ಸಸಿಹಿತ್ಲು ಬೀಚ್‌: ನದಿ ಕೊರೆತದಿಂದ ಅಳಿವೆಯಲ್ಲಿ ಹಾನಿ


Team Udayavani, Jun 13, 2019, 6:00 AM IST

1206HALE-2

ಬೀಚ್‌ ಅಭಿವೃದ್ಧಿ ಸಮಿತಿಯು ನಿರ್ಮಿಸಿದ ಅಂಗಡಿ ಕೋಣೆಯತ್ತ ನುಗ್ಗುತ್ತಿರುವ ನೀರು.

ಸಸಿಹಿತ್ಲು: ಇಲ್ಲಿನ ಸಸಿಹಿತ್ಲು ಬೀಚ್‌ನಲ್ಲಿ ತೀವ್ರ ಹವಾಮಾನದ ವೈಪರಿತ್ಯದಿಂದ ಮುಂಡ ಬೀಚ್‌ನ ಅಳಿವೆ ಯಲ್ಲಿ ಭಾರೀ ನದಿ ಕೊರೆತ ಉಂಟಾಗಿದೆ. ನದಿ ತೀರದ ಹಲವು ಮರಗಳು ನದಿ ಪಾಲಾಗಿದ್ದು ಪಂಚಾಯತ್‌ ನಿರ್ಮಿಸಿದ ಅಂಗಡಿಗಳು ಅಪಾಯದ ಸ್ಥಿತಿಯಲ್ಲಿವೆ.

ಶಾಂಭವಿ ಮತ್ತು ನಂದಿನಿ ಸಂಗಮದ ಅಳಿವೆ ಪ್ರದೇಶದಲ್ಲಿ ಈ ನದಿ ಕೊರೆತ ಹೆಚ್ಚಾಗಿದೆ. ಪ್ರವಾಸಿಗರ ವಿಹಾರಕ್ಕಾಗಿರುವ ಮರಗಳು ಭೂಮಿ ಬಲ ಕಳೆದುಕೊಂಡು ನದಿಗೆ ಬೀಳುತ್ತಿದೆ. ಕುಳಿತುಕೊಳ್ಳಲು ಹಾಕಲಾಗಿದ್ದ ಬೆಂಚುಗಳು ಸಹ ನದಿಯ ಪಾಲಾಗಿ ಕಡಲಿಗೆ ಸೇರುತ್ತಿವೆ.

ಮಂಗಳವಾರ ರಾತ್ರಿಯಿಂದ ಬೀಚ್‌ನತ್ತ ನೀರು ನುಗ್ಗುತ್ತಿದ್ದು, 10ಕ್ಕೂ ಹೆಚ್ಚು ಗಾಳಿಯ ಮರಗಳು ನೀರಿನ ಸೆಳತಕ್ಕೊಳಗಾಗಿವೆ. ಪಂಚಾಯತ್‌ ನಿರ್ಮಿಸಿದ ಮೂರು ಅಂಗಡಿ ಕೋಣೆಗಳಲ್ಲಿ ಈಗಾಗಲೇ ಒಂದು ನದಿಯ ಒಡಲಿಗೆ ಸೇರಿದ್ದರೇ, ಈಗ ಮತ್ತೂಂದು ಅಂಗಡಿ ಕೋಣೆಯ ಬುಡದವರೆಗೆ ನೀರು ಹರಿಯುತ್ತಿದೆ.

ಪ್ರವಾಸಿಗರ ಸಂಖ್ಯೆ ಹೆಚ್ಚಳ
ಈ ಸಮಯದಲ್ಲಿ ಬೀಚ್‌ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಸಹ ಹೆಚ್ಚಾಗಿದ್ದು, ಸುಂದರ ವಿಹಾರದ ತಾಣವಾಗಿದ್ದ ಗಾಳಿ ಮರಗಳಿರುವ ಪ್ರದೇಶದಲ್ಲಿ ಬಹಳ ಎಚ್ಚರಿಕೆಯಿಂದ ಪ್ರವಾಸಿಗರು ಸಂಚರಿಸಬೇಕಾದ ಆವಶ್ಯಕತೆ ಇದೆ.

