡಿ, ಇಲಾಖೆಯಿಂದ ಶಿಕ್ಷಕರ ನೇಮಕವಾಗುತ್ತದೆ. ಶಾಲೆಯನ್ನು ಕೂಡಲೇ ತೆರೆದು ನೂತನ ದಾಖಲಾತಿಯ ಪ್ರಕ್ರಿಯೆಗೆ ಚಾಲನೆ ನೀಡಲು ಸಹಕರಿಸಬೇಕು ಎಂದು ವಿನಂತಿಸಿದ ನಂತರ ಆಡಳಿತ ಮಂಡಳಿಯ ಪರವಾಗಿ ಐರಿನ್‌ ಕರ್ಕಡ ಅವರು ಶಾಲೆಯ ಬೀಗವನ್ನು ತೆರೆದರು.

ಜಿ.ಪಂ. ಸದಸ್ಯ ವಿನೋದ್‌ಕುಮಾರ್‌ ಬೊಳ್ಳೂರು ಹಾಗೂ ತಾ. ಪಂ. ಸದಸ್ಯ ಜೀವನ್‌ ಪ್ರಕಾಶ್‌ ಕಾಮೆರೊಟ್ಟು ಅವರಿಗೆ ಮುಂದಿನ ಹಂತದ ಜವಾಬ್ದಾರಿಯನ್ನು ಹಳೇ ವಿದ್ಯಾರ್ಥಿಯ ನೆಲೆಯ ಜತೆಗೆ ಜನಪ್ರತಿನಿಧಿಯಾಗಿ ಶಾಲೆಯ ಬಗ್ಗೆ ಚಿಂತನೆ ನಡೆಸಲು ಶಾಸಕರು ಸೂಚಿಸಿದರು.

ಪತ್ರಿಕೆಯೊಂದಿಗೆ ಮಾತನಾಡಿದ, ಶಾಸಕ ಉಮಾನಾಥ ಕೋಟ್ಯಾನ್‌ ಎಂದರು.ಹಳೆಯಂಗಡಿ ಗ್ರಾ.ಪಂ.ನ ಸದಸ್ಯರಾದ ವಿನೋದ್‌ಕುಮಾರ್‌ ಕೊಳುವೈಲು, ಅಶೋಕ್‌ ಸಸಿಹಿತ್ಲು, ಚಿತ್ರಾ ಸುಕೇಶ್‌ ಸಸಿಹಿತ್ಲು, ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು, ಹಳೆಯಂಗಡಿ ಪಿಸಿಎ ಬ್ಯಾಂಕ್‌ನ ನಿರ್ದೇಶಕ ಹಿಮಕರ್‌ ಕದಿಕೆ, ಮೀನುಗಾರಿಕೆ ಪ್ರಕೋಷ್ಠದ ಶೋಭೇಂದ್ರ ಸಸಿಹಿತ್ಲು, ಅನಂದ ಸುವರ್ಣ ಸಸಿಹಿತ್ಲು, ಸೂರ್ಯ ಕಾಂಚನ್‌ ಸಸಿಹಿತ್ಲು, ಎಚ್‌. ರಾಮಚಂದ್ರ ಶೆಣೈ, ಮನೋಜ್‌ಕುಮಾರ್‌, ಹರೀಶ್‌, ರಾಜೇಶ್‌, ಮಹಾಬಲ ಅಂಚನ್‌, ಶಾಲಾ ಪೋಷಕರು, ಉಪಸ್ಥಿತರಿದ್ದರು.

 ಹೋರಾಟ ನಿರಂತರ
ಶಾಲೆಯನ್ನು ಪುನರಾರಂಭಿಸಲು ನಡೆಸಿದ ಹೋರಾಟ ಇನ್ನು ಶಾಲಾಭಿವೃದ್ಧಿಗೆ ಹೋರಾಟ ಮುಂದುವರಿಸಲಾಗುವುದು. ಹೆತ್ತವರು, ಹಳೇ ವಿದ್ಯಾರ್ಥಿಗಳು, ವಿವಿಧ ಎನ್‌ಜಿಓ ಹಾಗೂ ಖಾಸಗಿ ಕಂಪೆನಿಗಳ ಮೂಲಕ ಆರ್ಥಿಕ ಸಂಪನ್ಮೂಲವನ್ನು ಸಂಗ್ರಹಿಸಿ ಭದ್ರ ಬುನಾದಿಯನ್ನು ಹಾಕುತ್ತೇವೆ, ಚರ್ಚ್‌ನ ಬಿಷಪ್‌, ಸಭಾಪಾಲಕರು, ಶಾಸಕರು ಸಹಿತ ಜನಪ್ರತಿನಿಧಿಗಳ ಸಹಕಾರ ಮೆಚ್ಚುವಂತದ್ದು.
– ನಂದಾ ಪಾಯಸ್‌, ಹೋರಾಟಗಾರರು

