![ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ](https://www.udayavani.com/wp-content/uploads/2024/12/aa-8-415x247.jpg)
ಪಾಳುಬಿದ್ದ ವಸತಿ ಗೃಹಗಳು
Team Udayavani, Jun 15, 2019, 11:23 AM IST
![uk-tdy-1..](https://www.udayavani.com/wp-content/uploads/2019/06/uk-tdy-1..-11-620x312.jpg)
ಹೊನ್ನಾವರ: 50 ವರ್ಷಕ್ಕೂ ಹಿಂದೆ ನಿರ್ಮಾಣವಾದ ತಾಲೂಕು ಆಸ್ಪತ್ರೆಯ 13 ಸಿಬ್ಬಂದಿ ವಸತಿಗೃಹಗಳು ಸಂಪೂರ್ಣ ಶಿಥಿಲಾವಸ್ಥೆ ತಲುಪಿದ್ದು ಭಾಗಶಃ ಕುಸಿದಿದೆ. ಎರಡು ಸಾಧಾರಣವಿದ್ದು ಅದರಲ್ಲಿ ಇಬ್ಬರು ಸಿಬ್ಬಂದಿ ನೆಲೆಸಿದ್ದಾರೆ. ವಸತಿಗೃಹದಲ್ಲಿ ವೈದ್ಯರು ವಾಸಿಸುತ್ತಿಲ್ಲ, ಸಿಬ್ಬಂದಿ ವಾಸಿಸಲು ಯೋಗ್ಯವಲ್ಲವಾದರೂ ಅನಿವಾರ್ಯವಾಗಿ ಉಳಿದುಕೊಂಡಿದ್ದಾರೆ.
ಉತ್ತಮ ವೈದ್ಯಕೀಯ ಸೇವೆ ನೀಡುವ ಎಲ್ಲಾ ವಿಭಾಗದ ವೈದ್ಯರನ್ನೊಳಗೊಂಡ ಸರ್ಕಾರಿ ಆಸ್ಪತ್ರೆ ವಸತಿಗೃಹಗಳಲ್ಲಿ ವೈದ್ಯರು ಉಳಿದುಕೊಂಡಿದ್ದರೆ ತುರ್ತು ಸೇವೆಗೆ ಅನುಕೂಲವಾಗುತ್ತಿತ್ತು. ಈಗ ರಾತ್ರಿ ಪಾಳಿ ವೈದ್ಯರು ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುವಂತಾಗಿದೆ. ಡಯಾಲಿಸಿಸ್ ಘಟಕದಲ್ಲಿ ಸೇವೆ ನೀಡುವ ಗುತ್ತಿಗೆ ಸಿಬ್ಬಂದಿಗೂ ವಸತಿ ಇಲ್ಲ. ಪಾಳಿಯ ಮೇಲೆ ಕೆಲಸ ಮಾಡುವ ನರ್ಸ್ಗಳಿಗೂ ಆಸ್ಪತ್ರೆ ಕೋಣೆಯೇ ಗತಿ.
10 ವೈದ್ಯರು, 25 ಸ್ಟಾಪ್ನರ್ಸ್ ಸಹಿತ 43 ಸಿಬ್ಬಂದಿಗಳಿದ್ದಾರೆ. ಇದರ ಹೊರತು ಗುತ್ತಿಗೆ ನೌಕರರಿದ್ದಾರೆ. ವಿಶ್ರಾಂತಿಗೆ, ಬಟ್ಟೆ ಬದಲಾಯಿಸಲು, ಊಟ ಮಾಡಲು ಆಸ್ಪತ್ರೆಯ ಖಾಲಿ ಕೋಣೆಯೇ ಗತಿ. ಎಲ್ಲ ವೈದ್ಯರು ಸ್ವಂತ ಅಥವಾ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಕರೆ ನೀಡಿದ ತಕ್ಷಣ ಬರಲು ಕಷ್ಟವಾಗುತ್ತದೆ. ಇದೇ ಸ್ಥಿತಿಯಲ್ಲಿ ಮಂಗನ ಕಾಯಿಲೆ ಎರವಲು ಪಡೆದ ಕಟ್ಟಡವೂ ಇದೆ. ಸಾಕಷ್ಟು ಭೂಮಿ ಇದೆ, ಒಂದು ಬಹುಮಹಡಿ ಕಟ್ಟಡ ನಿರ್ಮಾಣವಾದರೆ ವೈದ್ಯರು, ಸಿಬ್ಬಂದಿ ಒಂದೆಡೆ ಉಳಿದು ಜನರಿಗೆ ತಕ್ಷಣ ಸ್ಪಂದಿಸಲು ಸಾಧ್ಯವಾಗುತ್ತಿತ್ತು. ರಾತ್ರಿ ಕರ್ತವ್ಯದ ವೈದ್ಯರು ಮತ್ತು ಸಿಬ್ಬಂದಿ, ಸಂಜೆಯಾಗುತ್ತಲೇ ರೋಗಿಗಳ ಹೊರತಾಗಿ ಆಸ್ಪತ್ರೆ ಆವಾರ ಖಾಲಿಖಾಲಿ. 5ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಟ್ಟಿಸಿಕೊಟ್ಟು, ಎಲ್ಲ ವಿಭಾಗದ ವೈದ್ಯರು, ಸಿಬ್ಬಂದಿಯನ್ನು ಕೊಟ್ಟ ಸರ್ಕಾರ ಬೇಗ ಉಳಿಯುವ ವ್ಯವಸ್ಥೆ ಮಾಡಿಕೊಡಲಿ.
ಟಾಪ್ ನ್ಯೂಸ್
![ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ](https://www.udayavani.com/wp-content/uploads/2024/12/aa-8-415x247.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ](https://www.udayavani.com/wp-content/uploads/2024/12/car-d-1-150x100.jpg)
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
![Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ](https://www.udayavani.com/wp-content/uploads/2024/12/sirsi-150x82.jpg)
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
![ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ](https://www.udayavani.com/wp-content/uploads/2024/12/beer-150x95.jpg)
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
![Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!](https://www.udayavani.com/wp-content/uploads/2024/12/Honnav-150x80.jpg)
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
![ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ](https://www.udayavani.com/wp-content/uploads/2024/12/tree-plante-150x110.jpg)
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ](https://www.udayavani.com/wp-content/uploads/2024/12/aa-8-150x89.jpg)
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
![aane](https://www.udayavani.com/wp-content/uploads/2024/12/aane-150x111.jpg)
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
![Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ](https://www.udayavani.com/wp-content/uploads/2024/12/v-2-150x91.jpg)
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
![1-traa](https://www.udayavani.com/wp-content/uploads/2024/12/1-traa-150x92.jpg)
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
![Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು](https://www.udayavani.com/wp-content/uploads/2024/12/pro-2-150x84.jpg)
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.