ತಡೆಗೋಡೆಯಿಂದ ರಸ್ತೆಗೆ ಹಾನಿಯಿಲ್ಲ
ಕಳೆದ ಎರಡು ವರ್ಷದ ಹಿಂದೆ ಬೀಚ್‌ನ ಸಮುದ್ರ ಕೊರೆತಕ್ಕೆ ಈ ಭಾಗದಲ್ಲಿ ಶಾಶ್ವತ ತಡೆಗೋಡೆಯನ್ನು ನಿರ್ಮಿಸಿರುವುದರಿಂದ ಬೀಚ್‌ಗೆ ತೆರಳುವ ರಸ್ತೆ ಸಹಿತ ಬೀಚ್‌ ದ್ವಾರದ ಕಚೇರಿ ಮತ್ತಿತರ ಪಶ್ಚಿಮ ದಿಕ್ಕಿನಲ್ಲಿನ ಜಮೀನಿಗೂ ಯಾವುದೇ ಹಾನಿಯಾಗಿಲ್ಲ.

ಇದೇ ರೀತಿ ಮುಂದುವರಿದ ಕಾಮಗಾರಿಯಾಗಿ ಅಳಿವೆಯಲ್ಲಿಯೂ ಶಾಶ್ವತ ಗೋಡೆಯನ್ನು ನಿರ್ಮಿಸಿದಲ್ಲಿ ಮಾತ್ರ ಬೀಚ್‌ ಉಳಿಯುವ ಸಾಧ್ಯತೆ ಇದೆ.

 ಸರಕಾರದ ಗಮನ ಸೆಳೆಯಲಾಗುವುದು
ಮಾಜಿ ಸಚಿವ ಕೆ.ಅಭಯಚಂದ್ರ ಅವರು ಈ ಹಿಂದೆ ಅಳಿವೆ ಪ್ರದೇಶದಲ್ಲಿ 2 ಕೋ.ರೂ. ವೆಚ್ಚದಲ್ಲಿ ಶಾಶ್ವತ ತಡೆಗೋಡೆಗೆ ನೀಲನಕ್ಷೆಯನ್ನು ತಯಾರಿಸಿ ಸರಕಾರದ ಅನುಮೋದನೆಗೆ ಸಲ್ಲಿಸಿದ್ದರು. ಈಗ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ ಮೂಲಕ ಇದರ ಬಗ್ಗೆ ಗಮನ ಸೆಳೆಯಲು ಪ್ರಯತ್ನ ಮುಂದುವರಿಸಲಗುವುದು.
 - ಎಚ್‌. ವಸಂತ ಬೆರ್ನಾಡ್‌, ಅಧ್ಯಕ್ಷರು , ಬೀಚ್‌ ಅಭಿವೃದ್ಧಿ ಸಮಿತಿ, ಸಸಿಹಿತ್ಲು, ಹಳೆಯಂಗಡಿ ಗ್ರಾ.ಪಂ.

 ಬ್ರೇಕ್‌ ವಾಟರ್‌ ಅಗತ್ಯ
ಅಳವೆಯಲ್ಲಿನ ನೀರಿನ ಒತ್ತಡಕ್ಕೆ ಜೆಟ್ಟಿಯ ಬಳಿ ಕನಿಷ್ಠ ಎರಡು ಬ್ರೇಕ್‌ ವಾಟರ್‌ ನಿರ್ಮಿಸಿದಲ್ಲಿ ಅಳಿವೆಯ ನ್ನು ಉಳಿಸಬಹುದು. ನಿರ್ಲಕ್ಷ್ಯ ತೋರಿದಲ್ಲಿ ಮುಂದಿನ ವರ್ಷ ಮುಂಡ ಬೀಚ್‌ ಎಂಬುದೇ ಇರುವುದಿಲ್ಲ. ಸಂಪೂರ್ಣವಾಗಿ ಕಡಲು ಪಾಲಾಗಲಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ಕೂಡಲೆ ಸ್ಥಳ ಪರಿಶೀಲನೆ ನಡೆಸಬೇಕು.
 - ಚಂದ್ರಕುಮಾರ್‌ ಸದಸ್ಯರು, ಹಳೆಯಂಗಡಿ ಗ್ರಾ.ಪಂ.

ಟಾಪ್ ನ್ಯೂಸ್

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

MS Dhoni Sends ‘shocking’ Message To Chennai Super Kings

IPL 2025: ಸಿಎಸ್‌ ಕೆ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟ ಎಂ.ಎಸ್.ಧೋನಿ

