ಬ್ಯಾಂಕ್‌ ಕೆಲಸ ಬಿಟ್ಟು ಪಿಎಚ್‌ಡಿಯಲ್ಲಿ ಚಿನ್ನ ಗೆದ್ದ ಪವಿತ್ರಾ


Team Udayavani, Jun 18, 2019, 7:21 AM IST

hubali-tdy-2..

ಪತಿ, ಮಗಳ ಜತೆ ಪವಿತ್ರಾ ಭಟ್.

ಧಾರವಾಡ: ಕಲಿತ ಬಳಿಕ ಕೆಲಸ ಸಿಕ್ಕರೆ ಸಾಕು ಅನ್ನುವ ಜನರೇ ಜಾಸ್ತಿ. ಅದರಲ್ಲೂ ಬ್ಯಾಂಕ್‌ ಕೆಲಸವೆಂದರೆ ಯಾರಾದರೂ ಬಿಡುತ್ತಾರಾ? ಸಾಧ್ಯವೇ ಇಲ್ಲ. ಆದರೆ ಇಲ್ಲೊಬ್ಬರು ಕಲಿಯುವ ಸಲುವಾಗಿ ಬ್ಯಾಂಕ್‌ ಕೆಲಸಕ್ಕೆ ಗುಡ್‌ಬೈ ಹೇಳಿ ಚಿನ್ನದ ಪದಕದೊಂದಿಗೆ ಪಿಎಚ್‌ಡಿ ಮಾಡಿ ತಾವಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದಾರೆ.

ಹೊನ್ನಾವರದ ಕರ್ಜಿದ ಮೂಲದ, ಈಗ ಪತಿಯೊಂದಿಗೆ ಧಾರವಾಡದಲ್ಲಿ ನೆಲೆಸಿರುವ ಪವಿತ್ರಾ ಭಟ್ ಅವರೇ ಈ ಸಾಧಕರು. ಕೃಷಿ ವಿವಿಯ 32ನೇ ಘಟಿಕೋತ್ಸವದಲ್ಲಿ ಪಿಎಚ್‌ಡಿ ವಿಭಾಗದ ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ ಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದು ಸೈ ಅನ್ನಿಕೊಂಡಿದ್ದಾರೆ.

ಕೃಷಿ ವಿವಿಯಲ್ಲಿ ಬಿಎಸ್ಸಿ ಮಾಡಿ 7 ಚಿನ್ನದ ಪದಕ ಪಡೆದಿದ್ದ ಪವಿತ್ರಾ ಅವರು, ಬ್ಯಾಂಕ್‌ ಪರೀಕ್ಷೆ ಬರೆದು ಅದರಲ್ಲೂ ಸಫಲರಾಗಿ ಕೆಲಸವೂ ಸಿಕ್ಕಿತು. ಧಾರವಾಡದ ಲೈನ್‌ಬಜಾರ್‌ನಲ್ಲಿ ಇರುವ ಕೆವಿಜಿ ಬ್ಯಾಂಕ್‌ ಶಾಖೆಯ ಸಹಾಯಕ ವ್ಯವಸ್ಥಾಪಕಿ ಆಗಿ ಮೂರೂವರೆ ವರ್ಷ ಕಾಲ ಕೆಲಸ ಮಾಡಿದ ಬಳಿಕ ಸಂತೃಪ್ತಿಯ ಕೊರತೆ ಮನಸ್ಸಲ್ಲಿತ್ತು. ಹೀಗಾಗಿ ಪಿಎಚ್‌ಡಿ ಕೈಗೊಂಡು ಮುಂದೆ ಪ್ರೊಫೆಸರ್‌ ಆಗುವ ಕನಸು ಹೊತ್ತು ಬ್ಯಾಂಕ್‌ ಕೆಲಸಕ್ಕೆ ಗುಡ್‌ಬೈ ಹೇಳಿ ಕೃಷಿ ವಿವಿಯಲ್ಲಿ ಮಾನವ ಅಭಿವೃದ್ಧಿ ಮತ್ತು ಕುಟುಂಬ ಅಧ್ಯಯನ ಶಾಸ್ತ್ರ ಕೈಗೊಂಡಿದ್ದರು.

