ಬಂತು ಮೊದಲ ಕಂತು; ಇನ್ನೂ ಬರಬೇಕಿದೆ ಬಹುಪಾಲು!


Team Udayavani, Jun 12, 2019, 11:49 AM IST

uk-tdy-1..

ಶಿರಸಿ: ಸಾಲ ಮನ್ನಾ ಎಂದು ಬಜೆಟ್‌ನಲ್ಲಿ ಘೋಷಿಸಿದ್ದ ರಾಜ್ಯ ಸರ್ಕಾರದ ಬಜೆಟ್‌ನ ಮೊದಲ ಕಂತಿನ ಹಣ ಬಂದಿದೆ.

ಲೋಕಸಭಾ ಚುನಾವಣೆ ಬಳಿಕ ಬಿಡುಗಡೆಗೊಂಡಿದೆ ಎನ್ನಲಾದ ಸಾಲ ಮನ್ನಾ ಬಾಪ್ತಿನಲ್ಲಿ ಈಗಾಗಲೇ 40 ಸಾವಿರದಷ್ಟು ರೈತರ ಖಾತೆಗೆ ನೇರ ಜಮಾಗೊಂಡಿದೆ. ಒಂದು ಲಕ್ಷ ರೂ. ಒಳಗೆ ಬೆಳೆಸಾಲ ಪಡೆದಿದ್ದ ಚಿಕ್ಕ ಹಾಗೂ ಅತಿ ಚಿಕ್ಕ ರೈತರ ಉಳಿತಾಯ ಖಾತೆಗೆ ಪ್ರಥಮ ಕಂತಿನ ಹಣ ಪಾವತಿಸಲಾಗಿದೆ. ಆದರೆ, ಒಂದು ಲಕ್ಷಕ್ಕಿಂತ ಅಧಿಕ ಮೊತ್ತ ಇರುವ ಅಥವಾ ಸಾಲಮನ್ನಾ ಮಾನದಂಡದ ವ್ಯಾಪ್ತಿಗೆ ಬಾರದೇ ಇರುವ ರೈತರ ಖಾತೆಗೆ ಜಮಾ ಆಗಿಲ್ಲ. ಮಾರ್ಚ್‌, ಏಪ್ರಿಲ್ ವೇಳೆ ಸಾಲ ಮನ್ನಾ ಪಾವತಿ ಮಾಡಿದ್ದ, ಮಾಡದ ರೈತರ ಖಾತೆಗೆ ಹಣ ಬಂದಿದೆ.

ರೈತರನ್ನು ಸಾಲದಿಂದ ಋಣಮುಕ್ತಗೊಳಿಸುವ ಯೋಜನೆಯಡಿ ಕಳೆದ ವಿಧಾನಸಭಾ ಚುನಾವಣಾ ಪೂರ್ವದ ಘೋಷಣೆಯನ್ನು ಸಿಎಂ ಕುಮಾರಸ್ವಾಮಿ ಬಜೆಟ್‌ನಲ್ಲಿ ಆಡಿದಂತೆ ಈಗ ಅದರ ಪ್ರಕ್ರಿಯೆ ಶುರು ಮಾಡಿದ್ದಾರೆ. ರೈತರ ಖಾತೆಗೆ ನೇರವಾಗಿ ಹಣ ಸರ್ಕಾರದಿಂದಲೇ ಪಾವತಿ ಆಗುತ್ತಿದೆ.

175 ಕೋಟಿ ರೂ!: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಧ್ಯವರ್ತಿ ಬ್ಯಾಂಕ್‌ ಕೆಡಿಸಿಸಿ ಮೂಲಕ ರೈತರಿಗೆ ಸಾಲ ವಿತರಿಸಲಾಗಿತ್ತು. ಪ್ರಾಥಮಿಕ ಸಹಕಾರಿ ಸಂಘಗಳ ಮೂಲಕ ಬೆಳೆಸಾಲವನ್ನು ಏಪ್ರಿಲ್ 15, ಏಪ್ರಿಲ್ 31ರೊಳಗೆ ವಿತರಿಸಲಾಗಿತ್ತು. ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಜಗಲಪೇಟೆ ಸೊಸೈಟಿಗಳಿಗೆ ಮಾತ್ರ ಮೇ 31ರ ಬೆಳ ಸಾಲ ಮರು ಪಾವತಿ ಅಖೈರು ದಿನವಾಗಿತ್ತು.

ಇದೀಗ ಪ್ರಥಮ ಹಂತವಾಗಿ ಕೆಡಿಸಿಸಿ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ ಬೆಳೆಗಾರರಿಗೆ ನೇರವಾಗಿ 175 ಕೋ.ರೂ. ಹಂಚಿಕೆಯಾಗಿದೆ. ಕೆಲವು ರೈತರು ಹಣ ಮರು ಪಾವತಿಸದೇ ಇದ್ದವರ ಖಾತೆಯಿಂದ ಸರ್ಕಾರ ಹಣ ವರ್ಗಾವಣೆ ಮಾಡಿಕೊಳ್ಳಲು ಸೂಚಿಸಿದೆ. ಈ ಮೂಲಕ ಸರ್ಕಾರ ರೈತರನ್ನು ಋಣಮುಕ್ತಗೊಳಿಸಲು ಮುಂದಾಗಿದೆ.

