ಮಳೆನೀರು ಕೊಯ್ಲುನಿಂದ ಸಾವಯವ ಕೃಷಿ


Team Udayavani, Jun 11, 2019, 3:00 AM IST

maleneeru

ನೆಲಮಂಗಲ: ಜಗತ್ತಿನಲ್ಲಿ ನೀರಿನ ಬವಣೆ ಹೆಚ್ಚಾಗುವ ಜೊತೆ ಅಂತರ್ಜಲದ ಮಟ್ಟ ಸಂಪೂರ್ಣವಾಗಿ ಕುಸಿತ ಕಂಡಿದೆ. ಧರೆಗೆ ಬರುವ ಮಳೆಯ ನೀರನ್ನು ಸಂಗ್ರಹಿಸದೇ ಕೊಳವೆ ಬಾವಿ ತೆಗೆದು ಭೂಮಿಯ ಒಡಲನ್ನು ಖಾಲಿ ಮಾಡುತ್ತಿರುವ ಜನರ ಮಧ್ಯೆ ಮಳೆನೀರಿನಿಂದ ಸಾವಯವ ಕೃಷಿ ಮಾಡಿಕೊಂಡು, ನಿತ್ಯಜೀವನದಲ್ಲಿ ಮಳೆಯ ನೀರನ್ನು ಬಳಸುತ್ತಿರುವ ಅಪರೂಪದ ವ್ಯಕ್ತಿಯ ಪರಿಚಯ.

ಭೂಮಿಯ ಮೇಲೆ ಬಿದ್ದ ಅಪಾರ ಮಳೆಯನೀರು ಹಿಂಗುವುದಕ್ಕಿಂತ ಹರಿದು ಹೋಗುವುದು ಹೆಚ್ಚು, ಇದನ್ನು ಮನಗಂಡ ಕೆಲವರು ಮಳೆನೀರಿನ ಕೊಯ್ಲು ವಿಧಾನದಿಂದ ನೀರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇಂತಹ ಆಧುನಿಕ ಯುಗದಲ್ಲಿ ಮಳೆಯ ನೀರಿನ ಬಳಕೆಯಿಂದ ನಿತ್ಯಜೀವನ ನಡೆಸುತ್ತಿರುವವರನ್ನು ಕಾಣುವುದೇ ಅಪರೂಪವಾಗಿದೆ.

ತಾಲೂಕಿನ ಮರಸರಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿರುವ ನಡೂರು ರವೀಂದ್ರನಾಥ್‌ ಶೆಟ್ಟಿ ಮೂಲತಃ ಹಾಸನದ ನಡೂರಿನವರು, ಶಿಕ್ಷಣ ಮುಗಿದ ನಂತರ ಬೆಂಗಳೂರಿನಲ್ಲಿ ಬಿಎಸ್‌ಎನ್‌ಎಲ್‌ ನೌಕರರಾಗಿ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದಾರೆ. ನಿವೃತ್ತಿಯ ನಂತರ ತಂದೆಯ ಕೃಷಿ ಆಸಕ್ತಿಯನ್ನು ಮನಗಂಡು ನೆಲಮಂಗಲದ ಮರಸರಹಳ್ಳಿಯಲ್ಲಿ ಒಂದು ಕಾಲು ಎಕರೆ ಜಮೀನು ಖರೀದಿಸಿ ಸಾವಯವ ಕೃಷಿಗೆ ಮುಂದಾಗಿ ಯಶಸ್ಸನ್ನು ಕಂಡಿದ್ದಾರೆ.

ಮಳೆನೀರು ಕೊಯ್ಲು: ಸಾವಯವ ಕೃಷಿ ಮಾಡಲು ಜಮೀನು ಖರೀದಿಸಿದ ನಂತರ ನೀರಿನ ಅನಿವಾರ್ಯತೆ ಎದುರಾಗುತ್ತದೆ. ಆ ವೇಳೆಯಲ್ಲಿ ಕೊಳವೆ ಬಾವಿಯ ಕಡೆ ಮುಖ ಮಾಡದೆ, ಒಂದು ಕಾಲು ಎಕರೆಯ ಸುತ್ತಲು ಕಾಲುವೆ ಹಾಗೂ ಬದುಗಳನ್ನು ನಿರ್ಮಾಣ ಮಾಡಿ ಮಳೆಯ ನೀರು ಹಿಂಗುವಂತೆ ಮಾಡಿದ್ದಾರೆ, ಅದಲ್ಲದೇ ಹೊಲದಲ್ಲಿ ಬೀಳುವ ನೀರು ಸಂಪೂರ್ಣವಾಗಿ ಸಂಗ್ರಹಣೆಯಾಗುವಂತೆ ಹಿಂಗುಗುಂಡಿ ನಿರ್ಮಾಣ ಮಾಡಿದ್ದಾರೆ. ಜಮೀನಿನಲ್ಲಿ ಮನೆ ಹಾಗೂ ತೋಟಕ್ಕೆ ಸಂಪೂರ್ಣ ಮಳೆನೀರು ಕೊಯ್ಲು ಯೋಜನೆ ಅಳವಡಿಸಿಕೊಂಡು, 14 ವರ್ಷದಿಂದ ಕೃಷಿ ಹಾಗೂ ಮನೆಯ ಬಳಕೆಗೆ ಮಳೆನೀರು ಬಳಸುತ್ತಿದ್ದಾರೆ.