9

Actor Suriya: ತಾಯಿ ಮಾಡಿದ 25 ಸಾವಿರ ರೂ. ಸಾಲ ತೀರಿಸಲು ಸಿನಿಮಾ ರಂಗಕ್ಕೆ ಬಂದ ಸೂರ್ಯ

ಕಾನೂನು ಸಮರದಲ್ಲಿ ಪವಾರ್‌ ಗೆ ಕೈ ಕೊಟ್ಟ “ಗಡಿಯಾರ”, ಸುಪ್ರೀಂನಲ್ಲಿ ಅಜಿತ್‌ ಬಣಕ್ಕೆ ಮೇಲುಗೈ

ಕಾನೂನು ಸಮರದಲ್ಲಿ ಪವಾರ್‌ ಗೆ ಕೈ ಕೊಟ್ಟ “ಗಡಿಯಾರ”, ಸುಪ್ರೀಂನಲ್ಲಿ ಅಜಿತ್‌ ಬಣಕ್ಕೆ ಮೇಲುಗೈ

UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು

UP: ಹಾವು ಕಚ್ಚಿ ಮೂವರು ಮೃತ್ಯು, ಇಬ್ಬರು ಗಂಭೀರ… ಹಾವಾಡಿಗನ ಮೊರೆ ಹೋದ ಅಧಿಕಾರಿಗಳು

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

 India: ಮತ್ತೆ ಏರ್‌ ಇಂಡಿಯಾ, ವಿಸ್ತಾರ ಸೇರಿ 85 ವಿಮಾನಗಳಿಗೆ ನಕಲಿ ಬಾಂಬ್‌ ಬೆದರಿಕೆ ಕರೆ

INDvsNZ: New Zealand caught in Washington’s spin web; All out for 259 run

INDvsNZ:  ವಾಷಿಂಗ್ಟನ್‌ ಸ್ಪಿನ್‌ ಜಾಲಕ್ಕೆ ಸಿಲುಕಿದ ಕಿವೀಸ್‌; 259 ರನ್‌ ಗೆ ಆಲೌಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

KSRTC ನಿಲ್ದಾಣ-ಲಾಲ್‌ಭಾಗ್‌ ರಸ್ತೆ ಫುಟ್‌ಪಾತ್‌ ಇಲ್ಲದೆ ಪಾದಚಾರಿಗಳ ಪರದಾಟ

4(1)

Mangaluru: ಸಮುದ್ರದ ಮೀನುಗಳನ್ನೂ ಬಿಡದ ಪ್ಲಾಸ್ಟಿಕ್‌!

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

Mangaluru: ವಿಧಾನ ಪರಿಷತ್ ಉಪಚುನಾವಣೆ… ನಿರೀಕ್ಷೆಯಂತೆ ಬಿಜೆಪಿ ಸುಲಭ ಗೆಲುವು

Mangaluru: ವಿಧಾನ ಪರಿಷತ್ ಉಪಚುನಾವಣೆ… ಬಿಜೆಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವು

Mangaluru: ವಿಧಾನ ಪರಿಷತ್‌ ಉಪ ಚುನಾವಣೆ… ಮತ ಎಣಿಕೆ ಪ್ರಕ್ರಿಯೆ ಆರಂಭ

Mangaluru: ವಿಧಾನ ಪರಿಷತ್‌ ಉಪ ಚುನಾವಣೆ… ಮತ ಎಣಿಕೆ ಪ್ರಕ್ರಿಯೆ ಆರಂಭ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

8

KSRTC ನಿಲ್ದಾಣ-ಲಾಲ್‌ಭಾಗ್‌ ರಸ್ತೆ ಫುಟ್‌ಪಾತ್‌ ಇಲ್ಲದೆ ಪಾದಚಾರಿಗಳ ಪರದಾಟ

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

Davanagere: ಹಳೆಯ ದಾಖಲೆಗಳ ಲ್ಯಾಮಿನೇಶನ್:‌ ಮಹಾನಗರ ಪಾಲಿಕೆಯ ಹೊಸ ಕ್ರಮ

MS Dhoni Sends ‘shocking’ Message To Chennai Super Kings

IPL 2025: ಸಿಎಸ್‌ ಕೆ ಅಭಿಮಾನಿಗಳಿಗೆ ಶಾಕಿಂಗ್‌ ಸುದ್ದಿ ಕೊಟ್ಟ ಎಂ.ಎಸ್.ಧೋನಿ

7

Thekkatte: ಹೆದ್ದಾರಿ ಹೊಡೆತದಿಂದ ತೆಕ್ಕಟ್ಟೆ ಕನ್ನಡ ಶಾಲೆ ಉಳಿಸಿ

9

Actor Suriya: ತಾಯಿ ಮಾಡಿದ 25 ಸಾವಿರ ರೂ. ಸಾಲ ತೀರಿಸಲು ಸಿನಿಮಾ ರಂಗಕ್ಕೆ ಬಂದ ಸೂರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.