ಬರಬೇಕಿದೆ ಇನ್ನೂ: ಜಿಲ್ಲೆಯ ಹನ್ನೊಂದು ತಾಲೂಕುಗಳಲ್ಲಿ ಬೆಳೆಸಾಲ ಪಡೆದ ರೈತರ ಸಂಖ್ಯೆ 86,815. ಕೆಡಿಸಿಸಿ ಬ್ಯಾಂಕ್‌ ಮೂಲಕ ಇಷ್ಟು ರೈತರಿಗೆ ಗರಿಷ್ಠ 3 ಲಕ್ಷ ರೂ. ತನಕ 700 ಕೋಟಿ ರೂ.ಗಳಷ್ಟು ಬೆಳೆ ಸಾಲ ವಿತರಿಸಲಾಗಿತ್ತು.

ಈಗ ಬಂದಿರುವ ಹಣದ ಮೊತ್ತ ಕೇವಲ 175 ಕೋ.ರೂ. ಲಕ್ಷದೊಳಗೆ ಸಾಲ ಪಡೆದ ಸುಮಾರು 40 ಸಾವಿರ ರೈತರಿಗೆ. ಇನ್ನುಳಿದ ಮೊತ್ತ ಹಾಗೂ 46 ಸಾವಿರ ರೈತರಿಗೆ ಹಣ ಬರಬೇಕಿದೆ.

ರೈತರು ಬೆಳೆ ಸಾಲ ಪಡೆದ ಮಾಸದಂತೆ ಸಾಲ ಮನ್ನಾ ಹಣ ಕೂಡ ಬರಬೇಕಿದೆ. ನಿರೀಕ್ಷೆ ಪ್ರಕಾರ ನಡೆದರೆ ಇನ್ನೊಂದು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣವಾಗಬಹುದಾಗಿದೆ ಎನ್ನುತ್ತದೆ ಉನ್ನತ ಮೂಲವೊಂದು.

ದೃಢೀಕರಣಗೊಳ್ಳಬೇಕು: ಒಂದು ಲಕ್ಷ ರೂ.ಗಿಂತ ಅಧಿಕ ಮೊತ್ತದ ಸಾಲ ಪಡೆದವರು ಮರು ಪಾವತಿಯನ್ನು ಉಳಿಕೆ ಹಣ ಮಾಡಿದ್ದರೆ ಅದು ದೃಢೀಕರಣದ ಬಳಿಕ ಉಳಿದ ಹಣ ಬರಲಿದೆ. ತಾಲೂಕು ಕಂದಾಯ ಅಧಿಕಾರಿಗಳಿಂದ ದೃಢೀಕರಣಗೊಳಿಸಿ ಬರಬೇಕಿದೆ. ಈ ಪೈಕಿ 9800 ಅರ್ಜಿಗಳ ದೃಢೀಕರಣದಲ್ಲಿ 1100 ಅರ್ಜಿಗಳು ಇನ್ನೂ ಪೂರ್ಣವಾಗಬೇಕಿದೆ.

ಅಡಕೆ, ಭತ್ತದ ಬೆಳೆಗಾರರ ಕಷ್ಟ ಮಧ್ಯೆ ಈ ಸಾಲ ಮನ್ನಾ ಮೊತ್ತದ ಹಣ ಎಲ್ಲ ರೈತರಿಗೆ ಶೀಘ್ರ ಜಮಾ ಆಗಲಿ ಎಂಬುದು ಬೆಳೆಗಾರರ ಹಕ್ಕೊತ್ತಾಯವಾಗಿದೆ. ನನಗಂತೂ ಸಾಲ ಮನ್ನಾ ಹಣ ಬಂದಿದೆ. ಉಳಿದ ರೈತರಿಗೂ ಆದಷ್ಟು ಬೇಗ ಬರಲಿ. ಸಾಲದ ಹಣ ಪಾವತಿಸದೇ ಇದ್ದು, ಖಾತೆಯಲ್ಲಿ ಇಟ್ಟುಕೊಂಡಿದ್ದರೆ ತಕ್ಷಣ ಅದನ್ನು ಸೊಸೈಟಿ ಮೂಲಕ ಕೆಡಿಸಿಸಿ ಬ್ಯಾಂಕ್‌ಗೆ ನೀಡುವ ಕಾರ್ಯ ಕೂಡ ಆಗಬೇಕು.•ಎಸ್‌.ಎನ್‌.ಭಟ್ಟ, ರೈತ
•ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ

12

Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.