ಸಾವಯವ ಕೃಷಿ: ಮನುಷ್ಯನ ಉತ್ತಮ ಆರೋಗ್ಯಕ್ಕೆ ಸಾವಯವ ಆಹಾರ ಮುಖ್ಯ ಎಂದು ತಿಳಿದ ಎನ್‌ಆರ್‌ಶೆಟ್ಟಿ ತೋಟದಲ್ಲಿ ಒಂದು ಹನಿ ಹೊರಗಿನ ನೀರನ್ನು ಬಳಸದೇ ಮಳೆಯ ನೀರನ್ನು ಬಳಸಿಕೊಂಡು ಐವತ್ತಕ್ಕೂ ಅಧಿಕ ತಳಿಯ ಮರಗಳು ಹಾಗೂ ಮಾವು , ಸೀತಾಫ‌ಲ, ನೆಲ್ಲಿ, ಸಪೋಟ, ಸೀಬೆ, ನೇರಳೆ, ಹಲಸು ಸೇರಿದಂತೆ ಅನೇಕ ಹಣ್ಣಿನ ಮರಗಳನ್ನು ಬೆಳೆಯವುದರ ಜೊತೆಗೆ ಬಯಲು ಸೀಮೆ ಭೂಮಿಯ ಲಕ್ಷಣಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ತೋಟದ ಸುತ್ತಲು ಕಡಿಮೆ ಖರ್ಚಿನಲ್ಲಿ ಆಗ್ರೋ ಫಾರೆಸ್ಟ್‌ ಮಾದರಿಯಲ್ಲಿ ತೇಗ,

ಹೊನ್ನೆ, ಬೀಟೆ, ಬಿದಿರು, ಸಿಲ್ವರ್‌, ಎಬೋನಿ, ಮಹಾಗನಿ ಸೇರಿದಂತೆ ಹತ್ತು ಹಲವು ಮರಗಳನ್ನು ಬೆಳೆಯುವುದಲ್ಲದೆ ಒಂದು ಕಾಲು ಎಕರೆ ಜಾಗವನ್ನು ಮಲೆನಾಡಿನ ಅರಣ್ಯದಂತೆ ಮಾಡಿದ್ದಾರೆ. ಮನೆಗೆ ಬೇಕಾದ ಎಲ್ಲಾ ಅಗತ್ಯ ತರಕಾರಿಗಳನ್ನು ಸಂಪೂರ್ಣ ಸಾವಯವ ಹಾಗೂ ಮಳೆನೀರು ಕೊಯ್ಲು ತೊಟ್ಟಿನಿಂದ ನೀರನ್ನು ಹಾಯಿಸಿ ಗ್ರಾಮೀಣ ಪ್ರದೇಶದ ರೈತರಿಗೆ ವೈಜ್ಞಾನಿಕ ಕೃಷಿ ತಜ್ಞರಾಗಿದ್ದಾರೆ.

20 ಸಾವಿರ ಲೀಟರ್‌ ಸಂಗ್ರಹ: ನೆಲಮಂಗಲ ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆಯಾಗುವ ಪ್ರಮಾಣವನ್ನು ಮನಗಂಡು ಅದರ ಉಪಯೋಗ ಪಡೆಯಲು ಮುಂದಾದೆ, ಮರಸರಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ 800 ರಿಂದ 900 ಮಿ.ಮೀ ಮಳೆಯಾಗುವುದರಿಂದ 240 ಅಡಿ ವಿಸ್ತೀರ್ಣದಲ್ಲಿ 20 ಸಾವಿರ ಲೀಟರ್‌ ನೀರು ಸಂಗ್ರಹವಾಗುತ್ತದೆ. ಈ ನೀರು 6 ರಿಂದ 7 ತಿಂಗಳು ಬಳಸುತ್ತೇವೆ. ಈ ಭಾಗದಲ್ಲಿ ನವೆಂಬರ್‌, ಡಿಸೆಂಬರ್‌ ಸಮಯದಲ್ಲಿ ಮಳೆಯಾಗುವುದರಿಂದ ವರ್ಷ ಪೂರ್ಣ ಮಳೆಯ ನೀರಿನ ಬಳಕೆಮಾಡಲು ಸಹಕಾರಿಯಾಗಿದೆ ಎಂದು ಎನ್‌.ಆರ್‌.ಶೆಟ್ಟಿ ಉದಯವಾಣಿಗೆ ತಿಳಿಸಿದರು.