ಕುಟುಂಬ ನಿರ್ವಹಣೆಗೂ ಸೈ: ಪವಿತ್ರಾ ಅವರು ಪಿಎಚ್‌ಡಿ ಕೈಗೊಂಡಾಗ ಅವರ ಮಗಳು ಶ್ರೀರಕ್ಷಾಗೆ ಬರೀ ಮೂರು ವರ್ಷ. ಇಂತಹ ಸಮಯದಲ್ಲಿ ಕುಟುಂಬ ನಿರ್ವಹಣೆ ಜೊತೆಗೆ ಅಧ್ಯಯನದಲ್ಲೂ ತೊಡಗಿಸಿಕೊಂಡು ಸೈ ಅನ್ನಿಸಿಕೊಂಡರು. ಅವರ ಶ್ರಮದ ಹಿಂದೆ ಪತಿ ಶಶಿಧರ ದೀಕ್ಷಿತ ಅವರ ಸಹಕಾರವೂ ಇದೆ. ಪತ್ನಿಯ ಇಷ್ಟದಂತೆ ಕಲಿಯಲು ಸಹಕಾರ ನೀಡಿದ ಅವರು, ಪಿಎಚ್‌ಡಿ ಕೆಲಸದಲ್ಲೂ ಸಹಕಾರ ನೀಡಿದ್ದಾರೆ. ಸದ್ಯ ಮಗಳು ಶ್ರೀರಕ್ಷಾ 2ನೇ ವರ್ಗದಲ್ಲಿ ಕಲಿಯುತ್ತಿದ್ದು, ಮಗಳ ಪಾಲನೆ ಜೊತೆಗೆ ಮುಂದೆ ಪ್ರೊಫೆಸರ್‌ ಆಗಲು ಕನಸು ಹೊಂದಿದ್ದಾರೆ.

ವಯೋಮಿತಿ ನಿಗದಿ ಆತಂಕ: ಪ್ರೊಫೆಸರ್‌ ಆಗಲೇಬೇಕೆಂಬ ಕನಸು ಹೊತ್ತು ಪಿಎಚ್‌ಡಿ ಮುಗಿಸಿರುವ ಪವಿತ್ರಾ ಅವರಿಗೆ ಕರ್ನಾಟಕದಲ್ಲಿ ನಿಗದಿ ಮಾಡಿರುವ ವಯೋಮಿತಿ ಆತಂಕಕ್ಕೆ ದೂಡುವಂತೆ ಮಾಡಿದೆ. ಪಿಎಚ್‌ಡಿ ಮಾಡುವಾಗ 40ಕ್ಕೆ ಇದ್ದ ವಯೋಮಿತಿ ಈಗ 35ಕ್ಕೆ ರಾಜ್ಯ ಸರ್ಕಾರ ಇಳಿಸಿದೆ. ಸದ್ಯ 34 ವಯಸ್ಸಿನ ಪವಿತ್ರಾ ಅವರಿಗೆ ಇನ್ನೊಂದೇ ವರ್ಷದಲ್ಲಿ ತಮ್ಮ ಕನಸು ನನಸು ಮಾಡಿಕೊಳ್ಳಬೇಕಿದೆ. ಇಲ್ಲವಾದರೆ ಪ್ರೊಫೆಸರ್‌ ಆಗುವ ಕನಸು ನನಸಾಗಿ ಉಳಿಯಲಿದೆ.

ಬೇರೆ ರಾಜ್ಯದಲ್ಲಿ 40ಕ್ಕೆ ಇರುವ ವಯೋಮಿತಿ ಕರ್ನಾಟಕದಲ್ಲಿ ಮಾತ್ರ 35ಕ್ಕೆ ಇಳಿಸಿದ್ದು, ನಮ್ಮಂತವರಿಗೆ ಹಿನ್ನಡೆ ಆಗಲಿದೆ. ಇನ್ನೂ ಒಂದು ವರ್ಷ ಅವಕಾಶ ಇದ್ದು, ಅಷ್ಟರೊಳಗೆ ಕೆಲಸ ಸಿಕ್ಕರೆ ಮಾಡುವೆ. ಇಲ್ಲವಾದರೆ ನಾನು ಪಿಎಚ್‌ಡಿ ಕೈಗೊಂಡಿರುವ ವಿಷಯ ಮುಂದಿಟ್ಟುಕೊಂಡು ಧಾರವಾಡದಲ್ಲಿಯೇ ಮಕ್ಕಳು ಮತ್ತು ಪೋಷಕರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಆಪ್ತ ಸಮಾಲೋಚನಾ ಕೇಂದ್ರ ತೆರೆಯುವೆ ಎನ್ನುತ್ತಾರೆ ಪವಿತ್ರಾ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ

8

Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು

Hubli: Police seize Rs 89.99 lakhs being transported without documents

Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್‌ ವಶಕ್ಕೆ

ED summons case: Temporary relief for Siddaramaiah’s wife Parvathi, Bairati Suresh

ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.