 ಶಾಲೆಯ ಅಭಿವೃದ್ಧಿಗೆ ಸಹಕರಿಸಿ
ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ನಾಲ್ಕು ಮಂದಿ ಗೌರವ ಶಿಕ್ಷಕಿಯರೇ ಮುಂದುವರಿಯಲಿದ್ದು. ದಾಖಲಾತಿ ಪ್ರಕ್ರಿಯೆಯನ್ನು ಮುಂದಿನ ನೂತನ ಶಿಕ್ಷಕರ ಸಮ್ಮಿಖದಲ್ಲಿ ನಡೆಯಲಿದೆ. ಹೆತ್ತವರ,ಶಾಲೆಯ ಹಳೆ ವಿದ್ಯಾರ್ಥಿಗಳು ಈ ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಬೇಕು, ಇಲಾಖೆಯಿಂದ ಬೇಕಾದ ಸೌಲಭ್ಯವನ್ನು ಮಂಜೂರು ಮಾಡುವ ಜವಾಬ್ದಾರಿ ನನ್ನದಾಗಿದೆ .
– ಉಮಾನಾಥ ಕೋಟ್ಯಾನ್‌,ಶಾಸಕ

 ಶಿಕ್ಷಕರ ನೇಮಕ
ಶಾಸಕರ ಸೂಚನೆಯಂತೆ ಶಿಕ್ಷಣ ಸಂಯೋಜಕಿ ಮಂಜುಳಾ, ಸಿಆರ್‌ಪಿ ಕುಸುಮಾ ಅವರು ಶಾಲೆಗೆ ಭೇಟಿ ನೀಡಿದ್ದಾರೆ. ಶಾಲೆಗೆ ಮಂಜುನಾಥ ಕಾಂಬ್ಲಿ ಅವರನ್ನು ಶಿಕ್ಷಕರನ್ನಾಗಿ ನಿಯುಕ್ತಿಗೊಳಿಸಿ ಡಿಡಿಪಿಐ ಆದೇಶಿಸಿದ್ದಾರೆ.ಶಾಲೆಯ ಅಭಿವೃದ್ಧಿಯನ್ನು ಎಲ್ಲರೊಂದಿಗೆ ನಡೆಸಲಾಗುವುದು.
 - ವಿನೋದ್‌ಕುಮಾರ್‌ ಬೊಳ್ಳೂರು,ಜಿ.ಪಂ.ಸದಸ್ಯರು

ಟಾಪ್ ನ್ಯೂಸ್

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

director suri

Cini Talk: ಸಿನಿಮಾ ನಿರ್ದೇಶಕ ಬಿಝಿನೆಸ್‌ ಮ್ಯಾನ್‌ ಅಲ್ಲ!: ನಿರ್ದೇಶಕ ಸೂರಿ ಮಾತು

Victory is possible if CP Yogeshwar becomes candidate for Channapatna: Arvind Bellad

BJP: ಚನ್ನಪಟ್ಟಣಕ್ಕೆ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾದರೆ ಗೆಲುವು ಸಾಧ್ಯ: ಅರವಿಂದ ಬೆಲ್ಲದ್

ESI Hospital : ಕೋಲ್ಕತ್ತಾದ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ಓರ್ವ ರೋಗಿ ಮೃತ್ಯು

ESI Hospital: ಬೆಳ್ಳಂಬೆಳಗ್ಗೆ ಇಎಸ್‌ಐ ಆಸ್ಪತ್ರೆಯಲ್ಲಿ ಅಗ್ನಿ ಅವಘಡ… ರೋಗಿ ಮೃತ್ಯು

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ

Bhavani Revanna: ಅಪಹರಣ ಕೇಸ್-ಭವಾನಿ ರೇವಣ್ಣ ಜಾಮೀನು ರದ್ದತಿಗೆ ಸುಪ್ರೀಂ ನಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

3(1)

Mangaluru: ಪ್ಲಾಸ್ಟಿಕ್‌ ಬ್ರಹ್ಮರಾಕ್ಷಸನ ತಡೆವ ಮಂತ್ರದಂಡ ಬೇಕಿದೆ !

11

Kulai: ಬೃಹತ್‌ ಟ್ರಕ್‌ ಓಡಾಟದಿಂದ ರಸ್ತೆಗೆ ಹಾನಿ

10

Lalbagh: ಪಾಲಿಕೆ ಚುನಾವಣೆ ಸನ್ನಿಹಿತ; ಮೀಸಲಾತಿಯದೇ ಆತಂಕ!

7–ullala

Ullala: ಇನ್ಸ್‌ಪೆಕ್ಟರ್ ಕೊಠಡಿಯೊಳಗೆಯೇ ಹಿಂದೂ ಸಂಘಟನೆ ಮುಖಂಡನಿಗೆ ಮುಸ್ಲಿಂ ಯುವಕ ಹಲ್ಲೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Sandalwood: ನಟಿ ಅಮೂಲ್ಯ ಸಹೋದರ, ನಿರ್ದೇಶಕ ದೀಪಕ್‌ ಅರಸ್‌ ನಿಧನ

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

Relief for Sadhguru: ಇಶಾ ಫೌಂಡೇಶನ್ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂ ಕೋರ್ಟ್

4

Mangaluru: ಸೇತುವೆ ಮೇಲೆ ಸಂಚಾರ ನಿರ್ಬಂಧದಿಂದ ಕಂಗೆಟ್ಟ ನಾಗರಿಕರು

9-maski

ಆಟೋ, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರ ಒತ್ತಾಯ

darshan

Bellary Jail: ಬೆನ್ನು ನೋವು ತಡೆಯಲಾಗದು..: ಪತ್ನಿ, ಸೋದರನ ಎದುರು ದರ್ಶನ್‌ ಅಳಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.