ಸಣ್ಣ ಹಿಡುವಳಿದಾರಿಗೆ ಅನುಕೂಲ: ನನ್ನ ಬಳಿ ಕಡಿಮೆ ಜಮೀನಿದೆ ನಾನು ವ್ಯವಸಾಯ ಮಾಡಲು ಸಾಧ್ಯವಿಲ್ಲ ಕೊಳವೆ ಬಾವಿ ತೆಗೆಸಲು ಹಣವಿಲ್ಲ ಎನ್ನುವ ರೈತರಿಗೆ ಎನ್‌.ಆರ್‌.ಶೆಟ್ಟಿಯವರು ಮಾದರಿ, ಒಂದು ಕಾಲು ಎಕರೆಯಲ್ಲಿ ಮಾಡಿರುವ ಸಾವಯವ ಕೃಷಿ ತೋಟ ಹಾಗೂ ಮಳೆನೀರು ಕೊಯ್ಲು ವಿಧಾನ ಸಣ್ಣ ಹಿಡುವಳಿದಾರ ರೈತರಿಗೆ ಬಹಳಷ್ಟು ಅನುಕೂಲಕರವಾಗಿದೆ.

14 ವರ್ಷ ಜೀವನ: ತಾಲೂಕಿನ ಮರಸರಹಳ್ಳಿ ಗ್ರಾಮಕ್ಕೆ ಬಂದ ಎನ್‌.ಆರ್‌.ಶೆಟ್ಟಿ ಹಾಗೂ ಪತ್ನಿ ಸರಸ್ವತಿ 14 ವರ್ಷಗಳಿಂದ ಗ್ರಾಪಂನಿಂದ ಬರುವ ಕುಡಿಯುವ ನೀರು ಅಥವಾ ಕೊಳವೆ ಬಾವಿಯ ನೀರನ್ನು ಬಳಸದೇ 15 ಅಡಿ ಅಗಲ, 30 ಅಡಿ ಉದ್ದವಿರುವ ಹಂಚಿನ ಮನೆಯಲ್ಲಿ ಮಳೆನೀರು ಕೊಯ್ಲು ಪದ್ಧತಿಯಿಂದ ಸಂಪಿನಲ್ಲಿ ನೀರನ್ನು ಸಂಗ್ರಹಿಸಿ ಆ ನೀರನ್ನು ಶುದ್ಧೀಕರಿಸಿ ಕುಡಿಯಲು, ಅಡುಗೆಗೆ ಹಾಗೂ ದಿನನಿತ್ಯ ಚಟುವಟಿಕೆಗಳಲ್ಲಿ ಮಳೆಯ ನೀರನ್ನೇ ಬಳಸುತ್ತಿದ್ದಾರೆ.

ಪ್ರಧಾನಿ ಮೋದಿ ಅಭಿನಂದನೆ: ಎನ್‌.ಆರ್‌.ಶೆಟ್ಟಿ ಬೆಂಗಳೂರಿನಲ್ಲಿ ಸಹಜ ಸಮೃದ್ಧ ಟ್ರಸ್ಟ್‌ ರಚಿಸಿಕೊಂಡು ಕಳೆದ ಹದಿನೈದು ವರ್ಷಗಳಿಂದ ಸಾವಯುವ ಕೂಟ ರಚಿಸಿದ್ದಾರೆ. ಈ ಕೂಟಕ್ಕೆ 2018ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿರುವ ಬಗ್ಗೆ ಹರ್ಷ ವ್ಯಕ್ತಪಡಿಸುತ್ತಾರೆ.

ಮಡಿಕೆಯ ನೀರು: 14 ವರ್ಷಗಳ ಹಿಂದೆಯೇ ಅಗೋಫಾರೆಸ್ಟ್‌ ಮಾಡಿ ಬೇಸಿಗೆಯಲ್ಲಿ ಮರಗಳಿಗೆ ನೀರು ಒದಗಿಸಲು ಮರದ ಬುಡಕ್ಕೆ ಮಡಿಕೆಯನ್ನು ಹೂದಿಗಿಸಿ ನೀರನ್ನು ಹಾಯಿಸಿ ಅಂದಿನ ಕಾಲದಲ್ಲೇ ಇಂದಿನ ಇಸೇಲ್‌ ಮಾದರಿ ಕೃಷಿಯನ್ನು ಅಳವಡಿಸಿಕೊಂಡ ಸಸಿಗಳನ್ನು ಮರಗಳಾಗಿ ಮಾಡಿರುವ ಎನ್‌.ಆರ್‌.ಶೆಟ್ಟಿಯವರ ಪರಿಶ್ರಮ ನಿಜಕ್ಕೂ ಮಾದರಿ.

* ಕೊಟ್ರೇಶ್‌.ಆರ್‌

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

24-bng

Bengaluru: ಜಪ್ತಿ ಮಾಡಿದ ವಸ್ತುಗಳ ಮೇಲೆ ಕ್ಯೂಆರ್‌ ಕೋಡ್‌: ಪೊಲೀಸ್‌ ಆಯುಕ್ತ

WhatsApp Image 2025-01-22 at 01.46.02

ನಿವೃತ್ತ ಬಿಸಿಯೂಟ ಸಿಬಂದಿಗೆ ಇಡುಗಂಟು: ಶಿಕ್ಷಣ ಇಲಾಖೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

Life imprisonment: ಕೊಲೆ, ದರೋಡೆ ಪ್ರಕರಣ; 8 ಮಂದಿಗೆ ಜೀವಾವಧಿ ಶಿಕ್ಷೆ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.