ಖಂಡಿಗೆ ನದಿಗೆ ತ್ಯಾಜ್ಯ ಸೇರುವಿಕೆ: ಅಧಿಕಾರಿಗಳ ಭೇಟಿ
Team Udayavani, Jun 16, 2019, 6:35 AM IST
ಚೇಳಾೖರು: ಇಲ್ಲಿನ ಖಂಡಿಗೆಯಲ್ಲಿ ನಂದಿನಿ ನದಿಗೆ ಕಾರ್ಖಾನೆಗಳ ತ್ಯಾಜ್ಯ ಸೇರುತ್ತಿದ್ದು, ಈ ಕುರಿತು ಶನಿವಾರ ದ.ಕ. ಜಿ.ಪಂ. ಆಹಾರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರೀಕ್ಷೆಗಾಗಿ ನೀರಿನ ಮಾದರಿಯನ್ನು ಸಂಗ್ರಹಿಸಲಾಗಿದೆ. ನೀರಿನ ಗುಣಮಟ್ಟಪರೀಕ್ಷಿಸಿ, ಸ್ಥಳೀಯ ಮನೆಗಳ ಬಾವಿಯ ಪರಿಶೀಲನೆ ನಡೆಸಲಾಯಿತು.
ನಂದಿನಿ ನದಿ ಮಾಲಿನ್ಯವಾಗುತ್ತಿರುವ ಕುರಿತು ಸ್ಥಳೀಯ ಪತ್ರಿಕೆಗಳು ವರದಿ ಮಾಡಿದ್ದು, ದ.ಕ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮೇಲ್ನೋಟಕ್ಕೆ ಮಾಲಿನ್ಯ ಕಂಡು ಬಂದಿದ್ದು, ಇದರ ಮುಂದುವರಿದ ಭಾಗವಾಗಿ ಜಿಲ್ಲಾ ಪಂಚಾಯತ್ ಆಹಾರ ವಿಭಾಗದ ಅಧಿಕಾರಿಗಳಿಗೆ ಪರೀಕ್ಷಿಸಲು ಸೂಚಿಸಿದ್ದರು.
ಪರಿಶೀಲನೆ ವೇಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ, ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಆಹಾರ ಇಲಾಖೆ ಅಧಿಕಾರಿ ವೀಣಾ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಝಾರ್ಖಂಡ್ನಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೂ ವಿಪಕ್ಷಕ್ಕೆ ಬೆಂಬಲ: ಆರ್ಜೆಡಿ
Panaji: ಮುಟ್ಟಾದ ಮಹಿಳೆ ಮನೆಯಿಂದ ಹೊರಗೆ: ಸುಪ್ರೀಂ ನ್ಯಾಯಮೂರ್ತಿ ಕಳವಳ
Accident: ರಾಜಸ್ಥಾನದಲ್ಲಿ ಟೆಂಪೋ-ಬಸ್ ಡಿಕ್ಕಿ: 12 ಮಂದಿ ದುರ್ಮರಣ
Chhattisgarh: ಅಜ್ಜಿಯ ನರಬಲಿ ನಡೆಸಿ ಶಿವಲಿಂಗಕ್ಕೆ ರಕ್ತ ಅರ್ಪಣೆ!
Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.